Girl in a jacket

Author kendhooli_editor

ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಹಣಮಾಡುತ್ತಿದ್ದ ದಂಧೆ ಕೋರನ ಬಂಧನ!

ಬೆಂಗಳೂರು,ಸೆ,02: ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಸಾರ್ಜನಿಕರಿಗೆ ವಂಚಿಸುತ್ತಿದ್ದ‌ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ನಿಪುಣ್(30) ಬಂಧಿತ ಆರೋಪಿಯಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದ. ಕೇರಳದ ತ್ರಿಸೂರ್ ಜಿಲ್ಲೆಯವನಾದ ನಿಪುಣ್, ಕೇರಳದ ವಿದ್ಯಾರ್ಥಿಗಳನ್ನು ಯಾಮಾರಿಸಲು ಮುಂದಾಗಿದ್ದ. ಹುಳಿಮಾವು ಬಳಿಯ ನ್ಯಾನಪ್ಪನಹಳ್ಳಿಯ ಆವನಿ ಶ್ರಂಗೇರಿನಗರದ ಮನೆಯಲ್ಲಿ ಈ ನಕಲಿ ಪಾಸ್ ಪೋರ್ಟ್ ದಂದೆ ನಡೆಸುತ್ತಿದ್ದ. ಕೇರಳ ಮೂಲದ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದ ಕೋವಿಡ್ ನೆಗೆಟಿವ್ ವರದಿಗಳನ್ನ ಹಣಕ್ಕಾಗಿ ತಯಾರಿಸಿ ಕೊಡುವುದರ ಜೊತೆಗೆ ಮುಖ್ಯವಾಗಿ ವಿದೇಶಗಳಿಗೆ ಎಡತಾಕುವ ವಿದ್ಯಾರ್ಥಿಗಳಿಂದ ಲಕ್ಷ-ಲಕ್ಷ ಹಣ ಪಡೆದು…

ಐಕಾನ್ ಗಳ ಭೇಟೆ

ರಾಜಕಾರಣಿಗಳು ಮತ್ತು ಸಾಂಸ್ಕೃತಿಕ ವಲಯದ ನಂಟು ಹಾಗೂ ಅವರ ನಡುವಳಿಕೆಗಳು ಹೇಗಿರುತ್ತವೆ ಎನ್ನುವ ಕುರಿತು ತಮ್ಮ ವೃತ್ತಿ ಅನುಭವದಲ್ಲಿ ಆದ ಕೆಲ ಘಟನೆಗಳನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಅತ್ಯಂತ ಮನೋಜ್ಞವಾಗಿ ಇಲ್ಲಿ ಬಿಡಿಸಿಟ್ಟಿದ್ದಾರೆ. ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಐಕಾನ್ ಗಳ ಭೇಟೆ ಬಿಜೆಪಿಯ ಸಜ್ಜನ ರಾಜಕಾರಣಿಯೊಬ್ಬರ ಬಗ್ಗೆ ಇತ್ತೀಚೆಗೆ ಒಂದೆರಡು ಒಳ್ಳೆಯ ಮಾತುಗಳನ್ನು ಬರೆದಿದ್ದೆ.”ನಿಮಗೆ ಅವರ ಇನ್ನೊಂದು ಮುಖ ಗೊತ್ತಿಲ್ಲವೇ”ಎಂದು ಕೆಲವರು ನನ್ನನ್ನು ಕೇಳಿದರು.”ಇಲ್ಲ..ಅದನ್ನು ತಿಳಿದುಕೊಳ್ಳುವ ಅಗತ್ಯವೂ ಇಲ್ಲ.ನನ್ನ ದೃಷ್ಟಿಯಲ್ಲಿ ಅವರು ಸಜ್ಜನರಾಗಿಯೇ ಇರಲಿ”ಎಂದು ಸ್ಪಷ್ಟಪಡಿಸಿದೆ.…

ದೇಶ ವಿರೋಧಿ ಚಟುವಟಿಕೆ ಮೇಲೆ ನಿಗಾ: ಬೊಮ್ಮಾಯಿ‌

ಹುಬ್ಬಳ್ಳಿ,ಸೆ,01:ದೇಶವಿರೋಧಿ ಚಟುವಟಿಕೆ ಕುರಿತು ರಾಜ್ಯ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ. ಎನ್ ಐ ಎ ಜೊತೆ ನಿಕಟ ಸಂಪರ್ಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಆಧಾರದಲ್ಲಿಯೇ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಹಲವರನ್ನು ಎನ್ ಐ ಎ ಬಂಧಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.…

ಮತ್ತೇ ಅಡುಗೆ ಅನಿಲ ಬೆಲೆ ಏರಿಕೆ

ನವದೆಹಲಿ,ಸೆ,01: ಒಂದು ಕಡೆ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೆ ಇದೆ ಮತ್ತೊಂದು ಕಡೆ ಅಡುಗೆ ಅನಿಲ ಬೆಲೆ ಕೂಡ ಏರಿಕೆಯಾಗುತ್ತಿದೆ.ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಏರಿಕೆ ಕಂಡಿದೆ. ಕೊರೋನಾ, ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿರುವ ಜನರಿಗೆ ಅಡುಗೆ ಅನಿಲ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿಜಿ) ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ಗೆ 25 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. 14.2…

ಸಂಪುಟ ಸಹೋದ್ಯೋಗಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ

ತಡಸ,ಸೆ,01:ತಮ್ಮ ಸಚಿವ ಸಂಪುಟದಲ್ಲಿನ ಸಹೋದ್ಯೋಗಿಗಳ ಕಾರ್ಯಕ್ಷಮತೆ ದಕ್ಷತೆ, ಪ್ರತಿಭೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮೆಚ್ಚುಗೆಯ ಮಾತುಗಳನ್ನಾಡಿದರು. .. ಬುಧವಾರ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗಳಿಗೆ ಶಂಕುಸ್ಥಾಪನೆ ನೆರವೇರಿಸುವುದಕ್ಕೂ ಮುನ್ನ ಅವರು ತಡಸ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಸಚಿವ ಸಂಪುಟದಲ್ಲಿರು ಸಚಿವರು ಪ್ರತಿಭಾವಂತರಿದ್ದಾರೆ. ಕಾರ್ಯಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗುತ್ತಿದೆ ಎಂದು…

ರಾಮನಿರ್ದಂದು ರಾವಣನೊಬ್ಬನಿರ್ದನಲ!

ಸಿದ್ಧಸೂಕ್ತಿ : ರಾಮನಿರ್ದಂದು ರಾವಣನೊಬ್ಬನಿರ್ದನಲ! ಶತ್ರು ಇಲ್ಲದವ ಅಜಾತಶತ್ರು. ಹಾಗೆನ್ನುವೆವು. ಭೂಮಂಡಲದಲ್ಲಿ ಶತ್ರು ಅನ್ಯಾಯ ದೌರ್ಜನ್ಯವಿರದ ಕಾಲವಿಲ್ಲ, ಶತ್ರು ಇಲ್ಲದವರಿಲ್ಲ! ಬಲಿಷ್ಠನಾಗಿದ್ದರೆ ಶತ್ರುವಿನ ಸದ್ದು ಕೇಳದು. ಶತ್ರು ಹುಟ್ಟಲು ಅನ್ಯಾಯವೆಸಗಬೇಕು, ದುರ್ಬಲರಾಗಿರಬೇಕು ಎಂದಿಲ್ಲ. ಅವರವರ ಆಶೆ ಆಕಾಂಕ್ಷೆಗಳನ್ನು ಈಡೇರಿಸದಿದ್ದರಾಯಿತು! ಶಿವನಿಗೆ ಭಸ್ಮಾಸುರ, ರಾಮನಿಗೆ ರಾವಣ, ಭೀಮನಿಗೆ ದುಶ್ಯಾಸನ ಶತ್ರು! ರಾಮ ರಾವಣನ ಸಂಬಂಧಿಯಲ್ಲ, ಆಸ್ತಿ ವಗೈರೆ ದೋಚಿದವನಲ್ಲ, ದ್ರೋಹ ಅನ್ಯಾಯ ಎಸಗಿದವನಲ್ಲ! ತನ್ನ ಪಾಡಿಗೆ ತಾನು ಸೀತೆ ಲಕ್ಮ್ಮಣರೊಂದಿಗೆ ಕಾಡಿನಲ್ಲಿದ್ದ! ತಂತಾನೇ ಅಲ್ಲಿಗೆ ಬಂದ ಶೂರ್ಪಣಖೆ,…

ಹೈ ಜಂಪ್ ನಲ್ಲಿ ಡಬಲ್ ಮೆಡಲ್.! ತಂಗವೇಲುಗೆ ‘ಬೆಳ್ಳಿ’ ಶರದ್ ಗೆ ‘ಕಂಚು’..!

Reported By: H.D. Savita ಟೋಕಿಯೊ : ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ 7ನೇ ದಿನವೂ ಭಾರತದ ಪದಕಗಳ ಸುರಿಮಳೆ ಮುಂದುವರೆದಿದೆ. ಎತ್ತರ ಜಿಗಿತ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್  ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ. ತಂಗವೇಲು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದರೆ, ಶರದ್ ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 10 ಕ್ಕೆ ಏರಿದೆ. ಹೈ ಜಂಪ್ ಟಿ 63 ಈವೆಂಟ್‌ನಲ್ಲಿ ತಂಗವೇಲು ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ…

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ‘ಗನ್ ಬೌಲರ್’ Good Bye..!

Reported By :H.D.Savita “ಗನ್ ಬೌಲರ್” ಖ್ಯಾತಿಯ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟ್ವಿಟರ್ ನಲ್ಲಿ ಸ್ಟೇನ್ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಸೌತ್ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 635 ವಿಕೆಟ್ ಪಡೆದಿರುವ ಸ್ಟೇನ್ ಕಳೆದ ಕೆಲ ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಟಿ-20 ವಿಶ್ವಕಪ್ ಗೂ ಮುನ್ನವೇ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇನ್ನು ದಕ್ಷಿಣ…

ಮುಂದುವರೆದ ಭಾರತದ ಪದಕದ ಬೇಟೆ, ಕಂಚಿಗೆ ಗುರಿಯಿಟ್ಟ ಸಿಂಗರಾಜ್!

Reported By :H.D.Savita ಟೋಕಿಯೋ: ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಇಂದು ಪುರುಷರ 10 ಮೀಟರ್ ಏರ್ ಪಿಸ್ತೂಲ್ಎಸ್​ಹೆಚ್​1 ಸ್ಪರ್ಧೆಯಲ್ಲಿ ಭಾರತದ ಸಿಂಗರಾಜ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಫೈನಲ್​ನಲ್ಲಿ 216.8 ಅಂಕ ಸಂಪಾದಿಸಿ ಮೂರನೇ ಸ್ಥಾನ ಪಡೆದುಕೊಂಡು ಸಿಂಗರಾಜ್ ಅವರ ಕಂಚಿನ ಪದಕಕ್ಕೆ ತೃಪ್ತಿ ಪಡೆದುಕೊಂಡರು.  ಭಾರತದ ಇನ್ನೋರ್ವ ಶೂಟರ್ ಮನೀಶ್ 7ನೇ ಸ್ಥಾನ ಪಡೆದರು. ಈವರೆಗೆ ಭಾರತ ಒಟ್ಟು ಎರಡು ಚಿನ್ನ ಗೆದ್ದಿದ್ದು, ನಾಲ್ಕು ಬೆಳ್ಳಿ ಮತ್ತು ಎರಡು ಕಂಚು ಗೆದ್ದಿದೆ. ಈ…

ಕಾರು ಅಪಘಾತ; ಏಳು ಮಂದಿ ಸಾವು

ಬೆಂಗಳೂರು,ಆ.೩೧: ತಡರಾತ್ರಿ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ; ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇವರು ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ಅವಘಡ ಸಂಭಿಸಿದೆ.ಕೋರಮಂಗಲ ೮೦ ಅಡಿ ರಸ್ತೆಯ ಮಂಗಳ ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಕಾರು ಆಡಿ ಕ್ಯೂ ಎನ್ನಲಾಗಿದ್ದು, ವೇಗವಾಗಿ ಬಂದಿದ್ದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ತಡರಾತ್ರಿ ಬಹಳ ವೇಗವಾಗಿ ಬಂದ ಕಾರು ಫುಟ್‌ಪಾತ್‌ಗೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ೭…

ಪ್ರೀತಿ ಮತ್ತು ಕ್ರೈ ಕಥೆಯ ಸಾಮರ್ಥ್ಯಾ

ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯಾ ಚಿತ್ರಕ್ಕೆ ಇತ್ತೀಚೆಗೆ ಕಂಠೀರವ ಸ್ಟುಡಿಯೋವಿನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ಚಿತ್ರದ ಪ್ರಥಮ ದೃಶ್ಯಕ್ಕೆ ಸಾ.ರಾ.ಗೋವಿಂದು ಕ್ಲಾಪ್ ತೋರಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ರವರು ಕ್ಯಾಮೆರಾ ಚಾಲನೆ ನೀಡಿದರು.ಚಿತ್ರರಂಗದ ಮೇರು ವ್ಯಕ್ತಿಗಳ ಸಮ್ಮುಖದಲ್ಲಿ ನಡೆದ – ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ. ಚಿತ್ರಕ್ಕೆ ಸಂಭಾಷಣೆ ಶಶಿ, ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್ (ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ,…

ಸೆ.೬ರಿಂದ ಆರನೇ ತರಗತಿಯಿಂದ ೮ನೇ ತರಗತಿ ಶಾಲೆಗಳು ಆರಂಭ

ಬೆಂಗಳೂರು,ಆ,೩೦:ಕೊವಿಡ್ ದೃಢಪ್ರಮಾಣದರ ಶೇಕಡ ೨ಕ್ಕಿಂತ ಕಡಿಮೆ ಇರುವ ಎಲ್ಲ ತಾಲ್ಲೂಕುಗಳಲ್ಲೂ ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ೬ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ತೀರ್ಮಾನಗಳನ್ನು ಪ್ರಕಟಿಸಿದ ಕಂದಾಯ ಸಚಿವ ಆರ್. ಅಶೋಕ, ಪ್ರತಿ ತರಗತಿಯ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಭಜಿಸಿ, ದಿನ ಬಿಟ್ಟು ದಿನ ತರಗತಿ ನಡೆಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗೆ ತರಗತಿಗಳನ್ನು ನಡೆಸಲಿದ್ದು, ಶನಿವಾರ…

ಟೊಕೀಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಎರಡನೇ ಬಂಗಾರದ ಪದಕ, ಚಿನ್ನಕ್ಕೆ ಭರ್ಜಿ ಎಸೆದ‌ ಸುಮಿತ್..!

Reported By: H.D.Savita ಟೋಕಿಯೋ : ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಅಮೋಘ ಪ್ರದರ್ಶನ ನೀಡುತ್ತಿದೆ. ಸುಮಿತ್ ಆಂಟಿಲ್ ಜಾವೆಲಿನ್ ಥ್ರೋನ ಎಫ್ 64 ವಿಭಾಗದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಎರಡನೇ ಚಿನ್ನ ಪದಕವಾಗಿದೆ. ಅದಕ್ಕೂ ಮೊದಲು, ಸೋಮವಾರವೇ, ಅವನಿ ಲೇಖಾರಾ ಟೋಕಿಯೊದಲ್ಲಿ ಶೂಟಿಂಗ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ನೀಡಿದ್ದರು. ಸುಮಿತ್ ತನ್ನದೇ ವಿಶ್ವದಾಖಲೆಯನ್ನು ಒಂದಲ್ಲ, ಎರಡಲ್ಲ, ಮೂರು ಬಾರಿ ಇಲ್ಲಿಯೇ ಮುರಿದರು

ಪ್ಯಾರಾಲಿಂಪಿಕ್ಸ್: ಭಾರತದ ಪದಕಗಳ ಭರ್ಜರಿ ಬೇಟೆ..!

Reported By :H.D.Savita ಟೋಕಿಯೋ : ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಭರ್ಜರಿ ಭೇಟೆ ಮುಂದುವರೆದಿದೆ. ಸೋಮವಾರದ ಆರಂಭದಲ್ಲೇ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ ನಂತರದಲ್ಲಿ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳೆ ಪದಕಕ್ಕೆ ಮುತ್ತಿಕ್ಕಿದರು. ಸದ್ಯ ಜಾವೆಲಿನ್ ಥ್ರೋ ಸ್ಫರ್ಧೆಯಲ್ಲಿ ದೇವೇಂದ್ರ ಜಜರಿಯಾ ಮತ್ತು ಸುಂದರ್ ಸಿಂಗ್ ಗುರ್ಜರ್ ಫೈನಲ್​ನಲ್ಲಿ ಗೆದ್ದು ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಪದಕಗಳ ಪಟ್ಟಿ…

ಶ್ರಾವಣ ಮಾಸದ ಕೃಷ್ಣಾಷ್ಟಮಿ ಮತ್ತು ಮತ್ತು ಆಚರಣೆ

ಕೃಷ್ಟಜನ್ಮಾಷ್ಟಮಿ ಮತ್ತು ಅದರ ಆಚರಣೆ ಹೇಗೆ .ಈ ಆಚರಣೆ ಹೇಗೆ ಬಂತು ಎನ್ನುವ ಕುರಿತು ಸರ್ವಮಂಗಳ ಅವರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ ಶ್ರಾವಣ ಮಾಸದ ಕೃಷ್ಣಾಷ್ಟಮಿ ಮತ್ತು ಮತ್ತು ಆಚರಣೆ ಸರ್ವಮಂಗಳ ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಯಂದು ಮದ್ಯರಾತ್ರಿಯಲ್ಲಿ ವಸುದೇವನ ಪತ್ನಿಯಾದ ದೇವಕಿಯು ಶ್ರೀಕೃಷ್ಣನಿಗೆ ಜನ್ಮವಿತ್ತಳು…. ಸೂರ್ಯನು ಸಿಂಹ ರಾಶಿಯಲ್ಲಿರುವಾಗ ಜನ್ಮೋತ್ಸವವನ್ನು ವೈಭವದಿಂದ ಆಚರಿಸಬೇಕು. .. ಕೃಷ್ಣ ಜನ್ಮಾಷ್ಟಮಿ ವ್ರತ ಆಚರಿಸುವವರು ಸಪ್ತಜನ್ಮಗಳಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುವರು. ಕೃಷ್ಣ ಜನ್ಮಾಷ್ಟಮಿ ಉಪವಾಸ…

ವಿಕಲಾಂಗ ಭಾಗ್ಯ ಯೋಜನೆಗೆ ಆಗ್ರಹ

meet ಬೆಂಗಳೂರು,ಆ,30:ಸಂಕಷ್ಟದಲ್ಲಿರುವ ಕಿವಿ ಕಣ್ಣು ಕಾಲು ಇಲ್ಲದ ವಿಕಲಾಂಗರಿಗೆ ಶ್ರವಣ ಸಾಧನ, ವ್ಹೀಲ್ ಚೇರ್ ಮೊದಲಾದವುಗಳನ್ನು ಉಚಿತವಾಗಿ ವಿತರಿಸುವ ವಿಕಲಾಂಗ ಭಾಗ್ಯ ಯೋಜನೆಯನ್ನು ಸರ್ಕಾರವು ಜಾರಿಗೆ ತರಬೇಕೆಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಆಗ್ರಹಿಸಿದರು. ಅವರು ಭಾನುವಾರ ಕೆಂಗೇರಿಯಲ್ಲಿ, ವಂಡರಿಂಗ್ ಟು ದಿ ಲೈಟ್ ಫೌಂಡೇಶನ್ ನೀಡಿದ ಶ್ರವಣ ಸಾಧನಗಳನ್ನು ವಿಕಲಾಂಗ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.” ಪಂಚ ಜ್ಞಾನೇಂದ್ರಿಯಗಳಲ್ಲಿ ಕಿವಿಯು ಒಂದಾಗಿದ್ದು, ಅದು ಕೇಳದಿದ್ದಲ್ಲಿ ಬಾಳು ಶೂನ್ಯ ಎನಿಸುತ್ತದೆ. ಶ್ರವಣ…

ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ.

‌‌‌‌       ಸಿದ್ಧಸೂಕ್ತಿ : ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ. ದೇವರು ದೊಡ್ಡವ,ಮಾಲೀಕ,ಮಾರಾಟಗಾರ, ನ್ಯಾಯಾಧೀಶ!ಭಕ್ತ ಸಣ್ಣವ, ಸೇವಕ. ಖರೀದಿದಾರ, ಕಕ್ಷಿದಾರ! ಪೂಜಾರಿ, ಎಜೆಂಟ್, ದಲ್ಲಾಳಿ, ವಕೀಲ, ಇವರೀರ್ವರ ನಡುವೆ! ದೇವ ಭಕ್ತರು ನೇರ ವ್ಯವಹರಿಸಿದರೆ ಪೂಜಾರಿ ಕೆಲಸ? ಅದು ಆಗದಿರುವುದೇ ಪೂಜಾರಿಗೆ ವರ! “ಪತ್ರಂ ಪುಷ್ಪಂ ಫಲಂ ತೋಯಂ =ಎಲೆ, ಹೂವು, ಹಣ್ಣು, ನೀರು, ಭಕ್ತಿಭಾವ, ಯಾವುದನ್ನು ಕೊಟ್ಟರೂ ಸ್ವೀಕರಿಸುವೆ, ನಿನ್ನಲ್ಲೇ ಇರುವೆ” ಎನ್ನುವ ದೇವರು! ಪೂಜಾರಿ ಗತಿ? ಅದಕ್ಕೆ ಪಟ್ಟಿ…

ಟೋಕಿಯೋ ಪ್ಯಾರಾಲಿಂಪಿಕ್ಸ್ : ಒಂದೇ ದಿನ ಮೂರು ಪದಕಗಳು, ಭಾರತಕ್ಕೆ ಸೂಪರ್ ಸಂಡೇ..!

Reported By :H.D.Savita ಟೋಕಿಯೋ: ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತದ‌ಪಾಲಿಗೆ ಸೂಪರ್‌ ಸಂಡೇ‌ಅಂತಾನೇ ಹೇಳಬಹುದು. ಒಂದಲ್ಲ, ಎರಡಲ್ಲ ಬರೋಬ್ಬರಿ 3 ಪದಕಗಳು ದೊರೆತಿದ್ದು, ಭಾರತಕ್ಕೆ ಅತ್ಯಂತ ವಿಶೇಷವಾದ ದಿನವಾಗಿತ್ತು. ಭಾರತ ಒಂದಲ್ಲ, ಎರಡಲ್ಲ, ಮೂರು ಪದಕಗಳನ್ನು ಗೆದ್ದಿದೆ. ಭವೀನ ಪಟೇಲ್, ನಿಶಾದ್ ಕುಮಾರ್ ಮತ್ತು ವಿನೋದ್ ಕುಮಾರ್ ಭಾನುವಾರ ಹ್ಯಾಟ್ರಿಕ್ ಪದಕಗಳನ್ನು ಗೆದ್ದು ದೇಶಕ್ಕೆ ಭಾನುವಾರ ಸೂಪರ್ ಸಂಡೆ ಮಾಡಿದರು. ಟೇಬಲ್ ಟೆನಿಸ್ ನಲ್ಲಿ ಭವಿನಾ ಪಟೇಲ್ ಅವರ ಬೆಳ್ಳಿ ಪದಕದೊಂದಿಗೆ ಭಾನುವಾರ ದಿನ ಆರಂಭವಾಯಿತು. ಚಿನ್ನ…

ಶ್ರಾವಣಮಾಸದಲ್ಲಿ ಶನಿಮಹಾತ್ಮೆ ಪುರಾಣದ ವೈಶಿಷ್ಟ್ಯ

ಶ್ರಾವಣಮಾಸದಲ್ಲಿ ಶನಿಮಹಾತ್ಮೆ ಪುರಾಣದ ವೈಶಿಷ್ಟ್ಯ ವಾಡಿಕೆಯಂತೆ ಆ ವರ್ಷವೂ ದಸರೆಯ ಒಂದು ದಿನ ಮನೆಯಲ್ಲಿ ಶ್ರೀ ಶನಿಮಹಾತ್ಮನ ಪುರಾಣವನ್ನು ಓದುವ ವಾರ್ಷಿಕ ಮಹತ್ವದ ಧಾರ್ಮಿಕ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪುರಾಣಪಾರಾಯಣಕ್ಕೆ ಮುನ್ನ ಮನೆಯಲ್ಲಿ ಹಿರಿಯರೊಬ್ಬರು ಪಾವಗಡದ ಶನಿದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದೂ ಕೂಡ ನಾವು ಹಲವಾರು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದ ನೇಮ. ಅದರ ಪ್ರಕಾರವಾಗಿಯೇ ಕಳೆದ ವಾರದ ಹಿಂದೆಯಷ್ಟೇ ನನ್ನ ತಾತನವರು ಪಾವಗಡಕ್ಕೆ ಹೋಗಿ ಬಂದಿದ್ದರು. ಸುಮಾರು ಎರಡು ತಾಸುಗಳ ಪುರಾಣಪಾರಾಯಣವಿತ್ತಾರೂ ಅದಕ್ಕಾಗಿ ಹತ್ತು…

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ: ಭವಿನಾಗೆ ‘ಬೆಳ್ಳಿ’ಹಾರ

Reported By : H.D.Savita ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತಕ್ಕೆ ಚೊಚ್ಚಲ ಪದಕ ದೊರೆತಿದೆ. ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭಾವಿನಾ ಪಟೇಲ್‌ ಅವರು ಬೆಳ್ಳೆ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 4-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ಎಡವಿದರು. ಆದರೆ, ಪ್ಯಾರಾಲಿಂಪಿಕ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತ ಈವರೆಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್​ಗೆ ತಲುಪಿ…

1 54 55 56 57 58 101
Girl in a jacket