Girl in a jacket

Author kendhooli_editor

ಮದುವೆ ದಲ್ಲಾಳಿಯ ಚಾಕುಚಕ್ಯತೆ

ಮದುವೆ ದಲ್ಲಾಳಿಯ ಚಾಕುಚಕ್ಯತೆ “ಇಂದ್ರಮ್ಮಾ, ಇಂದ್ರಮ್ಮಾ” ಎನ್ನುವ ಪರಿಚಿತ ಕಂಠವೊಂದು ನನ್ನ ಅಮ್ಮನ ಹೆಸರಿಡಿದು ಕೂಗುತ್ತಾ, ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿದ್ದ ನಮ್ಮ ಬಾಡಿಗೆ ಮನೆಯ ಮುಂಬಾಗಿಲು ದಾಟಿ ಒಳಬರಲು, ಹೊರಕೋಣೆಯಲ್ಲಿ ಕುಳಿತು ಅಂದಿನ “ವಿಜಯಕರ್ನಾಟಕ” ದಿನಪತ್ರಿಕೆಯ ಹಾಳೆಗಳನ್ನು ಮುಗುಚಿ ಹಾಕುತ್ತಿದ್ದ ನಾನು, ಯಾರು ಬಂದಿರಬಹುದು ಎನ್ನುವ ಕುತೂಹಲವನ್ನು ಅದುಮಿಡಲಾಗದೆ, ಮುಂಭಾಗದ ಹಾಲನ್ನು ಪ್ರವೇಶಿಸಿದೆ. “ಏನಪ್ಪಾ, ಪ್ರಕಾಶ, ಬೆಂಗಳೂರಿನಿಂದ ಯಾವಾಗ ಬಂದಿದ್ದು?” ಎಂದು ನನ್ನ ಯೋಗಕ್ಷೇಮವನ್ನು ವಿಚಾರಿಸಲು ಮೊದಲಿಟ್ಟ ಅತಿಥಿಯ ಮುಖವನ್ನು ದಿಟ್ಟಿಸಿ ನೋಡತೊಡಗಿದೆ. “ಯಾಕೆ ಸಾಹೇಬರೇ? ನನ್ನ…

ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ

ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ ತುಂಗಭದ್ರಾ ನದಿಯ ಬಲದಂಡೆಯು ಹಂಪೆಗೆ ಆಶ್ರಯ ನೀಡಿದ್ದರೆ, ಎಡದಂಡೆಯು ಪ್ರಾಚೀನ ಆನೆಗೊಂದಿಗೆ ನೆಲೆಯಾಗಿದೆ. ಈ ಎರಡೂ ಚಾರಿತ್ರಿಕ ಸ್ಥಳಗಳು ಆದಿಮ ಕಾಲದಿಂದಲೂ ಮಾನವನ ಪ್ರಮುಖ ಪ್ರಸಿದ್ಧ ವಸತಿತಾಣಗಳು. ಭೌಗೋಳಿಕವಾಗಿಯೂ ಈ ಪ್ರದೇಶವು ಕಣಶಿಲೆಯ ಬೆಟ್ಟಗುಡ್ಡ, ಗುಹೆಗಹ್ವರ, ನದಿ, ಕಣಿವೆಗಳಿಂದ ಕೂಡಿದ ಅತ್ಯಂತ ಸುಂದರ ತಾಣ. ಆನೆಗೊಂದಿ ಪರಿಸರವು ಇತ್ತೀಚೆಗೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದಕ್ಕೆ ಕಾರಣ ಇಲ್ಲಿನ ಹತ್ತಾರು ಪ್ರವಾಸಿ ಸ್ಥಳಗಳು. ಇಲ್ಲಿರುವ ಪ್ರಸಿದ್ಧ ಪ್ರಾಗೈತಿಹಾಸಿಕ, ಚಾರಿತ್ರಿಕ ಮತ್ತು ಪೌರಾಣಿಕ…

ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ;ಸಿದ್ದರಾಮಯ್ಯ

ಬೆಂಗಳೂರು,ಡಿ,30: ‘ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸುದ್ದಿಗಾರರ ಜೊತೆ ಗುರುವಾರ ಮತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜನರ ತೀರ್ಪು ಹೊರಬಿದ್ದಿದೆ. ಚುನಾವಣೆ ನಡೆದ 1,187 ಸ್ಥಾನಗಳ ಪೈಕಿ 500 ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಫಲಿತಾಂಶದಿಂದ ಜನಾಭಿಪ್ರಾಯ ನಮ್ಮ ಪರವಾಗಿದೆ ಎಂಬುದು ಕಂಡುಬರುತ್ತದೆ. ಫಲಿತಾಂಶ ಖುಷಿ…

ಕನ್ನಡಪರ ಸಂಘಟನೆ ಗಳೊಂದಿಗೆ ಮುಖ್ಯಮಂತ್ರಿ ಚರ್ಚೆ: ಬಂದ್ ಕರೆ ವಾಪಸ್ ಪಡೆದ ಸಂಘಟನೆಗಳು

ಬೆಂಗಳೂರು, ಡಿ, 30:ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಅವರೊಂದಿಗೆ ಚರ್ಚಿಸಲಾಗಿದ್ದು, ಕನ್ನಡಪರ ಸಂಘಟನೆಗಳು ಬಂದ್ ಕರೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು. ಗೃಹ ಕಛೇರಿ ಕೃಷ್ಣಾದಲ್ಲಿ ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರರಾದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್. ಶಿವರಾಮೇಗೌಡ್ರು ಅವರುಗಳ ನೇತೃತ್ವದ…

ಅ.ನಾ.ಪ್ರಹ್ಲಾದರಾವ್ ರಚನೆಯ ‘ಹೆಜ್ಜೆಗುರುತು’ ಕೃತಿ  ಲೋಕಾರ್ಪಣೆ

ಬೆಂಗಳೂರು,  ಡಿ, 30: ಲೇಖಕ ಅ.ನಾ.ಪ್ರಹಾದರಾವ್ ಕನ್ನಡ ಚಲನಚಿತ್ರ ಚರಿತ್ರೆ ಕುರಿತು ದಾಖಲಿಸಿರುವ ‘ಹೆಜ್ಜೆಗುರುತು’ ಕೃತಿಯನ್ನು ಪ್ರಸಿದ್ಧ ಕವಿ, ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅವರು ತಮ್ಮ ನಿವಾದಲ್ಲಿ ಇಂದು (2021, ಡಿಸೆಂಬರ್ 30) ಬಿಡುಗಡೆ ಮಾಡಿದರು. ಹಂಸಜ್ಯೋತಿ ಸಾಂಸ್ಕೃತಿಕ ಸಂಸ್ಥೆಯ ಮು.ಮುರಳೀಧರ ಹಾಗೂ ಶ್ರೀಮತಿ ಮಲ್ಲಿಕಾ ಪ್ರಹ್ಲಾದ್ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರರಂಗ ಮೂಕಿ ಕಾಲದಿಂದ ಆರಂಭಗೊಂಡು ಬೆಳವಣಿಗೆಯ ವಿವಿಧ ಮಜಲುಗಳಿಗೆ ಸಂಬಂಧಿಸಿದ ಚಲನಚಿತ್ರಗಳು, ವ್ಯಕ್ತಿಗಳು ಹಾಗೂ ಘಟನಾವಳಿಗಳನ್ನು ಹೆಣೆಯುತ್ತಾ ಕನ್ನಡ ಚಿತ್ರರಂಗದ ಔನತ್ಯವನ್ನು ದಾಖಲಿಸುವ ಪ್ರಯತ್ನವನ್ನು ಈ…

ವಿವಿಧ ಪ್ರಕಾರ ಸಾಹಿತ್ಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಆಕಾಡಿಮಿ ಪ್ರಶಸ್ತಿ ಘೋಷಣೆ

ಹೊಸ ದೆಹಲಿ ಡಿ ೩೦ : ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಇಲ್ಲಿ ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಿ ಎಸ್ ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಬಾಲ ಪುರಸ್ಕಾರ’ ಕ್ಕೆ ಬಸು ಬೇವಿನಗಿಡದ ಅವರ ‘ ಓಡಿ ಹೋದ ಹುಡುಗ ‘ ಮಕ್ಕಳಿಗಾಗಿ ಬರೆದ ಕಾದಂಬರಿ ಆಯ್ಕೆಯಾಗಿದೆ. ಅಕಾಡೆಮಿಯು ನೀಡುವ ‘ಯುವ ಪುರಸ್ಕಾರ’ ಕ್ಕೆ ಎಚ್ ಲಕ್ಷೀನಾರಾಯಣ…

ಕೂಡಲ ಸಂಗಮದೇವ ನಾಮಾಂಕಿತ ಬಳಕೆಗೆ ಗಂಗಾಮಾತಾಜಿ ನಿರ್ಧಾರ; ಎಂ.ಬಿ.ಪಾಟೀಲ್‌ಸಂತಸ

ವಿಜಯಪುರ ,ಡಿ,29. ಧರ್ಮಗುರು ಬಸವಣ್ಣನವರ ವಚನಾಂಕಿತ ಕೂಡಲಸಂಗಮದೇವ ಎಂದೇ ಬಳಸಬೇಕು ಎಂದು ಬಸವಧರ್ಮ ಪೀಠದ ಜಗದ್ಗುರು ಡಾ.ಗಂಗಾಮಾತಾಜಿಯವರು ಹೇಳಿರುವುದು ಸಮಸ್ತ ಲಿಂಗಾಯತ ಸಮಾಜಕ್ಕೆ ಸಂತಸ ತಂದಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು ಲಿಂಗಾಯತರ ಅಸ್ಮಿತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಗಂಗಾಮಾತಾಜಿ ಅವರ ಈ ಸಂದೇಶ ಲಿಂಗಾಯತರಿಗೆ ನೈತಿಕ ಬೆಂಬಲವನ್ನು ಹೆಚ್ಚಿಸಿದೆ. ಕೂಡಲಸಂಗಮದೇವ ಅಂಕಿತನಾಮ ಬಳಕೆಯಿಂದ ಬಸವಪರ ಸಂಘಟನೆಗಳಲ್ಲಿ ಉಂಟಾಗಿದ್ದ ಗೊಂದಲಕ್ಕೆ ಸ್ಪಷ್ಟತೆ ದೊರಕಿದಂತಾಗಿದೆ ಎಂದರು. ಈ…

ಕಾರು ಅಡ್ಡಗಟ್ಟಿ ಮಹಿಳೆ ಕೊಲೆ

ಆನೇಕಲ್,ಡಿ,28: ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಹಿಳೆಯನ್ನು ಬರ್ಬರ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಿಣಿ ಬಳಿ ನಡೆದಿದೆ. ಜಿಗಣಿ ನಿವಾಸಿ ಅರ್ಚನಾರೆಡ್ಡಿ ಹತ್ಯೆಯಾದ ಮಹಿಳೆ. ನವೀನ್, ಸಂತೋಷ್ ಎಂಬುವವರು ಅರ್ಚನಾರೆಡ್ಡಿಯನ್ನು ಕೊಲೆ ಮಾಡಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದೆ. ಅರ್ಚನಾ ಮೊದಲ ಪತಿ ಬಿಟ್ಟು 2ನೇ ಪತಿ ನವೀನ್ ಜೊತೆ ವಾಸವಿದ್ದರು. ಈ ನಡುವೆ ಚೆನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಗಲಾಟೆ ನಡೆದಿದ್ದು ಹೀಗಾಗಿ ಇತ್ತೀಚೆಗೆ ನವೀನ್ ಬಿಟ್ಟು ಅರ್ಚನಾ ದೂರವಿದ್ದರು. ಈ ಕಾರಣಕ್ಕಾಗಿ…

ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ; ಎಚ್ ಡಿಕೆ ಆಕ್ರೋಶ

ಬೆಂಗಳೂರು,ಡಿ,27:ಎನ್ ಇಟಿ ಕನ್ನಡ ಐಚ್ಛಿಕ ಭಾಷಾ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೀಡಾಗಿ, ಪರೀಕ್ಷೆಯನ್ನು ಬಹಿಷ್ಕರಿಸಿದ್ದಲ್ಲದೇ ಪ್ರತಿಭಟನೆ ನಡೆಸಿದ್ದರು. ಈ ಕುರತು ಟ್ವಿಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎಂದು ಕಿಡಿಕಾರಿದ್ದಾರೆ. ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ ಕುಮಾರಸ್ವಾಮಿ, ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ. ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇಪದೆ ಮರುಕಳಿಸುತ್ತಿರುವುದು ನನಗೆ ಬಹಳ ನೋವುಂಟು ಮಾಡಿದೆ.…

ಬೆಳಗಾವಿ ‘ಅಸ್ಮಿತೆ’ ಮೇಳದಲ್ಲಿ ದಾಖಲೆಯ ರೂ 60 ಲಕ್ಷ ವಹಿವಾಟು

ಬೆಂಗಳೂರು,ಡಿ,27: ಬೆಳಗಾವಿಯಲ್ಲಿ ಈಚೆಗೆ ಏರ್ಪಡಿಸಿದ್ದ (ಡಿ.15ರಿಂದ 20ರವರೆಗೆ) ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಅಸ್ಮಿತೆ’ಯಲ್ಲಿ ದಾಖಲೆಯ ಸುಮಾರು 60 ಲಕ್ಷ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿರುವ ಅವರು, ಮುಖ್ಯಮಂತ್ರಿ ಅವರು ಉದ್ಘಾಟಿಸಿದ್ದ ಈ ಮೇಳದಲ್ಲಿ 7 ಆಹಾರ ಮಳಿಗೆಗಳೂ ಸೇರಿದಂತೆ ಒಟ್ಟು 140 ಮಳಿಗೆಗಳು ಭಾಗವಹಿಸಿದ್ದವು. ಇದುವರೆಗೆ ಈ ರೀತಿಯ ಮೇಳಗಳಲ್ಲಿ ಆಗಿರುವ…

ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭ

ಬೆಂಗಳೂರು, ಡಿ.೨೭: ರಾಜ್ಯದಲ್ಲಿ ೫೮ ನಗರ ಸಂಸ್ಥೆಗಳ ಮತದಾನ ಇಂದು ಮತದಾನ ಆರಂಭವಾಗಿದೆ. ಬೆಳಗ್ಗೆ ೭ಕ್ಕೆ ಮತದಾನ ಆರಂಭವಾಗಿದ್ದು, ಸಂಜೆ ೫ರರೆಗೂ ನಡೆಯುತ್ತದೆ. ಒಂದು ವೇಳೆ ಮರು ಮತದಾನದ ಅಗತ್ಯ ಇದ್ದಲ್ಲಿ ಡಿ.೨೯ಕ್ಕೆ ನಿಗದಿ ಮಾಡಲಾಗಿದೆ. ಮತ ಎಣಿಕೆ ಕಾರ್ಯ ಡಿಸೆಂಬರ್ ೩೦ರಂದು ನಡೆಯಲಿದೆ ಎಂದು ಚುನಾವಣಾ ಆಯೋಗದ ತಿಳಿಸಿದೆ. ೨೦೧೬ನೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾದ ೫೧ ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ೨೦೨೧ಗೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರ ವಿಂಗಡನೆ ಮಾಡಿ, ವಾರ್ಡ್‌ವಾರು ಮೀಸಲಾತಿಯನ್ನು ನಿಗದಿಪಡಿಸಿ ಚುನಾವಣೆ…

ಡಿಸೆಂಬರ್ 24 ಆಡಿಯೋ ಬಿಡುಗಡೆ

ಎಂಜಿ ಎನ್ ಪ್ರೊಡಕ್ಷನ್ ತಯಾರಾಗುತ್ತಿರುವ ಡಿಸೆಂಬರ್ 24 ಚಿತ್ರಕ್ಕೆ ದೇವು ಹಾಸನ್ ಇದೇ ಮೊದಲಬಾರಿಗೆ ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಅವರು ನಿರ್ಮಾಣ ಮಾಡಿರುವ ಚಿತ್ರ ಡಿಸೆಂಬರ್‌ 24. ಹಾರರ್, ಥ್ರಿಲ್ಲರ್, ಕಥಾನಕ ಹೊಂದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಟ ಶ್ರೀನಗರ ಕಿಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು. ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕಥೆ…

ಓಮೈಕ್ರಾನ್ ಭೀತಿ;ರಾಜ್ಯದಲ್ಲಿ ಡಿ ೨೮ ರಿಂದ ಹತ್ತು ದಿನ ನೈಟ್ ಕರ್ಪ್ಯೂ ಜಾರಿ

ಬೆಂಗಳೂರು, ಡಿ,೨೬; ರಾಜ್ಯದಲ್ಲಿ ಓಮೈಕ್ರಾನ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹರಡುವಿಕೆ ತಡೆಯಲು ಸರ್ಕಾರ ಹತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಡಿಸೆಂಬರ್ ೨೮ರಿಂದ ೧೦ ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದೆ.…

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ ಶ್ರೀಶೈಲ ಮಹಾತ್ಮೆಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದ ನಟಿ ಸಂಧ್ಯಾ ಮದರಾಸಿನ ಸ್ಟುಡಿಯೊದಲ್ಲಿಚಿತ್ರೀಕರಣ ನಡೆಯುತ್ತಿದ್ದ ವೇಳೆ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದರು. ಬೆಂಗಳೂರಿನ ಕಾನ್ವೆಂಟ್‌ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಬಾಲೆ ಚಿತ್ರೀಕರಣವನ್ನುಕುತೂಹಲದಿಂದ ನೋಡುತ್ತಾ ಕುಳಿತಿದ್ದಳು.ಬಾಲನಟಿಯಾಗಿನೃತ್ಯದ ಪಾತ್ರ ನಿರ್ವಹಿಸಬೇಕಾಗಿದ್ದ ಶಾಲಾ ಬಾಲಕಿಯೊಬ್ಬಳು ಅಂದಿನ ಚಿತ್ರೀಕರಣಕ್ಕೆಗೈರುಹಾಜರಾಗಿದ್ದುಚಿತ್ರದ ನಿರ್ಮಾಪರು ಹಾಗೂ ನಿರ್ದೇಶಕರಲ್ಲಿ ತಳಮಳ ತಂದಿತ್ತು. ನಿರ್ದೇಶಕಆರೂರು ಪಟ್ಟಾಭಿಯವರಕಣ್ಣಿಗೆಚಿತ್ರೀಕರಣ ವೀಕ್ಷಿಸುತ್ತಿದ್ದ ಬಾಲಕಿ ಕಾಣಿಸಿದಳು. ತಾಯಿ ಸಂಧ್ಯಾಅವರೊಂದಿಗೆ ಮಾತನಾಡಿ ಪಾತ್ರ ನಿರ್ವಹಿಸಲು ಸಮ್ಮತಿ ಪಡೆದು, ಬಣ್ಣ ಹಚ್ಚಿಸಿದರು. ಆ ಬಾಲಕಿ…

ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ

 ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ ೧೯೯೮ನೇ ಇಸವಿ, ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯಕ್ಕಾಗಿ ಶಿಲ್ಪ, ಶಾಸನ, ವೀರಗಲ್ಲು ಮೊದಲಾದ ಪ್ರಾಚೀನ ವಸ್ತುವಿಶೇಷಗಳನ್ನು ಸಂಗ್ರಹಿಸಿ ತರಲೆಂದೇ ನೇಮಕವಾದ ತಂಡ ನಮ್ಮದು. ತಂಡದಲ್ಲಿ ನನ್ನನ್ನು ಸೇರಿದಂತೆ ವಾಸುದೇವ ಬಡಿಗೇರ, ಎಂ. ಕೊಟ್ರೇಶ ಮತ್ತು ನೆರಗಲ್ಲಪ್ಪ ಸೇರಿದ್ದೆವು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಹಳ್ಳಿಗಳನ್ನು ಸುತ್ತುತ್ತಾ ಅಲ್ಲಿನ ದೇವಾಲಯ, ಮಠ-ಮಂದಿರ, ಕಚೇರಿಗಳನ್ನು ಕಂಡು ಅಲ್ಲಿನ ಮುಖಂಡರು, ಅಧಿಕಾರಿಗಳು ಮತ್ತು ಸ್ಥಳೀಯ ಜನರನ್ನು ಒಪ್ಪಿಸಿ, ಓಲೈಸಿ ವಸ್ತುಗಳನ್ನು ಸಂಗ್ರಹಿಸುವ ಕಾಯಕವದು. ಈ ಸಂದರ್ಭದಲ್ಲಿ…

ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..!

ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..! “ನೀರ ಮೇಲಣ ಗುಳ್ಳೆ ನಿಜವಲ್ಲೊ ಹರಿಯೇ” ಎನ್ನುವ ಸುಶ್ರಾವ್ಯ ಕಂಠವೊಂದು ಕಿವಿಗಳನ್ನು ಅಪ್ಪಳಿಸಲು, ಜಳಕಕ್ಕೆಂದು ಬಚ್ಚಲು ಮನೆಗೆ ನಡೆದಿದ್ದವನು ಹಿಂತಿರುಗಿ ಓಡುತ್ತಾ ಸೀದಾ ಮುಂಬಾಗಿಲಿಗೆ ಬಂದು ನಿಂತು, ಕತ್ತನ್ನು ನೀಳವಾಗಿ ಹೊರಚಾಚಿ, ರಸ್ತೆಯ ಎರಡೂ ಬದಿಗೆ ದೃಷ್ಟಿ ಹರಿಸುತ್ತಾ, ಬಾಗಿಲ ಎಡತೋಳಿಗೆ ದೇಹದ ಅಷ್ಟೂ ಭಾರವನ್ನು ಹಾಕಿ ಒರಗಿ ನಿಂತೆನು. ನಾನು ಊಹಿಸಿದಂತೆಯೇ ಸುಮಾರು ಐವತ್ತನ್ನು ಮೀರಿದ ವಯಸ್ಸಿನ ಕೃಶಕಾಯದ, ಗೌರವರ್ಣದ, ಬಣ್ಣದ ಪಟ್ಟೆಪಟ್ಟೆ ಲುಂಗಿ ಮತ್ತು ಬಿಳಿಯ ಬನಿಯನ್…

ಅಹಲ್ಯೆ: ರೂಪಾಂತರಗಳ ಬಹುರೂಪೀ ಪಾತ್ರ

ಅಹಲ್ಯೆ: ರೂಪಾಂತರಗಳ ಬಹುರೂಪೀ ಪಾತ್ರ ಪ್ರಭುನಿಷ್ಟ ಚರಿತ್ರೆ ಬರೆದವರು ಯಾರು? ಯಾಕೆ ಈ ಚರಿತ್ರೆಯೂ ಉತ್ಪಾದನಾ ಅಂಶವನ್ನ ಒಳಗೊಂಡರೂ ಉತ್ಪಾದನೆಯ ಹಂಚಿಕೆ ಮತ್ತು ಉತ್ಪಾದನೆಗಾಗಿ ನಿಗಧಿಯಾದ ಕೂಲಿಯ ವಿವರಗಳಲ್ಲಿ ಗಂಡು ಹೆಣ್ಣೆಂಬ ಲಿಂಗ ತಾರತಮ್ಯ ಮಾಡಲಾಯಿತು? ನಾವು ಚರಿತ್ರೆಯನ್ನ ಭೂಮಿ ಸಂಬಂಧದ ಉತ್ಪನ್ನಗಳ ನೆಲೆಗಳಿಂದ ನೋಡಿದರೂ ಭೂಮಿಯ ಮೂಲವಾಗಿಯೇ ಗ್ರಹಿಸುವ ಮಹಿಳೆಗೆ ಭೂಮಿಯ ಹಕ್ಕು ಆಗ ಯಾಕಿರಲಿಲ್ಲ ಎಂಬುದೇ ಗಮನಾರ್ಹ. ಪಾಲನೆ ಮತ್ತು ಪೋಷಣೆಯ ಸಮಯದಲ್ಲಿ ಅರೆ ಉದ್ಯೋಗಿಯಾಗಿರಬೇಕಾದ ಮಹಿಳೆ ಕೂಲಿ ವಿಚಾರದಲ್ಲೂ ತಾರತಮ್ಯ ಅನುಭವಿಸುತ್ತಿದ್ದಾಳೆ.ಬುಡಕಟ್ಟು ಕಾಲದ…

ಕರ್ನಾಟಕದಲ್ಲೀಗ ಮೊಟ್ಟೆ ರಾಜಕೀಯ

ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದು ಅದರ ನಿವಾರಣೆಗೆ ಬೇಯಿಸಿದ ಮೊಟ್ಟೆಯನ್ನು ಕೊಡುವ ಸರ್ಕಾರದ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಯತ್ನಕ್ಕೆ ಕೆಲವರು ಮುಂದಾಗಿದ್ದಾರೆ. ಆಹಾರ ಸಂಸ್ಕೃತಿ ವಿಚಾರದಲ್ಲಿ ಧಾರಾಳ ಸ್ವಾತಂತ್ರ್ಯ ಕೊಡಬೇಕಾಗಿರುವ ಜಾಗದಲ್ಲಿ ಈ ಬಗೆಯ ವರ್ತನೆ ಅಸಹ್ಯಕರದ್ದಾಗಿದೆ. ಇದನ್ನು ಸರ್ಕಾರ ಮುಲಾಜಿಲ್ಲದೆ ನಿವಾರಿಸಿ ದಿಟ್ಟ ಹೆಜ್ಜೆಯನ್ನಿಡುವುದು ಅಗತ್ಯ. ಕರ್ನಾಟಕದಲ್ಲೀಗ ಮೊಟ್ಟೆ ರಾಜಕೀಯ ಹೊರಗಿನಿಂದ ಒಡೆದರೆ ಜೀವ ಹಾನಿ; ಒಳಗಿನಿಂದ ಒಡೆದರೆ ಜೀವ ವಿಕಾಸ. ಇದು ಮೊಟ್ಟೆಯ ಕಥೆ.…

1 54 55 56 57 58 122
Girl in a jacket