ರಾಜ್ಯ
ಅಮವಾಸ್ಯೆ ಪ್ರಯುಕ್ತ ಕೃಷ್ಣಾತಟದಲ್ಲಿ ಜನವೋ ಜನ..
ಆಲಮಟ್ಟಿ,ಆ,08: ನಾಗರ ಅಮವಾಸ್ಯೆ ಜೊತೆಗೆ ರವಿವಾರವೂ ಆಗಿರುವದರಿಂದ ಪಟ್ಟಣವೂ ಸುತ್ತಮುತ್ತಲಿನ ಸುಕ್ಷೇತ್ರ ಹಾಗೂ ಕೃಷ್ಣೆಯ ತೀರದಲ್ಲಿ ಎಲ್ಲಿ ನೋಡಿದರೂ ಜನಸ್ತೋಮವೇ ಕಾಣುತ್ತಿತ್ತು. ನಾಗರ ಅಮವಾಸ್ಯೆಯು ರವಿವಾರ ಆಗಿರುವದರಿಂದ ವಿಜಯಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆಯ ನಾಗರಿಕರು ರವಿವಾರ ನಸುಕಿನ ಜಾವದಿಂದ ಸಂಜೆಯವರೆಗೂ ಆಲಮಟ್ಟಿಯ ಕೃಷ್ಣಾಸೇತುವೆ, ಹಿನ್ನೀರು ಪ್ರದೇಶದಲ್ಲಿರುವ ಚಂದ್ರಮ್ಮಾದೇವಸ್ಥಾನದ ಬಳಿ, ಪಾರ್ವತಿಕಟ್ಟೆ ಹಾಗೂ ಯಲಗೂರ ಬಳಿಯಕೃಷ್ಣಾ ನದಿಯ ದಡದಲ್ಲಿ ಭಕ್ತರ ದಂಡು ಪುಣ್ಯಸ್ನಾನ ಮಾಡಿದರು. ಪಟ್ಟಣಕ್ಕೆ ಆಗಮಿಸಿದ್ದ ಪ್ರವಾಸಿಗರು ತುಂಬಿ ನಿಂತಿರುವ ಕೃಷ್ಣೆಯ ಜಲನಿಧಿ, ರಾಕ್ ಉದ್ಯಾನ,…