Browsing: ಜಿಲ್ಲೆ

ಜಿಲ್ಲೆ

ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲ-ನಾಗರಾಜ ಗೌಡ ಆರೋಪ

ಶಿಕಾರಿಪುರ,ಆ,೦೮:ಇಲ್ಲಿನ ಪುರಸಭೆಯಲ್ಲಿ ಸಂಪೂರ್ಣ ಬಹುಮತ ವಿಲ್ಲದೇ ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದು ಸಾರ್ವಜನಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲ ವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ ಆರೋಪಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಿಬ್ಬಂದಿಗಳ ಕೊರತೆ ಇದೆ,ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ ಅವರದೇ ಸರ್ಕಾರ ಅವರೇ ಮುಖ್ಯಮಂತ್ರಿ ಶಾಸಕರು ಸಂಸದರು ಅವರ ಪಕ್ಷದವರೆ ಇದ್ದರೂ ಸಾರ್ವಜನಿಕ ರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲದೆ ಕೇವಲ ಅವರ ಪಕ್ಷದ ಕಾರ್ಯಕ್ರಮದಲ್ಲಿ…

ಬೆಂಗಳೂರಲ್ಲಿ ವಾರಾಂತ್ಯ ಕರ್ಫ್ಯೂ ಸದ್ಯಕ್ಕಿಲ್ಲ: ಗೌರವ್ ಗುಪ್ತ

ಬೆಂಗಳೂರು,ಆ, 07: ‘ನಗರದಲ್ಲಿ ಕೋವಿಡ್‌ ನಿಯಂತ್ರಣ ಸಲುವಾಗಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸುವ ಪ್ರಸ್ತಾಪ ಸದ್ಯಕ್ಕೆ ಬಿಬಿಎಂಪಿ ಮುಂದಿಲ್ಲ’ ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ಸ್ಪಷ್ಟಪಡಿಸಿದರು. ‘ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡ ಎಂಟು ಜಿಲ್ಲೆಗಳಲ್ಲಿ ಮಾತ್ರ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ನಿತ್ಯ ಸರಾಸರಿ 450ರಷ್ಟು ಕೋವಿಡ್‌ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ನಗರದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಟ್ಟವರಲ್ಲಿ ಸೊಂಕು ಪತ್ತೆ ದರ ಶೇ 1ಕ್ಕಿಂತ ಕಡಿಮೆ ಇದೆ. ರಾಜ್ಯದ ಗಡಿಭಾಗದ ಹಲವಾರು ಜಿಲ್ಲೆಗಳಲ್ಲಿ ಸೋಂಕು…

ಬೆಳೆ ಪರಿಹಾರಕ್ಕಾಗಿ ಸರಕಾರಕ್ಕೆ ಶೀಘ್ರ ಪ್ರಸ್ತಾವನೆ

ಆಲಮಟ್ಟಿ,ಆ,07:ಪ್ರವಾಹದಿಂದ ಉಂಟಾದ ಬೆಳೆ ಹಾನಿ ಕುರಿತು ಸಮೀಕ್ಷೆ ಕಾರ್ಯ ನಡೆದಿದ್ದು ಸಮೀಕ್ಷಾ ವರದಿ ಬಂದ ನಂತರ ಬೆಳೆ ಹಾನಿ ಪರಿಹಾರ ವಿತರಿಸುವಂತೆ ಸರಕಾರಕ್ಕೆ ಶೀಘ್ರ ಪ್ರಸ್ತಾವನೆಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ತಾಲೂಕಿನ ಯಲಗೂರು ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಈಚೆಗೆ ಉಂಟಾದ ಪ್ರವಾಹದಿಂದ ಬೆಳೆ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು. ಕೃಷ್ಣಾ ನದಿ ಪ್ರವಾಹದಿಂದ ಯಲಗೂರು ಸೇರಿದಂತೆ ನಿಡಗುಂದಿ ತಾಲೂಕಿನಲ್ಲಿ ೪೬೫ಹೆಕ್ಟೇರ್ ಪ್ರದೇಶ ಬೆಳೆ…

ಮುನುಷ್ಯನಿಗಿಂತ ಮುನುಷ್ಯತ್ವ ದೊಡ್ಡದು

ಶಿಕಾರಿಪುರ,ಅ,೦೬:ಸದಸ್ಯರ ಹಿತ ಕಾಯುವುದು ಕಷ್ಟ್ಟಕ್ಕೆ ಸ್ಪಂದಿಸುವುದು ಒಬ್ಬ ಅಭಿವೃದ್ದಿ ಅಧಿಕಾರಿ ಕೆಲಸ ಮನುಷ್ಯ ಗಿಂತ ಅವನಲ್ಲಿಯ ಮನುಷ್ಯತ್ವ ದೊಡ್ಡದು ಅದಕ್ಕೆ ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಇದೆ ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಿಸಿದರು . ಮಂಜುನಾಥ್ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಎಲ್‌ಐಸಿ ಏಜೆಂಟರು. ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ಕೆಲಸಮಾಡುವ ಜಾಗದ ಜೊತೆಯಲ್ಲಿ ಇರುವವರು. ಕುಟುಂಬ ದವರತೆ ಇರಬೇಕು ಸ್ನೇಹ ಪ್ರೀತಿ ಸಂಪಾದಿಸಿ ಗೌರವದಿಂದ ನೋಡಿದಾಗಲೇ ನಂಬಿಕೆ ಬೆಳೆದು.…

ಶರವಾತಿ ಗ್ಯಾಸ್ ಏಜೆನ್ಸಿ ರದ್ದತಿಗೆ ಒತ್ತಾಯ

ಶಿಕಾರಿಪುರ,ಆ,೦೬: ರಾಜಕೀಯ ನಾಯಕ ಆರ್ಶೀವಾದಿಂದ ದಬ್ಬಾಳಿಕೆ ನಡೆಸುತ್ತಿರುವ ನಿಗಧಿಗಿಂತ ಹೆಚ್ಚು ಹಣ ಸಂಗ್ರಹಿಸುತ್ತಿರುವ ಶರಾವತಿ ಗ್ಯಾಸ್ ಏಜೆನ್ಸಿಯನ್ನು ರದ್ದು ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿಮಾಲತೇಶ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ರವರ ಬೆಂಬಲದಿಂದ ಭಾರತ್ ಗ್ಯಾಸ್ ಕಂಪನಿಯ ಶರಾವತಿ ಗ್ಯಾಸ್ ಏಜೆನ್ಸಿ ಮಾಲೀಕ ಮರಿ ಸ್ವಾಮಿಯವರು ತಾಲೂಕಿನ ಮತ್ತಿ ಕೋಟೆ .ನಿಂಬ್ಬೇ ಗೊಂದಿ ಹಾಗೂ ಇತರೆ ಗ್ರಾಮಗಳಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಗದಿತ ದರ ಕಿಂತ ಹೆಚ್ಚಿಗೆ…

ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಟಿ ದಾಳಿ

ಬೆಂಗಳೂರು,ಆ,05:ಇಂದು ಬೆಳಂಬೆಳಿಗ್ಗೆ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ.ಅಧಿಕಾರಿಗಳು ದಾಳಿ ನಡೆಸಿದ್ದು, ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಕಂಟೋನ್ಮೆಂಟ್ ಬಳಿ ಇರುವ ಜಮೀರ್ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಆಸ್ತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ. ಇತ್ತೀಚೆಗಷ್ಟೇ ಜಮೀರ್ ಅಹ್ಮದ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಜಮೀರ್ ಅಹಮದ್ ಗೆ ಸಂಬಂಧಿಸಿದ ಕಚೇರಿ, ಮನೆ ಹಾಗೂ ಫ್ಲಾಟ್ ಗಳ ಮೇಲೆ…

ಆಲಮಟ್ಟಿ ಶಾಸ್ತ್ರೀಸಾಗರ ಭರ್ತಿಗೆ ಕ್ಷಣಗಣನೆ

ಆಲಮಟ್ಟಿ,ಆ,04: ಮಹಾರಾಷ್ಟçದ ಪಶ್ಚಿಮಘಟ್ಟದಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವದರಿಂದ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಶಾಸ್ತ್ರೀ ಜಲಾಶಯ ಭರ್ತಿಯಾಗಲು ೦.೭೮ಮೀಟರ್ ಮಾತ್ರ ಬಾಕಿಯಿದ್ದು ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ. ತೌಕ್ತೆ ಚಂಡಮಾರುತದ ಪರಿಣಾಮವಾಗಿ ವಾಡಿಕೆಗಿಂತಲೂ ಮುಂಚಿತವಾಗಿಯೇ ಮೇ.೨೨ರಿಂದ ಆಲಮಟ್ಟಿ ಲಾಲಬಹದ್ದೂರಶಾಸ್ತಿç ಜಲಾಶಯ ಒಳಹರಿವು ಆರಂಭಗೊಂಡಿದ್ದು, ಜುಲೈ ತಿಂಗಳಿನ ಕೊನೆಯ ವಾರದಲ್ಲಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದುಬಂದ ಪರಿಣಾಮವಾಗಿ ಜಲಾಶಯದ ಎಲ್ಲ ೨೬ಗೇಟುಗಳು, ಜಲಾಶಯದ ಬಲಬದಿಯಲ್ಲಿರುವ ಕೆಪಿಸಿಎಲ್‌ನ ಆಳಮಟ್ಟಿ ಜಲವಿದ್ಯುತ್ ಉತ್ಪಾದನಾ ಘಟಕ, ಜಲಾಶಯ ವ್ಯಾಪ್ತಿಯ ಕಾಲುವೆ ಹಾಗೂ ವಿವಿಧ…

ಅಕ್ರಮವಾಗಿ ಸಾಗಿಸುತ್ತಿದ್ದ ೫೮೬ಪಡಿತರ ಅಕ್ಕಿ ಚೀಲ ವಶ

ನಿಡಗುಂದಿ,ಆ,04:ಬಡವರಿಗೆ ಪಡಿತರಕ್ಕಾಗಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಮುದ್ದೇಬಿಹಾಳ ಕ್ರಾಸ್ ಬಳಿ ಜರುಗಿದೆ. ವಶಪಡಿಸಿಕೊಂಡ ಲಾರಿಯಲ್ಲಿನ ಅಕ್ಕಿಯನ್ನು ಆಲಮಟ್ಟಿಯ ಗೋಡಾವನ್ ನಲ್ಲಿ ಇರಿಸಲಾಗಿದೆ. ಒಟ್ಟಾರೆ 586 ಅಕ್ಕಿ ಚೀಲಗಳನ್ನು‌ ವಶಪಡಿಸಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸತೀಶ ಕೂಡಲಗಿ ಹೇಳಿದರು. ಅಕ್ರಮ ಸಾಗಣೆ; ರಾಯಚೂರ ಜಿಲ್ಲೆ ಮಾನ್ವಿಯಿಂದ ಗುಜರಾತ್ ಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ರೇಷನ್ ಅಕ್ಕಿಯನ್ನು ಹೇಗೆ ಸಂಗ್ರಹಿಸಲಾಗುತ್ತಿತ್ತು? ಎಂಬುದನ್ನು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಖಚಿತ…

ಕೃಷ್ಣನದಿಯಲ್ಲಿ ಎತ್ತುಗಳು ಮುಳುಗಿ ಸಾವು

ಆಲಮಟ್ಟಿ,ಆ,03 : ಮೇಯಲು ಬಿಟ್ಟ ಎರಡು ಎತ್ತುಗಳು ಗಣಿ ಪುನರ್ವಸತಿ ಕೇಂದ್ರದ ಬಳಿ ಇರುವ ಕೃಷ್ಣಾನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ರೈತ ನಾಗಪ್ಪ,ಯಮನಪ್ಪ ಕೊಳಮಲಿ ಎನ್ನುವವರು ತಮ್ಮ ಎತ್ತುಗಳನ್ನು ಕೃಷ್ಣಾ ನದಿ ತೀರದಲ್ಲಿ ಮೇಯಲು ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಿದ್ದರು ಈ ವೇಳೆ ಎತ್ತುಗಳು ಕಾಣದೆ ಇದ್ದ ಸಂದರ್ಭದಲ್ಲಿ ಹುಡುಕಾಡಿದಾಗ ನದಿಯ ನೀರಿನಲ್ಲಿ ಮುಳುಗಿರುವುದು ತಿಳಿದುಬಂದಿದೆ. ಕೂಡಲೆ ತೆಪ್ಪದ ಸಹಾಯದಿಂದ ರಕ್ಷಣೆಗೆ ಧಾವಿಸಿದರೂ ಅಷ್ಟೋತ್ತಿಗಾಗಲೇ ಎರಡೂ ಎತ್ತುಗಳು ಮೃತಪಟ್ಟಿದ್ದವು. ಎರಡು ಲಕ್ಷ ಬೆಲೆಬಾಳುವ ಎತ್ತುಗಳನ್ನು…

ಸಾಧಕರಿಗೆ ಸನ್ಮಾನ

ಬೆಂಗಳೂರು,ಆ,01:ಸಿನಿಮಾಪತ್ರಿಕಾಛಾಯಾಗ್ರಾಹಕರು ಕರೋನಾ ವಾರಿಯರ‍್ಸ್ ಕಳೆದ ಹದಿನೆಂಟು ತಿಂಗಳುಗಳಿಂದ ವಿಶ್ವಕ್ಕೆ ವ್ಯಾಪಿಸಿರುವ ಕರೋನ ಎಂಬಮಹಾಮಾರಿಯಿಂದ ಜನರುಹೈರಣಾಗಿದ್ದಾರೆ.ಸರ್ಕಾರವುಲಾಕ್‌ಡೌನ್‌ಏರಿದಕಾರಣ ಚಟುವಟಿಕೆಗಳುಸ್ತಬ್ದಗೊಂಡಿದ್ದವು.ಈ ಸಂದರ್ಭದಲ್ಲಿಜೀವದ ಹಂಗನ್ನುತೊರೆದುಸಾಮಾಜಿಕ ಸೇವೆಯಲ್ಲಿತೊಡಗಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರನ್ನು ಎಸ್.ಎಸ್.ಕಲಾ ಸಂಗಮವು ಗುರುತಿಸಿ ಅವರನ್ನುಗೌರವಿಸುವ ಕಾರ್ಯಕ್ರಮನ್ನುಏರ್ಪಡಿಸಿತ್ತು. ಈ ಪೈಕಿ ಕಳೆದಮೂರು ದಶಕಗಳಿಂದ ಸಿನಿಮಾ ಪತ್ರಿಕೆಗಳಿಗೆ ಫೋಟೋಗಳನ್ನು ಒದಗಿಸುತ್ತಿರುವ ಹಿರಿಯಛಾಯಾಗ್ರಾಹಕರುಗಳಾದಕೆ.ಎನ್.ನಾಗೇಶ್‌ಕುಮಾರ್, ಮನೋಹರ್‌ಅಲಿಯಾಸ್ ಮನು ಮತ್ತು ಕೆ.ಎಸ್.ಮೋಕ್ಷೇಂದ್ರ ಇವರುಗಳನ್ನು ಸಂಸ್ಥೆಯು ಹಾರ, ಶಾಲು, ಪೇಟ ಮತ್ತುಪ್ರಮಾಣಪತ್ರ ವಿತರಿಸಿ ಸನ್ಮಾನಿಸಲಾಯಿತು. ನಜ್ಮಾ ಫಾರುಖ್, ಅಸಿಸ್ಟೆಂಟ್ ಕಮಿಷನರ್‌ಆಫ್ ಪೋಲೀಸ್, ಖ್ಯಾತಗಾಯಕ ಶಶಿಧರ್‌ಕೋಟೆ, ಸಮಾಜ ಸೇವಕ ಮಂಜುನಾಥ್‌ಬನಶಂಕರಿ, ನಿವೃತ್ತ…

ಸಂಶೋಧನಾತ್ಮಕ ಸುದ್ದಿಗಳ ಕೊರತೆ; ಶಾಸಕ ಶಿವಾನಂದ ಪಾಟೀಲ್ ವಿಷಾದ

ಆಲಮಟ್ಟಿ,ಜು,31:ಅವಸರದ ಸುದ್ದಿಗೆ ಮಹತ್ವ ನೀಡಿ, ಘಟನೆಯ ವಿವರಾತ್ಮಕ ಬರಹಗಳತ್ತ ಪತ್ರಕರ್ತರು ಗಮನಹರಿಸುತ್ತಿಲ್ಲ ಹೀಗಾಗಿ ಸಂಶೋಧನಾತ್ಮಕ ಸುದ್ದಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ವಿಷಾದಿಸಿದರು. ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಡಗುಂದಿ ತಾಲ್ಲೂಕು ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಹಾಗೂ ಸಮಾಜದ ಏರು ಪೇರುಗಳನ್ನು ಪತ್ರಕರ್ತರು, ವ್ಯಂಗ್ಯ ಚಿತ್ರಕಾರರು, ಸಾಹಿತಿಗಳು ಸ್ಥಿರವಾಗಿ ನಿರೂಪಿಸುತ್ತಾ ಬಂದಿದ್ದಾರೆ, ಸಾಮಾಜಿಕ ಜಾಲ ತಾಣಗಳ ಮಧ್ಯೆಯೂ ಪತ್ರಿಕೆಗಳನ್ನು…

ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಓ ಭೇಟಿ

ಆಲಮಟ್ಟಿ,ಜು,31:ಆಲಮಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡಕಲಗುಂಡಪ್ಪ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶನಿವಾರ ಜಿಲ್ಲಾ ಪಂಚಾಯ್ತಿ ಸಿಇಓ ಗೋವಿಂದ ರೆಡ್ಡಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಆಲಮಟ್ಟಿ ಗ್ರಾಮ ಪಂಚಾಯ್ತಿಯಿಂದ ಇಲ್ಲಿಯವರೆಗೆ ನರೇಗಾ ಯೋಜನೆಯಡಿ ಕೂಲಿಕರ‍್ಮಿಕರಿಗೆ ಕೆಲಸವೇ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಪ್ರಯತ್ನದ ಫಲವಾಗಿ ಮೊದಲ ಹಂತದಲ್ಲಿ ೧೫೦ ಮಹಿಳೆಯರಿಗೆ ಜಾಬ್ ಕರ್ಡ್ ಮಾಡಿಸಿ ಕೂಲಿ ಕೆಲಸ ನೀಡಲಾಗಿದೆ. ಸಿಇಓ ಗೋವಿಂದರೆಡ್ಡಿ ಮಾತನಾಡಿ,…

ವಿವಿಧ ಲೇಖಕರ ಕೃತಿಗಳಿಗೆ ಸಾಹಿತ್ಯಪರಿಷತ್ ದತ್ತಿ ಪ್ರಶಸ್ತಿ ಪ್ರಕಟ

ಬೆಂಗಳೂರು, ಜು,31: ಕನ್ನಡ ಸಾಹಿತ್ಯ ಪರಿಷತ್ತು 2020 ನೇ ಸಾಲಿಗೆ ವಿವಿಧ ಲೇಖಕರ ಒಟ್ಟು 48 ಕೃತಿಗಳಿಗೆ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ. ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ’ಗೆ ಎಸ್.ಪಿ. ಯೋಗಣ್ಣ ಅವರ ‘ಆರೋಗ್ಯ ಎಂದರೇನು?’ ಕೃತಿ ಆಯ್ಕೆಯಾಗಿದೆ. ‘ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ವಾಸುದೇವ ಬಡಿಗೇರ ಅವರ ‘ದೇವರ ದಾಸಿಮಯ್ಯ-ಮರುಚಿಂತನೆ’ ಕೃತಿ, ‘ಭಾರತಿ ಮೋಹನ ಕೋಟಿ…

ಆಲಮಟ್ಟಿ ಡ್ಯಾಂಗೆ ಹೆಚ್ಚಿದ ನೀರು ಜಮೀನುಗಳು ಜಲಾವೃತ

ಆಲಮಟ್ಟಿ,ಜು,೩೧: ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯರಾತ್ರಿಯಿಂದ ಹೆಚ್ಚಿಸಲಾಗಿದ್ದು, ೪.೨೦ ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಿದ್ದು, ಜಲಾಶಯದ ಒಳಹರಿವು ಕೂಡಾ ೪.೨೦ ಲಕ್ಷ ಕ್ಯುಸೆಕ್ ಇದೆ. ಸದ್ಯ ೫೧೯.೬೦ ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ೫೧೭.೧೭ ಮೀ.ವರೆಗೆ ನೀರಿದ್ದು, ೮೬.೫೯ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆಲಮಟ್ಟಿಯಿಂದ ಹೊರಹರಿವು ಹೆಚ್ಚಿದ್ದರಿಂದ ನಿಡಗುಂದಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲ್ಲಮ್ಮನೂದಿಹಾಳ, ಯಲಗೂರ, ಮಸೂತಿ ಗ್ರಾಮzಲ್ಲಿ ಇಲ್ಲಿಯವರೆಗೆ…

ನಿಡಗುಂದಿ: ಪೊಲೀಸರು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಲು ಸಲಹೆ

ನಿಡಗುಂದಿ,ಜು,೩೧:ಜನಸಾಮಾನ್ಯರ ಕಷ್ಟ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಮತ್ತದು ನನ್ನ ಪ್ರಥಮ ಆದ್ಯತೆಯೂ ಹೌದು, ಆ ದಿಸೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸರಿಗೂ ನಿರ್ದೇಶನ ನೀಡಿದ್ದೇನೆ ಎಂದು ವಿಜಯಪುರ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಎಚ್.ಡಿ. ಹೇಳಿದರು. ಕೊಲ್ಹಾರ, ನಿಡಗುಂದಿ, ಆಲಮಟ್ಟಿ, ಕೂಡಗಿ, ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಒಳಗೊಂಡ ನಿಡಗುಂದಿ ಆರಕ್ಷಕ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿ ಉದ್ಘಾಟಿಸಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸುವುದಕ್ಕೆ…

ತಂದೆ -ತಾಯಿ ಸಮಾಧಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ ,ಜು, 29:ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿಸ ಬಸವರಾಜ ಬೊಮ್ಮಾಯಿ ಅವರು , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ತಂದೆ,ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು. ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಸ್ಮರಣೆ ಮಾಡಿದರು.ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ತಂದೆ ,ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು ಅಧಿಕಾರ…

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಶೆಣೈ ಅಧಿಕಾರ ಸ್ವೀಕಾರ

ಬೆಂಗಳೂರು,ಜು,26:ಸರ್ಕಾರ ನೇಮಕ ಮಾಡಿರುವ ಕರ್ನಾಟಕ ಮಾಧ್ಯಮ ಅಕಾಡಮಿಗೆ ಅಧ್ಯಕ್ಷ ಸದಾಶಿವ ಶೆಣೈ ಅವರು ಅಧಿಕಾರ ಸ್ವೀಕರಿಸಿದರು. ಈ ವೇಳೆ ಸದಸ್ಯರಾದ ಕೆ.ಕೆ.ಮೂರ್ತಿ,ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು,ಶಿವಕುಮಾರ್ ಬೆಳ್ಳಿ ತಟ್ಟೆ ಹಾಜರಿದ್ದರು. ಇದೇ ವೇಳೆ ಹಾಜರಿದ್ದ ಅಕಾಡೆಮಿ ಮಾಜಿ ಅಧ್ಯಕ್ಷ ಪೊನ್ನಪ್ಪ ಅವರು, ಮುಂದಿನ ಸವಾಲುಗಳು ಹಾಗೂ ಮಾಡಬೇಕಾದ ಕಾರ್ಯಗಳ ಕುರಿತು ಸಲಹೆ ನೀಡಿದರು.

ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ಅಗತ್ಯ: ನಟಿ ರಾಜೇಶ್ವರಿ

ಬೆಂಗಳೂರು ಜುಲೈ 24: ಕರೋನಾ ಸಾಂಕ್ರಾಮಿಕದ ಲಾಕ್‌ಡೌನ್‌ ನಿಂದ ತೀವ್ರ ತೊಂದರೆಗೀಡಾಗಿರುವ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ನಟಿ ರಾಜೇಶ್ವರಿ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ  ಆಯೋಜಿಸಲಾಗಿರುವ ಇಂಡಿಯನ್‌ ಆರ್ಟಿಸನ್ಸ್‌ ಬಜಾರ್‌ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೋನಾ ಎರಡನೇ ಅಲೆಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದೆ ತೊಂದರೆಗೀಡಾಗಿದ್ದು ಕರಕುಶಲಕರ್ಮಿಗಳು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಗಾಗ್ಗೆ ಆಯೋಜಿಸಲಾಗುತ್ತಿದ್ದ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ಬಹಳಷ್ಟು ಕರಕುಶಲಕರ್ಮಿಗಳಿಗೆ ಅಗತ್ಯ ಪ್ರದರ್ಶನ ಹಾಗೂ ಮಾರಾಟದ ವೇದಿಕೆಯನ್ನು ಒದಗಿಸುತ್ತಿತ್ತು.…

ಕುಮಾರ ನಿಜಗುಣ ಸ್ವಾಮೀಜಿ ಇನ್ನಿಲ್ಲ

ಡಾ ಆರೂಢಭಾರತೀ ಸ್ವಾಮೀಜಿ ಬೆಂಗಳೂರು, ಜು,20:ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿಯ ಶ್ರೀ ನಿಜಗುಣ ಶಿವಯೋಗಿ ಕ್ಷೇತ್ರದ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರು(88) ಇಂದು ಬೆಳಿಗ್ಗೆ 2 ಘಂಟೆಗೆ ಮೈಸೂರಿನಲ್ಲಿ ಲಿಂಗೈಕ್ಯರಾದರು. ಇಂದು ಮಧ್ಯಾಹ್ನ ಚಿಲಕವಾಡಿಯ ಶ್ರೀ ನಿಜಗುಣ ಕ್ಷೇತ್ರದಲ್ಲಿ ಹರ ಗುರು ಚರಮೂರ್ತಿಗಳ ಭಕ್ತಾದಿಗಳ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಸಮಾಧಿ ಮಾಡಲಾಗುವುದು. ಶ್ರೀಗಳು ವಯೋವೃದ್ಧ ಹಿರಿಯ ಸಂನ್ಯಾಸಿಗಳು. ಗೃಹಸ್ಥಾಶ್ರಮದಲ್ಲಿ ವಕೀಲರಾಗಿದ್ದವರು. ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾ ಸ್ವಾಮಿಗಳವರಿಂದ ಸಂನ್ಯಾಸ ದೀಕ್ಷೆ ಪಡೆದವರು. ಕೊಳ್ಳೇಗಾಲ…

ಬಾವೈಕ್ಯತೆ ಸಾರುವ ಅಪರೂಪದ ವಿದ್ಯಾಸಂಸ್ಥೆ-ಶಿವಾನಂದ ತಗಡೂರು

ಶಿಕಾರಿಪುರ,ಜು,೧೯:ನಾನು ಊಹೇ ಕೂಡ ಮಾಡಿರಲಿಲ್ಲ ಬಹುಶಃ ಕೋಮು ಸೌಹಾರ್ದಯುತ ಸಂಸ್ಥೆ ಇದಾಗಿರಬೇಕೆಂದು ಕೊಂಡಿದ್ದೆ.ಆದರೆ ಸಂಸ್ಕಾರ ಬಾವೈಕ್ಯತೇ ಸಾರುವ ಅಪರೂಪದ ವಿದ್ಯಾಸಂಸ್ಥೆ ಎಂದು ಕಾರ್ಯನಿರತ ಪತ್ರಕರ್ತರ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಣ್ಣಿಸಿದರು. ಅವರು ನಗರದ ಜುಬೇದ ವಿದ್ಯಾ ಸಂಸೆ ಹಮ್ಮಿಕೊಂಡಿದ್ದ ವಿಶೇಷ ಸನ್ಮಾನ ಸಮಾರಂಭ ದಲ್ಲಿ ಬಾಗಿವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು. ಇಲ್ಲಿ ಕಾಯಕದ ವಿದ್ಯಾ ಸಂಸ್ಥೆ ಇರುವುದು ಬಹಳ ಹೆಮ್ಮೆಯ ಸಂಗತಿ.ಸುಮಾರು ಹದಿನೇಳು ಎಕರೆ ಪ್ರದೇಶದಲ್ಲಿ ಜಾತಿಭೇದ ವಿಲ್ಲದೆ ಸಮಾಜ ಮುಖಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೀರ್ತಿಗೆ…

1 7 8 9 10 11 15
error: Content is protected !!