ಅಂಕಣ
ಇಬ್ರಾಹಿಂ ಆದಿಲ್ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್
ಇಬ್ರಾಹಿಂ ಆದಿಲ್ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್ ಕರ್ನಾಟಕದ ಚರಿತ್ರೆಯಲ್ಲಿ ವಿಜಯಪುರದ ಆದಿಲ್ಶಾಹಿಗಳ ಪಾತ್ರ ಗಮನಾರ್ಹ. ಈ ಮನೆತನವು ಎರಡು ಶತಮಾನ(೧೬-೧೭)ಗಳ ಕಾಲ ತನ್ನ ಆಳ್ವಿಕೆಯನ್ನು ಸಮರ್ಥವಾಗಿ ನಡೆಸಿದೆ. ಈ ಮನೆತನದ ಅರಸರಲ್ಲಿ ೨ನೆಯ ಇಬ್ರಾಹಿಂ ಆದಿಲ್ಶಹನ(೧೫೮೦-೧೬೨೭) ಕಾಲ ವರ್ಣರಂಜಿತವಾದದ್ದು. ತನ್ನ ೪೭ ವರ್ಷಗಳ ಸುದೀರ್ಘ ಆಳ್ವಿಕೆಯಲ್ಲಿ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ಸುಭದ್ರಗೊಳಿಸಿದ್ದನು. ಆಡಳಿತವಲ್ಲದೆ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ದೃಷ್ಟಿಕೋನವುಳ್ಳ ವ್ಯಕ್ತಿತ್ವ ಅವನದಾಗಿತ್ತು. ಇವನ ಅವಧಿಯಲ್ಲಿ ರಾಯಚೂರು ಮತ್ತು ಮುದಗಲ್ಲು ಕೋಟೆಯ…