Browsing: ಅಂಕಣ

ಅಂಕಣ

ಎಲ್ಲಿ ಶೋಭಕ್ಕ..? ಕಾಣಿಸ್ತಿಲ್ಲ ಅಕ್ಕಪಕ್ಕ?

ಎಲ್ಲಿ ಶೋಭಕ್ಕ..? ಕಾಣಿಸ್ತಿಲ್ಲ ಅಕ್ಕಪಕ್ಕ? ಒಂದೆರಡು ವರ್ಷದ ಹಿಂದೆ ರಾಜ್ಯದ ಅತ್ಯಂತ ವರ್ಣರಂಜಿತ ರಾಜಕಾರಣಿಗಳ ಪಟ್ಟಿಯಲ್ಲಿದ್ದ, ನಿತ್ಯ ಸುದ್ದಿಯ ಸರಕಾಗಿದ್ದ ಶೋಭಾ ಕರಂದ್ಲಾಜೆ ಈಗ ಎಲ್ಲೂ ಕಾಣಿಸುತ್ತಿಲ್ಲ. ಹೋದಲ್ಲಿ ಬಂದಲ್ಲಿ, ಶಾಸನ ಸಭೆ ಅಧಿಕಾರಿಗಳ ಗ್ಯಾಲರಿಯಲ್ಲಿ, ವಿಧಾನ ಮಂಡಲದ ಮೊಗಸಾಲೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ, ಆಡಳಿತ ಶಕ್ತಿ ಕೇಂದ್ರ ವಿಧಾನ ಸೌಧ, ವಿಕಾಸ ಸೌಧದ ಕಾರಿಡಾರುಗಳಲ್ಲಿ ಮುಗುಳ್ನಗೆ ಚೆಲ್ಲುತ್ತ ನಿಧಾನ ಗತಿಯಲ್ಲಿ ಹೆಜ್ಜೆ ಹಾಕುತ್ತಿದ್ದ, ಎದುರಿಗೆ ಬಂದವರಿಂದ ನಮಸ್ಕಾರ ಸ್ವೀಕರಿಸುತ್ತ, ಪರಿಚಯದ ಮುಖ ಎದುರಾದರೆ ಹೆಲೋ ಹೇಳಿ…

ಕಪ್ಪು ಜಗದ ಬೆಳಕಿನ ಕಿರಣ

ಕಪ್ಪು ಜಗದ ಬೆಳಕಿನ ಕಿರಣ ಅದು ೨೦೧೬ ರ ಡಿಸೆಂಬರ್ ತಿಂಗಳಲ್ಲಿ ೬ರಂದು ಪತ್ರಕರ್ತ ಮತ್ತು ಸಂಘಟಕ ಮಹೇಶ್ ಊಗಿನಹಳ್ಳಿಯವರು ಏರ್ಪಡಿಸಿದ್ದ ಚಂದಾಪುರದ ಛತ್ರಖಾನೆ ಶಾಲೆಯಲ್ಲಿ ಜೇನುಗೂಡು ವೇದಿಕೆಯ ಕನ್ನಡದ ಕಾರ್ಯಕ್ರಮವಿತ್ತು. ಅಂದು ನಮ್ಮ ತಾಲ್ಲೂಕಿನವರೇ ಆದ ಸೂಕ್ಷ್ಮ ಸಂವೇದನೆಯ ಲೇಖPರಾದ ಶೂದ್ರ ಶ್ರೀನಿವಾಸರು ಮತ್ತು ದಲಿತಕವಿ ಎಂದೇ ಕರೆಯಲ್ಪಡುವ ಬಂಡಾಯ ಕವಿ ಸಿದ್ದಲಿಂಗಯ್ಯನವರು ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯನವರು ಯಾವಾಗ ಮಾತನಾಡಿzರೂ ನವಿರಾದ ಹಾಸ್ಯ ಸುತ್ತಮುತ್ತಲಿನವರನ್ನು ಮಂದಸ್ಮಿತರನ್ನಾಗಿಸುತ್ತಿತ್ತು. ಅವರು ಮಾತನಾಡುವ ಸರದಿ ಬಂದಾಗ ಹೀಗೇ…

ಜಗವಿದು ಪರಮಾತ್ಮನ ಸೃಷ್ಟಿ!

ಜಗವಿದು ಪರಮಾತ್ಮನ ಸೃಷ್ಟಿ! ಒಮ್ಮೆ ಸಿದ್ಧನು ಕೆಲವು ಹಡಗರೊಂದಿಗೆ ಒಂದು ತೋಟಕ್ಕೆ ಹೋದನು. ಅಲ್ಲಿ ನೇರಳೆ ಹಣ್ಣಿನ ಗಿಡದ ಕೆಳಗೆ ಬಿದ್ದಿರುವ ಹಣ್ಣಗಳನ್ನು ಕಾಣುತ್ತಲೇ ಹುಡುಗರು ಎಲ್ಲ ಮರೆತು ಹಣ್ಣು ಆಯ್ದು ತಿನ್ನಲಾರಂಭಿಸಿದರು. ಸಿದ್ಧ ನಿಂತು ನೋಡಿ ಆಲೋಚಿಸಿದ. ಈ ಹುಡುಗರಿಗೆ ಬುದ್ಧಿ ಕಲಿಸಬೇಕೆಂದು ಒಂದು ನೇರಳೆ ಹಣ್ಣನ್ನು ಚೆಲ್ಲಿದನು.ಅಲ್ಲಿ ನೇರಳೆ ಹಣ್ಣಿನ ರಾಶಿಯೇ ಉಂಟಾಯಿತು! ಹುಡುಗರು ಆ ರಾಶಿಯನ್ನು ಕಂಡು ಧಾವಿಸಿದರು, ಆಶ್ಚರ್ಯಪಟ್ಟರು. ಆಗ ಸಿದ್ಧನು ಹೀಗೆ ಹೇಳಿದನು: ಪರಮಾತ್ಮನ ಲೀಲೆ ಅತಿ ವಿಚಿತ್ರ. ಒಂದೇ…

ಕಾಯಕ ಮತ್ತು ಸತ್ಯದ ಹಾದಿ…

ಕಾಯಕ ಮತ್ತು ಸತ್ಯದ ಹಾದಿ… ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲನೇ ಅಥವಾ ಎರಡನೇ ವಾರದಲ್ಲಿ ನಾನು ಕಳೆದ ಹಲವಾರು ವರ್ಷಗಳಿಂದ ದುಬೈಗೆ ಭೇಟಿ ನೀಡುವ ಒಂದು ಸಂಪ್ರದಾಯವನ್ನು ವ್ರತದ ಹಾಗೆ ಪಾಲಿಸಿಕೊಂಡು ಬಂದಿದ್ದೇನೆ. ದುಬೈ ನಾನಿರುವ ಒಮಾನ್ ದೇಶದ ಪಕ್ಕದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ನ ಒಂದು ಎಮಿರೇಟ್ ನಗರ. ಒಮಾನ್ ರಾಜಧಾನಿ ಮಸ್ಕತ್ ನಗರದಿಂದ ಸುಮಾರು ನಾಲ್ಕು ನೂರಾ ಐವತ್ತು ಕಿಲೋಮೀಟರ್ ದೂರವಿರುವ ದುಬೈ ನಗರವನ್ನು ತಲುಪಲು ಕಾರಿನಲ್ಲಿ ಹೋದರೆ ಸುಮಾರು ಐದು ತಾಸುಗಳ…

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ ಮುಂದುವರಿದ ಭಾಗ. . . . . ಅದೇ ರೀತಿ ಸರಕುಗಳನ್ನು ಕುರಿತು ಹೇಳುವ ಡೊಮಿಂಗೋ ಪಾಯೇಸ್, ದವಸ-ಧಾನ್ಯಗಳನ್ನು ಹೇರಿಕೊಂಡು ಬಂದ ಲೆಕ್ಕವಿಲ್ಲದಷ್ಟು ಎತ್ತಿನಗಾಡಿಗಳು ಬೀದಿಯಲ್ಲಿ ಕಿಕ್ಕಿರಿದು ಹೋಗಿರುತ್ತವೆ ಎಂದರೆ; ನ್ಯೂನಿಜ್, ಪ್ರತಿದಿನ ಎರಡು ಸಾವಿರ ಹೇರೆತ್ತುಗಳು ವಿಜಯನಗರಕ್ಕೆ ಪ್ರವೇಶಿಸುತ್ತವೆ. ಪ್ರತಿಯೊಂದು ಎತ್ತಿಗೂ ಮೂರು ವಿಂತೆಂ ಸುಂಕ ಎಂದಿದ್ದಾನೆ. ಬಾರ್ಬೊಸಾ, ಮೆಣಸನ್ನು ಎತ್ತು ಮತ್ತು ಕತ್ತೆಗಳ ಮೇಲೆ ಹೇರಿಕೊಂಡು ವಿಜಯನಗರಕ್ಕೆ ಬರುತ್ತಾರೆ ಎಂದಿದ್ದರೆ; ನ್ಯೂನಿಜ್, ಹೇರುಗಳ ಸಾಗಾಟಕ್ಕೆ ಎತ್ತು-ಕತ್ತೆಗಳಲ್ಲದೆ,…

ಭಾರತ ಮಾತೆಗೆ ಕೇಳಿಸದು ಆದಿವಾಸಿಗಳ ಆಕ್ರಂದನ

ಭಾರತ ಮಾತೆಗೆ ಕೇಳಿಸದು ಆದಿವಾಸಿಗಳ ಆಕ್ರಂದನ ಭ್ರಮೆಯಲ್ಲಿ ಬದುಕುವ ಬಹುತೇಕ ಭಾರತವು ಬಸ್ತರ್ ಎಂಬ ಸೀಮೆಯ ಹೆಸರನ್ನು ಕೇಳಿರುವುದು ಅನುಮಾನ. ಮಧ್ಯಭಾರತದ ಕಾಡು ಕಣಿವೆ ಗುಡ್ಡಗಳಲ್ಲಿ ಹಲವು ಆದಿವಾಸಿ ನೆಲೆಗಳು ಹರಡಿ ಹಬ್ಬಿವೆ. ಈ ಸೀಮೆಗಳ ಹೆಸರಾಂತ ತವರು ಛತ್ತೀಸಗಢದ ಬಸ್ತರ್. ಅಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಸಿಲ್ಗೆರ್ ಎಂಬುದೊಂದು ಗ್ರಾಮ. ತಿಂಗಳೊಪ್ಪತ್ತಿನಿಂದ ಅಲ್ಲಿನ ಆದಿವಾಸಿಗಳ ಬದುಕು ಸರ್ಕಾರಿ ಪ್ರಾಯೋಜಿತ ಧಗೆಯಲ್ಲಿ ಕುದಿಯತೊಡಗಿದೆ. ರಾಜ್ಯ ಸರ್ಕಾರ ರಾತ್ರೋರಾತ್ರಿ ತಮ್ಮ ನೆಲದಲ್ಲಿ ಸುರಕ್ಷಾಬಲದ ಶಿಬಿರವೊಂದನ್ನು ಎಬ್ಬಿಸಿರುವ ಬೆಳವಣಿಗೆ ಈ ಬಡಪಾಯಿಗಳ…

ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು

ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು ಅಡ್ಡ ಹೆಸರುಗಳು ಕಾಲು ಮತ್ತು ಕವಲುದಾರಿಗಳಂತವು.ಮನೆಯ ಪರಿಸರಕ್ಕಿಂತಲೂ ಅವು ಸಮೂಹದಿಂದಲೇ ಹುಟ್ಟಿಕೊಂಡವು..ಜನರನ್ನ ವಿಶಿಷ್ಟವಾಗಿ ವಿಶೇಷವಾಗಿ ಕಾಣುವ ಹಂಬಲಹೊತ್ತ ಇವುಗಳು ಗುಣಾನುರೂಪಿಯಾದವು.ಭಿನ್ನ ದಾರಿ ಭಿನ್ನ ಗುರಿಗಳನ್ನ ಆರಿಸಿಕೊಳ್ಳುವ ಇವುಗಳನ್ನ ವಚನಕಾರರ ಕಾಲದಿಂದಲೇ ಗುರ್ತಿಸುವ ಡಾ.ಎಂ.ಎಂ. ಕಲ್ಬುರ್ಗಿಯವರು ಹೇಳುವಂತೆ ಇವು ಅಡ್ಡ ಹೆಸರು ಎಂಬುದಕ್ಕಿಂತಲೂ ಅರ್ಧ ಹೆಸರುಗಳು ಎಂದೇ ಕರೆಯಬಹುದು.ವೃತ್ತಿಸೂಚಿ ಮತ್ತು ಗ್ರಾಮ ಸೂಚಿ ನೆಲೆಯಿಂದ ನೋಡಿದಾಗ ಇವು ಸಾಮಾಜಿಕ ಕಿರು ಕಥನಗಳೂ ಹೌದೆಂಬಂತಿವೆ. ಕತ್ಲಪ್ಪ ಮೇಷ್ಟ್ರು: ಮಂಗಳವಾರದ ಕತ್ತಲು ಆವರಿಸುತ್ತಿದ್ದಂತೆಯೇ ಚೌಡಮ್ಮನ ಅಂಗಳ…

ಮೈಸೂರು ಜಗಳ: ದೇವರೂ ಅಸಹಾಯಕ

ಮೈಸೂರು ಜಗಳ: ದೇವರೂ ಅಸಹಾಯಕ ದೇವರು ಇದ್ದಾನೋ ಇಲ್ಲವೋ ಎನ್ನುವುದು ನಾಗರಿಕ ಸಮಾಜ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದಲೂ ಇದೆ. ಒಂದು ಧರ್ಮ, ದೇವನೊಬ್ಬ ನಾಮ ಹಲವು ಎಂದರೆ ಇನ್ನೊಂದು ಧರ್ಮ, ಇರುವುದೊಂದೇ ದೇವರು ಎನ್ನುತ್ತದೆ. ಮತ್ತೊಂದು ಧರ್ಮ ಇನ್ನೇನನ್ನೋ ಹೇಳುತ್ತದೆ. ದೇವರು ಇದ್ದಾನೆ ಎನ್ನುವ ವರ್ಗದ ಜೊತೆಗೇ ದೇವರು ಇಲ್ಲ ಎನ್ನುವ ವರ್ಗ ಕೂಡಾ ಇದೆ. ಜಗತ್ತಿನ ಉದ್ದಗಲಕ್ಕೆ ಎಷ್ಟೆಲ್ಲ ಧರ್ಮ, ಎಷ್ಟೆಲ್ಲ ದೇವರು. ಕೊರೋನಾ ಮಾರಕ ದಾಳಿಯನ್ನು ನಾಶಮಾಡುವ ದೇವರು ಮಾತ್ರ ಯಾವ ಧರ್ಮದಲ್ಲೂ ಇಲ್ಲ;…

ಕಳೆದುಕೊಳ್ಳುವ ದುಃಖ

ಕಳೆದುಕೊಳ್ಳುವ ದುಃಖ ನನ್ನ ಹಿಂದಿನ ಅಂಕಣದಲ್ಲಿ ಕ್ರಮವಾಗಿ ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿಡುತ್ತಿದ್ದೆ. ಆದರೆ ಈ ಕೊರೋನ ಎಂಬ ಕಾಣದ ಜೀವವು ನಾವು ಬಯಸದ, ನೆನೆಸದ, ಊಹೆ ಮಾಡದ ಘಟನೆಗಳನ್ನು ನಮ್ಮ ಬದುಕಿನ ಹಾದಿಯಲ್ಲಿ ತಂದೊಡ್ಡಿದ ಪರಿಣಾಮ ಇಂದು ನಾನು ಅದರಿಂದಾದ ಕೆಲವು ಮಾನಸಿಕ ಗೊಂದಲಗಳು, ಯೋಚನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಮುಖ್ಯ ಶಿಕ್ಷಕರನ್ನು ಭೇಟಿಯಾಗಬೇಕೆಂದು ಒಬ್ಬ ಮಹಿಳೆ ಶಾಲೆಯ ಹತ್ತಿರ ಬಂದಿದ್ದರು. ನಾನು ಅವರನ್ನು ಮುಖ್ಯ ಕಛೇರಿಯಲ್ಲಿ ಕೂರಿಸಿದ್ದೆ. ನಂತರ…

ಜೀವನದ ನಿಜಸ್ವರೂಪ ತಿಳಿದವನು ಬದುಕಿಗೆ ಅಂಜಲಾರ!

ಒಮ್ಮೆ ಸಿದ್ಧಬಾಲಕ ಹುಡುಗರೊಂದಿಗೆ ಕೆರೆಗೆ ಸ್ನಾನಕ್ಕೆ ಹೋದನು. ಈಜು ಬಾರದ ಹುಡುಗನನ್ನು ಎಳೆದೊಯ್ದು ಕೆರೆಯಲ್ಲಿ ಮುಳುಗಿಸಿದನು.ತಾಯಿ ರೋಧಿಸಿದಾಗ ,’ಕೂಗಿ ಕರೆ’ ಎಂದನು.ದೇವದತ್ತಾ ಬಾ! ಎಂದೊಡನೆ ಹುಡುಗ ಮೇಲೆದ್ದು ಈಜಿ ಬಂದ! ಇದರ ತಾತ್ತ್ವಿಕತೆಯನ್ನು ಸಿದ್ಧ ಹೀಗೆ ವಿವರಿಸಿದನು; ಬದುಕೆಂಬುದು ಒಂದು ಕೆರೆ.ಬದುಕುವ ಜೀವಿಗಳೆಲ್ಲರೂ ಕೆರೆಯಲ್ಲಿ ಈಜುವ ಹುಡುಗರು! ಕೆರೆಯಲ್ಲಿಳಿಯಲು, ಕೆರೆಯಲ್ಲಾಡಲು, ಕೆರೆದಾಟಲು ಈಜು ತಿಳಿದಿರಬೇಕು. ನೀರು ಆಳವಾಗಿದ್ದರೆ, ಈಜು ಬರದಿದ್ದರೆ, ಕೆರೆಗೆ ಇಳಿಯಲಾಗದು.ಇಳಿದರೆ,ಬಿದ್ದರೆ ಮುಗಿಯುತ ಕಥೆ! ಆದ್ದರಿಂದ ಈಜು ಬಾರದವ ನೀರಿಗಿಳಿಯಲು ಭಯಪಡುವನು. ನೀರಿನಲ್ಲಿ ಈಜುವವರನ್ನು ಕಂಡು…

ಗ್ರಾಮೀಣ ಬದುಕು ಮತ್ತು ನಂಬಿಕೆ

ಗ್ರಾಮೀಣ ಬದುಕು ಮತ್ತು ನಂಬಿಕೆ ನನಗೆ ಚಿಕ್ಕಂದಿನಿಂದಲೂ ಪವಾಡಗಳೆಂದರೆ ಏನೋ ಒಂದು ವಿಧವಾದ ಆಸಕ್ತಿ. ಊರಲ್ಲಿ ಯಾರ ಮೈಮೇಲಾದರೂ ದೇವರು ಬಂದಿದೆ ಎಂದು ಕೇಳಿದ ಮರುಕ್ಷಣ ಅಲ್ಲಿಗೆ ಹಾಜರಾಗುತ್ತಿದ್ದೆ. ಹಾಗೆಯೇ ಭವಿಷ್ಯ ನುಡಿಯುವವರನ್ನು, ಕೋಲೆಬಸವದವರನ್ನು, ಗೊರಯ್ಯದವರನ್ನು, ಕಾರಣಿಕದವರನ್ನು, ಜೋಗತಿಯರನ್ನು ಅತಿಯಾಗಿ ನಂಬುತ್ತಿದ್ದೆ, ಅವರು ಹೇಳುವುದು ಖಂಡಿತವಾಗಿ ಜರುಗಿಯೆ ತೀರುತ್ತದೆ ಎಂದು ಬಲವಾಗಿ ನಂಬಿದ್ದೆ. ಇಂತಹ ಒಂದು ನಂಬಿಕೆಯನ್ನು ಗಟ್ಟಿಮಾಡಿದ ಪ್ರಸಂಗವೊಂದು ನಾನು ನಾಲ್ಕನೇ ಕ್ಲಾಸಿನಲ್ಲಿ ಇರುವಾಗ ಸಂಭವಿಸಿದ್ದು ನನ್ನ ಮನಃಪಟಲದಲ್ಲಿ ಇನ್ನೂ ಹಸಿರಾಗಿದೆ. ಅದು ೧೯೭೬-೭೭…

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ ಮುಂದುವರಿದ ಭಾಗ. . . . . ಅದೇ ತಾನೇ ಕೋಟಿಲಿಂಗವನ್ನು ನೋಡಲು ನದಿಗೆ ಇಳಿಯುವ ದುಸ್ಸಾಹಸಕ್ಕೆ ಕೈಹಾಕಿದ್ದೆವಲ್ಲಾ, ಅದೂ ಈಜುಬಾರದ ಗೆಳೆಯ ರೇಣುಕಾಪ್ರಸಾದ್ ಜೊತೆ. ಅಜ್ಜಿಯ ಮಾತು ಕೇಳದೆ ಕೋಟಿಲಿಂಗ ನೋಡಲು ನದಿಗೆ ಏನಾದರೂ ಇಳಿದಿದ್ದರೆ, ಉಕ್ಕಿ ಹರಿಯುವ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದರೆ, ನಮ್ಮಿಬ್ಬರ ಸ್ಥಿತಿ ಏನಾಗುತ್ತಿತ್ತು? ಅದನ್ನು ನೆನೆದು ಭಯಭೀತನಾದೆ. ಅಬ್ಬಾ ನಿಜಕ್ಕೂ ಬದುಕಿದೆವು ಎಂದು ಸಾವರಿಸಿಕೊಂಡೆನು. ಅದೂ ನಮ್ಮನ್ನು ಬದುಕಿಸಿದ್ದು ಬಾಳೆಹಣ್ಣು, ತೆಂಗಿನಕಾಯಿ ಮಾರುವ…

ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು

ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು ಮಾನವ ಚರಿತ್ರೆಗಳನ್ನ ರಾಜಕೀಯ ನೆಲೆಯಲ್ಲಿ ನೋಡುವಂತೆಯೇ ಸಾಂಸ್ಕೃತಿಕ ನೆಲೆಯಲ್ಲಿಯೂ ನೋಡ ಬಹುದಾಗಿದೆ.ಭಾಷೆಯಲ್ಲಿ  ಅಂಕಿತ ನಾಮಗಳು ವ್ಯಕ್ತಿ ಗುರುತನ್ನ ಹೇಳಿದರೆ ಅನ್ವರ್ಥ ನಾಮಗಳು ಆ ವ್ಯಕ್ತಿಯ ಸಾಂಸ್ಕೃತಿಕ ವಿವರಗಳನ್ನ ಸಾರುವ ಜೀವ ದ್ರವ್ಯಗಳಂತೆ ಕಾಣುತ್ತವೆ.ಅನ್ವರ್ಥ ನಾಮವನ್ನ ಅಡ್ಡ ಹೆಸರೆಂದು ಕರೆವ ಜನರ ಆಸಕ್ತಿಗಳನ್ನ ಸೂಕ್ಷ್ಮವಾಗಿ ಕೆದಕಿದಾಗ ಈ ’ಅಡ’ ಎಂಬ ನೇರವಲ್ಲದ ಹೆಸರಿಗೆ ಗ್ರಾಮ,ಬದುಕು,ವೃತ್ತಿ ಮತ್ತು ಜಾತಿ ಬೇರುಗಳ ಬಿಳಲುಗಳಿರುವುದನ್ನ ಗುರುತಿಸಬಹುದಾಗಿದೆ. ನಗರದಂತೆ ಹಳ್ಳಿಗಲ್ಲಿ ಇಣುಕುವ ಈ ಸಾಂಸ್ಕೃತಿಕ ಸಂಗತಿಗಳ…

ಮೋದಿ: ಹಸಿವು ಮುಕ್ತ ಭಾರತ ಮಾಡಿ

ಮೋದಿ: ಹಸಿವು ಮುಕ್ತ ಭಾರತ ಮಾಡಿ ಮೂವತ್ತು ವರ್ಷ ಸತತ ಎಂಬಂತೆ ಸಮ್ಮಿಶ್ರ ಕಿರಿಕಿರಿ ಇದ್ದ ಕೇಂದ್ರ ಸರ್ಕಾರಕ್ಕೆ ಗ್ರಹಣ ಮೋಕ್ಷ ದಯಪಾಲಿಸಿದ ಹಿರಿಮೆ ನರೇಂದ್ರ ಮೋದಿಗೆ ಸಲ್ಲಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹತ್ತಾರು ಹಗರಣಗಳ ಭಾರದಿಂದ ನಲುಗಿ ಹೋಗಿದ್ದ ಜನತೆಗೆ ಒಂದು ಪರ್ಯಾಯವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದುದು ಏಳು ವರ್ಷದ ಹಿಂದೆ. ಮೋದಿ ಮುಖ ನೋಡಿ, ಅವರು ಹೇಳಿದಂತೆ ಮತ ನೀಡಿ ಊಹಾತೀತ ಬಹುಮತ ನೀಡಿದ ನಾಡಿಗೆ, ಜನರಿಟ್ಟ ವಿಶ್ವಾಸಕ್ಕೆ ಸಿಕ್ಕ…

ದೇಹ ಮತ್ತು ದೇಶ

ದೇಹ ಮತ್ತು ದೇಶ ಮೋಜು ಮಸ್ತಿಯಿಂದ ಶುರುವಾಗುವ ಕುಡಿತವು ಕ್ರಮೇಣ ಅದನ್ನು ಬಿಡಲಾರದ ಸ್ಥಿತಿಗೆ ಮನುಷ್ಯನನ್ನು ಕೊಂಡೊಯ್ಯುತ್ತದೆ. ಇದು ಗಂಡಸರೊಬ್ಬರನ್ನೇ ಅಲ್ಲ ಈಗೀಗ ಕೆಲವು ಹೆಂಗಸರು ಸಹ ಇದನ್ನು ತಮ್ಮ ಬದುಕಿನಲ್ಲಿ ಆರಂಭಿಸಿರುವುದು ದುರದೃಷ್ಟವೇ ಸರಿ. ಯಾವುದೋ ಒತ್ತಡಕ್ಕೆ ಮಣಿದೋ, ಅಥವಾ ತಮ್ಮ ಸ್ಟೇಟಸ್ ಗೆ ಇರದಿದ್ದರೆ ಹೇಗೆ? ಎಂದೋ, ಒತ್ತಡಗಳನ್ನು ಹತ್ತಿಕ್ಕಲೆಂದೋ ಶುರುವಾಗುವ ಇದು ಯಾವುದೇ ಲಿಂಗಬೇಧವಿಲ್ಲದೆ, ವರ್ಗಬೇಧವಿಲ್ಲದೆ, ಎಲ್ಲರ ಬದುಕನ್ನೂ ಮತ್ತು ಜೀವನಶೈಲಿಯನ್ನೂ ಹಾಳು ಮಾಡುತ್ತದೆ. ಕುಟುಂಬಗಳಲ್ಲಿ ಜಗಳ, ಕುಟುಂಬಕ್ಕೆ ಕೆಟ್ಟ ಹೆಸರು…

ಅಹಂಕಾರ-ದುರಹಂಕಾರಗಳ ನಡುವಿನ ತರ್ಕ

ಬಾಲ ಸಿದ್ಧನೊಮ್ಮೆ ತನ್ನ ಮನೆಯ ಎಮ್ಮೆಯ ಮೇಲೆ ಕುಳಿತನು. ಹುಡುಗರನ್ನು ಕೂಗಿ ಕರೆದು “ನಾನು ಆನೆಯ ಮೇಲೆ ಕುಳಿತಿರುವೆನು. ನೀವೆಲ್ಲಾ ಮೆರವಣಿಗೆ ಮಾಡಿರಿ” ಎಂದನು. ಎಮ್ಮೆ ಹೆಜ್ಜೆಯೇ ಇಡಲಿಲ್ಲ. ಸಿದ್ಧ  ಶಪಿಸಿದ. ಎಮ್ಮೆ ಸತ್ತಿತ್ತು! ಎಮ್ಮೆ ಸಾಕಿದ್ದ ತನ್ನ ತಾಯಿ ದೇವಮಲ್ಲಮ್ಮ ಅಳಲಾರಂಭಿಸಿದಳು. ಸಿದ್ಧ‘ಓಂ ನಮಃ ಶಿವಾಯ’ ಎನ್ನುತಾ ಎಮ್ಮೆ ಮುಟ್ಟಿದ. ಎಮ್ಮೆಬದುಕಿತು! ಈ ಘಟನೆಯನ್ನು ಸಿದ್ಧ ಹೀಗೆ ವಿವರಿಸಿದ:  ಅಹಂಕಾರವೇ ಎಮ್ಮೆ. ನಾನು ನಾನು ಎನ್ನುವುದೇ ಅಹಂಕಾರ. ಇದು ಎಲ್ಲರಲ್ಲೂ ಇರುತ್ತದೆ. ಹಡುಗರಿರಲಿ,ವೃದ್ಧರಿರಲಿ ,ಜ್ಞಾನಿಗಳಿರಲಿ, ಅಜ್ಞಾನಿಗಳಿರಲಿ,ಪ್ರತಿಯೊಬ್ಬರಲ್ಲೂ…

ಆಂಗ್ಲಭಾಷೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ!

ಲೇಖಕರ ಪರಿಚಯ; ಎನ್.ಸಿ.ಶಿವಪ್ರಕಾಶ್ ಮೂಲ ತುರುವನೂರು ನಿವಾಸಿ,ಅವರು ಆರಿಸಿಕೊಂಡ ವೃತ್ತಿಯಿಂದ ಒಮಾನ್ ದೇಶದ ಮಸ್ಕತ್‌ನಲ್ಲಿ ವಾಸವಾಗಿದ್ದಾರೆ.ಆದರೆ ತಾಯ್ನಾಡಿನ ಮಣ್ಣಿನ ವಾಸನೆಯನ್ನು ಎಂದೂ ಮರೆತವರಲ್ಲ ಅದರಲ್ಲೂ ಆಡಿ-ಬೆಳದ ಗ್ರಾಮದ ವೈಶಿಷ್ಟ್ಯಗಳ ಕುರಿತು ಮೆಲುಕು ಹಾಕುತ್ತಲೆ ಇರುತ್ತಾರೆ, ಯಾಕೆಂದರೆ ಅಲ್ಲಿನ ಭಾವನಾತ್ಮಕ ಸಂಬಂಧಗಳ ಬೆಸುಗೆ ಎಂದೂ ಕಳಚಲಾಗದ ನೆನಪುಗಳು.ಹಾಗಾಗಿಯೇ ಗ್ರಾಮದ ಪ್ರತಿ ನೆನಪು ಅವರಲ್ಲಿ ಮಾಸದೆ ಉಳಿದವೆ.ಆ ನೆನಪುಗಳ ಭುತ್ತಿಯ ಒಂದಿಷ್ಟು ಘಟನೆಳನ್ನು ಇಲ್ಲಿ ಹೇಳಿದ್ದಾರೆ. ಶಿವಪ್ರಕಾಶ್ ಅವರು ಹತ್ತನೇ ತರಗತಿಯವರೆಗೂ ತುರುವನೂರಿನಲ್ಲೇ ಓದಿದ್ದು ನಂತರ ಪಿಯುಸಿ ಚಿತ್ರದುರ್ಗದ ಸರ್ಕಾರಿ…

ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ

ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ ಹಂಪೆಯ ವಿರೂಪಾಕ್ಷ ದೇವಾಲಯದ ಮುಂದಿನ ಬೀದಿಯನ್ನು ವಿರೂಪಾಕ್ಷ ಬೀದಿ, ಪಂಪಾ ರಥವೀದಿ, ಹಂಪೆ ಬಜಾರು ಎಂದೆಲ್ಲಾ ಕರೆಯಲಾಗುತ್ತದೆ. ಇದು ಪಂಪಾವಿರೂಪಾಕ್ಷರ ರಥೋತ್ಸವಕ್ಕಾಗಿ ನಿರ್ಮಿಸಿದ್ದ ರಥವೀದಿ. ಈ ಬೀದಿಯ ಇಕ್ಕೆಲಗಳಲ್ಲಿ ಸಾಲುಮಂಟಪಗಳಿದ್ದು, ಇವು ಅಂದಿನ ವ್ಯಾಪಾರ-ವಾಣಿಜ್ಯದ ಮಳಿಗೆಗಳೂ ಆಗಿದ್ದವು. ಇದು ಸುಮಾರು ಒಂದು ಕಿ.ಮೀ ದೂರವಿದ್ದು, ಎದುರು ಬಸವಣ್ಣ ಮಂಟಪದವರೆಗೂ ವಿಸ್ತರಿಸಿತ್ತು. ಬೀದಿಯ ಕೊನೆಗೆ ಎಡಭಾಗದಲ್ಲಿ ವಿಸ್ತಾರವಾಗಿರುವ ಅನೇಕ ಮಂಟಪಗಳಿವೆ. ಈ ಮಂಟಪಗಳು ಹಿಂದೆ ಬಹುದೊಡ್ಡ ಮಠವೇ ಆಗಿದ್ದವು. ಈ…

ಮತ್ತೆ ಆ ದಿನಗಳು ಬಂದಾವೇ?

ಮತ್ತೆ ಆ ದಿನಗಳು ಬಂದಾವೇ? ಆಗ ನಮ್ಮ ಮನೆಯಲ್ಲಿ ಹಿತ್ತಾಳೆ, ತಾಮ್ರ, ಮತ್ತು ಅಲ್ಯೂಮಿನಿಯಂ ಪಾತ್ರೆಗಳೇ ಹೆಚ್ಚು. ಮನೆಯಲ್ಲಿ ಸಹ ಅಮ್ಮ ಮಾಡುತ್ತಿದ್ದ ಮುದ್ದೆ ಪಾತ್ರೆ ತಾಮ್ರದ್ದು, ಸಿಹಿ ನೀರು ತುಂಬುವ ಕೊಳಗ ತಾಮ್ರದ್ದೇ. ಕೆರೆಯ ಕಟ್ಟೆಯ ಮೇಲಿದ್ದ ಬಾವಿಯಿಂದ ಸಿಹಿನೀರು ತರುತ್ತಿದ್ದ ಅಕ್ಕಂದಿರು ತಲೆಯ ಮೇಲೆ ಹೊರುತ್ತಿದ್ದ ಗುಂಡಿ ಮತ್ತು ಕಂಕುಳಲ್ಲೊಂದು ಹೊತ್ತು ತರುತಿದ್ದ ಬಿಂದಿಗೆ ಹಿತ್ತಾಳೆಯವು. ಇವು ಖಾಲಿ ಇದ್ದರೂ ಹೊರಲು ಸ್ವಲ್ಪ ತೂಕವೇ ಇರುತ್ತವೆ. ನನ್ನ ಅಕ್ಕಂದಿರೊಡನೆ ನಾನು ಮತ್ತು ತಂಗಿ ನೀರು…

ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು…

ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು… ಕರೊನಾವನ್ನು ಒಳಗೊಂಡಂತೆ ಸಿಡುಬು,ಮೈಲಿ,ದಢಾರ,ಮೊದಲಾದ ಸಂಕ್ರಾಮಿಕ ರೋಗಗಳೆಲ್ಲಾ ಯಾಕೆ ನಮ್ಮ ನಾಡಿನೊಳಗೆ ಸ್ತ್ರೀ ಹೆಸರನ್ನ ಹೊತ್ತು ನಿಲ್ಲುತ್ತವೆ? ಕೊರೊನಾ ಮಹಾ ಮಾರಿ,ಕೊರೊನಾ ಹೆಮ್ಮಾರಿ ಎಂದೆಲ್ಲಾ ಕರೆಸಿಕೊಂಡಿರುವ ಇದರ ಎರಡನೇ ಅಲೆಯಲ್ಲಿ ಕೊಚ್ಚಿಹೋದವರೆಲ್ಲಾ ಬಹುತೇಕ ಯುವಕರು.ತೀವ್ರ ಅಸಡ್ಡೆ,ಹುಂಬತನ,ಅಶಿಸ್ತಿನಿಂದಾಗಿ ಇಲ್ಲವೇ ದುರಬ್ಯಾಸಗಳಿಂದಾಗಿ, ಇತರರನ್ನ ರಕ್ಷಿಸಲು ಹೆಣಗಿದಾಗ,ಸದ್ದಿಲ್ಲದೇ ಬಲಿಯಾದವರ ಬಗೆ ಬಗೆದಂತೆ ಬಹುರೂಪಿಯಾಗಿದೆ. ” ತಾಯಿ ರಕ್ಕಸಿಯಾದಂತೆ” ಕಾಣುವ ಈ ವೈರಸ್ ದಾಳಿಯು ಈಗ ಹೆಚ್ಚು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಗಳನ್ನ ಬಾಧಿಸುತ್ತಿರುವುದರ ಹಿನ್ನೆಲೆಯೇನು?…

error: Content is protected !!