Girl in a jacket

Author kendhooli_editor

ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು…

ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು… ಕರೊನಾವನ್ನು ಒಳಗೊಂಡಂತೆ ಸಿಡುಬು,ಮೈಲಿ,ದಢಾರ,ಮೊದಲಾದ ಸಂಕ್ರಾಮಿಕ ರೋಗಗಳೆಲ್ಲಾ ಯಾಕೆ ನಮ್ಮ ನಾಡಿನೊಳಗೆ ಸ್ತ್ರೀ ಹೆಸರನ್ನ ಹೊತ್ತು ನಿಲ್ಲುತ್ತವೆ? ಕೊರೊನಾ ಮಹಾ ಮಾರಿ,ಕೊರೊನಾ ಹೆಮ್ಮಾರಿ ಎಂದೆಲ್ಲಾ ಕರೆಸಿಕೊಂಡಿರುವ ಇದರ ಎರಡನೇ ಅಲೆಯಲ್ಲಿ ಕೊಚ್ಚಿಹೋದವರೆಲ್ಲಾ ಬಹುತೇಕ ಯುವಕರು.ತೀವ್ರ ಅಸಡ್ಡೆ,ಹುಂಬತನ,ಅಶಿಸ್ತಿನಿಂದಾಗಿ ಇಲ್ಲವೇ ದುರಬ್ಯಾಸಗಳಿಂದಾಗಿ, ಇತರರನ್ನ ರಕ್ಷಿಸಲು ಹೆಣಗಿದಾಗ,ಸದ್ದಿಲ್ಲದೇ ಬಲಿಯಾದವರ ಬಗೆ ಬಗೆದಂತೆ ಬಹುರೂಪಿಯಾಗಿದೆ. ” ತಾಯಿ ರಕ್ಕಸಿಯಾದಂತೆ” ಕಾಣುವ ಈ ವೈರಸ್ ದಾಳಿಯು ಈಗ ಹೆಚ್ಚು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಗಳನ್ನ ಬಾಧಿಸುತ್ತಿರುವುದರ ಹಿನ್ನೆಲೆಯೇನು?…

ಸಿದ್ದು -ಯಡ್ಡಿ ಜಗಳಬಂದಿ

ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಎಂದೂ ಸುಗಮವಾದ ಜುಗಲ್ ಬಂದಿ ಇರುವುದು ಸಾಧ್ಯವಿಲ್ಲ ಎನ್ನುವುದು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ದೇಶ ಕಂಡಿರುವ ಸತ್ಯ. ಆಳುವ ಪಕ್ಷ ಒಂದು ಕಡೆ, ಇನ್ನೊಂದು ಕಡೆಯಲ್ಲಿ ಆಡಳಿತ ಇಲ್ಲ ಎನ್ನುವ ಕಾರಣಕ್ಕೆ ಅಳುವ ಪಕ್ಷ. ಅವುಗಳ ನಡುವೆ ಇರುವುದು ಜಗಳಬಂದಿ ಮಾತ್ರ. ಜಗಳಕ್ಕೆ ಇಂಥದೇ ಕಾರಣ ಬೇಕೆಂದೇನೂ ಇಲ್ಲ, ಕಾರಣ ತನ್ನಷ್ಟಕ್ಕೆ ಹುಟ್ಟಿಕೊಳ್ಳುತ್ತದೆ; ತಾರ್ಕಿಕ ಅಂತ್ಯ ಕಾಣದೆ ತನ್ನಷ್ಟಕ್ಕೆ ತಾನೇ ಸಾಯುತ್ತದೆ. ವಿರೋಧ ಪಕ್ಷದ ನಾಯಕರು ಅಧಿಕಾರಿಗಳನ್ನು ಕರೆದು ಅಭಿವೃದ್ಧಿ…

ಮೇಕೆದಾಟು ಯೋಜನೆ; ನಾಳೆ ಕಾನೂನು ತಜ್ಞರೊಂದಿಗೆ ಸಭೆ- ಬೊಮ್ಮಾಯಿ

ಬೆಂಗಳೂರು, ಮೇ,26:ಮೇಕೆದಾಟು ಯೋಜನೆ ಸಂಬಂಧಿಸಿದಂತೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಾನೂನು ತಜ್ಞರ ಉನ್ನತಮಟ್ಟದ ಸಭೆ ನಡಯಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ ಟೌನ್ ಹಾಲ್ ಬಳಿ ಬೆಂಗಳೂರು ನಗರ ಸಂಚಾರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು‌. ರಾಷ್ಟ್ರೀಯ ಹಸಿರು ಪೀಠ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸೋಮೋಟೋ ದೂರು ದಾಖಲಿಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಸಮಿತಿ ರಚನೆ ಮಾಡಿದೆ. ಮೇಕೆದಾಟು ಯೋಜನೆಗೆ ಭೇಟಿ ನೀಡಬೇಕು.…

ಸ್ವಾತಂತ್ರ್ಯಹೋರಾಟಗಾರ ಶತಾಯುಷಿ ಎಚ್.ಎಸ್.ದೊರೆಸ್ವಾಮಿ ನಿಧನ

ಬೆಂಗಳೂರು, ಮೇ,26:ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎಚ್.ಎಸ್.ದೊರೆಸ್ವಾಮಿ ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು.ಇತ್ತೀಚೆಗಷ್ಟೆ ಅವರಿಗೆ ಕೊರೊನಾ ಸೋಕು ತಗುಲಿದ್ದು ಗುಣಮುಖರಾಗಿದ್ದರು.ಆದರೆ ಕೆಲ ದಿನಗಳ ಹಿಂದೆ ತೀವ್ರ ಹೃದಯಾಘಾತವಾದಾಗ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯಿಸಿರೆಳದಿದ್ದಾರೆ. ೧೯೧೮ ಏಪ್ರಿಲ್  ೧೦ ರಂದು ಹಾರೋಹಳ್ಳಿಯಲ್ಲಿ ಜನಸಿದ್ದ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ದರು,ನಂತರ ಜೈಲುವಾಸ ಅನುಭವಿಸಿದ್ದರು.ಗಾಂಧಿ ಅನುಯಾಯಿಯಾದ ಅವರು ಅವರ ಸಿದ್ದಾಂತಗಳನ್ನು ಅಳವಡಿಸಿಕೊಂಡಿದ್ದರು.೧೪ ತಿಂಗಳುಗಳಕಾಲ ಜೈಲುವಾಸ ಅನುಭವಿಸಿ ಹೊರಬಂದ ನಂತರ ಅವರು ಪತ್ರಿಕೆಯನ್ನು…

ಬಿಎಸ್‌ವೈ ಬದಲಾವಣೆ ಖಚಿತ;ಜೂನ್ ೭ರ ನಂತರ ರಾಜಕೀಯ ದ್ರವೀಕರಣ!

ಬೆಂಗಳೂರು,೨೬: ಕರ್ನಾಟಕದಲ್ಲಿ ಬರುವ ಜೂನ್ ಏಳರ ನಂತರ ರಾಜಕೀಯ ದ್ರವೀಕರಣವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ; ದೇಶದಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವರ್ಚಸ್ಸು ಗಣನೀಯ ಪ್ರಮಾಣದಲ್ಲಿ ಕುಸಿದ ಹಿನ್ನೆಲೆಯಲ್ಲಿ ಪಕ್ಷ ಮತ್ತು ಮೋದಿ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಕೆಲ ಬದಲಾವಣೆಗಳನ್ನು ತರಲು ಆರ್‌ಎಸ್‌ಎಸ್ ಮುಂದಾಗಿದೆ ಅದರ ಒಂದು ಭಾಗವೇ ಕರ್ನಾಕಟದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ. ಹೌದು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಲು ಈಗಾಗಲೇ ವೇದಿಕೆ ಸಜ್ಜಾಗಿದೆ. ಜುಲೈ ೭ ರ ನಂತರ ಲಾಕ್ ಡೌನ್ ಮುಗಿಯುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು…

ಅವಶ್ಯಕತೆ ಪೂರೈಸುವಲ್ಲಿ ವೀರ ಶೈವ ಸಮಾಜ ಸೇವೆ ಅನನ್ಯ

ವರದಿ; ಜಿ ಕೆ ಹೆಬ್ಬಾರ್ ಶಿಕಾರಿಪುರ ಶಿಕಾರಿಪುರ,ಮೇ,೨೬;ದೇಶ .ಹಾಗೂ ರಾಜ್ಯ ಹಿಂದೆಂದೂ ಕಂಡರಿಯದ ಒಂದು ಸಂದಿಗ್ಧ ಸ್ಥಿತಿಯಲ್ಲಿ ಇದ್ದು ಈ ಕೂ ರೋ ನಾ ಹೆಮ್ಮರಿಯನ್ನು ಕಟ್ಟಿ ಹಾಕುವುದರ ಜೊತೆಗೆ ಸಾರ್ವಜನಿಕರ ಜೀವ ಕಾಪಾಡುವ ಮತ್ತು ತುರ್ತು ಸೇವೆ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಅಂತಹ ಸೇವೆಯಲ್ಲಿ ನಮ್ಮ ವೀರ ಶೈವ ಸಮಾಜ ಪೂರಕವಾಗಿ ಕೆಲಸಮಾಡಿ ತೋರಿಸುತ್ತಿದೆ ಸಮಾಜ ಮುಖಿಯಾಗಿ ಅವರಸೇವೆ ಅನನ್ಯ ಎಂದು ಸಂಸದ ರಾಘವೇಂದ್ರ ತಿಳಿಸಿದರು. ಅವರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಖಿಲ…

ದೇಶದಲ್ಲಿ ಇಳಿಕೆ ಕಂಡ ಕೊರೊನಾ ಪ್ರಕರಣ

ನವದೆಹಲಿ, ಮೇ,26: ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಗೆದುಕೊಂಡಿರುವ ಕಠಿಣ ಕ್ರಮ ಕೈಗೊಂಡಿರುವ ಕಾರಣ ಈಗ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 2,08,92 ಮಂದಿಗೆ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,08,921 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,71,57,795 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,157…

ಒಡಿಶಾಕ್ಕೆ ಯಸ್ ಚಂಡಮಾರುತ ,11 ಲಕ್ಷ ಜನರ ಸಿಫ್ಟ್

ಭುವನಶ್ವರ,ಮೇ,26:ಯಸ್ ಚಂಡಮಾರುತ ಇಂದು ಮಧ್ಯಾಹ್ನ ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಭೂ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ . ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ಅವರು ಬುಧವಾರ ಬೆಳಗ್ಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ‘ಯಸ್‌’ ಚಂಡಮಾರುತ ಮಧ್ಯಾಹ್ನದ ವೇಳೆಗೆ ಭೂಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದೆ. ಸದ್ಯ ಗಂಟೆಗೆ 130 ರಿಂದ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಗಾಳಿಯ…

ಮನೆಕಟ್ಟಿ ನೋಡು ,ಮದುವೆ ಮಾಡಿ ನೋಡು

ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ. ಸಿದ್ಧಸೂಕ್ತಿ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು. ವಾಸಕ್ಕೆ ಮನೆ, ಆಸರೆಗೆ ಮದುವೆ, ಎಲ್ಲರಿಗೂ ಬೇಕು. ಎಲ್ಲರೂ ಮನೆ ಕಟ್ಟಲಾಗದು. ಬಾಡಿಗೆ ಮನೆಯಲ್ಲಿ, ಅಲ್ಲಿಲ್ಲಿ ಜೀವ ಅಂತ್ಯ!ಕೆಲವರಿಗೆ ಮದುವೆ ಮಾಡಲಾಗದು. ಕನ್ಯೆ ವರ ಸಿಗರು, ಸಿಕ್ಕರೂ ಒಪ್ಪರು. ಒದ್ದಾಟದ ಬದುಕಿಗಂಜಿ ಮದುವೆ ಬೇಡೆಂಬುವರು ಕೆಲರು. ಮದುವೆ ಸ್ವಾತಂತ್ರ್ಯದ ತಡೆ, ಅಡ್ಡದಾರಿಗನ ಸರಿ ದಾರಿಗೆ ತಳ್ಳುವ ಕೋಲು, ದನಗಳ ಕೊರಳಲಿ ಕಟ್ಟುವ ಗುದಿ ! ಅದಕ್ಕೇ ಹೇಳುವುದು “ಮಾಡ್ತಿನಿ ಮದುವೆ”!ಮನೆ ಮಾಡಲು…

ಐಪಿಎಲ್ ಉಳಿದ ಪಂದ್ಯಗಳು ಸೆಪ್ಟಂಬರ್ ಮೂರನೆ ವಾರ

ಮುಂಬೈ,ಮೇ,೨೫: ಕೋವಿಡ್ ಅಟ್ಟಹಾಸದಿಂದ ದೇಶದೆಲ್ಲಡೆ ಆತಂಕ ಉಂಟುಮಾಡಿದ್‌ದ ಕಾರಣ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು ಈಗ ಐಪಿಎಲ್ ಪಂದ್ಯಗಳನ್ನು ಸೆಪ್ಟಂಬರ್ ಮೂರನೇ ವಾರ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ ೧೯ ರಿಂದ ಅಕ್ಟೋಬರ್ ೧೦ ರವರೆಗೆ ಈ ಆವೃತ್ತಿಯ ಉಳಿದ ಪಂದ್ಯಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ . ಅಕ್ಟೋಬರ್ ೧೦ ರಂದು ಐಪಿಎಲ್‌ನ ೧೪ನೇ ಆವೃತ್ತಿಯ ಅಂತಿಮ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದರಲ್ಲಿ ೧೦ ಡಬಲ್ ಹೆಡರ್ ಪಂದ್ಯಗಳು,…

ಬೆಡ್‌ಬ್ಲಾಕಿಂಗ್ ದಂಧೆ; ಶಾಸಕ ಸತೀಶ್ ರೆಡ್ಡಿ ಆಪ್ತನ ಬಂಧನ

ಬೆಂಗಳೂರು, ಮೇ. ೨೫: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಶಾಸಕ ಸತೀಶ್ ರೆಡ್ಡಿ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈಗ ಬೆಡ್‌ಬ್ಲಾಕ್ ದಂಧೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಜೊತೆಯಲ್ಲೆ ಸುದ್ದಿಗೋಷ್ಠಿ ನಡೆಸಿದ್‌ದ ಶಾಸಕ ಸತೀಶ್ ರೆಡ್ಡಿಗೆ ಈಗ ತೀವ್ರ ಮುಖಭಂಗವಾದಂತಾಗಿದೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಿಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಹಿರಂಗ ಪಡಿಸಿದ್ದರು. ಈ ಪ್ರಕರಣ ರಾಜಕೀಯ…

ವಿಕಲಚೇತನರು, ಅನಾಥಾಶ್ರಮದ ವಯೋವೃದ್ಧರಿಗೆ ಲಸಿಕೆಗೆ ವ್ಯವಸ್ಥೆ..!

ಬೆಂಗಳೂರು,ಮೇ,೨೫: ಅನಾಥಶ್ರಮಗಳಲ್ಲಿನ ವೃದ್ಧರಿಗೆ ಮತ್ತು ವಿಕಲ ಚೇತನಿರಿಗೆ ಬೆಂಗಳೂರು ನಗರ ಜಿಲ್ಲಾಡಿಳ ಅಲ್ಲಿಯೇ ಲಸಿಕೆ ಹಾಕಲು ನಿರ್ಧರಿಸಿದೆ ಪಂಚಾಯ್ತಿ, ರೆವಿನ್ಯೂ ಹಾಗೂ ಹೆಲ್ತ್ ಆಫೀಸರ್ಸ್ ನಿಂದ ಮ್ಯಾಪಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿಶೇಷ ಚೇತನರು ಬರೋಬ್ಬರಿ ೫೯ ಸಾವಿರ ಮಂದಿ ಇದ್ದಾರೆ. ಅದರಲ್ಲಿ ೪೫ ವರ್ಷ ಮೇಲ್ಪಟ್ಟವರು ಬರೋಬ್ಬರಿ ೧೯,೯೧೧ ಮಂದಿ ಇಷ್ಟು ಮಂದಿಯ ಮ್ಯಾಪಿಂಗ್ ಮಾಡಿ ಅವರಿರೋ ಸ್ಥಳಕ್ಕೆ ವಾಹನ ವ್ಯವಸ್ಥೆ ಮಾಡಿ, ವಿಶೇಷ ಚೇತನರಿರೋ ಮನೆ ಮನೆಗೆ ತೆರಳಿ ತಮ್ಮ ವಾಹನದಲ್ಲಿ ಸ್ಥಳೀಯ…

ಡಾ.ದೇವಿ ಶೆಟ್ಟಿ ಗೆ ಕೇಂದ್ರ ಸಂಪುಟದಲ್ಲಿ ಸ್ಥಾನ..!?

ಬೆಂಗಳೂರು ,ಮೇ,೨೫: ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ ಹೀಗೊಂದು ಸುದ್ದಿ ಹರಡುತ್ತಿದೆ ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಈ ಸಂಪುಟಕ್ಕೆ ನಾರಾಯಣ ಹೆಲ್ತ್‌ಕೇರ್ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಅವರನ್ನು ಸೇರಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅವರನ್ನು ಕೋವಿಡ್ ಮೂರನೇ ಅಲೆಯ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕಮಾಡಲಾಗಿದ್ದು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಂಪುಟ ದರ್ಜೆಯ ಸಚಿವರನ್ನಾಗಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಲಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ…

ದೇಶದಲ್ಲಿ ಕೊರೊನಾ ಇಳಿಕೆ,೧,೯೬ ಲಕ್ಷ ಹೊಸ ಪ್ರಕರಣ,೩,೫೧೧ ಸಾವು

ನವದೆಹಲಿ,ಮೇ,೨೫: ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು ೧,೯೬,೪೨೭ ಜನರಲ್ಲಿ ಸೋಂಕು ದೃಡಪಟ್ಟಿದ್ದು,೩,೫೧೧ ಜನ ಸಾವನ್ನಪ್ಪಿದ್ದಾರೆ. ಕಳೆದ ಹಲವು ದಿನಗಳಿಂದ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತು ಆದರೆ ಕಳೆದ ೨೪ ಗಂಟೆಯಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿರುವುದು ಒಂದಿಷ್ಟು ನೆಮ್ಮದಿ ತಂದಿದೆ. ಹಲವು ದಿನಗಳಿಂದ ೪ ಲಕ್ಷದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಇದೀಗ ೨ ಲಕ್ಷಕ್ಕಿಂತ ಕೆಳಗೆ ಇಳಿದಿರುವುದು, ೨ನೇ ಅಲೆಯ ಇಳಿಕೆಯ…

ನಾಳೆ ಒಂದೇ ದಿನ ಚಂದ್ರಗ್ರಹಣ,ಬ್ಲಡ್ ಮೂನ್ ಗೋಚರ!

ನವದೆಹಲಿ, ಮೇ ೨೫: ನಾಳೆ ಈ ವರ್ಷದ ಮೊದಲ ಚಂದ್ರಗ್ರಹಣ ಗೋಚರಿಸಲಿದ್ದು ಇದರ ಜೊತೆಗೆ ಬ್ಲಡ್ ಮೂರನ್ ಕೂಡ ಗೋಚರವಾಘಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ಹುಣ್ಣಿಮೆಯ ದಿನವಾದ ನಾಳೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ ಹಾಗೆಯೇ ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನು ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭಿಸಲಿದೆ ಎಂದು…

ಕೋವಿಡ್ ಪರೀಕ್ಷೆ ಮಾದರಿ ಕೊಡುವುದು ತಡ ಮಾಡಿದ ಲ್ಯಾಬ್‌ಗಳಿಗೆ ದಂಡ

ಬೆಂಗಳೂರು, ಮೇ ೨೫; ಲ್ಯಾಬ್‌ಗಳು ಮೋವಿಡ್ ಮಾದರಿ ಪರೀಕ್ಷೆಗಳನ್ನು ತಡ ಮಾಡಿದರೆ ಅಂತವುಗಲಿಗೆ ದಂಡವಿದಲಾಗುತ್ತಿದ್ದು ಈಗಾಗಲೇ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ನಾರಾಯಣ ತಿಳಿಸಿದ್ದಾರೆ. ಈಗಾಗಲೇ ಒಟ್ಟು೨೦.೨೦ ಲಕ್ಷ ರೂ ದಂಡವನ್ನು ವಿಧಿಸಲಾಗಿದ್ದು ೩೧ ಖಾಸಿಗಿ ಲ್ಯಾಬ್,೯ ಸರ್ಕಾರಿ ಲ್ಯಾಬ್‌ಗಳು ಸಏರಿ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ನೋಡೆಲ್ ಅಧಿಕಾರಿಯಾದ ಶಾಲಿನಿ ರಜನೀಶ್ ಸಚಿವರಿಗೆ ಈ ಕುರಿತು ವಿವರಗಳನ್ನು ನೀಡಿದ್ದಾರೆ. ಕೋವಿಡ್ ಟಾಸ್ಕ್ ಪೋರ್ಸ್ ಅಧ್ಯಕ್ಷರೂ ಆಗಿರುವ…

ಮನಸ್ಸಿದ್ದರೆ ಮಾರ್ಗ…

ಶ್ರೀ ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ ಮನಸ್ಸಿದ್ದರೆ ಮಾರ್ಗ. ಮನಸ್ಸು ದೇಹ ವಸ್ತುಗಿಂತ ಬಲಿಷ್ಠ. ಅದ್ಭುತ ಸಾಧಕ. ಜಾಂಬವಂತನ ಮಾತಿನಿಂದ ಮನಸ್ಸು ಮಾಡಿದ ಆಂಜನೇಯ ಸಮುದ್ರ ಹಾರಿ, ಸೀತೆಯ ಕಂಡ! ಎತ್ತರಿಳಿಜಾರಿನ ಅಂಕುಡೊಂಕಿನ ಕಲ್ಲು ಬೆಟ್ಟಗಳ ರಸ್ತೆ! ಸುರಂಗಮಾರ್ಗ! ಗಗನಯಾತ್ರೆ! ಸಮುದ್ರದಾಳದ ಈಜು! ಶಿಕ್ಷಣ – ವಿಜ್ಞಾನ ಪ್ರಗತಿ! ಮೊಬೈಲ್ ನಲ್ಲಿ ವಿಶ್ವ! ಕ್ಷಣದಲ್ಲಿ ಹಣ ಸಾವಿರ ಮೈಲಿ ದೂರ ರವಾನೆ! ಕೆಲಸಕ್ಕಾಗಿ ಅಲೆದವರಿಂದ ಸಾವಿರ ಸಾವಿರ ಜನರಿಗೆ ಉದ್ಯೋಗ! ಹಿರಿಯೂರು ತರಕಾರಿ ವ್ಯಾಪಾರಿ ಮಗಳು ಲಲಿತಾ ಏರೋನ್ಯಾಟಿಕ್…

ಸರ್ಕಾರಿ ಶಾಲಾ ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಚಿಂತನೆ; ಸುರೇಶ್ ಕುಮಾರ್

ಮೈಸೂರು,ಮೇ24: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂಚಿತರಾಗಬಾರದು ಹಾಗಾಗಿ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಉಚಿತ ಸ್ಮಾರ್ಟ್ ಫೋನು ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೈಸೂರಿನ ಡಿಡಿಪಿಐ ಕಚೇರಿಗೆ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ‘ಸ್ಮಾರ್ಟ್‌ಫೋನ್‌ ವಿತರಣೆ ಸಂಬಂಧ ಈಗಾಗಲೇ ಎಲ್ಲ ಶೈಕ್ಷಣಿಕ ಜಿಲ್ಲೆಯಲ್ಲೂ ಸರ್ವೇ ನಡೆಸಲಾಗಿದೆ’ ಎಂದು ಹೇಳಿದರು. ‘ಹಳ್ಳಿಗಳ ಬಡ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ವಂಚಿತ…

ಕೇಂದ್ರದಿಂದ ಹಣ ಬಿಡುಗಡೆಯಲ್ಲಿ ತಾರತಮ್ಯ-ದೇವೇಗೌಡ

ಬೆಂಗಳೂರು,ಮೇ,೨೪: ದೇಶದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳಕ್ಕೆ ಪಂಚರಾಜ್ಯಗಳ ಚುನಾವಣೆಗಳು ನಡೆಸಿದ ರ‍್ಯಾಲಿಗಳೂ ಕಾರಣ ಎಂದು ಮಾಜಿ ಪ್ರದಾನಿ ಎಚ್.ಡಿ.ದೇವೇಗೌ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಎರಡನೇ ಅಲೆ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಬದಲಾಗಿ ಪಂಚರಾಜ್ಯಗಳ ಚುನಾವಣೆಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟರು ಕೊರೊನಾ ಬಗ್ಗೆ ಪ್ರಾಮುಖ್ಯತೆ ನೀಡಿದ್ದರೆ ಇಂತ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ ಹಣ ಬಿಡುಗಡೆಯಲ್ಲೂ ಕೂಡ ತಾರತಮ್ಯ ಮಾಡುತ್ತಿದೆ ಎಂದು…

1 84 85 86 87 88 95
Girl in a jacket