Girl in a jacket

Author kendhooli_editor

ಹಿಂದಿ ಚಿತ್ರರಂಗ ದಿಲೀಪ್ ಕುಮಾರ್ ನಿಧನ

ನವದೆಹಲಿ, ಜು. ೦೭: ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಇಂದು ಬೆಳಗ್ಗೆ ೭:೩೦ಕ್ಕೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ೯೮ ವರ್ಷ ವಯಸ್ಸಿನ ಹಿರಿಯ ನಟ ದಿಲೀಪ್ ಕುಮಾರ್ ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದಿಲೀಪ್‌ರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ ೩೦ ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಇದಕ್ಕೂ ಮೊದಲು ದಿಲೀಪ್ ಕುಮಾರ್ ಅವರು ಜೂನ್ ೬ ರಂದು ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ…

ಸ್ವಾಮಿಗಳವರೇ! ಆಕಾಶವು ಹೇಗೆ ನಾಶವಾಗುವುದು?

ಸ್ವಾಮಿಗಳವರೇ! ಆಕಾಶವು ಹೇಗೆ ನಾಶವಾಗುವುದು? ಗುರುಗಳಾದ ಶ್ರೀ ವೀರಭದ್ರಸ್ವಾಮಿಯವರು ಸಿದ್ಧನ ಮನೆಯಲ್ಲಿ ವಾಸವಾಗಿದ್ದು ಪ್ರತಿ ದಿನ ವೇದಾಂತ ಪ್ರವಚನ ಮಾಡುತ್ತಿದ್ದರು. ಸಿದ್ಧನು, ತಾಯಿ ದೇವಮಲ್ಲಮ್ಮನ ತೊಡೆಯ ಮೇಲೆ ಕುಳಿತು ಪ್ರವಚನ ಕೇಳುತ್ತಿದ್ದನು. ಒಂದು ದಿನ ಗುರುಗಳು ಪ್ರವಚನ ಮಾಡುತ್ತಾ ಹೀಗೆ ಹೇಳಿದರು: ಒಂದು ಕಾಲದಲ್ಲಿ ಪೃಥ್ವಿಯು ಸಾಗರದಲ್ಲಿ ಕರಗಿ ಹೋಗುವುದು. ಮೇರು ಪರ್ವತವಾದರೂ ಬಿದ್ದು ಹೋಗುವುದು. ಪಂಚಭೂತಗಳು ನಾಶಹೊಂದುವವು. ಸ್ವರ್ಗಾದಿ ಸಮಸ್ತ ಲೋಕಗಳು ಸಹ ಪ್ರಳಯಾಗ್ನಿಯಲ್ಲಿ ಸುಟ್ಟು ಹೋಗುವವು. ಆ ಸಮಯದಲ್ಲಿ ದೇಹವೇ ತಾನೆಂದು, ಇಲ್ಲಿ ಸುಖವನ್ನು…

ಊಟಬಲ್ಲವನಿಗೆ ರೋಗವಿಲ್ಲ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಊಟಬಲ್ಲವನಿಗೆ ರೋಗವಿಲ್ಲ. ಊಟ ಆಹಾರ ಪಾನೀಯ ವ್ಯಸನ ವಿಚಾರ. ಆಹಾರ ಪರಿಣಾಮ ಅನ್ನಮಯ ಶರೀರ, ವ್ಯಸನ ವಿಚಾರ ಪರಿಣಾಮ ಮನೋಬುದ್ಧಿ. ಆಯುರ್ವೇದ ಸಾರುವುದು ಆಹಾರ ಗುಣಧರ್ಮ. ನೀತಿ ವೇದಾಂತ ಸಾರುವವು ವ್ಯಸನ ವಿಚಾರ ಮರ್ಮ! ಹಾಲು ಬದುಕಿಸುವುದು, ವಿಷ ಸಾಯಿಸುವುದು! ಹದವರಿತ ಊಟವಿರೆ ರೋಗವಿಲ್ಲ, ಬಂದರೆ ಆಹಾರ ಪಥ್ಯ!ಮಧುಮೇಹಕ್ಕೆ ಸಕ್ಕರೆ ವರ್ಜ್ಯ, ಹಾಗಲ ಗ್ರಾಹ್ಯ! ಲಂಘನಂ ಪರಮಮೌಷಧಂ=ಉಪವಾಸ ಶ್ರೇಷ್ಠ ಔಷಧ! ಚಿಂತಿ ವ್ಯಸನಕೆ ಮನ ದಿವಾಳಿ, ಸುಜ್ಞಾನ ಸುವಿಚಾರದಿ ಮನಬುದ್ಧಿ…

ರಾಜ್ಯದ ನೂತನ ರಾಜ್ಯಪಾಲರಾಗಿ ಥಾಮರ್ ಚಂದ್ ನೇಮಕ

ಬೆಂಗಳೂರು,ಜು,೦೬: ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ ಅವರ ಅವಧಿ ಮುಗಿದ ಕಾರಣ ನೂತನ ರಾಜ್ಯಪಾಲರನ್ನಾಗಿ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ. ಕರ್ನಾಟಕ ಸೇರಿದಂತೆ ೮ ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟ ಪುನಾರಚರನೆ ಬೆನ್ನಲ್ಲೇ ನೇಮಕಾತಿಯಾಗಿದೆ. ಈ ಮೂಲಕ ಕರ್ನಾಟಕದ ೧೯ನೇ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ಅಧಿಕಾರ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ ನೇಮಕವಾಗುವ ಜತೆಗೆ ಒಟ್ಟು ೮ ರಾಜ್ಯಗಳಿಗೆ…

ಲೂಸ್ ಮಾದನ ‘ಲಂಕೆ’ ಪ್ರವೇಶ

ಲೂಸ್ ಮಾದ ಎಂದೆ ಖ್ಯಾತಿಪಡೆದಿರುವ ನಟ ಯೋಗೇಶ್ ಅವರಿಗೆ ಕೆಲ ದಿನಗಳಿಂದ ಸಿನಿಮಾಗಳು ವಿರಳವಾಗಿದ್ದವು ಈಗ‘ ಲಂಕೆ ಚಿತ್ರದ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಜುಲೈ ೬ರಂದು ಯೋಗಿ ಅವರ ಜನ್ಮದಿನ. ಇದೇ ಸಂದರ್ಭದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಸಾಹಸ ಪ್ರಧಾನವಾದ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ದಿ ಗ್ರೇಟ್ ಎಂಟರ್‌ಟೈನರ್ ಲಾಂಛನದಲ್ಲಿ ಪಟೇಲ್…

ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ನಿರಾಣಿ ದೆಹಲಿ ಪ್ರಯಾಣ

ಬೆಂಗಳೂರು,ಜು,೦೬:ನಾಯಕತ್ವ ಬದಲಾವಣೆ ಕೂಗು ಹೆಚ್ಚಾದ ಬೆನ್ನಲ್ಲೆ ಹೈಕಮಾಂಡ್ ಗಣಿ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಕರೆಸಿಕೊಂಡಿರುವುದು ರಾಜಕೀಯ ವಲಯದಲ್ಲಿ ರೆಕ್ಕೆ ಪುಕ್ಕಗಳು ಹೆಚ್ಚಾಗಿವೆ. ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಭೇಟಿ ಹಲವು ವ್ಯಾಖ್ಯಾನಗಳಿಗೆ ದಾರಿ ನಿಡಿದಂತಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಲಾವ್ ಮೇರೆಗೆ ಇಂದು ಬೆಳಗಿನ ಜಾವ ಅವರು ದೆಹಲಿಗೆ ತೆರಳಿದ್ದಾರೆ. ಇದು ಈಗ ರಾಜಕೀಯ ನಾಯಕರಲ್ಲಿ ಒಂದು ರೀತಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದರೆ ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ…

ಕುತೂಹಲ ಕೆರಳಿಸಿದ ವಿಶ್ವನಾಥ್,ಯತ್ನಾಳ್ ಭೇಟಿ

ಬೆಂಗಳೂರು,ಜು,೦೫:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾಗಬೇಕು ಎಂದು ಒತ್ತಾಯಿಸುತ್ತಿರುವ ಇಬ್ಬರು ಬಿಜೆಪಿ ನಾಯಕರಾದ ಎಚ್.ವಿಶ್ವನಾಥ್ ಮತ್ತು ಬಸವರಾಜ್ ಪಾಟೀಲ್ ಯತ್ನಾಳ್ ಅವರು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸುಮಾರು ಹೊತ್ತು ಈ ಉಭಯನಾಯಕರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದ್ದು ಮುಂದಿನ ಬೆಳವಣಿಗೆಗಳಿಗೆ ಕಾರಣ ಮತ್ತು ತಂತ್ರಗಳ ಕುರಿತು ಚರ್ಚಿಸಿದರು ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ. ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸುತ್ತೂರು ಮಠಕ್ಕೆ ಹೋಗಿದ್ರಾ?…

ಕುತೂಹಲ ಮೂಡಿಸಿದ ಸಿಎಂ, ಎಚ್.ಡಿಕೆ ಭೇಟಿ

ಬೆಂಗಳೂರು,ಜು,05: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ನಾಯಕರಿಬ್ಬರ ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಶಾಸಕರಾದ ಸಿ ಎಸ್ ಪುಟ್ಟರಾಜು, ಶ್ರೀನಿವಾಸ್ ಹಾಗೂ ಮಳವಳ್ಳಿ ಶಾಸಕ ಅನ್ನದಾನಿ ಜೊತೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿಯ ಕೆಲವು ಪ್ರಮುಖ ವಿಚಾರಗಳ ಕುರಿತಾಗಿ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಮಂಡ್ಯ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸದೇ ಸರ್ಕಾರವೇ ಅದನ್ನು ಮುಂದುವರೆಸಬೇಕೆಂದು ಒತ್ತಾಯಿಸಿ ಮಾಜಿ…

ಇಂದಿನಿಂದ ರಾಜ್ಯಾದ್ಯಂತ ಅನ್ ಲಾಕ್

ಬೆಂಗಳೂರು,05: ರಾಜ್ಯದಲ್ಲಿ ಕೊರೊನಾ ಕೊಂಚ ರಿಲೀಫ್​ ನೀಡಿದ್ದ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್​ಲಾಕ್​ ನಿಯಮಗಳನ್ನು ಜಾರಿಗೆ ತಂದಿತ್ತು. ಇದೀಗ ಜುಲೈ 5 ರಿಂದ ಅನ್​ಲಾಕ್​ 3.0 ಮಾಡಲು ಹೊರಟಿರುವ ಸರ್ಕಾರ ಕೆಲವು ನಿರ್ಭಂದಗಳೊಂದಿಗೆ ಅನ್​ಲಾಕ್​ ಘೋಷಣೆ ಮಾಡಿದೆ. ಅದರಂತೆ ಇಂದಿನಿಂದ ಇಡೀ ರಾಜ್ಯ ಎಂದಿನಂತೆ ಸಹಜವಾಗಿ ಇರಲಿದ್ದು, ಎಲ್ಲಾ ಚಟುವಟಿಕೆಗಳು ಕಾರ್ಯನಿರ್ವಹಿಸಲಿವೆ. ಈ ಅವಕಾಶ ಅಥವಾ ಅನುಮತಿ ಕೇವಲ 14 ದಿನಗಳ ಕಾಲ ಮಾತ್ರ ಇರಲಿದೆ. ಒಂದು ವೇಳೆ ಕೋವಿಡ್ ಪ್ರಕರಣಗಳ ಸಂಖ್ಯೆ ಈ ಸಮಯದಲ್ಲಿ…

ಎಲ್ಲರೊಳಗೊಂದಾಗು ಮಂಕುತಿಮ್ಮ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌        ಸಿದ್ಧಸೂಕ್ತಿ : ಎಲ್ಲರೊಳಗೊಂದಾಗು ಮಂಕುತಿಮ್ಮ. ಡಿವಿಜಿ ಎಂದೇ ಖ್ಯಾತರಾದವರು ಡಿ. ವಿ. ಗುಂಡಪ್ಪ. ಇವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ! ಬಾಲ್ಯ ಯೌವನ, ರೋಗಿ ನಿರೋಗಿ, ಶಿಕ್ಷಿತ ಅಶಿಕ್ಷಿತ, ಬಡವ ಶ್ರೀಮಂತ, ಸ್ತ್ರೀ ಪುರುಷ, ಆ ಧರ್ಮ ಈ ಧರ್ಮ, ವೈವಿಧ್ಯದ ಪ್ರತಿ ವ್ಯಕ್ತಿಯ ಬದುಕು ತರ ತರ! ಸುಖಕ್ಕಿಂತ ದುಃಖ ಹೆಚ್ಚು! ಯಾವುದು ಸರಿ? ಯಾವುದು ತಪ್ಪು? ಎಂದು ನಿರ್ಧರಿಸಲಾಗದ ಗೊಂದಲದ ಗೂಡು! ಅದಕ್ಕಿಲ್ಲಿದೆ…

ಮೇಕೆದಾಟು ಯೋಜನೆ ಮಾಡಬೇಡಿ ತಮಿಳುನಾಡು ಸಿಎಂ ಪತ್ರ

ಚೆನ್ನೈ,ಜು,04: ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಬೇಡಿ ಎಂದು ತಮಿಳುನಾಡು ಸಿ.ಎಂ.ಸ್ಟಾಲಿನ್ ಕರ್ನಾಟಕ ಸಿಎಂಗೆ ಪತ್ರ ಬರೆದಿದ್ದಾರೆ. ಮೇಕೆ ದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗಲಿದೆ ನಮ್ಮ ಲ್ಲೂ ನೀರಿಗೆ ಅಭಾವವಿದೆ. ನಾವು ಪ್ರತಿನಿತ್ಯ ಪರದಾಡುತ್ತಿದ್ದೇವೆ. ನಿಮ್ಮ ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗುವುದಿಲ್ಲ ಎಂಬುದು ಸಮಂಜಸವಲ್ಲ ಎಂದಿದ್ದಾರೆ. ಆ ಪತ್ರದಲ್ಲಿ ಎರಡೂ ರಾಜ್ಯಗಳ ಮಧ್ಯೆ ಸೌಹಾರ್ದ ಸಂಬಂಧ ಬೆಳೆಯಬೇಕು. ಹೀಗಾಗಿ, ಮೇಕೆದಾಟು ಯೋಜನೆಗೆ ಯಾವುದೇ ವಿರೋಧ ವ್ಯಕ್ತಪಡಿಸಬಾರದು. ಎರಡು ರಾಜ್ಯಗಳ ಅಧಿಕಾರಿಗಳು ಜತೆಗೂಡಿ ದ್ವಿಪಕ್ಷೀಯ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು.…

ಎಸ್.ಎಸ್.ಎಲ್.ಸಿ.ಪರೀಕ್ಷೆ ನಡೆಯಬಾರದು; ವಿಶ್ವನಾಥ್

ಮೈಸೂರು, ಜು,೦4: ಎಸ್ ಎಸ್ ಎಲ್ ಸಿ‌ ಪರೀಕ್ಷೆ ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಅಕ್ಷರ ,ಆರೋಗ್ಯ ಚೆನ್ನಾಗಿದ್ದರೆ ಆಡಳಿತ ಚೆನ್ನಾಗಿರುತ್ತದೆ. ಮಗುವಿನ ಆರೋಗ್ಯ ಸುರಕ್ಷತೆ ಈಗ ಮುಖ್ಯ ನಂತರ ಶಿಕ್ಷಣ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು, ಎಚ್ಚರಿಸಿದರು. ಪಿಯುಸಿ ಪರಿಕ್ಷೆ ಬೇಡ ಅಂತಾ ಹೇಳಲಾಗಿದೆ. ಶಿಕ್ಷಣ ಸಮಿತಿಯ ವರದಿ ಏನು‌ ಹೇಳಿದೆ ? ನೀವು ಆರೋಗ್ಯ ಇಲಾಖೆಯ ಸಲಹೆ ತೆಗೆದುಕೊಂಡಿದ್ದೀರಾ ?…

ಹಲ್ಲೆ ಪ್ರಕರಣ; ಮಾಜಿ ಸಚಿವ ಪರಮೇಶ್ವರ್ ನಾಯಕ್ ಸಹೋದರ ಬಂಧನ

ವಿಜಯನಗರ, ಜು,04;ವೃದ್ದನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಾಜಿ ಸಚಿವ ಪರಮೇಶ್ವರ್ ನಸಯಕ್ ಸಹೋದರನನ್ನು ಬಂಧಿಸಲಾಗಿದೆ. ಜೂನ್ 29ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಕ್ಷ್ಮೀಪುರ ತಾಂಡದಲ್ಲಿ ಮನೆಯ ಜಾಗದ ಕ್ಷುಲ್ಲಕ ವಿಚಾರವಾಗಿ ಶರಣ ನಾಯ್ಕ ಮೇಲೆ ಪಿ. ಟಿ. ಶಿವಾಜಿ ನಾಯ್ಕ ಹಲ್ಲೆ ಮಾಡಿದ್ದರು. ಹಲ್ಲೆಯಿಂದಾಗಿ ಗಾಯಗೊಂಡಿದ್ದ ಶರಣ ನಾಯ್ಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಾಣಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ…

ಕನ್ನಡ ಪಂಡಿತರ ಕನ್ನಡ ಸೇವೆ

ಕನ್ನಡ ಪಂಡಿತರ ಕನ್ನಡ ಸೇವೆ ಅಂದು ಜುಲೈನ ಒಂದು ಗುರುವಾರದ ಮಧ್ಯಾಹ್ನ. ಹೊರಗೆ ಜಿಟಿಪಿಟಿ ಸುರಿಯುತ್ತಿದ್ದ ಮುಂಗಾರಿನ ಮಳೆ ಊಟಕ್ಕಾಗಿ ಮನೆಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳ ಆತಂಕವನ್ನು ಸಹಜವಾಗಿಯೇ ಹೆಚ್ಚು ಮಾಡಿತ್ತು. ಊಟದ ಅವಧಿಗಿಂತ ಮೊದಲಿನ ಅಂದರೆ ಬೆಳಗಿನ ಶಾಲಾ ಅವಧಿಯ ಕೊನೆಯ ಪೀರಿಯಡ್ ಪ್ರಾರಂಭವಾಗಿತ್ತು. ನಾವು ಒಂಬತ್ತನೇ ತರಗತಿಯ “ಎ” ವಿಭಾಗದ ವಿದ್ಯಾರ್ಥಿಗಳಿಗೆ ಅಂದು ವೇಳಾಪಟ್ಟಿಯ ಪ್ರಕಾರ ಕನ್ನಡ ತರಗತಿ ಇತ್ತು. ನಮಗೆ ಆ ವರ್ಷ ಶಾಲೆ ಆರಂಭವಾಗಿ ಸುಮಾರು ಒಂದೂವರೆ ತಿಂಗಳುಗಳು ಕಳೆದಿದ್ದರೂ ಕನ್ನಡ ತರಗತಿಗಳು…

ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ

– ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                        ‌‌‌‌‌             ಸಿದ್ಧಸೂಕ್ತಿ : ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ. ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ,…

ಹುಟ್ಟು ಗುಣ ಸುಟ್ಟರೂ ಹೋಗದು

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹುಟ್ಟು ಗುಣ ಸುಟ್ಟರೂ ಹೋಗದು. ವ್ಯಕ್ತಿ ವಸ್ತು ಜೀವಿಯ ಬಾಲ್ಯ ಆರಂಭದ ಗುಣ ಸ್ವಭಾವ ಸುಟ್ಟರೂ ಏನೇ ಮಾಡಿದರೂ ಬದಲಾಗದು. ಮಾಂಸ ಮುಟ್ಟುವುದಿಲ್ಲ ಎಂಬ ಷರತ್ತು ಒಪ್ಪಿ ದೇವರ ಅನುಗ್ರಹದಿಂದ ನಾಯಿ ರಾಜನಾಗಿ ಸಿಂಹಾಸನ ಏರಿತಂತೆ! ಸಭೆ ನಡೆಯುತ್ತಿರಲು ಮೂಳೆ ಕಂಡೊಡನೆ ಮಾತು ಮರೆತ ನಾಯಿ ಸಿಂಹಾಸನದಿಂದ ಜಿಗಿದು ಮೂಳೆ ಕಚ್ಚಿತಂತೆ! ಹಾಗೆಂದು ಆರಂಭಿಕ ಗುಣ ಸ್ವಭಾವ ಪರಿವರ್ತನೆ ಅಸಾಧ್ಯವೆಂದಲ್ಲ.ಹಾಗಿದ್ದಲ್ಲಿ ಶಿಕ್ಷಣ ತರಬೇತಿಯ ಅಗತ್ಯ ಏನು? ಸುಲಿಗೆ ದರೋಡೆ ಮಾಡುತ್ತಿದ್ದ…

ಸುಧೀಂದ್ರಹಾಲ್ದೊಡ್ಡೇರಿ ಇನ್ನೂ ನೆನಪು

ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ ಹಾಲದೊಡ್ಡೇರಿ ಸುಧೀಂದ್ರ ಇಂದು ನಮ್ಮನ್ನು ಅಗಲಿದ್ದಾರೆ. ಇಂದಿನ ಮಾಧ್ಯಮದ ಓದುಗರಿಗೆ ಮತ್ತು ವೀಕ್ಷಕರಿಗೆ ಭಾರತೀಯ ವಿಜ್ಞಾನದ ಸಾಧನೆ ಮತ್ತು ಪ್ರಯೋಗಗಳನ್ನು ಪರಿಚಯಿಸಲು ಸುಧೀಂದ್ರ ವಹಿಸುತ್ತಿದ್ದ ಆಸಕ್ತಿ, ಶ್ರದ್ಧೆ ಮತ್ತು ಅಧ್ಯಯನ ಅಸಾಧಾರಣವಾಗಿತ್ತು. ಸುಧೀಂದ್ರ ಹಾಲ್ದೊಡ್ಡೇರಿ 1961ರ ಡಿಸೆಂಬರ್ 3ರಂದು ಜನಿಸಿದರು. ಕನ್ನಡ ಪತ್ರಕರ್ತ ದಿವಂಗತ ನಾಗೇಶರಾಯರು ಇವರ ತಂದೆ. ಸುಧೀಂದ್ರ ಹಾಲ್ದೊಡ್ಡೇರಿ ತಂದೆಯವರು ಮನೆಗೆ ತರಿಸುತ್ತಿದ್ದ ದೇಶ-ವಿದೇಶಗಳ ಪತ್ರಿಕೆಗಳನ್ನು ಓದುತ್ತಾ ಬೆಳೆದರು. ಅವುಗಳಲ್ಲಿರುವ ವಿಜ್ಞಾನ…

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು ನೀರನ್ನ ಮುಗಿಲಿಗೇರಿಸಿ ದೈವೀಕರಿಸಿ ಪ್ರಾರ್ಥಿಸುವ,ನೀರನ್ನ ನೆಲದಲ್ಲೇ ಕಂಡು ಸಂಭ್ರಮದಿಂದ ಹಾಡುವ ಇಬ್ಬಗೆಯ ಸಂಸ್ಕೃತಿಗಳು ನಮ್ಮೊಳಗಿವೆ.ನೀರನ್ನ ಪಂಚಭೂತಗಳಲ್ಲಿ ಒಂದೆಂದು ಅದು ಪಶು,ಪಕ್ಷಿ,ಮೊದಲಾದ ಕೋಟ್ಯಾಂತರ ಜೀವರಾಶಿಗೂ ಸಸ್ಯ ಸಂಕುಲಕ್ಕೂ ಅಗತ್ಯವೆಂಬಂತೆಯೇ ನೀರಿನಿಂದಲೇ ಇವುಗಳೆಲ್ಲದವರ ನಾಶ ಎಂಬ ಇಬ್ಬಗೆಯ ಸತ್ಯಗಳೂ ಇವೆ. ಒಂದಕ್ಕೆ ಮನೋಹರ ರೂಪ ಅಂಟಿಕೊಂಡರೆ ಮತ್ತೊಂದಕ್ಕೆ ಭೀಕರ ಸ್ವರೂಪವಿದೆ. ” ಮಳೆಯಿಂದ ಅನ್ನ,ಯಜ್ಞದಿಂದ ಮಳೆ “ಎಂದು ಭಗದ್ಗೀತೆ ಹೇಳಿದರೆ,”ಬಿಸಿಲು ಕುಣಿದು ಬೆವತಾದ ಈಗ ಬಂದಾದ ಮಳಿಯ ಹದಕ” ಎಂದು ಬೇಂದ್ರೆಯವರ ಕವಿತೆ…

ತೈಲಬೆಲೆ ಏರಿಕೆ ರಾಜ್ಯಸರ್ಕಾರಗಳ ಕೈಯಲ್ಲಿದೆ ; ನಿರ್ಮಲ ಸೀತಾರಾಮನ್

ಬೆಂಗಳೂರು,ಜು,02: ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳು ಸೆಸ್,ತೆರಿಗೆ ದರಗಳನ್ನು ಕಡಿಮೆ ಮಾಡಿದರೆ ದರ ಕಡಿಮೆಯಸಗುತ್ತದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು,ತೈಲ ಬೆಲೆ ಏರಿಕೆ ಸಂಬಂಧ,ರಾಜ್ಯ ಸರ್ಕಾರಗಳನ್ನ ಹೊಣೆ ಮಾಡಿದ್ದಾರೆ. ರಾಜ್ಯ ಸರ್ಕಾರಗಳ ಸೆಸ್ ಹೆಚ್ಚಳವಾಗಿದೆ. ರಾಜ್ಯಗಳು ತಮ್ಮ ತೆರಿಗೆ ಪಾಲು ಕಡಿಮೆ ಮಾಡಬಹುದು. ದರ ನಿಯಂತ್ರಣ ರಾಜ್ಯ ಸರ್ಕಾರಗಳ ಕೈಯಲ್ಲಿ ಇದೆ ಎಂದು ತಿಳಿಸಿದರು. ಕಚ್ಚಾ ತೈಲದ ಬೆಲೆ ತೀವ್ರ ಗತಿಯಲ್ಲಿ ಏರುತ್ತಿದೆ.…

ವಚನ ಸಾಹಿತ್ಯ ಬೆಳಕಿಗೆ ತಂದವರು ಹಳಕಟ್ಟಿ;ಎಂ.ಬಿ.ಪಾಟೀಲ್

ವಿಜಯಪುರ ,ಜು,02: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು ಡಾ.ಫ.ಗು.ಹಳಕಟ್ಟಿವರು ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು. ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ನಿಮಿತ್ತ ಬಿ.ಎಲ್.ಡಿ.ಇ ಸಂಸ್ಥೆ ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು, ಬಸವಣ್ಣ ಹಾಗೂ ಬಸವಾದಿ ಶರಣರು ಬರೆದಂತದಹ ವಚನ ಕಟ್ಟುಗಳು ಕಲ್ಯಾಣ ಕ್ರಾಂತಿಯ ನಂತರ ಮಠ-ಮಂದಿರಗಳಲ್ಲಿ, ಗುಡಿ-ಗುಂಡಾರಗಳಲ್ಲಿ, ಅಂಗಡಿ-ಮನೆಗಳಲ್ಲಿ, ಅಲ್ಲಲ್ಲಿ ಜಗುಲಿಗಳಲ್ಲಿ ಇದ್ದವು. ವಕೀಲಿ ವೃತ್ತಿಯ ನಿಮಿತ್ತ…

1 82 83 84 85 86 112
Girl in a jacket