ಆಮೇಲೆ ಕಚ್ಚಾಟ ಮೇಲು ಕೀಳೆಂದು
ಸಿದ್ಧಸೂಕ್ತಿ : ಆಮೇಲೆ ಕಚ್ಚಾಟ ಮೇಲು ಕೀಳೆಂದು. ಕುವೆಂಪುರವರ ಈ ಮಾತು ಮಾರ್ಮಿಕ! ನಾನು ಈ ಜಾತಿಯವ. ನೀನು ಆ ಜಾತಿಯವ. ನನ್ನ ಜಾತಿ ಶ್ರೇಷ್ಠ. ನಿನ್ನ ಜಾತಿ ಕನಿಷ್ಠ. ನನ್ನ ಧರ್ಮ ಸರಿ. ನಿನ್ನದು ಧರ್ಮವೇ ಅಲ್ಲ. ನನ್ನ ದೇವರೇ ದೊಡ್ಡವ! ಹೀಗೆ ನಡೆದಿದೆ ವಾದ ದ್ವೇಷ ರಕ್ತಪಾತ! ಬ್ರಾಹ್ಮಣನು ಹುಟ್ಟುವಾಗ ಜನಿವಾರವಿಲ್ಲ. ಲಿಂಗಾಯತ ಹುಟ್ಟುವಾಗ ಲಿಂಗ ಶಿವದಾರವಿಲ್ಲ. ಕ್ರೈಸ್ತ ಮುಸ್ಲಿಂ ಯಾರೇ ಆಗಲಿ ಹುಟ್ಟುವಾಗ ಎಲ್ಲ ಬೆತ್ತಲೆ! ದೇಹ ಅಂಗಾಂಗ…