Girl in a jacket

Author kendhooli_editor

೩ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವ: ಸಿಎಂ

ದಾವಣಗೆರೆ,ಸೆ,೧೯:ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಮೂರು ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು ಇಲ್ಲಿನ ಪಿ.ಜಿ.ಬಡಾವಣೆಯ ಡಾ.ಎಂ.ಸಿ. ಮೋದಿ ರಸ್ತೆಯಲ್ಲಿ ೧೨೫ ಕೋಟಿ ವೆಚ್ಚದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ (ಎಂಜಿಎನ್‌ವಿವೈ) ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಟೊಮೊಬೈಲ್ ಕ್ಷೇತ್ರಗಳಲ್ಲಿ ಕ್ಲಸ್ಟರ್‌ಗಳನ್ನು ಹೆಚ್ಚು ಮಾಡುವ ಉದ್ದೇಶವಿದ್ದು, ನಾನೇ ಈ ಬಗ್ಗೆ…

ಮುಂಬರುವ ಚುನಾವಣೆ ಬೊಮ್ಮಾಯಿ ಅಥವಾ ಕಟೀಲ್‌ ನಾಯಕತ್ವದಲ್ಲಿ ಎದುರಿಸುತ್ತೇವೆ-ಈಶ್ವರಪ್ಪ

ದಾವಣಗೆರೆ,ಸೆ,೧೯:ಪಕ್ಷವನ್ನು ಮತ್ತಷ್ಟು ಶಕ್ತಿಗೊಳಿಸುವುದಲ್ಲದೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಯಾವ ರೀತಿ ಎದುರಿಸಬೇಕು ಮತ್ತು ರೂಪರೇಷಗಳನ್ನು ಕುರಿತು ಕಾರ್ಯಕಾರಣಿಯಲ್ಲಿ ಚರ್ಚಿಸಲಾಗುತ್ತಿದೆ ಎಂದು ಹೇಳಿರುವ ಸಚಿವ ಕೆ.ಎಸ್‌.ಈಶ್ವರಪ್ಪ ಮುಂಬರುವ ಚುನಾವಣೆಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಅಥವಾ ಪಕ್ಷದ ಅಧ್ಯಕ್ಷ ಕಟೀಲ್‌ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,೨೦೨೩ನೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಘಟನೆ ಶಕ್ತಿಯಿಂದ ಪೂರ್ಣ ಬಹುಮತ ಪಡೆಯುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆ ಮಾಡುವುದು ಪಕ್ಷದ ಗುರಿಯಾಗಿದೆ ಎಂದು ಅವವರು  ಹೇಳಿದ್ದಾರೆ. ಕಾರ್ಯಕಾರಿಣಿ ಸಭೆ ಇಡೀ…

ಸೈಮಾ ೨೦೧೯ ಪ್ರಶಸ್ತಿ ಪ್ರಕಟ; ಪ್ರಶಸ್ತಿಗಳನ್ನು ಬಾಚಿಕೊಂಡ ʻಯಜಮಾನʼ

ಸೈಮಾ ೨೦೧೯ ಪ್ರಶಸ್ತಿಗಳ ವಿತರಣೆ ಸಮಾರಂಭ ಶನಿವಾರ ಹೈದರಾಬಾದ್‌ನಲ್ಲಿ ನಡೆದಿದ್ದು, ದರ್ಶನ್ ನಟನೆಯ ’ಯಜಮಾನ’ ಸಿನಿಮಾಕ್ಕೆ ಕನ್ನಡ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿಗಳು ಲಭ್ಯವಾಗಿವೆ ’ಯಜಮಾನ’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್‌ಗೆ ನೀಡಲಾಗಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ’ಆಯುಶ್‌ಮಾನ್ ಭವ’ ಸಿನಿಮಾದ ನಟನೆಗೆ ರಚಿತಾ ರಾಮ್ ಪಡೆದುಕೊಂಡಿದ್ದಾರೆ. ’ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ದರ್ಶನ್ ಕಾರ್ಯಕ್ರಮಕ್ಕೆ ಗೈರಾಗಿದ್ದ ಕಾರಣ ನಿರ್ಮಾಪಕಿ ಶೈಲನಾ ನಾಗ್ ಪ್ರಶಸ್ತಿಯನ್ನು…

ಗಣೇಶ ಮೂರ್ತಿ ತಯಾರಿಕೆ ಮತ್ತು ಆರ್ಥಿಕ ಸಬಲತೆ

ಗಣೇಶ ಮೂರ್ತಿ ತಯಾರಿಕೆ ಮತ್ತು ಆರ್ಥಿಕ ಸಬಲತೆ ಗಣೇಶನ ಉತ್ಸವಕ್ಕೆ ಒಂದು ತಿಂಗಳ ಮುಂಚೆಯೇ ಗುರುತ್ರ್ಯಯರ ಸಾರ್ವಜನಿಕ ಗಣೇಶೋತ್ಸವದ ತಯಾರಿಗಳು ಮೊದಲುಗೊಂಡವು. ಊರಿನ ರೈತರ ಕೈತುಂಬಾ ಕಾಸು ಓಡಿಯಾಡುತ್ತಿದ್ದ ಕಾರಣವರ್ಷದಿಂದ ಹಬ್ಬದ ಹಣಸಂಗ್ರಹಣೆಯ ಗುರಿ ಅಂದುಕೊಂಡಿದ್ದಕ್ಕಿಂತಲೂ ಸುಲಭವಾಗಿ ಕೈಗೆಟುಕಿತ್ತು. ಊರಮಟ್ಟದಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆದಾಗ ಎಲ್ಲೆಡೆಯಿಂದ ಉತ್ತೇಜನಕಾರಿ ಮತ್ತು ಪ್ರೋತ್ಸಾಹದಾಯಕ ಸಂಗತಿಗಳು ಬಹಿರಂಗಗೊಂಡವು. ಇದು ಅಳುಕುತ್ತಲೆ ಸಾರ್ವಜನಿಕ ಗಣೇಶೋತ್ಸವದ ಕಲ್ಪನೆ ಮಾಡಿದ ತ್ರಿಮೂರ್ತಿಗಳ ಮುಖಗಳಲ್ಲಿನ ಮಾಸದ ಮಂದಹಾಸಕ್ಕೆ ಕಾರಣವಾಗಿತ್ತು. ಗಣೇಶನ ಮೂರ್ತಿಯನ್ನು ಎಲ್ಲಿಂದ ತರುವುದು?…

ಬಡವನ ಸಿಟ್ಟು ದವಡೆಗೆ ಮೂಲ

ಸಿದ್ಧಸೂಕ್ತಿ :             ಬಡವನ ಸಿಟ್ಟು ದವಡೆಗೆ ಮೂಲ. ಬಡವ= ಹಣ ಅಧಿಕಾರ ಶಕ್ತಿ ಬೆಂಬಲ ಇಲ್ಲದವ, ದುಡಿಯುವವ. ಸಿರಿವಂತ ತದ್ವಿರುದ್ಧ. ಬಡವ ಸಿರಿವಂತ ಪ್ರವಾಹದ ವಿರುದ್ಧ ಸಿಟ್ಟಾಗಿ ತಿರುಗಿಬಿದ್ದರೆ, ಸಿರಿವಂತನು ಬಡವನ ವಿರುದ್ಧ ಕೋಪದಿ ದವಡೆಹಲ್ಲ ಕಡಿಯುವನು. ಬಡವನ ಸೋಲು ಖಚಿತ. ಬಡವ ಸಿಟ್ಟಾಗದೇ ದೌರ್ಜನ್ಯ ಸಹಿಸಬೇಕೆಂದಿಲ್ಲ. ದೌರ್ಬಲ್ಯವನ್ನು ಕಿತ್ತೆಸೆಯಬೇಕು. ಬಲಿಷ್ಠರಾಗಬೇಕು, ಅಲ್ಲಿಯವರೆಗೆ ತಾಳಬೇಕು. ಸಿಟ್ಟು ಉತ್ತಮ ಫಲ ನೀಡುವಂತೆ ಸಜ್ಜಾಗಬೇಕು. ಬುದ್ಧಿಶಕ್ತಿ ಹಣ ಅಧಿಕಾರ ಜನಬಲ…

ಅನೇಕಲ್ ಬಳಿ ರೇವೂಪಾರ್ಟಿ ಮೇಲೆ ಪೊಲೀಸರ ದಾಳಿ

ಬೆಂಗಳೂರು, ಸೆ,19:ಆನೇಕಲ್ ಸಮೀಪ ರೇವು ಪಾರ್ಟಿ ನಡೆಸುತ್ತಿದ್ದ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಡ್ರಗ್ಸ್ ತಗೆದುಕೊಂಡವರು ನಶೆಯಲ್ಲಿ ಕುಣಿಯುತ್ತಿದ್ದವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ರೆಸಾರ್ಟ್ ಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ. ಉದ್ಯಮಿಗಳ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಡಿಜೆ. ಕಲರ್ ಫುಲ್ ಲೈಟಿಂಗ್, ಡ್ರಗ್ಸ್ ನೊಂದಿಗೆ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ದಾಳಿಯ ವೇಳೆ ಅಲ್ಲಿದ್ದವರು ಪರಾರಿಯಾಗಿದ್ದು, ಬೆನ್ನಟ್ಟಿದ…

ಟಾರ್ಗೆಟ್ ಇಂಡಿಯಾ!! ,ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!!

Writing; ಪರಶಿವ ಧನಗೂರು ಟಾರ್ಗೆಟ್ ಇಂಡಿಯಾ!! ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!! ಈ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿರುವ ಕೊಳಕು ಮನಸ್ಸಿನ ಭಯೋತ್ಪಾದಕರ ನೆಲೆಬೀಡಾದ ಈ ಪಾಕಿಸ್ತಾನ ಭಾರತದ ಮೇಲೆ ಹೆಚ್ಚಿನ ಹಿಂಸಾತ್ಮಕ-ವಿಧ್ವಂಸಕ ದಾಳಿಗೆ ಈಗ ಮತ್ತೊಂದು ಬ್ರಹತ್ ಸಂಚು ರೂಪಿಸಿ ಕುಳಿತಿರುವ ಸಾಧ್ಯತೆಯೇ ಗೋಚರಿಸುತ್ತಿದೆ! ಅತ್ತ ಆಫ್ಘಾನಿಸ್ತಾನದದಲ್ಲಿ ಕ್ರೂರ ಭಯೋತ್ಪಾದಕ ತಾಲಿಬಾನಿಗಳಿಗೆ ಅಧಿಕಾರ ಸಿಗುತ್ತಿದ್ದಂತೆ ಮತ್ತಷ್ಟು ರೆಕ್ಕೆ ಪುಕ್ಕ ಕಟ್ಟಿ…

ಆಮೇಲೆ ಕಚ್ಚಾಟ ಮೇಲು ಕೀಳೆಂದು

ಸಿದ್ಧಸೂಕ್ತಿ :      ಆಮೇಲೆ ಕಚ್ಚಾಟ ಮೇಲು ಕೀಳೆಂದು. ಕುವೆಂಪುರವರ ಈ ಮಾತು ಮಾರ್ಮಿಕ! ನಾನು ಈ ಜಾತಿಯವ. ನೀನು ಆ ಜಾತಿಯವ. ನನ್ನ ಜಾತಿ ಶ್ರೇಷ್ಠ. ನಿನ್ನ ಜಾತಿ ಕನಿಷ್ಠ. ನನ್ನ ಧರ್ಮ ಸರಿ. ನಿನ್ನದು ಧರ್ಮವೇ ಅಲ್ಲ. ನನ್ನ ದೇವರೇ ದೊಡ್ಡವ! ಹೀಗೆ ನಡೆದಿದೆ ವಾದ ದ್ವೇಷ ರಕ್ತಪಾತ! ಬ್ರಾಹ್ಮಣನು ಹುಟ್ಟುವಾಗ ಜನಿವಾರವಿಲ್ಲ. ಲಿಂಗಾಯತ ಹುಟ್ಟುವಾಗ ಲಿಂಗ ಶಿವದಾರವಿಲ್ಲ. ಕ್ರೈಸ್ತ ಮುಸ್ಲಿಂ ಯಾರೇ ಆಗಲಿ ಹುಟ್ಟುವಾಗ ಎಲ್ಲ ಬೆತ್ತಲೆ! ದೇಹ ಅಂಗಾಂಗ…

ಯಾರಿಗೆ ಯಾರುಂಟು ಯರವಿನ ಸಂಸಾರ

ಜಾತಿ ಮತ್ತು ಹಣ ಬಲದ ರಾಜಕಾರಣ ಇನ್ನೆಷ್ಟು ವರ್ಷ ಕಾಲ ಇರುತ್ತದೋ ಹೇಳಲಾಗದು. ಗುಜರಾತ್ ಸಿಎಂ ಆಗಿರುವ ಭೂಪೇಂದ್ರ ಪಟೇಲರಿಗೆ ಜಾತಿ ತೋರಿಸಿ ಚುನಾವಣೆ ಗೆಲ್ಲುವ ಅಧಿಕಾರವನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಕರ್ನಾಟಕದಲ್ಲೂ ಪ್ರಬಲ ಲಿಂಗಾಯತ-ವೀರಶೈವ ಸಮುದಾಯಕ್ಕೆ ಬೊಮ್ಮಾಯಿ ಮುಖ ತೋರಿಸುವ ಕೆಲಸ ಮಾಡಿದೆ. “ಮುದುಕರ ಕಾಲ ಮುಗಿಯಿತು” ಎಂಬ ಸಂದೇಶವನ್ನು ಯುವ ಮತದಾರರಿಗೆ ರವಾನಿಸುವ ಯತ್ನಕ್ಕೂ ಬಿಜೆಪಿ ಕೈ ಹಾಕಿರುವಂತಿದೆ. ಯಾರಿಗೆ ಯಾರುಂಟು ಯರವಿನ ಸಂಸಾರ ಮುದಿಗೂಬೆಗಳನ್ನು ನೋಡಿ ನೋಡಿ ಸಾಕಾಗಿದೆ ಎನ್ನುವುದು ಭಾರತದ ಪ್ರಚಲಿತ…

ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು…

ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು… ಕಾವ್ಯ ಜನಪ್ರಿಯ ಚರಿತ್ರೆಯಂತೆ ಸರಳ ರೇಖೆಯಲ್ಲಿ ಸಾಗುವುದಿಲ್ಲ.ಲೋಕಸಂವಾದಕ್ಕಿಂತಲೂ ಭಾವ ಸಂವಾದ ಬಯಸುವ ಕಾವ್ಯವು ಭಿನ್ನ ಆಯಾಮಗಳ ಸಂಕೀರ್ಣ ರೂಪ ಹೊತ್ತಿದೆ.ಕವಿ ದೃಷ್ಟಿಗೆ ವಿದ್ವತ್ತಿನ ಹಾಗೂ ಅನುಭವಗಳ ಹಿನ್ನೆಲೆ ಇದ್ದಷ್ಟೂ ಆತನ ಸೃಷ್ಟಿ ಶೀಲ ಜಗತ್ತು ಭಿನ್ನ ಭಿನ್ನವಾಗಿ ನಿರ್ಮಾಣವಾಗುತ್ತದೆ. ಕವಿ ತಾನು ಸೃಷ್ಟಿಸುವ ಕಾವ್ಯಗಳ ಮೂಲಕವೇ ತನ್ನ ಓದುಗರನ್ನೂ ಇತರರಿಗಿಂತ ಭಿನ್ನವಾಗಿಸಬಲ್ಲ. ಕವಿಯ ಕಾವ್ಯವನ್ನ ವಿಶಿಷ್ಟ ಪದರಚನೆ ಎಂದು ಕಾವ್ಯ ಮೀಮಾಂಸೆ ಗುರ್ತಿಸುತ್ತದೆ. ಅಲಂಕಾರ ಎನ್ನುವ ಪದವು ಸೌಂದರ್ಯವನ್ನ…

ನಾಣ್ಯವೆಂಬ ಹಣದ ಇತಿಹಾಸವೂ, ಅರ್ಥವ್ಯವಸ್ಥೆಯೂ

ನಾಣ್ಯವೆಂಬ ಹಣದ ಇತಿಹಾಸವೂ, ಅರ್ಥವ್ಯವಸ್ಥೆಯೂ ನಾಣ್ಯವೆಂಬುದು ಯಾವುದೇ ಪಡಿ, ಪದಾರ್ಥಗಳನ್ನು ಕೊಳ್ಳುವ ಮತ್ತು ಮಾರುವವರ ನಡುವಿನ ಕೊಂಡಿಯಾಗಿ ಬಳಕೆಗೊಳ್ಳುವ ಚಲಾವಣೆ ಸಾಧನ. ಅದು ನಿರ್ದಿಷ್ಟ ಅಳತೆ, ತೂಕ ಮತ್ತು ಆಕಾರದ ಮೂಲಕ ಮೌಲ್ಯವನ್ನು ಹೊಂದಿರುವ ಕ್ರಮಬದ್ಧವಾಗಿ ತಯಾರಾದ ಮಾಧ್ಯಮ. ಅದು ಲೋಹ ಅಥವಾ ಕಾಗದವಾಗಿರಬಹುದು. ಮಹಮದ್ ಬಿನ್ ತೊಗಲಕ್ ಕಾಲಕ್ಕೆ ಚರ್ಮವೇ ನಾಣ್ಯವಾಗಿ ಬಳಕೆಗೊಂಡದ್ದೂ ಇತಿಹಾಸವೇ. ನಾಣ್ಯ ಅಂದಂದಿನ ಅರ್ಥವ್ಯವಸ್ಥೆಯ ಪ್ರತೀಕವೇ ಆಗಿದೆ. ಜಗತ್ತಿನಲ್ಲಿ ಇಂದು ಕಾಗದವೇ ಮೌಲ್ಯದ ನಿರ್ಧಾರಕ ಸಾಧನವಾಗಿದೆ. ಇತ್ತೀಚೆಗೆ ಹಣವೆನ್ನುವುದು ಕೈಯಿಂದ ಕೈಗೆ…

ಕೌಟುಂಬಿಕ ಕಲಹ ಒಂದೇ ಕುಟುಂಬದ ಐವರು ಆತ್ಮಹತ್ಯೆ

ಬೆಂಗಳೂರು,ಸೆ,17:ಕಂದಮ್ಮನನ್ನು ಕೊಂದು ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ತಿಗಳರಪಸಳ್ಯದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಶಾಸಕರ  ಪತ್ರಿಕ ಸಂಪಾದಕ ಶಂಕರ್ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಶಂಕರ್ ಪತ್ನಿ ಭಾರತಿ(50), ಮಗಳು ಸಿಂಚನ(33), 2ನೇ ಮಗಳು ಸಿಂಧುರಾಣಿ (30), ಮಗ ಮಧುಸಾಗರ್(27), ಹಾಗೂ 9 ತಿಂಗಳ ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಿಂಚನ ಮಗಳು ಬದುಕುಳಿದಿದ್ದಾಳೆ. ನಾಲ್ಕು ದಿನಗಳ ಹಿಂದೆ ಬ್ಯಾಡರ್ ಹಳ್ಳಿಯ ಚೇತನ್ ಸರ್ಕಲ್ 4 ಕ್ರಾಸ್ ನಲ್ಲಿರೋ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋ…

ಹ್ಯಾಪಿನೆಸ್ ಇಂಡೆಕ್ಸ್ ಆಧಾರದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾರ್ಯಕ್ರಮ: ಸಿಎಂ

ಕಲಬುರಗಿ,ಸೆ,17-ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹ್ಯಾಪಿನೆಸ್ ಇಂಡೆಕ್ಸ್ ಆಧರಿಸಿ, ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಇಲ್ಲಿ ತಿಳಿಸಿದರು. ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಒಂದು ಕುಟುಂಬದ ಸಂತೃಪ್ತಿಯ ಮಾನದಂಡವನ್ನು ಆಧರಿಸಿ ಹ್ಯಾಪಿನೆಸ್ ಇಂಡೆಕ್ಸ್ ಅನ್ನು ನಿಗದಿ ಪಡಿಸಲಾಗುತ್ತದೆ. ಈ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ಈ ಕುರಿತು ಯೋಜನಾ ಮಂಡಳಿಯ ಸದಸ್ಯರು ಹಾಗೂ ಇತರ…

ವೇತನ ನೀಡುವಂತೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ

ಆಲಮಟ್ಟಿ,ಸೆ,17: ವಿವಿಧ ಉದ್ಯಾನಗಳಲ್ಲಿ ದಿನಗೂಲಿಗಳಾಗಿ ಕರ್ತವ್ಯನಿರ್ವಹಿಸುತ್ತಿರುವವರಿಗೆ ಕಳೆದ ೫ತಿಂಗಳಿನಿಂದ ಸಂಬಳ ನೀಡದೇ ಇರುವದರಿಂದ ಕೂಡಲೇ ವೇತನ ನೀಡುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆನ್ನೆಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘದವತಿಯಿಂದ ಮುಖ್ಯ ಅಭಿಯಂತರರ ಕಚೇರಿಯ ಮುಂದೆ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ, ಮಾರುಕಟ್ಟೆಯಲ್ಲಿ ನಿತ್ಯ ಬಳಸುವ ಸಾಮಗ್ರಿಗಳ ದರ ಏರಿಕೆಯಾಗುತ್ತಿದೆ ಆದ್ದರಿಂದ ದಿನಗೂಲಿ ಕಾರ್ಮಿಕರಿಗೆ ಪ್ರತಿ ತಿಂಗಳೂ ವೇತನ ನೀಡಬೇಕು ಎಂದು ಆಗ್ರಹಿಸಿದರು. ಧರಣಿ ಸ್ಥಳಕ್ಕೆ ಆಗಮಿಸಿದ ಕೆಬಿಜೆನ್ನೆಲ್ ಅರಣ್ಯ…

ಪಾಲಿಗೆ ಬಂದದ್ದು ಪಂಚಾಮೃತ

ಸಿದ್ಧಸೂಕ್ತಿ :                  ಪಾಲಿಗೆ ಬಂದದ್ದು ಪಂಚಾಮೃತ. ನ್ಯಾಯ – ಪರಿಶ್ರಮದಿಂದ ದೊರೆತದ್ದು ಪಂಚಾಮೃತ.ಇಲ್ಲದ್ದರ ಕೊರಗಿಗಿಂತ ಇರುವುದರ ತೃಪ್ತಿ ಮೇಲು. ಅರಸನೊಬ್ಬ ಮಕ್ಕಳಿಲ್ಲವೆಂದು ಸೊರಗಿದ. ಅನಾಥ ಬಡ ಹುಡುಗನೊಬ್ಬ ಪ್ರಕೃತಿ ಸೊಬಗ ಸವಿದು ಮನದುಂಬಿ ಹಾಡಿದ! ತೃಪ್ತಿ ಮಾನಸಿಕ. ವಸ್ತು ಪ್ರೇರಕ. ವಸ್ತು ತೃಪ್ತಿಯಲ್ಲ. ಒಂದರಂತೆ ಒಂದು, ಒಬ್ಬರಂತೆ ಒಬ್ಬರು ಇಲ್ಲ ಜಗದಲಿ.ಚೆಲುವು, ವಿದ್ಯೆ, ಆಸ್ತಿಗಳಲಿ ಏರುಪೇರಿದ್ದರೂ ಹೊಂದಿಕೆಯ ಕುಟುಂಬದ ತೃಪ್ತಿ ಅಪಾರ! ಅಂಬಲಿ ಉಣ್ಣುವ…

ಟಿ-೨೦ ನಾಯಕತ್ವ ತ್ಯಜಿಸಿದ ವಿರಾಟ್, ರೋಹಿತ್ ಆಗ್ತಾರಾ ನೂತನ ಸಾರಥಿ..?

Reported By: H.D. Savita ಭಾರತೀಯ ಕ್ರಿಕೆಟ್​ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ , ಈಗ ಟಿ-20 ಮಾದರಿಯಲ್ಲಿ ತಂಡದ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ನಿರ್ಧರಿಸಿದ್ದಾರೆ. ಮುಂದಿನ ತಿಂಗಳಿನಿಂದ ಯುಎಇಯಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್ ನಂತರ ಕೊಹ್ಲಿ ಈ ರೂಪದಲ್ಲಿ ಈ ಜವಾಬ್ದಾರಿಯನ್ನು ತ್ಯಜಿಸಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಸಂಜೆ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ‘ನಾಯಕನಾಗಿ ಮತ್ತು ಆಟಗಾರನಾಗಿ ತಂಡಕ್ಕೆ ನನ್ನೆಲ್ಲ ಸಾಮರ್ಥ್ಯವನ್ನು ಧಾರೆಯೆರೆದಿದ್ದೇನೆ.…

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭತಿ೯ಗೆ ಕ್ರಮ: ಶಶಿಕಲಾ ಜೊಲ್ಲೆ

ಬೆಂಗಳೂರು,ಸೆ,16: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅಚ೯ಕ, ಸಹಾಯಕ ಅಚ೯ಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭತಿ೯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಪ್ ಮತ್ತು ಹಜ್‍ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕನಾ೯ಟಕ ಅಚ೯ಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವರಾದ ಡಾ. ಅಶ್ವತ್ಥ್ ನಾರಾಯಣ…

ತಾಲಿಬಾನ್ ನ ಉದಯದೊಂದಿಗೆ,ಆಫ್ಘಾನಿಸ್ತಾನದ ಪತನ

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ತಾಲಿಬಾನ್‌ ಆಳ್ವಿಕೆಯಲ್ಲಿಇದ್ದ ಪರಿಸ್ಥಿತಿಯ ಕುರಿತಂತೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಉದಯ ಮತ್ತು ಪತನ ಕುರಿತಂತೆ ಮಾನಸ ಅವರು ಇಲ್ಲಿ ಆಫ್ಘಾನಿಸ್ತಾನದ ಬೆಳವಣಿಗೆ ಕುರಿತಂತೆ ವಿಶ್ಲೇಷಿಸಿದ್ದಾರೆ. ಮಾನಸ,ಬೆಂಗಳೂರು ತಾಲಿಬಾನ್ ನ ಉದಯದೊಂದಿಗೆ,ಆಫ್ಘಾನಿಸ್ತಾನದ ಪತನ ಆಫ್ಘಾನಿಸ್ತಾನದ ಯುವತಿಯೊಬ್ಬಳು (ನಟಿ), ತನ್ನ ೨೦ ರ ಆಸುಪಾಸಿನಲ್ಲಿ ಆಫ್ಘಾನಿಸ್ತಾನದ ಮಹಿಳೆಯರು ಯಾವಾಗಲೂ ತಾಲಿಬಾನ್ ಆಳ್ವಿಕೆಯ ಭಾರವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಅವರು ಇಸ್ಲಾಮಿಕ್ ನಿಯಮಗಳ ತಾಲೀಬಾನೀಕೃತ ಆವೃತ್ತಿಗೆ ಒಳಪಟ್ಟರು( ಇಸ್ಲಾಮಿಕ್ ಭೋಧನೆಗಳಿಗೆ ವಿರುದ್ಧವಾದ),ಇದು ಅವರಿಗೆ ಮೂಲಭೂತ ಹಕ್ಕುಗಳಾದ,ಚಳವಳಿಯ ಸ್ವಾತಂತ್ರ್ಯ ಶಿಕ್ಷಣಕ್ಕೆ…

ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ವಿಮಾನನಿಲ್ದಾಣ ಹಾಗೂ ಹ್ಯಾಲಿಪ್ಯಾಡ್ ನಿರ್ಮಾಣ

ಬೆಂಗಳೂರು, ಸೆ, 15-:ಸುಲಲಿತ ವ್ಯಾಪಾರೋದ್ಯಮಕ್ಕೆ ನೆರವಾಗುವಂತೆ ರಾಜ್ಯದ ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮುರುಗೇಶ್ ನಿರಾಣಿ ತಿಳಿಸಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಆಯೋಜಿಸಿದ್ದ ಸಮಾರಂಭದಲ್ಲಿ ನಾನಾ ಪ್ರತಿಷ್ಠಿತ ಉದ್ಯಮದಾರರಿಗೆ `ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಿ ಮಂಗಳವಾರ ಅವರು ಮಾತನಾಡಿದರು. ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿ, ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲು…

ಆಲಮಟ್ಟಿ: ಎಲ್ಲಾ ೨೬ ಗೇಟ್ ಗಳ ಮೂಲಕ ನೀರು ಹೊರಕ್ಕೆ

ಆಲಮಟ್ಟಿ,ಸೆ,15:ಆಲಮಟ್ಟಿ ಜಲಾಶಯದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ಜಲಾಶಯದ ಎಲ್ಲಾ ೨೬ ಗೇಟ್ ಗಳ ಮೂಲಕ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ. ಗೇಟ್ ಗಳ ಮೂಲಕ ೮೦,೦೦೦ ಕ್ಯುಸೆಕ್ ಹಾಗೂ ಕೆಪಿಸಿಎಲ್ ಮೂಲಕ ೪೦,೦೦೦ ಕ್ಯುಸೆಕ್ ಸೇರಿ ಒಟ್ಟಾರೇ ೧,೨೦,೦೦೦ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಏಕಾಏಕಿ ಈ ಪ್ರವಾಹ ಉಂಟಾಗಿದ್ದು, ತಾತ್ಕಾಲಿಕವಾಗಿ ಒಂದೆರಡು ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿವೆ. ಸದ್ಯ ಜಲಾಶಯದ ಒಳಹರಿವು ೮೯,೦೦೦ ಕ್ಯುಸೆಕ್ ಇದ್ದು, ಜಲಾಶಯದ ಮಟ್ಟ…

1 62 63 64 65 66 113
Girl in a jacket