ಗುಂಡು ಹಾರಿಸಿ ಕುಂಟುಂಬದ ಮೂವರ ಕೊಲೆ-ತಾನೂ ಆತ್ಮಹತ್ಯೆ
ಗುಂಡು ಹಾರಿಸಿ ಕುಂಟುಂಬದ ಮೂವರ ಕೊಲೆ-ತಾನೂ ಆತ್ಮಹತ್ಯೆ by-ಕೆಂಧೂಳಿ ಬಾಳೆಹೊನ್ನೂರು,ಏ,೦೨- ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ನಡೆದಿದೆ. ಕಡಬಗೆರೆಯ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅತ್ತೆ ಜ್ಯೋತಿ(೫೦), ಮಗಳು ಮೌಲ್ಯ(೬) ಮತ್ತೆ ನಾದಿನಿ ಸಿಂಧು(೨೪) ಗುಂಡು ತಗುಲಿ ಮೃತಪಟ್ಟಿದ್ದಾರೆ. ನಾದಿನಿಯ ಗಂಡನ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…




















