ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲು ರಾಜ್ಯಪಾಲ ಥಾವರಚ ಚಂದ್ ಸಲಹೆ
ಬೆಂಗಳೂರು ,ಮೇ,24- “ವಿಪತ್ತು ನಿರ್ವಹಣೆಯ ಪ್ರಮುಖ ಆಧಾರಸ್ತಂಭವೆಂದರೆ ಸ್ಥಳೀಯ ಸಮುದಾಯ. ಸ್ಥಳೀಯ ಜನರಿಗೆ ಸಬಲೀಕರಣ, ಅರಿವು ಮತ್ತು ತರಬೇತಿ ನೀಡಿದರೆ, ವಿಪತ್ತಿನ ಪರಿಣಾಮವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ವಿಪತ್ತು ನಿರ್ವಹಣಾ ಸಮ್ಮೇಳನದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ” ಶಾಲಾ ಹಂತದಿಂದಲೇ ವಿಪತ್ತು ಜಾಗೃತಿ ತರಬೇತಿಯನ್ನು ಪ್ರಾರಂಭಿಸಬೇಕು. ಗ್ರಾಮ…