ಸಿಎಂ ಬದಲಾವಣೆ ಮಾಡುವಷ್ಟು ಶಕ್ತಿ ನನಗಿಲ್ಲ-ಯೋಗೇಶ್ವರ್
ಬೆಂಗಳೂರು, ಮೇ ೨೭; ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ ಇದಕ್ಕೆ ಪುಷ್ಟಿ ನೀಡುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದು ಚರ್ಚೆಗೆ ಮತ್ತಷ್ಟು ಗ್ರಾಸವಾಗಿತ್ತು ಆದರೆ ಯೋಗೇಶ್ವರ್ ಅವರು ಈಗ ದೆಹಲಿ ಭೇಟಿ ಕುರಿತು ವಿವರಣೆ ನೀಡಿದ್ದಾರೆ. ನಮ್ಮ ಉದ್ದೇಶ ಮುಖ್ಯಮಂತ್ರಿ ಬದಲಾವಣೆ ಯಲ್ಲ ಅವರನ್ನು ಬದಲಾಯಿಸುವಷ್ಟು ಶಕ್ತಿಯೂ ನನ್ನಲ್ಲಿಲ್ಲ ಆದರೆ ಅವರ ಪುತ್ರ ಅವತ ಹಸ್ತಕ್ಷೇಪ ಕುರಿತು ನಮ್ಮ ಅಸಮಾಧಾನ ಎಂದಿದ್ದಾರೆ. ದೆಹಲಿಗೆ ನನ್ನ ವೈಯಕ್ತಿಕ ವಿಚಾರಕ್ಕೆ ಆಗಾಗ ಹೋಗುತ್ತಿರುತ್ತೇನೆ.…