Girl in a jacket

Author kendhooli_editor

ಸಿಎಂ ಬದಲಾವಣೆ ಮಾಡುವಷ್ಟು ಶಕ್ತಿ ನನಗಿಲ್ಲ-ಯೋಗೇಶ್ವರ್

ಬೆಂಗಳೂರು, ಮೇ ೨೭; ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ ಇದಕ್ಕೆ ಪುಷ್ಟಿ ನೀಡುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದು ಚರ್ಚೆಗೆ ಮತ್ತಷ್ಟು ಗ್ರಾಸವಾಗಿತ್ತು ಆದರೆ ಯೋಗೇಶ್ವರ್ ಅವರು ಈಗ ದೆಹಲಿ ಭೇಟಿ ಕುರಿತು ವಿವರಣೆ ನೀಡಿದ್ದಾರೆ. ನಮ್ಮ ಉದ್ದೇಶ ಮುಖ್ಯಮಂತ್ರಿ ಬದಲಾವಣೆ ಯಲ್ಲ ಅವರನ್ನು ಬದಲಾಯಿಸುವಷ್ಟು ಶಕ್ತಿಯೂ ನನ್ನಲ್ಲಿಲ್ಲ ಆದರೆ ಅವರ ಪುತ್ರ ಅವತ ಹಸ್ತಕ್ಷೇಪ ಕುರಿತು ನಮ್ಮ ಅಸಮಾಧಾನ ಎಂದಿದ್ದಾರೆ. ದೆಹಲಿಗೆ ನನ್ನ ವೈಯಕ್ತಿಕ ವಿಚಾರಕ್ಕೆ ಆಗಾಗ ಹೋಗುತ್ತಿರುತ್ತೇನೆ.…

ಜಿಂದಾಲ್‌ಗೆ ನೀಡಿದ್ದ ಭೂಮಿ ವಾಪಾಸ್

ಬೆಂಗಳೂರು, ಮೇ ೨೭: ಜಿಂದಾಲ್ ಕಂಪನಿಗೆ ನೀಡಲಾಗಿದ್ದ ಭೂಮಿಯನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಲು ಇಂದು ನಡೆದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಬಳ್ಳಾರಿಯ ಜಿಂದಾಲ್ ಕಂಪನಿಗೆ ೩,೬೬೭ ಎಕರೆ ಭೂಮಿಯನ್ನು ಮಾರಾಟ ಮಾಡಿತ್ತು, ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭೂಮಿಯನ್ನು ಹಿಂಪಡೆಯುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಈ ಸಂಸ್ಥೆಯಿಂದ ರಾಜ್ಯ ಸರ್ಕಾರಕ್ಕೆ ೧೦೭೮ ಕೋಟಿ ರೂ.ಗಳ ರಾಜಧನ ಬರಬೇಕಾಗಿದೆ ಎಂದು ತಿಳಿದುಬಂದಿದೆ, ಈ ಕುರಿತು ಹೈಕೋರ್ಟ್ , ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ…

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ಚೆನ್ನೈ, ಮೇ ೨೭; ತಮಿಳುನಾಡಿನಲ್ಲಿ ಯಾವುದೇ ಸರ್ಕಾರಗಳು ಬಂದರು ಮೊದಲು ಕರ್ನಾಟಕದ ಆಣೆಕಟ್ಟುಗಳ ಮೇಲೆಯೇ ಕಣ್ಣು, ಕಾವೇರಿ,ಮೇಕೆದಾಟು ಹೀಗೆ ಕರ್ನಾಟಕದ ಯೋಜನೆಗಳನ್ನು ವಿರೋಧಿಸುತ್ತಲೇ ಅಲ್ಲಿನ ಜನರ ವಿಶ್ವಾಸ ಪಡೆಯುವ ತಂತ್ರಗಾರಿಕೆ ಮಾಡುತ್ತವೆ ಹೀಗೂ ಕೂಡ ಅದೇ ದಾರಿಯಲ್ಲಿ ಹೊಸ ಸರ್ಕಾರ ಸಾಗಿದೆ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿರುವ ಹೊಸ ಸರ್ಕಾರ ಯಾವುದೆ ಕಾರಣಕ್ಕೂ ಆಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಖ್ಯಾತೆ ತಗೆದಿದೆ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಈ ಕುರಿತು ಮಾತನಾಡಿದ್ದಾರೆ. ಮೇಕೆದಾಟು…

ನಾಯಕತ್ವ ಬದಲಾವಣೆ ಗೆ ಮುಂದಾದವರಿಗೆ ಬಿಎಸ್‌ವೈ ಕೊಟ್ಟ ಏಟು

ಬೆಂಗಳೂರು,ಮೇ,೨೭: ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಕುರಿತಂತೆ ಭಾರಿ ಸುದ್ದಿಯಲ್ಲಿದ್ದು ಇದಕ್ಕೆ ಸಂಬಧಿಸಿದಂತೆ ಪ್ರತಿಕ್ರಿಯಿಸಿರುವ ಬಿಎಸ್‌ವೈ ಯಾರೋ ಎಲ್ಲಿಗೋ ಹೋದವರಿಗೆ ಉತ್ತರ ಸಿಕ್ಕಿದೆ .ಅಲ್ಲಿಯೇ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ವಿರೋಧಿ ಗುಂಪಿಗೆ ಟಾಂಗ್ ನೀಡಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಯಡಿಯುರಪ್ಪ,, ದೆಹಲಿಗೆ ಹೋಗಿ ಬಂದರೆ ಅರ್ಥವಿಲ್ಲ. ದೆಹಲಿಗೆ ಹೋದವರಿಗೆ ಉತ್ತರ ಕೊಟ್ಟು ಕಳಿಸಿದ್ದಾರೆ. ಕೊರೋನಾ ನಿಯಂತ್ರಿಸುವುದಷ್ಟೇ ನನ್ನ ಗುರಿ. ಸದ್ಯ ನನ್ನ ಆದ್ಯತೆ ಕೋವಿಡ್ ನಿಯಂತ್ರಣಕ್ಕಷ್ಟೇ ಆಗಿದೆ. ಬೇರೆ ವಿಷಯ…

ಆಯಾ ಪ್ರದೇಶದ ಕಾನೂನು ಪಾಲನೆ-ಗೂಗಲ್

ನವದೆಹಲಿ,ಮೇ,೨೭:ಆಯಾ ಪ್ರದೇಶದ ಕಾನೂನುಗಳನ್ನು ಪಾಲಿಸಲು ನಾವು ಸಿದ್ದರಿದ್ದೇವೆ ಅಲ್ಲದೆ ಸರ್ಕಾರಗಳು ಜನತೆ ಉತ್ತಮ ಸಂಬಂಧದೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಂದರ್ ಪಿಚೈ ತಿಳಿಸಿದ್ದಾರೆ ಕಂಪನಿ ಯಾವಾಗಲೂ ಸರ್ಕಾರದ ಕೋರಿಕೆಗಳನ್ನು ಪರಿಗಣಿಸುತ್ತದೆ ಅಲ್ಲದೆ ಸ್ಪಷ್ಟವಾದ ಪಾರದರ್ಶಕ ವರದಿಗಳನ್ನು ಹೊಂದಿದೆ ಎಂದು ಏಷ್ಯಾ ಪೆಸಿಫಿಕ್‌ನ ಆಯ್ದ ವರದಿಗಾರರ ಜತೆ ನಡೆದ ವರ್ಚುವಲ್ ಕಾನ್ಫೆರೆನ್ಸ್‌ನಲ್ಲಿ ಅವರು ತಿಳಿಸಿದ್ದಾರೆ.ಉಚಿತ ಮತ್ತು ಮುಕ್ತ ಇಂಟರ್‌ನೆಟ್ ಮೌಲ್ಯವನ್ನು ನಾವು ಅರಿತಿದ್ದೇವೆ. ಜತೆಗೆ, ಇದರ ಪ್ರಯೋಜನಗಳ ಅರಿವು ಇದೆ. ಇದೇ ನೀತಿ ಅನುಸರಿಸಬೇಕು ಎಂದು…

ಬೆಂಗಳೂರಲ್ಲಿ ಇಂದು ೫,೯೭೭ ಸೋಂಕಿತರು ಪತ್ತೆ

ಬೆಂಗಳೂರು,ಮೇ,೨೭: ಕೊರೊನಾ ಸಂಕಷ್ಟ ಎದುರಿಸಲು ಸರ್ಕಾರ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ ಇದರ ಪರಿಣಾಮವಾಗಿ ಸೋಂಕಿತರ ಸಂಖ್ಯೆ ಇಳಿಕೆ ಕಾಣುತ್ತಿದೆ ಬಂಗಳೂರಿನಲ್ಲಿ ಇಂದು ೫೯೭೭ ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನ ವಿವಿಧ ವಾರ್ಡ್‌ಗಳಲ್ಲಿನ ಸೋಂಕಿತರ ಸಂಖ್ಯೆ ಈ ರೀತಿ ಇದೆ: ಬೊಮ್ಮನಹಳ್ಳಿಯಲ್ಲಿ-೫೪೭, ದಾಸರಹಳ್ಳಿ-೨೧೫, ಬೆಂಗಳೂರು ಪೂರ್ವ-೭೮೩, ಮಹಾದೇವಪುರ-೯೮೭, ಆರ್‌ಆರ್ ನಗರ-೪೪೨, ಬೆಂಗಳೂರು ದಕ್ಷಿಣ-೬೧೬, ಬೆಂಗಳೂರು ಪಶ್ಚಿಮ-೪೭೯, ಯಲಹಂಕ-೪೬೪, ಹೊರವಲಯದ ತಾಲೂಕುಗಳಲ್ಲಿ ೪೪೮ ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ೬೧೧ ಮಂದಿ ಕೋವಿಡ್ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ…

ಮತ್ತೇ ತೈಲೋತ್ಪನ್ನಗಳ ದರ ಏರಿಕೆ

ನವದೆಹಲಿ,ಮೇ,೨೭: ಕಳೆದ ಎರಡು ದಿನ ತೈಲೋತ್ಪನ್ನಗಳ ದರ ಏರಿಕೆಯಾಗಿರಲಿಲ್ಲ ಇಂದು ಮತ್ತೇ ದಿಡೀರ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ ೨೫ ಪೈಸೆ , ಡೀಸೆಲ್ ೩೦ ಪೈಸೆ ಎರಿಕೆ ಕಂಡಿದೆ ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ ೧೦೦ ರೂ ಗಡಿದಾಟಿದೆ. ಕಳೆದೊಂದು ವಾರದ ಅಂತರದಲ್ಲಿ ಸತತ ೬ನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ. ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ೯೩.೭೪ರೂ ಮತ್ತು ಡೀಸೆಲ್ ೮೪.೬೭ರೂ ಗೆ ಏರಿಕೆಯಾಗಿದೆ.…

ಮತ್ತೆ ಆ ದಿನಗಳು ಬಂದಾವೇ?

ಮತ್ತೆ ಆ ದಿನಗಳು ಬಂದಾವೇ? ಆಗ ನಮ್ಮ ಮನೆಯಲ್ಲಿ ಹಿತ್ತಾಳೆ, ತಾಮ್ರ, ಮತ್ತು ಅಲ್ಯೂಮಿನಿಯಂ ಪಾತ್ರೆಗಳೇ ಹೆಚ್ಚು. ಮನೆಯಲ್ಲಿ ಸಹ ಅಮ್ಮ ಮಾಡುತ್ತಿದ್ದ ಮುದ್ದೆ ಪಾತ್ರೆ ತಾಮ್ರದ್ದು, ಸಿಹಿ ನೀರು ತುಂಬುವ ಕೊಳಗ ತಾಮ್ರದ್ದೇ. ಕೆರೆಯ ಕಟ್ಟೆಯ ಮೇಲಿದ್ದ ಬಾವಿಯಿಂದ ಸಿಹಿನೀರು ತರುತ್ತಿದ್ದ ಅಕ್ಕಂದಿರು ತಲೆಯ ಮೇಲೆ ಹೊರುತ್ತಿದ್ದ ಗುಂಡಿ ಮತ್ತು ಕಂಕುಳಲ್ಲೊಂದು ಹೊತ್ತು ತರುತಿದ್ದ ಬಿಂದಿಗೆ ಹಿತ್ತಾಳೆಯವು. ಇವು ಖಾಲಿ ಇದ್ದರೂ ಹೊರಲು ಸ್ವಲ್ಪ ತೂಕವೇ ಇರುತ್ತವೆ. ನನ್ನ ಅಕ್ಕಂದಿರೊಡನೆ ನಾನು ಮತ್ತು ತಂಗಿ ನೀರು…

ಟೂಲ್ ಪ್ಲಾಜಾದಲ್ಲಿ ಕ್ಯೂ ಜಾಸ್ತಿ ಇದ್ದರೆ,ಟೂಲ್ ಕಟ್ಟಬೇಕಿಲ್ಲ

ನವದೆಹಲಿ,ಮೇ,27: ವಾಹನ ಚಾಲಕರಿಗೆ ಇದೊಂದು ಗುಡ್ ನ್ಯೂಸ್, ಇನ್ನೂ ಮುಂದೆ ಟೂಲ್ ಪ್ಲಾಜಾಗಳಲ್ಲಿ ಕ್ಯೂ ಜಾಸ್ತಿ ಇದ್ದರೆ ಟೂಲ್ ಶುಲ್ಕ ಕಟ್ಟುವ ಹಾಗಿಲ್ಲ. ಈ ಬಗ್ಗೆ ಶೀಘ್ರ ಹೊಸ ರೂಲ್ಸ್ ಜಾರಿಯಾಗಲಿದ್ದು, 100 ಮೀಟರ್ ಕ್ಯೂ ಇದ್ದರೆ ಟೋಲ್ ಶುಲ್ಕ ಕಟ್ಟಬೇಕಾಗಿಲ್ಲಟ್ರಾಫಿಕ್ ಜಾಮ್ ತಪ್ಪಿಸಲು ಈ ಮಾರ್ಗ ಹುಡುಕಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರವೇ ಹೊಸ ನಿಯಮ ಜಾರಿಗೊಳಿಸಲಿದ್ದು, ಹೆದ್ದಾರಿಗಳ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕ್ರಮ ಕೈಗೊಂಡಿದೆ. ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ಹಳದಿ ಗೆರೆ…

ಬೆಕ್ಕಿಗೆ ಚೆಲ್ಲಾಟ :ಇಲಿಗೆ ಪ್ರಾಣ ಸಂಕಟ.

ಶ್ರೀ ಡಾ.ಆರೂಢಭಾಸರತೀ ಸ್ವಾಮೀಜಿ ಸಿದ್ಧಸೂಕ್ತಿ : ಬೆಕ್ಕಿಗೆ ಚೆಲ್ಲಾಟ :ಇಲಿಗೆ ಪ್ರಾಣ ಸಂಕಟ ಬೆಕ್ಕು ಇಲಿಯ ಕಚ್ಚಿ ಕಚ್ಚಿ ಆಡಿ ನಲಿಯುವುದು,ಇಲಿ ಸಂಕಟದಿ ಒದ್ದಾಡುವುದು! ಚಿರತೆಯಿಂದ ಪಾರಾಗಲು ನಾಯಿ ಶೌಚಾಲಯಕ್ಕೆ ನುಗ್ಗಿತು. ಚಿರತೆಯೂ ಅಲ್ಲಿ ಹೊಕ್ಕಿತು! ಹೊರಗೆ ಮಾಲೀಕ ಕೊಂಡಿ ಹಾಕಿದ. ನಾಯಿಯ ಸಂಕಟ ದೇವರೇ ಬಲ್ಲ! ಚಿರತೆಗೂ ಸಂಕಟ ತಪ್ಪಿದ್ದಲ್ಲ! ಹಿಂಸೆ ನೀಡುವವಗೊಬ್ಬ ಬಲಿಷ್ಠ ಹಿಂಸಕ! ತಿನ್ನುವ ಆಶೆಗೆ ಹಸುವನು ಕುರಿಯನು ಕೊಚ್ಚುವನು, ತಾಜಾ ಮಾಂಸವ ನೋಡುತ ಬಹಳ ಸುಖಿಸುವನು. ಅಂಬಾ ಬ್ಯಾ ಎಂದರಚುತಲಿ…

ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು…

ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು… ಕರೊನಾವನ್ನು ಒಳಗೊಂಡಂತೆ ಸಿಡುಬು,ಮೈಲಿ,ದಢಾರ,ಮೊದಲಾದ ಸಂಕ್ರಾಮಿಕ ರೋಗಗಳೆಲ್ಲಾ ಯಾಕೆ ನಮ್ಮ ನಾಡಿನೊಳಗೆ ಸ್ತ್ರೀ ಹೆಸರನ್ನ ಹೊತ್ತು ನಿಲ್ಲುತ್ತವೆ? ಕೊರೊನಾ ಮಹಾ ಮಾರಿ,ಕೊರೊನಾ ಹೆಮ್ಮಾರಿ ಎಂದೆಲ್ಲಾ ಕರೆಸಿಕೊಂಡಿರುವ ಇದರ ಎರಡನೇ ಅಲೆಯಲ್ಲಿ ಕೊಚ್ಚಿಹೋದವರೆಲ್ಲಾ ಬಹುತೇಕ ಯುವಕರು.ತೀವ್ರ ಅಸಡ್ಡೆ,ಹುಂಬತನ,ಅಶಿಸ್ತಿನಿಂದಾಗಿ ಇಲ್ಲವೇ ದುರಬ್ಯಾಸಗಳಿಂದಾಗಿ, ಇತರರನ್ನ ರಕ್ಷಿಸಲು ಹೆಣಗಿದಾಗ,ಸದ್ದಿಲ್ಲದೇ ಬಲಿಯಾದವರ ಬಗೆ ಬಗೆದಂತೆ ಬಹುರೂಪಿಯಾಗಿದೆ. ” ತಾಯಿ ರಕ್ಕಸಿಯಾದಂತೆ” ಕಾಣುವ ಈ ವೈರಸ್ ದಾಳಿಯು ಈಗ ಹೆಚ್ಚು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಗಳನ್ನ ಬಾಧಿಸುತ್ತಿರುವುದರ ಹಿನ್ನೆಲೆಯೇನು?…

ಸಿದ್ದು -ಯಡ್ಡಿ ಜಗಳಬಂದಿ

ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಎಂದೂ ಸುಗಮವಾದ ಜುಗಲ್ ಬಂದಿ ಇರುವುದು ಸಾಧ್ಯವಿಲ್ಲ ಎನ್ನುವುದು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ದೇಶ ಕಂಡಿರುವ ಸತ್ಯ. ಆಳುವ ಪಕ್ಷ ಒಂದು ಕಡೆ, ಇನ್ನೊಂದು ಕಡೆಯಲ್ಲಿ ಆಡಳಿತ ಇಲ್ಲ ಎನ್ನುವ ಕಾರಣಕ್ಕೆ ಅಳುವ ಪಕ್ಷ. ಅವುಗಳ ನಡುವೆ ಇರುವುದು ಜಗಳಬಂದಿ ಮಾತ್ರ. ಜಗಳಕ್ಕೆ ಇಂಥದೇ ಕಾರಣ ಬೇಕೆಂದೇನೂ ಇಲ್ಲ, ಕಾರಣ ತನ್ನಷ್ಟಕ್ಕೆ ಹುಟ್ಟಿಕೊಳ್ಳುತ್ತದೆ; ತಾರ್ಕಿಕ ಅಂತ್ಯ ಕಾಣದೆ ತನ್ನಷ್ಟಕ್ಕೆ ತಾನೇ ಸಾಯುತ್ತದೆ. ವಿರೋಧ ಪಕ್ಷದ ನಾಯಕರು ಅಧಿಕಾರಿಗಳನ್ನು ಕರೆದು ಅಭಿವೃದ್ಧಿ…

ಮೇಕೆದಾಟು ಯೋಜನೆ; ನಾಳೆ ಕಾನೂನು ತಜ್ಞರೊಂದಿಗೆ ಸಭೆ- ಬೊಮ್ಮಾಯಿ

ಬೆಂಗಳೂರು, ಮೇ,26:ಮೇಕೆದಾಟು ಯೋಜನೆ ಸಂಬಂಧಿಸಿದಂತೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಾನೂನು ತಜ್ಞರ ಉನ್ನತಮಟ್ಟದ ಸಭೆ ನಡಯಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ ಟೌನ್ ಹಾಲ್ ಬಳಿ ಬೆಂಗಳೂರು ನಗರ ಸಂಚಾರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು‌. ರಾಷ್ಟ್ರೀಯ ಹಸಿರು ಪೀಠ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸೋಮೋಟೋ ದೂರು ದಾಖಲಿಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಸಮಿತಿ ರಚನೆ ಮಾಡಿದೆ. ಮೇಕೆದಾಟು ಯೋಜನೆಗೆ ಭೇಟಿ ನೀಡಬೇಕು.…

ಸ್ವಾತಂತ್ರ್ಯಹೋರಾಟಗಾರ ಶತಾಯುಷಿ ಎಚ್.ಎಸ್.ದೊರೆಸ್ವಾಮಿ ನಿಧನ

ಬೆಂಗಳೂರು, ಮೇ,26:ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎಚ್.ಎಸ್.ದೊರೆಸ್ವಾಮಿ ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು.ಇತ್ತೀಚೆಗಷ್ಟೆ ಅವರಿಗೆ ಕೊರೊನಾ ಸೋಕು ತಗುಲಿದ್ದು ಗುಣಮುಖರಾಗಿದ್ದರು.ಆದರೆ ಕೆಲ ದಿನಗಳ ಹಿಂದೆ ತೀವ್ರ ಹೃದಯಾಘಾತವಾದಾಗ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯಿಸಿರೆಳದಿದ್ದಾರೆ. ೧೯೧೮ ಏಪ್ರಿಲ್  ೧೦ ರಂದು ಹಾರೋಹಳ್ಳಿಯಲ್ಲಿ ಜನಸಿದ್ದ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ದರು,ನಂತರ ಜೈಲುವಾಸ ಅನುಭವಿಸಿದ್ದರು.ಗಾಂಧಿ ಅನುಯಾಯಿಯಾದ ಅವರು ಅವರ ಸಿದ್ದಾಂತಗಳನ್ನು ಅಳವಡಿಸಿಕೊಂಡಿದ್ದರು.೧೪ ತಿಂಗಳುಗಳಕಾಲ ಜೈಲುವಾಸ ಅನುಭವಿಸಿ ಹೊರಬಂದ ನಂತರ ಅವರು ಪತ್ರಿಕೆಯನ್ನು…

ಬಿಎಸ್‌ವೈ ಬದಲಾವಣೆ ಖಚಿತ;ಜೂನ್ ೭ರ ನಂತರ ರಾಜಕೀಯ ದ್ರವೀಕರಣ!

ಬೆಂಗಳೂರು,೨೬: ಕರ್ನಾಟಕದಲ್ಲಿ ಬರುವ ಜೂನ್ ಏಳರ ನಂತರ ರಾಜಕೀಯ ದ್ರವೀಕರಣವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ; ದೇಶದಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವರ್ಚಸ್ಸು ಗಣನೀಯ ಪ್ರಮಾಣದಲ್ಲಿ ಕುಸಿದ ಹಿನ್ನೆಲೆಯಲ್ಲಿ ಪಕ್ಷ ಮತ್ತು ಮೋದಿ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಕೆಲ ಬದಲಾವಣೆಗಳನ್ನು ತರಲು ಆರ್‌ಎಸ್‌ಎಸ್ ಮುಂದಾಗಿದೆ ಅದರ ಒಂದು ಭಾಗವೇ ಕರ್ನಾಕಟದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ. ಹೌದು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಲು ಈಗಾಗಲೇ ವೇದಿಕೆ ಸಜ್ಜಾಗಿದೆ. ಜುಲೈ ೭ ರ ನಂತರ ಲಾಕ್ ಡೌನ್ ಮುಗಿಯುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು…

ಅವಶ್ಯಕತೆ ಪೂರೈಸುವಲ್ಲಿ ವೀರ ಶೈವ ಸಮಾಜ ಸೇವೆ ಅನನ್ಯ

ವರದಿ; ಜಿ ಕೆ ಹೆಬ್ಬಾರ್ ಶಿಕಾರಿಪುರ ಶಿಕಾರಿಪುರ,ಮೇ,೨೬;ದೇಶ .ಹಾಗೂ ರಾಜ್ಯ ಹಿಂದೆಂದೂ ಕಂಡರಿಯದ ಒಂದು ಸಂದಿಗ್ಧ ಸ್ಥಿತಿಯಲ್ಲಿ ಇದ್ದು ಈ ಕೂ ರೋ ನಾ ಹೆಮ್ಮರಿಯನ್ನು ಕಟ್ಟಿ ಹಾಕುವುದರ ಜೊತೆಗೆ ಸಾರ್ವಜನಿಕರ ಜೀವ ಕಾಪಾಡುವ ಮತ್ತು ತುರ್ತು ಸೇವೆ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಅಂತಹ ಸೇವೆಯಲ್ಲಿ ನಮ್ಮ ವೀರ ಶೈವ ಸಮಾಜ ಪೂರಕವಾಗಿ ಕೆಲಸಮಾಡಿ ತೋರಿಸುತ್ತಿದೆ ಸಮಾಜ ಮುಖಿಯಾಗಿ ಅವರಸೇವೆ ಅನನ್ಯ ಎಂದು ಸಂಸದ ರಾಘವೇಂದ್ರ ತಿಳಿಸಿದರು. ಅವರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಖಿಲ…

ದೇಶದಲ್ಲಿ ಇಳಿಕೆ ಕಂಡ ಕೊರೊನಾ ಪ್ರಕರಣ

ನವದೆಹಲಿ, ಮೇ,26: ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಗೆದುಕೊಂಡಿರುವ ಕಠಿಣ ಕ್ರಮ ಕೈಗೊಂಡಿರುವ ಕಾರಣ ಈಗ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 2,08,92 ಮಂದಿಗೆ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,08,921 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,71,57,795 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,157…

ಒಡಿಶಾಕ್ಕೆ ಯಸ್ ಚಂಡಮಾರುತ ,11 ಲಕ್ಷ ಜನರ ಸಿಫ್ಟ್

ಭುವನಶ್ವರ,ಮೇ,26:ಯಸ್ ಚಂಡಮಾರುತ ಇಂದು ಮಧ್ಯಾಹ್ನ ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಭೂ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ . ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ಅವರು ಬುಧವಾರ ಬೆಳಗ್ಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ‘ಯಸ್‌’ ಚಂಡಮಾರುತ ಮಧ್ಯಾಹ್ನದ ವೇಳೆಗೆ ಭೂಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದೆ. ಸದ್ಯ ಗಂಟೆಗೆ 130 ರಿಂದ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಗಾಳಿಯ…

ಮನೆಕಟ್ಟಿ ನೋಡು ,ಮದುವೆ ಮಾಡಿ ನೋಡು

ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ. ಸಿದ್ಧಸೂಕ್ತಿ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು. ವಾಸಕ್ಕೆ ಮನೆ, ಆಸರೆಗೆ ಮದುವೆ, ಎಲ್ಲರಿಗೂ ಬೇಕು. ಎಲ್ಲರೂ ಮನೆ ಕಟ್ಟಲಾಗದು. ಬಾಡಿಗೆ ಮನೆಯಲ್ಲಿ, ಅಲ್ಲಿಲ್ಲಿ ಜೀವ ಅಂತ್ಯ!ಕೆಲವರಿಗೆ ಮದುವೆ ಮಾಡಲಾಗದು. ಕನ್ಯೆ ವರ ಸಿಗರು, ಸಿಕ್ಕರೂ ಒಪ್ಪರು. ಒದ್ದಾಟದ ಬದುಕಿಗಂಜಿ ಮದುವೆ ಬೇಡೆಂಬುವರು ಕೆಲರು. ಮದುವೆ ಸ್ವಾತಂತ್ರ್ಯದ ತಡೆ, ಅಡ್ಡದಾರಿಗನ ಸರಿ ದಾರಿಗೆ ತಳ್ಳುವ ಕೋಲು, ದನಗಳ ಕೊರಳಲಿ ಕಟ್ಟುವ ಗುದಿ ! ಅದಕ್ಕೇ ಹೇಳುವುದು “ಮಾಡ್ತಿನಿ ಮದುವೆ”!ಮನೆ ಮಾಡಲು…

1 100 101 102 103 104 112
Girl in a jacket