Girl in a jacket

Author kendhooli_editor

ಮನೆಕಟ್ಟಿ ನೋಡು ,ಮದುವೆ ಮಾಡಿ ನೋಡು

ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ. ಸಿದ್ಧಸೂಕ್ತಿ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು. ವಾಸಕ್ಕೆ ಮನೆ, ಆಸರೆಗೆ ಮದುವೆ, ಎಲ್ಲರಿಗೂ ಬೇಕು. ಎಲ್ಲರೂ ಮನೆ ಕಟ್ಟಲಾಗದು. ಬಾಡಿಗೆ ಮನೆಯಲ್ಲಿ, ಅಲ್ಲಿಲ್ಲಿ ಜೀವ ಅಂತ್ಯ!ಕೆಲವರಿಗೆ ಮದುವೆ ಮಾಡಲಾಗದು. ಕನ್ಯೆ ವರ ಸಿಗರು, ಸಿಕ್ಕರೂ ಒಪ್ಪರು. ಒದ್ದಾಟದ ಬದುಕಿಗಂಜಿ ಮದುವೆ ಬೇಡೆಂಬುವರು ಕೆಲರು. ಮದುವೆ ಸ್ವಾತಂತ್ರ್ಯದ ತಡೆ, ಅಡ್ಡದಾರಿಗನ ಸರಿ ದಾರಿಗೆ ತಳ್ಳುವ ಕೋಲು, ದನಗಳ ಕೊರಳಲಿ ಕಟ್ಟುವ ಗುದಿ ! ಅದಕ್ಕೇ ಹೇಳುವುದು “ಮಾಡ್ತಿನಿ ಮದುವೆ”!ಮನೆ ಮಾಡಲು…

ಐಪಿಎಲ್ ಉಳಿದ ಪಂದ್ಯಗಳು ಸೆಪ್ಟಂಬರ್ ಮೂರನೆ ವಾರ

ಮುಂಬೈ,ಮೇ,೨೫: ಕೋವಿಡ್ ಅಟ್ಟಹಾಸದಿಂದ ದೇಶದೆಲ್ಲಡೆ ಆತಂಕ ಉಂಟುಮಾಡಿದ್‌ದ ಕಾರಣ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು ಈಗ ಐಪಿಎಲ್ ಪಂದ್ಯಗಳನ್ನು ಸೆಪ್ಟಂಬರ್ ಮೂರನೇ ವಾರ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ ೧೯ ರಿಂದ ಅಕ್ಟೋಬರ್ ೧೦ ರವರೆಗೆ ಈ ಆವೃತ್ತಿಯ ಉಳಿದ ಪಂದ್ಯಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ . ಅಕ್ಟೋಬರ್ ೧೦ ರಂದು ಐಪಿಎಲ್‌ನ ೧೪ನೇ ಆವೃತ್ತಿಯ ಅಂತಿಮ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದರಲ್ಲಿ ೧೦ ಡಬಲ್ ಹೆಡರ್ ಪಂದ್ಯಗಳು,…

ಬೆಡ್‌ಬ್ಲಾಕಿಂಗ್ ದಂಧೆ; ಶಾಸಕ ಸತೀಶ್ ರೆಡ್ಡಿ ಆಪ್ತನ ಬಂಧನ

ಬೆಂಗಳೂರು, ಮೇ. ೨೫: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಶಾಸಕ ಸತೀಶ್ ರೆಡ್ಡಿ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈಗ ಬೆಡ್‌ಬ್ಲಾಕ್ ದಂಧೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಜೊತೆಯಲ್ಲೆ ಸುದ್ದಿಗೋಷ್ಠಿ ನಡೆಸಿದ್‌ದ ಶಾಸಕ ಸತೀಶ್ ರೆಡ್ಡಿಗೆ ಈಗ ತೀವ್ರ ಮುಖಭಂಗವಾದಂತಾಗಿದೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಿಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಹಿರಂಗ ಪಡಿಸಿದ್ದರು. ಈ ಪ್ರಕರಣ ರಾಜಕೀಯ…

ವಿಕಲಚೇತನರು, ಅನಾಥಾಶ್ರಮದ ವಯೋವೃದ್ಧರಿಗೆ ಲಸಿಕೆಗೆ ವ್ಯವಸ್ಥೆ..!

ಬೆಂಗಳೂರು,ಮೇ,೨೫: ಅನಾಥಶ್ರಮಗಳಲ್ಲಿನ ವೃದ್ಧರಿಗೆ ಮತ್ತು ವಿಕಲ ಚೇತನಿರಿಗೆ ಬೆಂಗಳೂರು ನಗರ ಜಿಲ್ಲಾಡಿಳ ಅಲ್ಲಿಯೇ ಲಸಿಕೆ ಹಾಕಲು ನಿರ್ಧರಿಸಿದೆ ಪಂಚಾಯ್ತಿ, ರೆವಿನ್ಯೂ ಹಾಗೂ ಹೆಲ್ತ್ ಆಫೀಸರ್ಸ್ ನಿಂದ ಮ್ಯಾಪಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿಶೇಷ ಚೇತನರು ಬರೋಬ್ಬರಿ ೫೯ ಸಾವಿರ ಮಂದಿ ಇದ್ದಾರೆ. ಅದರಲ್ಲಿ ೪೫ ವರ್ಷ ಮೇಲ್ಪಟ್ಟವರು ಬರೋಬ್ಬರಿ ೧೯,೯೧೧ ಮಂದಿ ಇಷ್ಟು ಮಂದಿಯ ಮ್ಯಾಪಿಂಗ್ ಮಾಡಿ ಅವರಿರೋ ಸ್ಥಳಕ್ಕೆ ವಾಹನ ವ್ಯವಸ್ಥೆ ಮಾಡಿ, ವಿಶೇಷ ಚೇತನರಿರೋ ಮನೆ ಮನೆಗೆ ತೆರಳಿ ತಮ್ಮ ವಾಹನದಲ್ಲಿ ಸ್ಥಳೀಯ…

ಡಾ.ದೇವಿ ಶೆಟ್ಟಿ ಗೆ ಕೇಂದ್ರ ಸಂಪುಟದಲ್ಲಿ ಸ್ಥಾನ..!?

ಬೆಂಗಳೂರು ,ಮೇ,೨೫: ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ ಹೀಗೊಂದು ಸುದ್ದಿ ಹರಡುತ್ತಿದೆ ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಈ ಸಂಪುಟಕ್ಕೆ ನಾರಾಯಣ ಹೆಲ್ತ್‌ಕೇರ್ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಅವರನ್ನು ಸೇರಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅವರನ್ನು ಕೋವಿಡ್ ಮೂರನೇ ಅಲೆಯ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕಮಾಡಲಾಗಿದ್ದು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಂಪುಟ ದರ್ಜೆಯ ಸಚಿವರನ್ನಾಗಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಲಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ…

ದೇಶದಲ್ಲಿ ಕೊರೊನಾ ಇಳಿಕೆ,೧,೯೬ ಲಕ್ಷ ಹೊಸ ಪ್ರಕರಣ,೩,೫೧೧ ಸಾವು

ನವದೆಹಲಿ,ಮೇ,೨೫: ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು ೧,೯೬,೪೨೭ ಜನರಲ್ಲಿ ಸೋಂಕು ದೃಡಪಟ್ಟಿದ್ದು,೩,೫೧೧ ಜನ ಸಾವನ್ನಪ್ಪಿದ್ದಾರೆ. ಕಳೆದ ಹಲವು ದಿನಗಳಿಂದ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತು ಆದರೆ ಕಳೆದ ೨೪ ಗಂಟೆಯಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿರುವುದು ಒಂದಿಷ್ಟು ನೆಮ್ಮದಿ ತಂದಿದೆ. ಹಲವು ದಿನಗಳಿಂದ ೪ ಲಕ್ಷದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಇದೀಗ ೨ ಲಕ್ಷಕ್ಕಿಂತ ಕೆಳಗೆ ಇಳಿದಿರುವುದು, ೨ನೇ ಅಲೆಯ ಇಳಿಕೆಯ…

ನಾಳೆ ಒಂದೇ ದಿನ ಚಂದ್ರಗ್ರಹಣ,ಬ್ಲಡ್ ಮೂನ್ ಗೋಚರ!

ನವದೆಹಲಿ, ಮೇ ೨೫: ನಾಳೆ ಈ ವರ್ಷದ ಮೊದಲ ಚಂದ್ರಗ್ರಹಣ ಗೋಚರಿಸಲಿದ್ದು ಇದರ ಜೊತೆಗೆ ಬ್ಲಡ್ ಮೂರನ್ ಕೂಡ ಗೋಚರವಾಘಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ಹುಣ್ಣಿಮೆಯ ದಿನವಾದ ನಾಳೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ ಹಾಗೆಯೇ ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನು ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭಿಸಲಿದೆ ಎಂದು…

ಕೋವಿಡ್ ಪರೀಕ್ಷೆ ಮಾದರಿ ಕೊಡುವುದು ತಡ ಮಾಡಿದ ಲ್ಯಾಬ್‌ಗಳಿಗೆ ದಂಡ

ಬೆಂಗಳೂರು, ಮೇ ೨೫; ಲ್ಯಾಬ್‌ಗಳು ಮೋವಿಡ್ ಮಾದರಿ ಪರೀಕ್ಷೆಗಳನ್ನು ತಡ ಮಾಡಿದರೆ ಅಂತವುಗಲಿಗೆ ದಂಡವಿದಲಾಗುತ್ತಿದ್ದು ಈಗಾಗಲೇ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ನಾರಾಯಣ ತಿಳಿಸಿದ್ದಾರೆ. ಈಗಾಗಲೇ ಒಟ್ಟು೨೦.೨೦ ಲಕ್ಷ ರೂ ದಂಡವನ್ನು ವಿಧಿಸಲಾಗಿದ್ದು ೩೧ ಖಾಸಿಗಿ ಲ್ಯಾಬ್,೯ ಸರ್ಕಾರಿ ಲ್ಯಾಬ್‌ಗಳು ಸಏರಿ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ನೋಡೆಲ್ ಅಧಿಕಾರಿಯಾದ ಶಾಲಿನಿ ರಜನೀಶ್ ಸಚಿವರಿಗೆ ಈ ಕುರಿತು ವಿವರಗಳನ್ನು ನೀಡಿದ್ದಾರೆ. ಕೋವಿಡ್ ಟಾಸ್ಕ್ ಪೋರ್ಸ್ ಅಧ್ಯಕ್ಷರೂ ಆಗಿರುವ…

ಮನಸ್ಸಿದ್ದರೆ ಮಾರ್ಗ…

ಶ್ರೀ ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ ಮನಸ್ಸಿದ್ದರೆ ಮಾರ್ಗ. ಮನಸ್ಸು ದೇಹ ವಸ್ತುಗಿಂತ ಬಲಿಷ್ಠ. ಅದ್ಭುತ ಸಾಧಕ. ಜಾಂಬವಂತನ ಮಾತಿನಿಂದ ಮನಸ್ಸು ಮಾಡಿದ ಆಂಜನೇಯ ಸಮುದ್ರ ಹಾರಿ, ಸೀತೆಯ ಕಂಡ! ಎತ್ತರಿಳಿಜಾರಿನ ಅಂಕುಡೊಂಕಿನ ಕಲ್ಲು ಬೆಟ್ಟಗಳ ರಸ್ತೆ! ಸುರಂಗಮಾರ್ಗ! ಗಗನಯಾತ್ರೆ! ಸಮುದ್ರದಾಳದ ಈಜು! ಶಿಕ್ಷಣ – ವಿಜ್ಞಾನ ಪ್ರಗತಿ! ಮೊಬೈಲ್ ನಲ್ಲಿ ವಿಶ್ವ! ಕ್ಷಣದಲ್ಲಿ ಹಣ ಸಾವಿರ ಮೈಲಿ ದೂರ ರವಾನೆ! ಕೆಲಸಕ್ಕಾಗಿ ಅಲೆದವರಿಂದ ಸಾವಿರ ಸಾವಿರ ಜನರಿಗೆ ಉದ್ಯೋಗ! ಹಿರಿಯೂರು ತರಕಾರಿ ವ್ಯಾಪಾರಿ ಮಗಳು ಲಲಿತಾ ಏರೋನ್ಯಾಟಿಕ್…

ಸರ್ಕಾರಿ ಶಾಲಾ ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಚಿಂತನೆ; ಸುರೇಶ್ ಕುಮಾರ್

ಮೈಸೂರು,ಮೇ24: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂಚಿತರಾಗಬಾರದು ಹಾಗಾಗಿ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಉಚಿತ ಸ್ಮಾರ್ಟ್ ಫೋನು ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೈಸೂರಿನ ಡಿಡಿಪಿಐ ಕಚೇರಿಗೆ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ‘ಸ್ಮಾರ್ಟ್‌ಫೋನ್‌ ವಿತರಣೆ ಸಂಬಂಧ ಈಗಾಗಲೇ ಎಲ್ಲ ಶೈಕ್ಷಣಿಕ ಜಿಲ್ಲೆಯಲ್ಲೂ ಸರ್ವೇ ನಡೆಸಲಾಗಿದೆ’ ಎಂದು ಹೇಳಿದರು. ‘ಹಳ್ಳಿಗಳ ಬಡ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ವಂಚಿತ…

ಕೇಂದ್ರದಿಂದ ಹಣ ಬಿಡುಗಡೆಯಲ್ಲಿ ತಾರತಮ್ಯ-ದೇವೇಗೌಡ

ಬೆಂಗಳೂರು,ಮೇ,೨೪: ದೇಶದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳಕ್ಕೆ ಪಂಚರಾಜ್ಯಗಳ ಚುನಾವಣೆಗಳು ನಡೆಸಿದ ರ‍್ಯಾಲಿಗಳೂ ಕಾರಣ ಎಂದು ಮಾಜಿ ಪ್ರದಾನಿ ಎಚ್.ಡಿ.ದೇವೇಗೌ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಎರಡನೇ ಅಲೆ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಬದಲಾಗಿ ಪಂಚರಾಜ್ಯಗಳ ಚುನಾವಣೆಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟರು ಕೊರೊನಾ ಬಗ್ಗೆ ಪ್ರಾಮುಖ್ಯತೆ ನೀಡಿದ್ದರೆ ಇಂತ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ ಹಣ ಬಿಡುಗಡೆಯಲ್ಲೂ ಕೂಡ ತಾರತಮ್ಯ ಮಾಡುತ್ತಿದೆ ಎಂದು…

ರಾಜ್ಯದಲ್ಲಿ ಮತ್ತೇ ಆಮ್ಲಜನಕ ಬಿಕ್ಕಟ್ಟು, ಬಳ್ಳಾರಿಯ ಆಮ್ಲಜನಕ ಘಟಕ ಸ್ಥಗಿತ

ಬೆಂಗಳೂರು: ರಾಜ್ಯಸರ್ಕಾರದ ಎಡವಟ್ಟುಗಳಿಂದ ಬಳ್ಳಾರಿಯಲ್ಲಿ ಉತ್ಪಾದನೆಯಾಗುವ ಆಮ್ಲಜನಕ ಘಟಕದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಈಗ ಮತ್ತೊಮ್ಮೆ ಆಮ್ಲಜನಕ ಕೊರತೆ ಉಂಟಾಗಿದೆ. ಸರ್ಕಾರಕ್ಕೆ ಇಷ್ಟೆಲ್ಲಾ ಅನುಭವಗಳಾದರೂ ಕೂಡ ಒಂದು ಆಮ್ಲಜನಕವನ್ನು ನಿರ್ವಹಣೆ ಮಾಡುವ ಕುರಿತು ಅದನ್ನು ಶೀಘ್ರ ಸರಿಪಡಿಸುವ ತಂತ್ರಜ್ಞಾನದ ಕೊರತೆ ಎದ್ದು ಕಾಣುತ್ತಿದೆ ಇನ್ನೂ ಸಚಿವರು ಸಹಮತ ಇಲ್ಲದೆ ಇರುವ ಕಾರಣ ಇಂತ ಅನಾಹುತಗಳು ಮೇಲಿಂದ ಮೇಲಾಗುತ್ತಿವೆ ಆದರೂ ಇನ್ನೂ ಸರ್ಕಾರಕ್ಕೆ ಬುದ್ದಿ ಬಂದಿಲ್ಲ ಎಂದರೆ ನಿಜಕ್ಕೂ ಇದು ಈ ರಾಜ್ಯದ ದುರಂತವೇ ಸರಿ ಎನ್ನಬೇಕು. ಬಳ್ಳಾರಿ ಜಿಲ್ಲೆಯ…

ರಾಜಕಾರಣಿಗಳಿಂದ ಔಷಧಗಳ ದಾಸ್ತಾನುಗಳ ಸಂಗ್ರಹ; ತನಿಖೆಗೆ ಕೋರ್ಟ್ ಸೂಚನೆ

ನವದೆಹಲಿ,ಮೇ,೨೪: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಏನೆಲ್ಲಾ ಔಷಧಿ ತಾರತಮ್ಯಗಳು ನಡೆಯುತ್ತಿವೆ ಎನ್ನುವುದಕ್ಕೆ ದೆಹಲಿ ಹೈಕೋರ್ಟ್ ನೀಡಿರುವ ಸೂಚನೆಯೇ ಇದಕ್ಕೆ ನಿದರ್ಶನ ಎನಿಸುತ್ತದೆ ಕೋವಿಡ್-೧೯ ಚಿಕಿತ್ಸೆಗೆ ಔಷಧ ಕೊರೆತೆಗೆ ಪ್ರಮುಖ ಕಾರಣ ರಾಜಕಾರಣಿಗಳು ತಮ್ಮ ಬಳಿ ಸಗಟು ರುಪದಲ್ಲಿ ಖರೀದಿಸಿ ಸಂಗ್ರಹಿಸಿ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಈ ಬಗ್ಗೆ ತನಿಖೆಗೆ ದೆಹಲಿ ಹೈಕೋರ್ಟ್ ಔಷಧ ನಿಯಂತ್ರಕರಿಗೆ ಆದೇಶ ನೀಡಿದೆ. ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತಮಗೆ ಗೊತ್ತಿದ್ದವರಿಗೆ ಔಷಧ ವಿತರಿಸುತ್ತಿರಬಹುದು ಎಂದೂ ಕೋರ್ಟ್ ಅಭಿಪ್ರಾಯಪಟ್ಟಿತು. ಇದೇ ಸಂದರ್ಭದಲ್ಲಿ…

ಜನಾರ್ಧನ ರೆಡ್ಡಿ ಬಳ್ಳಾರಿ ಭೇಟಿಗೆ ಮನವಿ ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದ ಸುಪ್ರೀಂ

ನವದೆಹಲಿ,ಮೇ,೨೪: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಹೋಗಲು ಅವಕಾಶಕ್ಕೆ ಸಲ್ಲಿಸಲಾದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಒಪ್ಪಿಗೆ ನೀಡಿದೆ. ಬಹು ಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ರೆಡ್ಡಿ ಅವರು ೨೦೧೫ ರಿಂದ ಜಾಮೀನಿನ ಮೇಲೆ ಜೈಲಿಂದ ಹೊರಗಿದ್ದಾರೆ. ಆದರೆ ಅವರಿಗೆ ಬಳ್ಲಾರಿಗೆ ಭೇಟಿ ಕೊಡುವುದನ್ನು ಹಾಗೇ ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪಾ ಭೇಟಿಗೆ ನಿಷೇಧಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ಸುಪ್ರೀಂ…

ಕೋವಿಡ್ ಸೌಲಭ್ಯಗಳ ಕುರಿತು ಶ್ವೇತಪತ್ರಹೊರಡಿಸಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು,ಮೇ,೨೪ : ರಾಜ್ಯದಲ್ಲಿ ಲಭ್ಯ ಇರುವ ಕೋವಿಡ್ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಇತರ ಸೌಲಭ್ಯಗಳ ಬಗ್ಗೆ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಶ್ವೇತಪತ್ರ ಹೊರಡಿಸುವಂತೆ ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಪಾಲಿಸಬೇಕು. ಶ್ವೇತಪತ್ರ ಎಂದರೆ ಸುಳ್ಳು ಹೇಳುವುದಲ್ಲ. ಸತ್ಯಾಂಶವನ್ನು ಜನರ ಮುಂದೆ ಇಡುವಂಥದ್ದು ಎಂದರು. ಆಕ್ಸಿಜನ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನೂ ಸರ್ಕಾರ ಈ…

ರಾಜ್ಯದಲ್ಲಿ ೩೦೦ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ-ಸುಧಾಕರ್

ಬೆಂಗಳೂರು,ಮೇ,೨೪: ಕಪ್ಪು ಶಿಲೀಂದ್ರ ಸಮಿತಿ ನೀಡಿರುವ ಪ್ರಾಥಮಿಕ ವರದಿಯಲ್ಲಿ ರಜ್ಯದಲ್ಲಿ ೩೦೦ಕ್ಕೂ ಅಧಿಕ ಬ್ಲಾಕ್ ಫಂಗಸ್ ಸೋಂಕಿತರು ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ,ಸುಧಾಕರ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ…

ದ್ವಿತೀಯ ಪಿಯು ಪರೀಕ್ಷೆಗೆ ರಾಜ್ಯಗಳ ಒಲವು-ಜೂನ್ ೧ಕ್ಕೆ ಅಂತಿಮ ತೀರ್ಮಾನ

ನವದೆಹಲಿ,ಮೇ,೨೪:ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಬಹುತೇಕ ಎಲ್ಲಾ ರಾಜ್ಯಗಳು ಸಹಮತ ವ್ಯಕ್ತಪಡಿಸಿರುವ ಹಿನ್ನೆಲಯಲ್ಲಿ ಜೂನ್ ೧ಕ್ಕೆ ಈ ಕುರಿತು ಅಂತಿಪ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಭಾನುವಾರ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಸಬೇಕೆ ಅಥವಾ ಶಾಲಾ ಮಟ್ಟದಲ್ಲೇ ಪರೀಕ್ಷೆನಡೆಸಿ ವಿದ್ಯಾರ್ಥಿಗಳನ್ನು ಅಂಕಗಳ ಆಧಾರದ ಮೇಲೆ ತೇರ್ಗಡೆ ಮಾಡಬೇಕೆ ಎಂಬ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸಹಮತ ಬಾರದ ಕಾರಣ ಯವುದೆ ನಿರ್ದಾರಕ್ಕೆ ಬಂದಿಲ್ಲವಾದರೂ ಕೂಡ ಬಹುತೇಕ ರಾಜ್ಯಗಳು ಅಂತಿಮ ಪರೀಕ್ಷೆ ಬರೆಸುವುದೇ ಒಳಿತ ಎನ್ನುವ ಮಾತುಗಳು ಕೇಳಿ ಬಂದ ಕಾರಣ…

‘ಓಂ’ಕಾರ ಸಾಧನೆಯೇ ಪ್ರಣವೋಪಾಸನೆ

ಶ್ರೀ ಆರೂಢಭಾರತೀ ಸ್ವಾಮೀಜಿ ಸಂಸ್ಕೃತ ಪಾಂಡಿತ್ಯ ಪಡೆದಿದ್ದು ಧಾರ್ಮಿಕತೆಯ ಲೌಕಿಕ-ಅಲೌಕಿಕ ಬದುಕಿನ ತರ್ಕಗಳೊಂದಿಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾರೆ, ಹಾಗೆಯೇ ಈ ವಾರ ಶ್ರೀಗಳು ಬಾಲಕ ಸಿದ್ಧ ಪಡೆದ ‘ಓಂಕಾರದ ಸಾಧನೆಯನಿಜಸ್ವೂರಪ ಕುರಿತು ವಿವರಿಸಿದ್ದಾರೆ ಈ ವಾರದ ಜ್ಞಾನ ದೀಪ್ತಿ ಅಂಕಣದಲ್ಲಿ. ಶ್ರೀ ಆರೂಢಭಾರತೀ ಸ್ವಾಮೀಜಿ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ ಆರೂಢದರ್ಶನ-೨ ‘ಓಂ’ಕಾರ ಸಾಧನೆಯೇ ಪ್ರಣವೋಪಾಸನೆ ತಂದೆ ಗುರುಶಾಂತಪ್ಪನು ಪುತ್ರನಾದ ಸಿದ್ಧಬಾಲಕನನ್ನು ಶಾಲೆಗೆ ಕರೆದು ತಂದನು.‘ಸಿದ್ಧನಿಗೆ ಐದು ವರ್ಷಗಳಾಗಿರುವುದುರಿಂದ ವಿದ್ಯಾಭ್ಯಾಸವನ್ನು ಪ್ರಾರಂಭಿಸಬೇಕು ಎಂದು ಗುರುಗಳಲ್ಲಿ ವಿನಂತಿಸಿ,…

ರಾಜ್ಯದೆಲ್ಲಡೆ ಮನೆ-ಮನೆಗೂ ತೆರಳಿ ಕೊರೊನಾ ಸೋಂಕು ಪರೀಕ್ಷೆ-ಅಶೋಕ್

ಬೆಂಗಳೂರು, ಮೇ ೨೪: ಇನ್ನೂ ಮುಂದೆ ರಾಜ್ಯದ ಎಲ್ಲಾ ಕಡೆಯೂ ಕೊರೊನಾ ಸೋಂಕಿತರ ಮನೆ-ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಂದಾಯಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್,ಅಶೋಕ್ ಅವರು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಕೂಡ ಪ್ರತಿ ಮನೆಗಳಿಗೂ ತೆರಳಿ ವಿಶೇಷ ತಂಡ ಕೊರೊನಾ ಸೋಂಕಿತರನ್ನು ಗುರುತಿಸಲಾಗುತ್ತದೆ ಈ ಕುರಿತಂತೆ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ಅವರು ಹೇಳಿದರು.…

ಇಂದಿನಿಂದ ಮತ್ತಷ್ಟು ಕಠಿಣ ಲಾಕ್ ಡೌನ್

ಬೆಂಗಳೂರು, ಮೇ,24:ಇಂದಿನಿಂದ ರಾಜ್ಯದಲ್ಲಿ ಹೊಸ ಲಾಕ್ ಡೌನ್ ಮಾರ್ಗಸೂಚಿಗಳು ಅನ್ವಯವಾಗಲಿದ್ದು ಕಠಿಣ ರೂಲ್ಸ್ ಜಾರಿಯಾಗಲಿದೆ. ಮುಂದಿನ 14 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಅತ್ಯಂತ ಕಠಿಣ ರೂಲ್ಸ್ ಜಾರಿಯಾಗಲಿದ್ದು ಜನ ಹೊರಬಂದ್ರೆ ಪೊಲೀಸರು ತಮ್ಮ ವರ್ಸೆ ತೋರಿಸಲಿದ್ದಾರೆ. ವಿನಾಕಾರಣ ಓಡಾಡುವವರಿಗೆ ಮೊನ್ನೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ರು. ಬೆಳಗ್ಗೆ 10ಕ್ಕೆ ಅಲ್ಲ 9.45 ರೊಳಗೆ ಮನೆ ಸೇರಬೇಕು. ಇದಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಬೇಕು ಅಂತಾನೂ ಎಚ್ಚರಿಸಿದ್ರು. ಇದ್ರ ಬೆನ್ನಲ್ಲೇ ಎಚ್ಚೆತ್ತ…

1 101 102 103 104 105 112
Girl in a jacket