ಕ್ಷಮಿಸು ಭುವನೇಶ್ವರಿ..
ಎನ್.ಸಿ. ಶಿವಪ್ರಕಾಶ್,ಮಸ್ಕತ್,ಒಮಾನ್ ಕ್ಷಮಿಸು ಭುವನೇಶ್ವರಿ.. ಊಳಿಡುತಿಹಳು ಭೂರಮೆ ಕಳಚಿ ಕೇಳು ನಿನ್ನ ಗರಿಮೆ ಹೆತ್ತ ತಾಯ ಕರುಳ ಸಂಕಟ ಅರಿಯದಾದೆ ನೀ ಮಾನವಮರ್ಕಟ ಜಗದದಾಹ ಹಿಂಗಿಸಲು ಭಗೀರಥಿಗೆ ಒಡಲಾದೆ ಹಸಿವಭರಿಸೆ ನೀ ಹೊತ್ತೆ ಬವಣೆಗಳ ಬೀಡೆ ಋತುಗಳ ರಂಗೋಲಿಗೆ ಜೀವರಂಗು ತುಂಬಿದೆ ಮೇಲೊಂದು ಮಳೆಯಬಿಲ್ಲನಿಡೆ ನಾಕವದು ಧರೆಯಲಿ ಅವತರಿಸಿದೆ ಸಾಗರ ಬ್ರಹ್ಮಾಂಡದಚ್ಚರಿ ಗೌರಿಶಂಕರ ಔನತ್ಯದ ಪರಧಿ ಕೆಳಗೆ ಹಸಿರು, ಮೇಲೆ ನೀಲಿ ಅನನ್ಯ ಸೊಬಗಿಗೆ ಕುಂದಣ ಹಕ್ಕಿಪಿಕ್ಕಿ ಚಿಲಿಪಿಲಿ ಉಸಿರನಿಟ್ಟೆ, ಜೀವವೈವಿಧ್ಯ ಸೃಜಿಸಿದೆ ಒಲವನಿಟ್ಟೆ, ಸರ್ವಸಾಂಗತ್ಯ ಬಯಸಿದೆ…




















