Browsing: ಸಿನೆಮಾ

ಸಿನೆಮಾ

ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಯಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ, 23: ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಪಡಿಸಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಪ್ರದಯೇಶಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ಇಂದು ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. “ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ತೊಂದರೆಯಾಗಿರುವಲ್ಲಿ ಕೂಡಲೇ ಸರಿಪಡಿಸಿ, ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಯಾರೂ ಚಿತ್ರಮಂದಿರಗಳಿಂದ ತೆಗೆಯತಕ್ಕದ್ದಲ್ಲ. ಸಂಬಂಧಪಟ್ಟ ನಿರ್ಮಾಪಕರು, ಚಿತ್ರಮಂದಿರದವರಿಗೆ ಇದನ್ನು ಸರಿಪಡಿಸುವ ಅಧಿಕಾರವಿದೆ.…

ಲಂಡನ್‌ನಲ್ಲಿ ಪ್ರದರ್ಶನಗೊಂಡ ನಾಂದಿ

ಲಂಡನ್‌ನಲ್ಲಿ ಪ್ರದರ್ಶನಗೊಂಡ ನಾಂದಿ ಶ್ರೀ ಭಾರತಿಚಿತ್ರ ಲಾಂಛನದಲ್ಲಿ ವಾದಿರಾಜ್ ಹಾಗೂ ಜವಹರ್ ಸೋದದರು ನಿರ್ಮಾಣ ಮಾಡಿದ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರನಾಂದಿ ೧೯೬೪ರಲ್ಲಿ ಬಿಡುಗಡೆಗೊಂಡಿತು.ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಎನ್.ಲಕ್ಷ್ಮಿನಾರಾಯಣ್ ಮೊದಲ ಚಿತ್ರಇದಾಗಿತ್ತು. ಆರ್.ನಾಗೇಂದ್ರರಾವ್ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿನಾರಾಯಣ್ ‘ನಾಂದಿಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ರಾಜಕುಮಾರ್, ಹರಿಣಿ, ಕಲ್ಪನಾ, ಬಾಲಕೃಷ್ಣ, ವಾದಿರಾಜ್, ದಿನೇಶ್, ಗಣಪತಿಭಟ್, ಶೈಲಶ್ರೀ, ಉದಯಕುಮಾರ್, ಸೋರಟ್‌ಅಶ್ವತ್ಥ್, ಹನುಮಂತಾಚಾರ್, ಜಯಶ್ರೀ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆಎನ್.ಲಕ್ಷ್ಮಿನಾರಾಯಣ್‌ಅವರೇಕಥೆ, ಹಾಗೂ ಚಿತ್ರಕಥೆ ರಚಿಸಿದರು.…

ಮೈಸೂರು ವಿವಿ ಯಿಂದ ಪುನೀತ್ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು,ಮಾ,೨೨:ಕರ್ನಾಟಕ ರತ್ನ ದಿ.ಪುನೀತ್ ರಾಜ್‌ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ೧೦೨ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮಂಗಳವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪುನೀತ್ ರಾಜ್‌ಕುಮಾರ್ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಎಲ್ ಇಡಿ ಸ್ಕ್ರೀನ್ ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ…

ಎಸ್.ಪಿ.ಬಾಲಸುಬ್ರಹ್ಮಣ್ಯಂಕನ್ನಡಕ್ಕಾಗಿ ಮೊದಲು ಹಾಡಿದ ನಕ್ಕರೆಅದೇ ಸ್ವರ್ಗ

ಎಸ್.ಪಿ.ಬಾಲಸುಬ್ರಹ್ಮಣ್ಯಂಕನ್ನಡಕ್ಕಾಗಿ ಮೊದಲು ಹಾಡಿದ ನಕ್ಕರೆಅದೇ ಸ್ವರ್ಗ ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಕಾಂತ್ ನಹತಾ ಮತ್ತು ಶ್ರೀಕಾಂತ್ ಪಟೇಲ್ ನಿರ್ಮಾಣ ಮಾಡಿದ ನಕ್ಕರೆಅದೇ ಸ್ವರ್ಗ ಕಪ್ಪುಬಿಳುಪು ಸಾಮಾಜಿಕಕಥಾಹಂದರದಚಿತ್ರ ೧೯೬೭ರಲ್ಲಿ ಬಿಡುಗಡೆಗೊಂಡಿತು. ಎಂ.ಆರ್.ವಿಠಲ್ ನಿರ್ದೇಶನದ ಈ ಚಿತ್ರದಲ್ಲಿ ನರಸಿಂಹರಾಜು, ಅರುಣ್‌ಕುಮಾರ್, ಆರ್.ನಾಗೇಂದ್ರರಾವ್, ಶೈಲಶ್ರೀ, ಢಿಕ್ಕಿಮಾಧವರಾವ್, ರಂಗ, ಸಂಪತ್, ಜಯಂತಿ, ಜೂ.ರೇವತಿ ಅಭಿನಯಿಸಿದರು. ಎಸ್.ಪಿ.ಬಾಲಸುಬ್ರಹ್ಮಣ್ಯಂಅವರು ಮೊದಲ ಬಾರಿಗೆಕನ್ನಡಚಿತ್ರಕ್ಕಾಗಿ ಹಾಡಿದರು.ಅರುಣ್‌ಕುಮಾರ್‌ಅವರಿಗಾಗಿಎಸ್.ಪಿ.ಬಾಲಸುಬ್ರಹ್ಮಣ್ಯಂಅವರು ಕನಸಿದೋ ನನಸಿದೋ..’ಗೀತೆಯನ್ನು ಹಾಡಿದರು.ಎಂ.ರಂಗಾರಾವ್ ಸಂಗೀತ ನಿರ್ದೇಶನದ ಮೊದಲ ಚಿತ್ರ.ನರಸಿಂಹರಾಜು ಅವರು ನಾಯಕನಟರಾಗಿ ಅಭಿನಯಿಸಿದ ಚಿತ್ರ.ವೂ ಹೌದು.ನರಸಿಂಹರಾಜು…

ನಿರ್ದೇಶಕ ಸ್ಥಾನಕ್ಕೆ ತಾರಾಮೌಲ್ಯತಂದ ಪುಟ್ಟಣ್ಣಕಣಗಾಲ್

ನಿರ್ದೇಶಕ ಸ್ಥಾನಕ್ಕೆ ತಾರಾಮೌಲ್ಯತಂದ ಪುಟ್ಟಣ್ಣಕಣಗಾಲ್ ಕನ್ನಡದಲ್ಲಿ ನಿರ್ದೇಶಕನ ಪಟ್ಟಕ್ಕೆತಾರಾಮೌಲ್ಯತಂದುಕೊಟ್ಟ ಎಸ್.ಆರ್.ಪುಟ್ಟಣ್ಣಕಣಗಾಲ್(ಸುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ) ಅವರು ಬಿ.ಆರ್.ಪಂತುಲುಅವರಗರಡಿಯಲ್ಲಿ ಪಳಗಿ ಬಂದವರು. ಪುಟ್ಟಣ್ಣಕಣಗಾಲ್ ಮೈಸೂರುಜಿಲ್ಲೆಯ ಪಿರಿಯಾಪಟ್ಟಣತಾಲ್ಲೂಕುಕಣಗಾಲ್‌ಗ್ರಾಮದಲ್ಲಿ ಪುಟ್ಟಣ್ಣ ೧೯೩೩ರ ಡಿಸೆಂಬರ್ ೧ರಂದು ಜನಿಸಿದರು.ಪ್ರಾಥಮಿಕ ಶಾಲೆಯನ್ನುಕಣಗಾಲ್‌ನಲ್ಲಿ ಓದಿ ಮುಂದಿನ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದರು.ಭಿಕ್ಷಾನ್ನ ಮಾಡಿಕೊಂಡುಓದಬೇಕಾದ ಪರಿಸ್ಥಿತಿ.ವರದಾಚಾರ್‌ಎನ್ನುವಛಾಯಾಗ್ರಾಹಕರ ಮನೆಯಲ್ಲಿ ವಾಸ್ತವ್ಯದ ಅವಕಾಶ ದೊರೆತಿತ್ತು.ಬಿಡುವಿನಲ್ಲಿಅವರ ಸ್ಟುಡಿಯೋಗೆ ಹೋಗಿ ಛಾಯಾಗ್ರಹಣ ಕಲೆ ಬಗ್ಗೆ ಅರಿತುಕೊಳ್ಳುತ್ತಿದ್ದರು.ಚಲನಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದ ಪುಟ್ಟಣ್ಣಒಮ್ಮೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಒಳಗೆ ಹೋಗಲು ಪ್ರಯತ್ನಿಸಿ ನಿರಾಶರಾದರು.ನಟಭಯಂಕರಗಂಗಾಧರರಾಯರಕಂಪನಿಯಲ್ಲಿ ಸಣ್ಣ ಕೆಲಸ ಮಾಡಿದರು.ಧರಿಸಲು…

ನಿರ್ದೇಶನ, ಸಾಹಿತ್ಯರಚನೆ, ಅಭಿನಯ ಕ್ಷೇತ್ರಗಳ ಸಾಧಕಜಿ.ವಿ.ಅಯ್ಯರ್

ನಿರ್ದೇಶನ, ಸಾಹಿತ್ಯರಚನೆ, ಅಭಿನಯ ಕ್ಷೇತ್ರಗಳ ಸಾಧಕಜಿ.ವಿ.ಅಯ್ಯರ್ ವಿಶ್ವದ ಪ್ರಥಮ ಸಂಸ್ಕೃತಚಿತ್ರ ರೂಪಿಸಿದ ಗಣಪತಿಅಯ್ಯರ್ ವೆಂಕರಮಣಅಯ್ಯರ್ ೧೯೧೭ರ ಸೆಪ್ಟೆಂಬರ್ ೩ರಂದು ಜನಿಸಿದರು.ಓದಿಗೆ ವಿರಾಮ ಹಾಕಿ ಹತ್ತನೆ ವಯಸ್ಸಿನಲ್ಲಿ ಮನೆ ಬಿಟ್ಟುಗುಬ್ಬಿ ಕಂಪನಿಗೆ ಬಂದರೆಅಲ್ಲಿದೊರೆತದ್ದು ಪರಿಚಾರಕನ ಕೆಲಸ.ಮೂರು ವರ್ಷ ಈ ಕಾಯಕ.ಬಿಡುವಿನ ವೇಳೆಯಲ್ಲಿ ಪರದೆ ಬರೆಯುವಕಲಾವಿದನ ಬಳಿ ನಿಂತು ಕುಳಿತು ನೋಡಿಕುಂಚಕಲೆಯನ್ನುಕರಗತ ಮಾಡಿಕೊಂಡರು.ಪೋಸ್ಟರ್ ಬರೆಯುವ ಉಪ ವೃತ್ತಿ ಕೊಂಚ ದಿವಸ. ಚಲನಚಿತ್ರದಲ್ಲಿ ಅವಕಾಶ ಅರಸಿ ಪುಣೆಗೆ ಬಂದರೆಅಲ್ಲಿದೊರೆತದ್ದು ಹೋಟೆಲ್ ಮಾಣಿ ಕೆಲಸ. ೧೯೩೨ರಲ್ಲಿ ನಂಜನಗೂಡಿಗೆ ಹಿಂದಿರುಗಿದರು. ಯಂತ್ರಕಟ್ಟುವತಂತ್ರ ವಿದ್ಯೆ, ಬಡಗಿ…

ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್

ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್ ಉಡುಪಿಯ ಬಳಿ ಫಣಿಯಾಡು ಎಂಬಲ್ಲಿ ೧೯೨೭ರ ಜನವರಿ ೩ರಂದು ಜನಿಸಿದರು. ತಂದೆ ಶ್ರೀನಿವಾಸ ಫಣಿಯಾಡಿ, ತಾಯಿ ಭಾರತಿ, ತಂದೆ ಸ್ವಾತಂತ್ರ ಹೋರಾಟಗಾರರು ಹಾಗೂ ನಾಟಕ ರಚನೆಕಾರರು. ಬಾಲ್ಯವನ್ನು ತಮ್ಮ ಊರಿನಲ್ಲಿಯೇ ಕಳೆದ ವಾದಿರಾಜ್ ಮದರಾಸಿಗೆ ತೆರಳಿದರು. ಅಲ್ಲಿ ಕೊಂಚ ಕಾಲ ಇದ್ದು ಪುನಃ ತನ್ನೂರಿಗ ಬಂದು ತಮ್ಮ ತಂದೆ ರಚಿಸಿದ್ದ ಕೆಲವು ನಾಟಕಗಳಲ್ಲಿ ಅಭಿನಯಿಸುವ (ಮೂಲಕ ಕಲಾರಂಗಕ್ಕೆ ಕಾಲಿರಿಸಿದರು.೧೯೫೬ರಲ್ಲಿ ತೆರೆಗೆ ಬಂದ ’ಕೋಕಿಲವಾಣಿ’ ಚಿತ್ರದ…

ನೀರಿನ ಸಮಸ್ಯೆ ಕುರಿತ ‘ಬೆಟ್ಟದ ದಾರಿ’ ಮಕ್ಕಳ ಚಿತ್ರ

ಉತ್ತರಕರ್ನಾಟಕ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ರಾಜಕೀಯದ ಕೆಸರಾಟದಿಂದ ಮುಂದೇ ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ. ’ಬೆಟ್ಟದ ದಾರಿ’ ಎನ್ನುವ ಮಕ್ಕಳ ಸಿನಿಮಾದ ಕತೆಯು ನೀರಿನದ್ದೆ ಆಗಿದೆ. ಕಾಲ್ಪನಿಕ ಬರದ ಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ. ಇದಕ್ಕೆ ಅಲ್ಲಿನ ಮುಖಂಡರು, ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ. ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡು ಚಾಣಾಕ್ಷತನದಿಂದ ಇದಕ್ಕೆ ಪರಿಹಾರ ಕಂಡುಹಿಡಿದು ಜನರು ನಿರಾಳರಾಗುವಂತೆ ಮಾಡುತ್ತಾರೆ. ಚಿಣ್ಣರುಗಳು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು…

‘ತನುಜಾ’ ಚಿತ್ರಕ್ಕೆ ಬಣ್ಣಹಚ್ಚಿದ ಬಿಎಸ್‌ವೈ

ಈ ಹಿಂದೆ ಅವರೇ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತನುಜಾ ಎಂಬ ಹೆಣ್ಣುಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಪರೀಕ್ಷೆ ಬರೆಯಲು ಸುಮಾರು ೩೫೦ಕಿಮೀ ದೂರ ಪ್ರಯಾಣ ಮಾಡಿ ಬಂದು ಪರೀಕ್ಷೆ ಬರೆದಿದ್ದೆ ರೋಚಕತೆಯಿಂದ ಕೂಡಿದ್ದು, ಎಲ್ಲರ ಕುತೂಹಲ ಕೆರಳಿಸಿತು ಇದನ್ನೇ ಒನ್‌ಲೈನ್ ಸ್ಟೋರಿ ಆಗಿಸಿಕೊಂಡು ಸಾಮಾಜಿಕ ಕಳಕಳಿಯುಳ್ಳ ರಾಜ್ಯಪ್ರಶಸ್ತಿ…

ಹಿರಿಯ ಕಲಾವಿದೆ ಭಾರ್ಗವಿ ನಾರಾಣ್ ನಿಧನ

ಬೆಂಗಳೂರು,ಫೆ,14:ಹಿರಿಯ ನಟಿ ಭಾರ್ಗವಿ ನಾರಾಯಣ್ (84)ಇಂದು ಸಂಜೆ  ನಿಧನವಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಂಜೆ 7.30ಕ್ಕೆ ನಿಧನ ಹೊಂದಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಖ್ಯಾತ ರಂಗಭೂಮಿ ಹಿರಿಯ ಕಲಾವಿದೆ, ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿಕ ಪಾತ್ರಧಾರಿ ಎಂದೇ ಪ್ರಸಿದ್ಧರಾಗಿರುವ ಭಾರ್ಗವಿ ನಾರಾಯಣ್ ಅವರು ಫೆಬ್ರುವರಿ 4, 1938ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಾ. ಎಂ. ರಾಮಸ್ವಾಮಿ, ತಾಯಿ ನಾಮಗಿರಿಯಮ್ಮ. ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ.…

ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು

ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು ರಾಜಕುಮಾರ್, ಕಲ್ಯಾಣಕುಮಾರ್ ಹಾಗೂ ಉದಯಕುಮಾರ್ ಮೂರೂ ಮಂದಿ ನಾಯಕ ನಟರು ಪೂರ್ಣ ಪ್ರಮಾಣದಲ್ಲಿಒಂದೇಚಿತ್ರದಲ್ಲಿಅಭಿನಯಿಸಿದ ಭೂದಾನ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರಅನಂತಲಕ್ಷ್ಮೀ ಪಿಕ್ಚರ್ ಲಾಂಛನದಲ್ಲಿ೧೯೬೨ರಲ್ಲಿತೆರೆಕಂಡಿತು. ಪಿ.ಎನ್.ಗೋಪಾಲಕೃಷ್ಣ ಹಾಗೂ ಜಿ.ವಿ.ಅಯ್ಯರ್‌ಜಂಟಿಯಾಗಿ ನಿರ್ಮಾಣ ಮಾಡಿದ ಈ ಚಿತ್ರವನ್ನು ಮೊದಲ ಬಾರಿಗೆ ಜಿ.ವಿ.ಅಯ್ಯರ್ ನಿರ್ದೇಶಿಸಿದರಲ್ಲದೆ, ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು. ಎಸ್.ಕೆ.ಭಗವಾನ್ ಹಾಗೂ ರಾಮಚಂದ್ರ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು. ಉಳಿದಂತೆ ಅಶ್ವತ್, ನರಸಿಂಹರಾಜು, ಬಾಲಕೃಷ್ಣ, ಹೆಚ್.ರಾಮಚಂದ್ರಶಾಸ್ತ್ರಿ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ ಮುಂತಾದವರುಅಭಿನಯಿಸಿದರು.ಜಿ.ಕೆ.ವೆಂಕಟೇಶ್ ಸಂಗೀತ ನೀಡಿದಚಿತ್ರದಲ್ಲಿ ಪುರಂದರದಾಸರಭಾಗ್ಯಾದ…

ಜ.26ರಂದು “ಬಡವ ರಾಸ್ಕಲ್” ಚಿತ್ರ ವೂಟ್‌ ಸೆಲೆಕ್ಟ್‌ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್

ಚಿತ್ರ ಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಡಾಲಿ ದನಂಜಯ್ ಅಭಿನಯದ “ಬಡವ ರಾಸ್ಕಲ್” ಸಿನಿಮಾ ಜನವರಿ ೨೬ರಂದು “ವೂಟ್ ಸೆಲೆಕ್ಟ್” ಓಟಿಟಿ ಫ್ಲಾಟ್‌ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ. ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ರೊಮ್ಯಾಂಟಿಕ್ ಡ್ರಾಮದಲ್ಲಿ ಧನಂಜಯ್, ಅಮೃತ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮತ್ತು ಮಾಸ್ತಿ ಮಂಜು ಕೂಡ ಬಣ್ಣಹಚ್ಚಿದ್ದಾರೆ. ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತ) ಮತ್ತುಮಧ್ಯಮ ವರ್ಗ ಕುಟುಂಬದ…

ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ

ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ ಮಹಾಭಾರತದ ಪ್ರಸಂಗವೊಂದನ್ನು ಆಧರಿಸಿದ, ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ಕಪ್ಪುಬಿಳುಪು ಪೌರಾಣಿಕಚಿತ್ರನಾಗಾರ್ಜುನ ನಂದಿ ಪಿಕ್ಚsರ್ಸ್ ಲಾಂಛನದಲ್ಲಿ ೧೯೬೧ರಲ್ಲಿ ತೆರೆಗೆ ಬಂದಿತು. ಕೆ.ಎನ್.ಮಲ್ಲಿಕಾರ್ಜುನ ನಿರ್ಮಾಣದ ಈ ಚಿತ್ರವನ್ನುಕನ್ನಡದ ಮೊದಲ ಮಾತನಾಡುವಚಿತ್ರಸತಿ ಸುಲೋಚನ ನಿರ್ದೇಶನ ಮಾಡಿದ ವೈ.ವಿ.ರಾವ್ ನಿರ್ದೇಶಿಸಿದರು. ಆರ್.ಶ್ರೀನಿವಾಸ್ ಹಾಗೂ ಕುಂದಾನಿ ಸತ್ಯನ್ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ವರಲಕ್ಷ್ಮಿ, ವಿ.ನಾಗಯ್ಯ, ಸಂಧ್ಯಾ, ಕಾಂತಾರಾವ್, ಕೆ.ಎಸ್.ಅಶ್ವತ್, ಹರಿಣಿ, ನರಸಿಂಹರಾಜು, ರಾಜನಾಲ, ರಾಘವೇಂದ್ರರಾವ್, ರಮಾದೇವಿ ಮುಂತಾದವರುಅಭಿನಯಿಸಿದ ಈ ಚಿತ್ರದಲ್ಲಿ ಮದರಾಸು ಸಹೋದರಿಯರು ನೃತ್ಯ ಪ್ರದರ್ಶನ ನೀಡಿದ್ದರು. ರಾಜಕುಮಾರ್‌ಅರ್ಜುನನಾಗಿ, ವರಲಕ್ಷ್ಮಿಉಲೂಚಿಯಾಗಿ, ಕಾಂತಾರಾವ್…

ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘

ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘ ಆರ್.ನಾಗೇಂದ್ರರಾಯರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ‘ಆರ್.ಎನ್.ಆರ್.ಪಿಕ್ಚರ‍್ಸ್‘ ಲಾಂಛನದಲ್ಲಿ ತೆರೆಗೆ ತಂದ ಕಪ್ಪು ಬಿಳುಪು ಚಿತ್ರ ‘ವಿಜಯನಗರದ ವೀರಪುತ್ರ‘ ೧೯೬೧ರಲ್ಲಿ ತೆರೆಕಂಡಿತು. ನಾಗೇಂದ್ರರಾಯರ ಪುತ್ರ ಆರ್.ಎನ್.ಸುದರ್ಶನ್ ಚಿತ್ರರಂಗಕ್ಕೆ ಪದರ್ಪಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಸ್ವತಃಆರ್.ನಾಗೇಂದ್ರರಾಯರೇ ನಿರ್ದೇಶಿಸಿದ ಈ ಚಿತ್ರಕೆ ಅವರ ಮತ್ತೊಬ್ಬ ಪುತ್ರ ಆರ್.ಎನ್.ಕೃಷ್ಣಪ್ರಸಾದರು ವಿ.ಮನೋಹರ್‌ಅವರೊಂದಿಗೆ ಸೇರಿ ಛಾಯಾಗ್ರಹಣ ನೀಡಿದ್ದಾರೆ. ಎನ್.ಲಕ್ಷ್ಮಿನಾರಾಯಣ್ ಹಾಗೂ ವಿ.ಸೋಮಶೇಖರ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜಗುರುವರಾಯನ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಆತನ ಪುತ್ರ…

ಡಿಸೆಂಬರ್ 24 ಆಡಿಯೋ ಬಿಡುಗಡೆ

ಎಂಜಿ ಎನ್ ಪ್ರೊಡಕ್ಷನ್ ತಯಾರಾಗುತ್ತಿರುವ ಡಿಸೆಂಬರ್ 24 ಚಿತ್ರಕ್ಕೆ ದೇವು ಹಾಸನ್ ಇದೇ ಮೊದಲಬಾರಿಗೆ ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಅವರು ನಿರ್ಮಾಣ ಮಾಡಿರುವ ಚಿತ್ರ ಡಿಸೆಂಬರ್‌ 24. ಹಾರರ್, ಥ್ರಿಲ್ಲರ್, ಕಥಾನಕ ಹೊಂದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಟ ಶ್ರೀನಗರ ಕಿಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು. ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕಥೆ…

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ ಶ್ರೀಶೈಲ ಮಹಾತ್ಮೆಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದ ನಟಿ ಸಂಧ್ಯಾ ಮದರಾಸಿನ ಸ್ಟುಡಿಯೊದಲ್ಲಿಚಿತ್ರೀಕರಣ ನಡೆಯುತ್ತಿದ್ದ ವೇಳೆ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದರು. ಬೆಂಗಳೂರಿನ ಕಾನ್ವೆಂಟ್‌ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಬಾಲೆ ಚಿತ್ರೀಕರಣವನ್ನುಕುತೂಹಲದಿಂದ ನೋಡುತ್ತಾ ಕುಳಿತಿದ್ದಳು.ಬಾಲನಟಿಯಾಗಿನೃತ್ಯದ ಪಾತ್ರ ನಿರ್ವಹಿಸಬೇಕಾಗಿದ್ದ ಶಾಲಾ ಬಾಲಕಿಯೊಬ್ಬಳು ಅಂದಿನ ಚಿತ್ರೀಕರಣಕ್ಕೆಗೈರುಹಾಜರಾಗಿದ್ದುಚಿತ್ರದ ನಿರ್ಮಾಪರು ಹಾಗೂ ನಿರ್ದೇಶಕರಲ್ಲಿ ತಳಮಳ ತಂದಿತ್ತು. ನಿರ್ದೇಶಕಆರೂರು ಪಟ್ಟಾಭಿಯವರಕಣ್ಣಿಗೆಚಿತ್ರೀಕರಣ ವೀಕ್ಷಿಸುತ್ತಿದ್ದ ಬಾಲಕಿ ಕಾಣಿಸಿದಳು. ತಾಯಿ ಸಂಧ್ಯಾಅವರೊಂದಿಗೆ ಮಾತನಾಡಿ ಪಾತ್ರ ನಿರ್ವಹಿಸಲು ಸಮ್ಮತಿ ಪಡೆದು, ಬಣ್ಣ ಹಚ್ಚಿಸಿದರು. ಆ ಬಾಲಕಿ…

ಗಂಡುಲಿ ಚಿತ್ರದ ಟ್ರೈಲರ್ ಬಿಡುಗಡೆ

ಕೆಲವರ್ಷಗಳ ಹಿಂದೆ ಇಂಜಿನಿಯರ್ಸ್ ಎಂಬ ಚಿತ್ರ ಬಂದಿತ್ತು. ಅದರ ನಿರ್ದೇಶಕ ಹಾಗೂ ನಾಯಕನೂ ಆಗಿದ್ದ ವಿನಯ್ ರತ್ನಸಿದ್ಧಿ ಅವರೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ತೆರೆಗೆ ಬರಲು ಅಣಿಯಾಗಿ ನಿಂತಿರುವ ಈ ಚಿತ್ರದ ಹೆಸರು ಗಂಡುಲಿ. ‌ವಿನಯ್ ರತ್ನಸಿದ್ದಿ ಜೊತೆ ನಾಯಕಿಯಾಗಿ ಛಾಯಾದೇವಿ ನಟಿಸಿದ್ದು, ನಾಯಕನ ತಾಯಿಯ ಪಾತ್ರವನ್ನು ಹಿರಿಯ ಕಲಾವಿದೆ ಸುಧಾನರಸಿಂಹರಾಜು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹೆಚ್ಚು ಹೆಚ್ಚು ವೀಕ್ಷಣೆಯಾಗುವ ಮೂಲಕ ಜನರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರವನ್ನು ಬರುವ…

ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ

ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ ‘ಕಿತ್ತೂರು ಚೆನ್ನಮ್ಮ‘ ಬಿ.ಆರ್.ಪಂತುಲು ತಮ್ಮ ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸಿದ ಕಪ್ಪು ಬಿಳುಪು ಐತಿಹಾಸಿಕ ಚಿತ್ರ. ೧೯೬೧ರಲ್ಲಿ ತೆರೆಗೆ ಬಂದಿತು. ರಾಜಕುಮಾರ್ ಮೊದಲ ಬಾರಿಗೆ ಪಂತುಲು ಚಿತ್ರದಲ್ಲಿ ಅಭಿನಯಿಸಿದರು. ‘ಕಿತ್ತೂರು ಚೆನ್ನಮ್ಮ‘ನ ಪಾತ್ರದಲ್ಲಿ ಬಿ.ಸರೋಜಾದೇವಿ ಅಭಿನಯ ನೀಡಿದ್ದರು. ಇನ್ನೂ ಹರೆಯದ ವಯಸ್ಸಿನಲ್ಲಿದ್ದರೂ ಸರೋಜಾದೇವಿಯವರು ಪ್ರೌಢ ವಯಸ್ಸಿನ, ಗಂಭೀರ ಗುಣಗಳನ್ನು ಹೊಂದಿದ್ದ ಚೆನ್ನಮ್ಮನ ಪಾತ್ರದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿದ್ದರು. ರಾಜಕುಮಾರ್ ಕಿತ್ತೂರಿನ ರಾಜ ಮಲ್ಲಸರ್ಜನಾಗಿ ಅಭಿನಯಿಸಿದ್ದು, ರುದ್ರಾಂಬೆಯಾಗಿ…

ಡಿಸೆಂಬರ್ 18 ರಂದು ಗಂಡುಲಿ ಚಿತ್ರದ ಟ್ರೈಲರ್ ಬಿಡುಗಡೆ

‌‌‌‌‌ ವಿನಯ್ ರತ್ನಸಿದ್ದಿ ಅವರ ನಿರ್ದೇಶನವಿರುವ ಗಂಡುಲಿ ಚಿತ್ರವೀಗ ಬಿಡುಗಡೆಯ ಹಂತ ತಲುಪಿದ್ದು ಚಿತ್ರದ ಟ್ರೈಲರ್‌ ಇದೆ ಶನಿವಾರ ಬಿಡುಗಡೆಯಾಗಲಿದೆ. ಗಂಡುಲಿ ಚಲನಚಿತ್ರವು ಕುಟುಂಬ ಸಮೇತ ಕೂತು ನೋಡುವಂತ ಚಲನಚಿತ್ರವಾಗಿದ್ದು, ಇದು ಆಕ್ಶನ್, ಸಸ್ಪೆನ್ಸ್, ಕಾಮಿಡಿ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಇಂದ ಕೂಡಿದೆ. ಇದರಲ್ಲಿ 5 ಆಕ್ಶನ್ಗಳಿದ್ದು, 3 ಹಾಡುಗಳಿದ್ದು. ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸಿದ್ದಾರೆ. ಟೈಟಲ್ ಸಾಂಗ್ ಅನ್ನು “ಅನಿರುದ್ ಶಾಸ್ತ್ರಿ” ರವರು ಹಾಡಿದ್ದು, ಡುಯೆಟ್ ಸಾಂಗ್ ಅನ್ನು “ವಿಜಯ್ ಪ್ರಕಾಶ್”…

ರಾಜ್‌ಕುಮಾರ್ ಅತ್ಯುದ್ಬುತ ಅಭಿನಯದ ಭಕ್ತಕನಕದಾಸ

ರಾಜ್‌ಕುಮಾರ್ ಅತ್ಯುದ್ಬುತ ಅಭಿನಯದ ಭಕ್ತಕನಕದಾಸ ಶ್ಯಾಮಪ್ರಸಾದ್ ಮೂವೀಸ್ ಲಾಂಛನದಲ್ಲಿ ೧೯೬೦ರಲ್ಲಿ ತೆರೆ ಕಂಡ ಕಪ್ಪು-ಬಿಳುಪು ಭಕ್ತಿಪ್ರಧಾನ ಚಿತ್ರ ಭಕ್ತ ಕನಕದಾಸ ವೈ.ಆರ್.ಸ್ವಾಮಿ ನಿರ್ದೇಶಿಸಿದರು. ಬೆಂಗಳೂರಿನ ಅಬಕಾರಿ ಕಂಟ್ರಾಕ್ಟರ್ ಡಿ.ಆರ್.ನಾಯ್ಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಾಜಕುಮಾರ್ ಅತ್ಯುತ್ತಮ ಅಭಿನಯದ ಉತ್ಕೃಷ್ಟ ಚಿತ್ರವಾದ ಭಕ್ತ ಕನಕದಾಸ ಚಿತ್ರ ಕೇಂದ್ರ ಸರ್ಕಾರದ ಅರ್ಹತಾ ಪ್ರಶಸ್ತಿ ಪಡೆಯಿತು. ರಾಜಕುಮಾರ್ ಅವರೊಂದಿಗೆ ಉದಯಕುಮಾರ್, ಕೃಷ್ಣಕುಮಾರಿ, ಕೆ.ಎಸ್.ಅಶ್ವತ್ಥ್, ಹೆಚ್.ರಾಮಚಂದ್ರಶಾಸ್ತ್ರಿ, ಜಯಾ, ಸೋರಟ್ ಅಶ್ವತ್ಥ್, ಸಿ.ವಿ.ಶಿವಶಂಕರ್, ರತ್ನಾಕರ್, ವಾಸುದೇವ ಗಿರಿಮಾಜಿ, ಎಂ.ಎಸ್.ಸುಬ್ಬಣ್ಣ, ಜಯಶ್ರೀ, ಲಕ್ಷ್ಮೀದೇವಿ ಅಭಿನಯಿಸಿದರು.…

1 2 3 4 5 8
error: Content is protected !!