Browsing: ರಾಷ್ಟ್ರೀಯ

ರಾಷ್ಟ್ರೀಯ

ಆಯಾ ಪ್ರದೇಶದ ಕಾನೂನು ಪಾಲನೆ-ಗೂಗಲ್

ನವದೆಹಲಿ,ಮೇ,೨೭:ಆಯಾ ಪ್ರದೇಶದ ಕಾನೂನುಗಳನ್ನು ಪಾಲಿಸಲು ನಾವು ಸಿದ್ದರಿದ್ದೇವೆ ಅಲ್ಲದೆ ಸರ್ಕಾರಗಳು ಜನತೆ ಉತ್ತಮ ಸಂಬಂಧದೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಂದರ್ ಪಿಚೈ ತಿಳಿಸಿದ್ದಾರೆ ಕಂಪನಿ ಯಾವಾಗಲೂ ಸರ್ಕಾರದ ಕೋರಿಕೆಗಳನ್ನು ಪರಿಗಣಿಸುತ್ತದೆ ಅಲ್ಲದೆ ಸ್ಪಷ್ಟವಾದ ಪಾರದರ್ಶಕ ವರದಿಗಳನ್ನು ಹೊಂದಿದೆ ಎಂದು ಏಷ್ಯಾ ಪೆಸಿಫಿಕ್‌ನ ಆಯ್ದ ವರದಿಗಾರರ ಜತೆ ನಡೆದ ವರ್ಚುವಲ್ ಕಾನ್ಫೆರೆನ್ಸ್‌ನಲ್ಲಿ ಅವರು ತಿಳಿಸಿದ್ದಾರೆ.ಉಚಿತ ಮತ್ತು ಮುಕ್ತ ಇಂಟರ್‌ನೆಟ್ ಮೌಲ್ಯವನ್ನು ನಾವು ಅರಿತಿದ್ದೇವೆ. ಜತೆಗೆ, ಇದರ ಪ್ರಯೋಜನಗಳ ಅರಿವು ಇದೆ. ಇದೇ ನೀತಿ ಅನುಸರಿಸಬೇಕು ಎಂದು…

ದೇಶದಲ್ಲಿ ಇಳಿಕೆ ಕಂಡ ಕೊರೊನಾ ಪ್ರಕರಣ

ನವದೆಹಲಿ, ಮೇ,26: ಕೋವಿಡ್ ನಿರ್ವಹಣೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಗೆದುಕೊಂಡಿರುವ ಕಠಿಣ ಕ್ರಮ ಕೈಗೊಂಡಿರುವ ಕಾರಣ ಈಗ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 2,08,92 ಮಂದಿಗೆ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,08,921 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,71,57,795 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,157…

ಒಡಿಶಾಕ್ಕೆ ಯಸ್ ಚಂಡಮಾರುತ ,11 ಲಕ್ಷ ಜನರ ಸಿಫ್ಟ್

ಭುವನಶ್ವರ,ಮೇ,26:ಯಸ್ ಚಂಡಮಾರುತ ಇಂದು ಮಧ್ಯಾಹ್ನ ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಭೂ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ . ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ಅವರು ಬುಧವಾರ ಬೆಳಗ್ಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ‘ಯಸ್‌’ ಚಂಡಮಾರುತ ಮಧ್ಯಾಹ್ನದ ವೇಳೆಗೆ ಭೂಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದೆ. ಸದ್ಯ ಗಂಟೆಗೆ 130 ರಿಂದ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಗಾಳಿಯ…

ದೇಶದಲ್ಲಿ ಕೊರೊನಾ ಇಳಿಕೆ,೧,೯೬ ಲಕ್ಷ ಹೊಸ ಪ್ರಕರಣ,೩,೫೧೧ ಸಾವು

ನವದೆಹಲಿ,ಮೇ,೨೫: ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು ೧,೯೬,೪೨೭ ಜನರಲ್ಲಿ ಸೋಂಕು ದೃಡಪಟ್ಟಿದ್ದು,೩,೫೧೧ ಜನ ಸಾವನ್ನಪ್ಪಿದ್ದಾರೆ. ಕಳೆದ ಹಲವು ದಿನಗಳಿಂದ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತು ಆದರೆ ಕಳೆದ ೨೪ ಗಂಟೆಯಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿರುವುದು ಒಂದಿಷ್ಟು ನೆಮ್ಮದಿ ತಂದಿದೆ. ಹಲವು ದಿನಗಳಿಂದ ೪ ಲಕ್ಷದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಇದೀಗ ೨ ಲಕ್ಷಕ್ಕಿಂತ ಕೆಳಗೆ ಇಳಿದಿರುವುದು, ೨ನೇ ಅಲೆಯ ಇಳಿಕೆಯ…

ನಾಳೆ ಒಂದೇ ದಿನ ಚಂದ್ರಗ್ರಹಣ,ಬ್ಲಡ್ ಮೂನ್ ಗೋಚರ!

ನವದೆಹಲಿ, ಮೇ ೨೫: ನಾಳೆ ಈ ವರ್ಷದ ಮೊದಲ ಚಂದ್ರಗ್ರಹಣ ಗೋಚರಿಸಲಿದ್ದು ಇದರ ಜೊತೆಗೆ ಬ್ಲಡ್ ಮೂರನ್ ಕೂಡ ಗೋಚರವಾಘಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ಹುಣ್ಣಿಮೆಯ ದಿನವಾದ ನಾಳೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ ಹಾಗೆಯೇ ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನು ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭಿಸಲಿದೆ ಎಂದು…

ರಾಜಕಾರಣಿಗಳಿಂದ ಔಷಧಗಳ ದಾಸ್ತಾನುಗಳ ಸಂಗ್ರಹ; ತನಿಖೆಗೆ ಕೋರ್ಟ್ ಸೂಚನೆ

ನವದೆಹಲಿ,ಮೇ,೨೪: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಏನೆಲ್ಲಾ ಔಷಧಿ ತಾರತಮ್ಯಗಳು ನಡೆಯುತ್ತಿವೆ ಎನ್ನುವುದಕ್ಕೆ ದೆಹಲಿ ಹೈಕೋರ್ಟ್ ನೀಡಿರುವ ಸೂಚನೆಯೇ ಇದಕ್ಕೆ ನಿದರ್ಶನ ಎನಿಸುತ್ತದೆ ಕೋವಿಡ್-೧೯ ಚಿಕಿತ್ಸೆಗೆ ಔಷಧ ಕೊರೆತೆಗೆ ಪ್ರಮುಖ ಕಾರಣ ರಾಜಕಾರಣಿಗಳು ತಮ್ಮ ಬಳಿ ಸಗಟು ರುಪದಲ್ಲಿ ಖರೀದಿಸಿ ಸಂಗ್ರಹಿಸಿ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಈ ಬಗ್ಗೆ ತನಿಖೆಗೆ ದೆಹಲಿ ಹೈಕೋರ್ಟ್ ಔಷಧ ನಿಯಂತ್ರಕರಿಗೆ ಆದೇಶ ನೀಡಿದೆ. ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತಮಗೆ ಗೊತ್ತಿದ್ದವರಿಗೆ ಔಷಧ ವಿತರಿಸುತ್ತಿರಬಹುದು ಎಂದೂ ಕೋರ್ಟ್ ಅಭಿಪ್ರಾಯಪಟ್ಟಿತು. ಇದೇ ಸಂದರ್ಭದಲ್ಲಿ…

ದ್ವಿತೀಯ ಪಿಯು ಪರೀಕ್ಷೆಗೆ ರಾಜ್ಯಗಳ ಒಲವು-ಜೂನ್ ೧ಕ್ಕೆ ಅಂತಿಮ ತೀರ್ಮಾನ

ನವದೆಹಲಿ,ಮೇ,೨೪:ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಬಹುತೇಕ ಎಲ್ಲಾ ರಾಜ್ಯಗಳು ಸಹಮತ ವ್ಯಕ್ತಪಡಿಸಿರುವ ಹಿನ್ನೆಲಯಲ್ಲಿ ಜೂನ್ ೧ಕ್ಕೆ ಈ ಕುರಿತು ಅಂತಿಪ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಭಾನುವಾರ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಸಬೇಕೆ ಅಥವಾ ಶಾಲಾ ಮಟ್ಟದಲ್ಲೇ ಪರೀಕ್ಷೆನಡೆಸಿ ವಿದ್ಯಾರ್ಥಿಗಳನ್ನು ಅಂಕಗಳ ಆಧಾರದ ಮೇಲೆ ತೇರ್ಗಡೆ ಮಾಡಬೇಕೆ ಎಂಬ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸಹಮತ ಬಾರದ ಕಾರಣ ಯವುದೆ ನಿರ್ದಾರಕ್ಕೆ ಬಂದಿಲ್ಲವಾದರೂ ಕೂಡ ಬಹುತೇಕ ರಾಜ್ಯಗಳು ಅಂತಿಮ ಪರೀಕ್ಷೆ ಬರೆಸುವುದೇ ಒಳಿತ ಎನ್ನುವ ಮಾತುಗಳು ಕೇಳಿ ಬಂದ ಕಾರಣ…

ಯಾಸ್ ಚಂಡಮಾರುತ-ಅಪಾಯಕಾರಿ ಪ್ರದೇಶದ ಜನರ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ

ನವದೆಹಲಿ, ಮೇ ೨೩: ಯಾಸ್ ಚಂಟಮಾರುತದಿಂದಾಗಿ ಅಪಾಯ ಉಂಟಾಗಬಹುದಾದ ಸ್ಥಳದಲ್ಲಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಯಾಸ್ ಚಂಡಮಾರುತ ಎದುರಿಸುವ ಸಂಬಂಧ ನಡೆದ ಪೂರ್ವಸಿದ್ದತಾ ಪರಿಶೀಲನಾ ಸಭೆಯಲ್ಲಿ ಅವರು ಹೆಚ್ಚಿನ ಅಪಾಯಹೊಂದುವ ಸ್ಥಳದಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕು , ಹೀಗೆ ಸ್ಥಳಾಂತರ ಮಾಡಿಕೊಳ್ಳುವುದನ್ನು ರಾಜ್ಯ ಸರ್ಕಾರಗಳೊಂದಿಗೆ ಸೂಕ್ತರೀತಿಯಲ್ಲಿ ಸಮನ್ವಯ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ ಇನ್ನು ವಿದ್ಯುತ್ ಸಂಪರ್ಕದ ಕಡಿತದ ಅವಧಿಯ ಅಗತ್ಯದ ಬಗ್ಗೆಯೂ ಪ್ರಧಾನಿ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಜೊತೆಗೆ…

ಅಸ್ಸಾಂ ನಲ್ಲಿ ಭದ್ರತಾ ಪಡೆ ಗುಂಡಿಗೆ ಆರು ಉಗ್ರರು ಬಲಿ

ನವದೆಹಲಿ, ಮೇ ೨೩: ಗಡಿ ಭದ್ರತಾ ಸಿಬ್ಬಂದಿಮತ್ತು ದಿಮಸಾ ನ್ಯಾಷನಲ್ಲಿಬರೇಷನ್ ಆರ್ಮಿನಡುವೆ ನಡೆದ ಗುಂಡಿನಚಕಮಕಿಯಲ್ಲಿಆರು ಉಗ್ರರು ಮೃತ ಪಟ್ಟ ಘಟನೆ ಅಸ್ಸಾಂ ಮತ್ತು ನಾಗಲ್ಯಾಂಡ್ ಗಡಿ ಪ್ರದೇಶದಲ್ಲಿ ಸಂಭವಿಸಿದೆ. ಅಸ್ಸಾಂ ರೈಫಲ್ಸ್ ಪರ್ಸನಲ್ ಮತ್ತು ಪೊಲೀಸರು ಪಶ್ಚಿಮ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೋವಲಾ ತಿಳಿಸಿದ್ದಾರೆ. ಉಗ್ರರು ಮತ್ತು ಭದ್ರತಾ ಪಡೆ ಸಿಬ್ಬಂದಿ ನಡುವೆ ಮಿಚಿಬೈಲಂಗ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ…

ದೇಶದಲ್ಲಿ ಮತ್ತೇ ಏರಿಕೆ ಕಂಡ ಕೋವಿಡ್ ಸಂಖ್ಯೆ

ನವದೆಹಲಿ,ಮೇ,೨೩ ದೇಶದಲ್ಲಿ ಕಳೆದ ೩೪ ಗಂಟೆಯಲ್ಲಿ ೨,೪೦ ಲಕ್ಷ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು ೩,೭೪೧ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇಂದು ಬಿಡುಗಡೆ ಮಾಡಿದ ಕೋವಿಡ್ ಸೋಂಕಿತರ ವಿವರದಲ್ಲಿ ಸದ್ಯ ಕೋವಿಡ್ ಸೋಂಕಿತರ ಸಂಖ್ಯೆ ಕೊಂಚ ಹೆಚ್ಚಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨,೬೫,೩೦,೧೩೨ಕ್ಕೆ ಏರಿಕೆಯಾಗಿದೆ. ಆ ಪೈಕಿ ೨,೯೯,೨೬೬ ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಸೋಂಕು ಕಾಣಿಸಿಕೊಂಡಾಗಿನಿಂದ ಇದುವರೆಗೆ ೨,೩೪,೨೫,೪೬೭ ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ ೨೮,೦೫,೩೯೯ ಸಕ್ರಿಯ ಪ್ರಕರಣಗಳಿವೆ.:ದೇಶದಲ್ಲಿ ಈವರೆಗೆ…

ಅಲೋಪಥಿ ವಿರುದ್ಧ  ಹೇಳಿಕೆ:  ರಾಮ್ ದೇವ್ ವಿರುದ್ಧ ಕ್ರಮಕ್ಕೆ ಐಎಂಎ ಆಗ್ರಹ

ನವದೆಹಲಿ,ಮೇ,22: ಅಲೋಪತಿ ವೈದ್ಯ ಪದ್ಧತಿಯನ್ನು ಅವಿವೇಕಿ ವಿಜ್ಞಾನ ಪದ್ದತಿ ಎಂದು ಹೇಳಿಕೆ ನೀಡುತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಗ್ರಹಿಸಿದೆ. ಬಾಬಾ ರಾಮ್ ದೇವ್ ವಿರುದ್ಧ ಎಪಿಡೆಮಿಕ್ ಡಿಸೀಸಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು, ಬಾಬಾ ರಾಮ್ ದೇವ್ ಅಲೋಪತಿ ಬಗ್ಗೆ ತಿಳಿವಳಿಕೆ ಇಲ್ಲದೇ ನೀಡುತ್ತಿರುವ ಹೇಳಿಕೆಗಳು ಸುಶಿಕ್ಷಿತ ಜನರಿಗೆ, ಅವರ ಬಲೆಗೆ ಬೀಳುತ್ತಿರುವ ಜನರಿಗೆ ಅಪಾಯವಿದೆ ಎಂದು ಐಎಂಎ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ…

ಮೇ ೨೬ ಕ್ಕೆ ಯಾಸ್ ಚಂಡಮಾರುತ ಅಬ್ಬರ; ಹೈ ಅಲಾರ್ಟ್ ಘೋಷಣೆ

ಕೊಲ್ಕತ್ತಾ ,ಮೇ ,೨೨: ತೌತೆ ಚಂಡಮಾರುತದ ಅವಾಂತರ ನಂತರ ಈ ಮತತೊಂದು ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ ಮೇ ೨೬ ರಿಂದ ಯಾಸ್ ಚಂಡಮಾರುತ ಈಗ ಕರಾವಳಿ ಪ್ರದೇಶಗಳಲ್ಲಿ ಅಪ್ಪಳಿಸುವ ಸುಳಿವನ್ನು ನೀಡಿರುವ ಅವಮಾನ ಇಲಾಖೆಮೇ ೨೩ ರಿಂದ ಇದು ಆರಂಭವಾಗಲಿದ್ದು ಮೇ ೨೬ ರವರೆಗೂ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಈ ಚಂಡಮಾರುತದಿಮದ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಸೂಕ್ತ ಎಚ್ಚರಿಕೆಯನ್ನು ನೀಡಿದೆ ಅಲ್ಲದೆ ಹೈ ಅಲಾರ್ಟ ಕೂಡ ಘೋಷಿಸಿದೆ. ಪಶ್ಚಿಮ ಬಂಗಾಳ, ಒರಿಸ್ಸಾ,…

ದೊಡ್ಡಸವಾಲಾಗಿರುವ ಬ್ಲ್ಯಾಕ್ ಫಂಗಸ್ ನಿರ್ವಹಣೆಗೆ ಸಜ್ಜಾಗಲು ಮೋದಿ ಕರೆ

ಕೊರೊನಾ ನಮ್ಮಿಂದ ಹಲವರನ್ನು ಕಿತ್ತುಕೊಂಡಿದೆ; ಭಾವುಕರಾದ ಮೋದಿ ನವದೆಹಲಿ, ಮೇ ೨೧:ಕೊರೊನಾ ಎರಡನೇ ಅಲೆ ನಮಗೆ ಅತೀ ದೊಡ್ಡ ಸವಾಲನ್ನೇ ಒಡ್ಡಿದೆ ಅಲ್ಲದೆ ಇದೇ ವೇಳೆ ಕೊರೊನಾ ರೋಗಿಗಳಲ್ಲಿ ಕಾನಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಮತ್ತೊಂದು ಸವಾಲನ್ನು ಹೊಡ್ಡಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾಧ ವ್ಯಕ್ತಪಡಿಸಿದರು. ಕೊರೊನಾ ನಿರ್ವಹಣೆ ಸಂಬಂಧ ಶುಕ್ರವಾರ ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಆರೋಗ್ಯ ಕಾರ್ಯಕರ್ತರು, ವೈದ್ಯರೊಂದಿಗೆ ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು. ಕೊರೊನಾ ನಿರ್ವಹಣೆಯಲ್ಲಿ…

ಮಹಾರಾಷ್ಟ್ರದ ಎಟಪಲ್ಲಿ ಅರಣ್ಯದಲ್ಲಿ 13 ನಕ್ಸಲರ ಹತ್ಯೆ

ಭುವನೇಶ್ವರ,ಮೇ,21:ಕಮಂಡೊ ಪೊಲೀಸರಿಗೂ ನಕ್ಸಲರ ಮಧ್ಯ ನಡೆದ ಗುಂಡಿನ ದಾಳಿಯಲ್ಲಿ 13 ನಕ್ಸಲರು ಹತರಾಗಿದ್ದಾರೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಸುಕಿನ ಜಾವ ನಡೆದ ಭಾರೀ ಎನ್ ಕೌಂಟರ್ ನಲ್ಲಿ ಈ ಘಟನೆ ಜರುಗಿದೆ. ಗಗಡ್ಚಿರೋಲಿ ಅರಣ್ಯ ಪ್ರದೇಶದ ಎಟಪಲ್ಲಿ ಎಂಬಲ್ಲಿ ಸಿ-60 ಕಮಾಂಡೊ ಪೊಲೀಸರು ಮತ್ತು ನಕ್ಸಲೀಯರ ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ 13 ಮಂದಿ ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಗಡ್ಚೊಲಿ ಜಿಲ್ಲೆಯ ಡಿಐಜಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪಿಣರಾಯಿ

ತಿರುವನಂತಪುರಂ, ಮೇ 20: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಪಕ್ಷ ಭರ್ಜರಿ ಗೆಲುವು ಸಾಧಿಸಿದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ರಚನೆ ಆಗಿದ್ದು ಗುರುವಾರ ಮಧ್ಯಾಹ್ನ 3 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಕೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಪಿಣರಾಯಿ ವಿಜಯನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ 500 ಮಂದಿ ಭಾಗವಹಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿಎಂ ಜೊತೆಗೆ 20 ಶಾಸಕರು ರಾಜ್ಯ ಸಂಪುಟ ಸಚಿವರಾಗಿ ಪದಗ್ರಹಣ ಮಾಡಿದರು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಾರ್ಗಸೂಚಿ ಹಿನ್ನೆಲೆ ನಿಗದಿತ ಪ್ರಮಾಣದ ಸದಸ್ಯರಿಗೆ ಮಾತ್ರ ಪ್ರಮಾಣವಚನ…

ಮೇ೨೩ ರಿಂದ ಇನ್ನಷ್ಟು ತೀವ್ರವಾಗಲಿದೆ ತೌತೆ ಚಂಡಮಾರುತ

ಬೆಂಗಳೂರು ,ಮೇ, ೨೦: ತೌತೆ ಚಂಡಮಾರುತದ ಪರಿಣಾಮ ಇನ್ನೂ ನಿಂತಿಲ್ಲ ಮತ್ತೊಂದು ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಯಾಸ್ ಚಂಡಮಾರುತ ಮೇ ೨೩ ರಿಂದ ಅಬ್ಬರಿಸಲಿದ್ದು ನಾಳೆಯಿಂದ ಮೇ ೨೬ ರವರೆಗೆ ಭಾರೀ ಮಳೆಯಾಗುವ ಸಾದ್ಯಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಬಂಗಾಳ,ಒರಿಸ್ಸಾಮ ತಮಿಳುನಾಡು,ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತ ಆರ್ಭಟವಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮೇ ೨೩ರಿಂದ ೨೬ರವರೆಗೆ ಯಾಸ್ ಚಂಡಮಾರುತ ಪಶ್ಚಿಮ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಲಿದೆ. ಮೇ ೨೩ರಂದು ಈ ಚಂಡಮಾರುತ…

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕೋರಿ ಸುಪ್ರೀಂಗೆ ಅರ್ಜಿ

ನವದೆಹಲಿ,ಮೇ:ಕೇದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ತೆರೆಮರೆ ಪ್ರಯತ್ನ ನಡೆಸುತ್ತಲೆ ಇದೆ ಈಗ ಇದಕ್ಕೆ ಪೂರಕವಾಗಿ ವಕೀಲರೊಬ್ಬರು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ವಿಧಾನಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ಸರ್ಕಾರವು ನಡೆಸಿದ ‘ಹತ್ಯಾಕಾಂಡ’ದಲ್ಲಿ ಬಿಜೆಪಿಯ 16 ಕಾರ್ಯಕರ್ತರು ಅಸುನೀಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮೇ 2ರ ನಂತರ ನಡೆದಿರುವ ಬಿಜೆಪಿ ಬೆಂಬಲಿಗರ ಹತ್ಯೆಗಳ ಕುರಿತ ತನಿಖೆ ನಡೆಸಲು ವಿಶೇಷ ತನಿಖಾ…

ಗುಜರಾತ್‌ಗೆ ೧ಸಾವಿರ ಕೋಟಿ ಪರಿಹಾರ ಘೋಷಿಸಿದ ಮೋದಿ

ಅಹಮದಬಾದ್,ಮೇ,೧೯:ಗುಜರಾತ್‌ನಲ್ಲಿ ತೌತೆ ಚಂಡಮಾರುತದ ಅಬ್ಬರದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಡೆಸಿದರು. ಈ ವೇಳೆ ಅವರು ರಾಜ್ಯದಲ್ಲಿ ತಕ್ಷಣದ ಪರಿಹಾರ ಕ್ರಮಗಳಿಗಾಗಿ ೧,೦೦೦ ಕೋಟಿ ರೂ ಘೋಷಿಸಿದ್ದಾರೆ. ಇದರ ಜೊತೆಗೆ ಅವರು ಚಂಡ ಮಾರುತದಿಂದ ಪ್ರಾಣಕಳೆದುಕೊಂಡವ ಸಂತ್ರಸ್ತ ಕುಟುಂಬಗಳಿಗೆ ೨ ಲಕ್ಷ, ಗಾಯಗೊಂಡವರಿಗೆ ೫೦ ಸಾವಿರ ಪರಿಹಾರ ಹಣ ಘೋಷಿಸಿದ್ದಾರೆ. ಗುಜರಾತ್ ಮತ್ತು ಡಿಯುನಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಪ್ರಧಾನಿ ಭೇಟಿ ನೀಡಿದರು. ಈ ವೇಳೆ ಅವರು…

ನಾರದ ವರ್ಗಾವಣೆ ಪ್ರಕರಣ; ಮಮತಾ ಬ್ಯಾನರ್ಜಿಯನ್ನು ಪ್ರತಿವಾದಿ ಮಾಡಿದ ಸಿಬಿಐ

ಕೋಲ್ಕತಾ,ಮೇ೧೯: ನಾರದ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಪಶ್ಚಿಮ ಬಂಗಾಳದಿಂದ ವರ್ಗಾವಣೆ ಮಾಡುವಂತೆ ಕೋರಿ ಕೋಲ್ಕತ್ತಾ ಹೈಕೋರ್ಟ್‌ಗೆ ಸಿಬಿಐ ಅರ್ಜಿ ಸಲ್ಲಿಸಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮೊಲಾಯ್ ಘಟಕ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಆಕ್ಟಿಂಗ್ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ನೇತೃತ್ವದ ವಿಭಾಗೀಯ ಪೀಠವು ಬುಧವಾರ ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸಲು ನಿರ್ಧರಿಸಿದೆ. ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಸಚಿವರಾದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್, ಟಿಎಂಸಿ ಶಾಸಕ ಮದನ್…

ತೌತೆ ಚಂಡಮಾರುತಕ್ಕೆ ಮಹಾರಾಷ್ಟ್ರ,ಗುಜರಾತ್‌ನಲ್ಲಿ ೩೩ ಸಾವು

ನವದೆಹಲಿ,ಮೇ,೧೯: ಕಳೆದ ಎರಡು ದಿನಗಳಿಂದ ತೌತೆ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದು ಎರಡು ರಾಜ್ಯಗಳಲ್ಲಿ ಒಟು ೩೩ ಮಂದಿ ಸಾವನ್ನಪ್ಪಿದ್ದಾರೆ ೧೦೦ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ, ಸೋಮವಾರ ಬೆಳಗಿನಿಂದಲೂ ಆರಂಭವಾಗಿದ್ದು ಈ ಚಂಡಮಾರುತದ ತೀವ್ರತೆ ಈ ಎರಡು ರಾಜ್ಯಗಳ ಕಡಲ ತೀರದಲ್ಲಿ ದೈತ್ಯ ಅಲೆಗಳಿಗೆ ಕೆಲವು ಐತಿಹಾಸಿಕ ಸ್ಮಾರಕಗಳು ಹಾನಿಗೊಳಗಾಗಿವೆ. ಮಂಗಳವಾರ, ಮಹಾರಾಷ್ಟ್ರ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ಗಾಳಿಗೆ ಎದ್ದ ಸಮುದ್ರದ ದೈತ್ಯ ಅಲೆಗಳು ಗೇಟ್‌ವೇ ಆಫ್ ಇಂಡಿಯಾ,…

1 6 7 8 9
error: Content is protected !!