Girl in a jacket

Author kendhooli_editor

ಪೆಟ್ರೋಲ್ ಬೆಲೆ‌ ಏರಿಕೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ; ಡಿಕೆಶಿ

ರಾಮನಗರ,ಜೂ,05:ಜನವರಿಯಿಂದ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದರು. ರಾಮನಗರ ಜಿಲ್ಲೆಯ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಇಂದು ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹100, ಅಡುಗೆ ಎಣ್ಣೆ ಬೆಲೆ ಲೀಟರ್ ₹220 ತಲುಪಿದೆ.…

ಕೊರೊನಾ ಪ್ಯಾಕೇಜ್:ಮೊದಲ ಹಂತದ ಕಂತಿನ ೭೪೯.೫೫ ಕೋಟಿ ರೂ ಬಿಡುಗಡೆ

ಬೆಂಗಳೂರು ,ಜೂ,೦೫: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್‌ನ ಮೊದಲ ಕಂತಿನ ೭೪೯.೫೫ ಕೋಟಿ ರೂಗಳ ಮೊತ್ತದ ಹಣವನ್ನು ಇಂದು ಬಿಡುಗಡೆ ಮಾಡಲಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಾಧನವನ್ನು ನೇರವಾಗಿ ಅವರುಗಳ ಬ್ಯಾಂಕ್‌ಖಾತೆಗಳಿಗೆ ಜಮಾ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ , ಖಾತೆಗೆ ಕಟ್ಟಡ ಕಾರ್ಮಿಕರಿಗೆ ತಲಾ ೩…

ಕೊರೊನಾ ಸಂದರ್ಭದಲ್ಲೂ ಲೋಕೋಪಯೋಗಿ ಇಲಾಖೆ ಶೇ೯೯ ಸಾಧನೆ

ಬೆಂಗಳೂರು,ಜೂ.೫: ಕೊರೊನಾ ಸಂಕಷ್ಟದಲ್ಲೂ ಇಲಾಖೆ ೨೦೨೦-೨೧ ಸಾಲಿನಲ್ಲಿ ೧೦,೮೯೩ ಕೋಟಿ ಅನುದಾನದಲ್ಲಿ ೧೦,೭೪೩ ಕೋಟಿ ಆರ್ಥಿಕ ಪ್ರಗತಿ (ಶೇ ೯೯) ಸಾಧಿಸಿದೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಲೋಕೋಪಯೋಗಿ ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದರು ಶನಿವಾರ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘೨೦೧೯-೨೦ ಸಾಲಿನಲ್ಲಿ ೯,೦೩೩ ಕೋಟಿ ೮,೭೮೮ ಕೋಟಿ ಆರ್ಥಿಕ ಪ್ರಗತಿ (ಶೇ ೯೭) ಪ್ರಗತಿ ಸಾಧಿಸಲಾಗಿತ್ತು’ ಎಂದರು.ವಿವಿಧ ಯೋಜನೆಗಳಡಿ ಒಟ್ಟಾರೆ ೧೨೧೨೫ ಕಿಮೀ ರಸ್ತೆ ಅಭಿವೃದ್ಧಿಗೆ ? ೧೨,೧೨೨ ಕೋಟಿ ವೆಚ್ಚ ಮಾಡಲಾಗಿದೆ.…

ಸದ್ದಿಲ್ಲದೆ ವಿವಾಹವಾದ ನಟಿ ಯಾಮಿ ಗೌತಮ್

ಕೊರೊನಾ ಲಾಕ್‌ಡೌನ್ ಈ ಸಂದರ್ಭದಲ್ಲಿ ಸದ್ದಿಲ್ಲದೆ ವಿವಾಹಗಳು ನಡೆಯುತ್ತಿವೆ. ಹೌದು ಮೊನ್ನೆ ನಟಿ ಪ್ರಣೀತಾ ವಿವಾಹವಾಗಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಈಗ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದ ಯಾಮಿ ಗೌತಮ್ ಕೂಡ ಸದ್ದಿಲ್ಲದೆ ಮದುವೆಯಾಗಿದ್ದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಾಲಿವುಡ್‌ನ ‘ಉರಿ’ ಚಿತ್ರಕ್ಕೆ ನಿರ್ದೇಶನ ಮಾಡಿ ಭಾರಿ ಯಶಸ್ಸು ಕಂಡ ನಿರ್ದೇಶಕ ಆದಿತ್ಯ ಧಾರ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾಮಿ ಮದುವೆ ಆಗುತ್ತಾರೆ ಎಂಬ ಸುಳಿವು…

ಶಿಲ್ಪಾ ರಾಜೀನಾಮೆ ಕುರಿತು ಸೋಮವಾರ ನಿರ್ಧಾರ?

ಮೈಸೂರು,ಜೂ,೦೫: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿರುವ ಮುಖ್ಯಕಾರ್ಯದರ್ಶಿ ಈ ಕುರಿತು ಸೋಮವಾರ ನಿರ್ಧಾರ ಮಾಡುವ ಸಾಧ್ಯತೆಗಳಿವೆ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಶಿಲ್ಪಾ ಅವರು ರಾಜೀನಾಮೆ ಸಲ್ಲಿಸಿದ್ದರು ಈ ಕುರಿತು ನಿನ್ನೆ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಇಬ್ಬರು ಅಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ್ದರು. ಈ ವೇಳೆ ಶಿಲ್ಪಾ ನೀಡಿದ ರಾಜೀನಾಮೆಯನ್ನು ಪಡೆದಿದ್ದ ರವಿಕುಮಾರ್ ವರು ಮುಖ್ಯಮಂತ್ರಿ ಅವರಿಗೆ ಈ ಇಬ್ಬರು ಅಧಿಕಾರಿಗಳ ಕುರಿತು ವರದಿ ಸಲ್ಲಿಸಿ ಆ ನಂತರ ಮೈಸೂರಿನಲ್ಲಿ ಐಎಎಸ್…

ಭಾರತದಲ್ಲಿ ಇಳಿಮುಖಕಾಣುತ್ತಿರುವ ಕೋವಿಡ್-೧೯

ನವದೆಹಲಿ,ಜೂ, ೦೫: ಸದ್ಯ ದೇಶದಲ್ಲಿ ದಿನ ದಿನ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಒಂದು ರೀತಿ ನಿಟ್ಟುಸಿರು ಬಿಟ್ಟಂತಾಗಿದೆ.ಕಳೆದ ೨೪ ಗಂಟೆಯಲ್ಲಿ ೧,೨೦,೫೨೯ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ೩,೩೮೦ ಮಂದಿ ಮೃತಪಟ್ಟಿದ್ದು, ಶುಕ್ರವಾರ ಒಂದೇ ದಿನ ೧,೯೭,೮೯೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಹಾಗೆಯೇ ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ೨,೮೬,೯೪,೮೭೯ಕ್ಕೆ ಏರಿಕೆಯಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು ೨,೬೭,೯೫,೫೪೯ ಮಂದಿ ಗುಣಮುಖರಾಗಿದ್ದಾರೆ. ಹೊಸ ಸೋಂಕಿತರ ಭಾರೀ ಇಳಿಕೆ ಕಾಣುತ್ತಿರುವುದು ದೇಶದ ಜನರಲ್ಲಿ…

ಕೊರೊನಾ ಉಲ್ಬಣಕ್ಕೆ ಸರ್ಕಾರದ ಗೊಂದಲವೇ ಕಾರಣ:ಅಮಥ್ರ್ಯಸೇನ್

ಮುಂಬೈ,ಜೂ.೫: ಇಷ್ಟೊಂದು ದೊಡ್ಡ ಮಟ್ಟದ ಕೊರೊನಾ ಉಲ್ಬಣಕ್ಕೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಗೊಂದಲವೇ ಕಾರಣ ಎಂದು ಎಂದು ನೋಬಲ್ ಪ್ರಶಸ್ತಿ ಪುರಸ್ಕೃತ ಆರ್ಥಶಾಸ್ತ್ರಜ್ಞ ಅಮಥ್ರ್ಯಸೇನ್ ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರ ಸೇವಾ ದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಫಾರ್ಮಾ ಉದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿದೆ.ಇರುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಕೊರೊನಾ ಸೋಂಕನ್ನು ಹೋಗಲಾಡಿಸಬಹುದಾಗಿತ್ತು. ಅದಕ್ಕೆ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಎರಡನೆ ಅಲೆ ಕಾಣಿಸಿಕೊಂಡಾಗ ಒಂದು ದಿನದಲ್ಲೇ ೪ ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು…

ಪರಿಸರ ಮತ್ತು ಮಾನವ ಕಾಳಜಿ

ಜಗತ್ತಿಗೆ ಮತ್ತೊಂದು ಪರಿಸರ ದಿನ ಬಂದಿದೆ. ಗಿಡ ನೆಡುತ್ತೇವೆ, ಫೋಟೊ ತೆಗೆಸಿಕೊಳ್ಳುತ್ತೇವೆ. ನೆಟ್ಟ ಗಿಡ ನಾಳೆ ಚಿಗುರೊಡೆಯಿತೋ ಇಲ್ಲವೋ ಎಂದು ನೋಡುವ ವ್ಯವಧಾನ ನಮಗಿಲ್ಲ. ಮುಂದಿನ ವರ್ಷ ಅದೇ ಗುಂಡಿಯಲ್ಲಿ ಮತ್ತೆ ಗಿಡ ನೆಡುತ್ತೇವೆ. ಕಳೆದ ವರ್ಷ ನೆಟ್ಟ ಗಿಡ ಅದೃಷ್ಟವಶಾತ್‌ ದೊಡ್ಡದಾಗಿದ್ದರೆ, ಈ ಬಾರಿ ಸ್ವಲ್ಪ ಆಚೆಗೆ ಇನ್ನೊಂದು ಗಿಡ ನೆಟ್ಟರಾಯಿತು ಎಂಬ ಸಮಾಧಾನ. ಪರಿಸರ ಅಂದರೆ ಇಷ್ಟೇನಾ? ಗಿಡ ನೆಟ್ಟ ಪ್ರಮಾಣಕ್ಕಿಂತ, ಬೆಳೆದ ಮರಗಳ ಮಾರಣಹೋಮ ಅದೆಷ್ಟೋ ದೊಡ್ಡ ಪ್ರಮಾಣದಲ್ಲಿ ನಡೆದಿದೆಯಲ್ಲವೇ? ಯಾರದೋ ಮೇಲಿನ…

ಶರಣರ ಬಾಳು ಮರಣದಲ್ಲಿ ಕಾಣು

  ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಶರಣರ ಬಾಳು, ಮರಣದಲ್ಲಿ ಕಾಣು. ಶರಣ=ಲಿಂಗ ಪರಮಾತ್ಮ ಗುರು ಹಿರಿಯರಿಗೆ ಬಾಗಿದ, ಸಾಧು ಸಜ್ಜನ ನ್ಯಾಯಮಾರ್ಗದ ಸಾತ್ತ್ವಿಕ. ಶರಣರ ಮಹಾತ್ಮ್ಯ ಅವರ ಅಂತ್ಯದಲ್ಲಿ ಗೋಚರ! ಮರಣಕ್ಕಂಜರು, ಸಂತಸದಿ ಸ್ವಾಗತಿಸುವರು. ಮರಣ ಬಹುತೇಕ ಸುಖಾಂತ್ಯ! ಜನ ಸೇರುವರು ಅಸಂಖ್ಯ! ಪಾರ್ಥಿವ ಶರೀರದ ಗೌರವ ಮೆರವಣಿಗೆ! “ಪುಣ್ಯಾತ್ಮ ಅಮರ! ಇರಬೇಕಿತ್ತು, ಇನ್ನೂ ಜನಕಲ್ಯಾಣ!ಮತ್ತೆ ಹುಟ್ಟಿ ಬರಲಿ” ಎಂದು ಜನರುದ್ಗಾರ! ದುರ್ಜನರ ಮರಣ ಬಹುತೇಕ ದುಃಖಾಂತ್ಯ,ಭೀಕರ! ಹೆಣ ಹೊರಲು ಜನ ಸಿಗರು. “ಪಾಪಿ…

ಭಾರತೀಯಾ ನೌಕಪಡೆಗೆ ಆರು ಜಲಾಂರ್ಗಾಮಿ ನೌಕೆಗಳ ನಿಮರ್ಮಾಣಕ್ಕೆ ಅನುಮೋದನೆ

ನವದೆಹಲಿ,ಜೂ,04:ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಭಾರತೀಯ ನೌಕಾಪಡೆಗಾಗಿ ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಮೆಗಾ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾ ಅತಿಕ್ರಮಣವನ್ನು ನಿರ್ವಹಿಸುವ ನಿಟ್ಟಿನಲ್ಲಿ ಮತ್ತು ನೌಕಾಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಇಲಾಖೆ ಮತ್ತೆ ಆರು ಹೊಸ ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಅಸ್ತು ಎಂದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಈ…

ಬಿಟ್ಕಾಯಿನ್ನ‌ನಂತ ಕಿಪ್ಟೋಕರೆನ್ಸೆಗಳ ಬಗ್ಗೆ ರಿಜರ್ವಬ್ಯಾಂಕ್ ದೃಷ್ಟಿಕೋನಬದಲಾಗಿಲ್ಲ;ಶಕ್ತಿಕಾಂತ್ ದಾಸ್ ಸ್ಪಷ್ಟನೆ

ಮುಂಬೈ,ಜೂ,04: ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ರಿಸರ್ವ್ ಬ್ಯಾಂಕಿನ ದೃಷ್ಟಿಕೋನವು ಬದಲಾಗಿಲ್ಲ ಆ ಬಗ್ಗೆ ಕಳವಳಗಳನ್ನುಹೊಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಆರ್‌ಬಿಐ ನೀತಿ ನಿರೂಪಣೆ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವುದೇ ಸಾರ್ವಭೌಮತ್ವವನ್ನು ಹೊಂದಿರದ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರುವ ಆರ್‌ಬಿಐ ಈ ವಿಷಯದ ಬಗ್ಗೆ 2018 ರಲ್ಲಿ ಮೊದಲ ಬಾರಿಗೆ ಸುತ್ತೋಲೆ ಹೊರಡಿಸಿತ್ತು. ಅಂತಹಾ ಕ್ಷೇತ್ರಗಳಲ್ಲಿ ವ್ಯವಹರಿಸುವ, ನಿಯಂತ್ರಿಸುವ ಘಟಕಗಳನ್ನು ಅದು ನಿರ್ಬಂಧಿಸಿತ್ತು. ಆದಾಗ್ಯೂ, 2020…

ಹಸಿದವರ ನೆರವಿಗೆ ಧಾವಿಸಿ :ಡಾ ಆರೂಢಭಾರತೀ ಸ್ವಾಮೀಜಿ.

ಬೆಂಗಳೂರು,ಜೂ,04:ಕೊರೊನಾ ಮಹಾಮಾರಿ ಇಡೀ ಜನಜೀವನವನ್ನೇ ತಲ್ಲಣಗೊಳಿಸಿದೆ. ಜನತೆ ಸ್ವಾರ್ಥ ತ್ಯಜಿಸಿ ಮಾನವೀಯತೆ ಮೆರೆಯಬೇಕು. ಹಸಿದವರಿಗೆ ಅನ್ನದಾನದಂಥ ನೆರವಿಗೆ ಧಾವಿಸಬೇಕು ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಕೆಂಗೇರಿಯ ಕೋಟೆ ಬೀದಿಯಲ್ಲಿ ದೇಶಭಕ್ತಿ ಫೌಂಡೇಶನ್, ಕಲಾ ಕದಂಬ ಆರ್ಟ್ ಸೆಂಟರ್ ಹಾಗೂ ಒಳಿತಿಗಾಗಿ ಮಿಡಿಯುವ ಮನಸುಗಳ ತಂಡ ಇವುಗಳ ಸಹಯೋಗದಲ್ಲಿ ನಡೆದ ಅನ್ನಗಂಗಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೆಂಗೇರಿಯಲ್ಲಿ ಈ ಯೋಜನೆ ಕಳೆದ ಹದಿನೈದು…

ವಕೀಲರಿಗೆ ಫುಡ್ ಕಿಟ್ ವಿತರಣೆ

ಬೆಂಗಳೂರು,ಜೂ,04:ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ಅಹಾರ ಸಾಮಾಗ್ರಿಗಳನ್ನು ರಾಜ್ಯ ಹೈಕೋರ್ಟ್ ಮುಂಭಾಗದಲ್ಲಿ ಹಂಚಲಸಯಿತು. ಹಿರಿಯ ವಕೀಲರೂ ಸಮಾಜ ಸೇವಕರೂ ಆದ ಎಚ್.ಆರ್ .ದುರ್ಗಪ್ರಸಾದ್ ಅವರು 250 ಜನಕ್ಕೂ ಹೆಚ್ಚು ವಕೀಲರಿಗೆ ಪುಡ್ ಕಿಟ್ ವಿತರಿಸಿದರು.ಈ ವೇಳೆ ಹಿರಿಯ ವಕೀಲರಾದ ಭಕ್ತವತ್ಸಲಂ ಮೊದಲಾದವರು ಹಾಜರಿದ್ದರು.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಇಳಿಮುಖ

ಬೆಂಗಳೂರು,ಜೂ,04: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೊಂಕಿತರ ಪ್ರಕರಣಗಳು ಇಳಿಮುಖವಾಗುತ್ತಿವೆ .ಇಂದು 16,068 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 26,69,514ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 364 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 30,895ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು 3,221 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,77,496ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ…

ಗರ್ಭಿಣಿ ಮಹಿಳೆಯರ ಬೇಸಿಗೆ ಮತ್ತು ಮಳೆಗಾಲದ ಸುರಕ್ಷಾ ಸಲಹೆಗಳು

ಲೇಖಕರು – ಡಾ. ವಿಜಯ ಮನೋಹರ್ ಸೀನಿಯರ್ ಕನ್ಸಲ್ಟೆಂಟ್ ಗೈನೆಕಾಲಜಿ ಮತ್ತು ಪ್ರಸೂತಿಗಳು ಅಪೊಲೊ ಕ್ರೆಡಲ್ ಕೋರಮಂಗಲ, ಬೆಂಗಳೂರು. ನಮಗೆ ಬೇಸಿಗೆ ಅಂದರೆ ಪ್ರಖರ ಮಯ ಪ್ರಕಾಶಮಾನವಾದಸೂರ್ಯನ ಬೆಳಕು ಎಂದರ್ಥ. ಹೆಚ್ಚು ಬೆಚ್ಚಗಿನ ದಿನಗಳು ಅಂದರೆ ಮಳೆ ಮತ್ತು ಚಳಿಗಾಲದ ತಿಂಗಳುಗಳು. ಅನೇಕ ಮಹಿಳೆಯರು ತಮ್ಮ ಪ್ರತಿದಿನ ಜೀವನವನ್ನು ಹೇಗೆ ಪರಿಣಾಮ ಬೀರಬಹುದೆಂಬುದರ ಇತರ ಅಂಶಗಳ ಮೇಲೆ ತಾಪಮಾನ ದುಃಖದಿಂದ ದೂರವಿರಲು ಮೊದಲು ಹವಾಮಾನ ಪಟ್ಟಿಗಳನ್ನು ಹಾಕಿಕೊಳ್ಳಬೇಕು. ವರ್ಷದ ಯಾವುದೇ ಸಮಯದಲ್ಲಿ ಗರ್ಭಾವಸ್ಥೆಯು ರೋಮಾಂಚನಗೊಳ್ಳುತ್ತವೆ. ಎನ್ನುವುದನ್ನು ಆನಂದಿಸಬೇಕು!…

ಶಿವಾಜಿ ಗಣೇಶನ್‌ಅಭಿನಯದ ಪಂತುಲು ನಿರ್ಮಾಣದ ಮೊದಲ ಚಿತ್ರಮೊದಲತೇದಿ

ಸ್ಕೂಲ್ ಮಾಸ್ಟರ್, ಶ್ರೀಕೃಷ್ಣದೇವರಾಯ, ಕಿತ್ತೂರುಚೆನ್ನಮ್ಮ ಮೊದಲಾದ ಮಹೋನ್ನತ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಅಭಿನಯಿಸಿದ ಬಿ.ಆರ್.ಪಂತುಲುತಮ್ಮ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿತೆರೆಗೆತಂದ ಮೊದಲ ಕನ್ನಡಚಿತ್ರ ‘ಮೊದಲ ತೇದಿ‘.ಮೊದಲ ಬಾರಿಗೆಕನ್ನಡಚಿತ್ರವೊಂದರಲ್ಲಿ ತಮಿಳಿನ ಖ್ಯಾತ ನಟ ಶಿವಾಜಿಗಣೇಶನ್ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಈ ಚಿತ್ರದ ವಿಶೇಷವಾಗಿತ್ತು.ಚಿ.ಸದಾಶಿವಯ್ಯನವರು ಈ ಚಿತ್ರದ ಮೂಲಕ ಸಾಹಿತಿಯಾಗಿಚಿತ್ರರಂಗ ಪ್ರವೇಶಿಸಿದರು.ಕನ್ನಡಕ್ಕೆ ಮಧುರ ಗೀತೆಗಳನ್ನು ನೀಡಿದ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ ಮೊದಲ ಚಿತ್ರವೂ ಹೌದು. ವಿಶೇಷವೆಂದರೆ ಈ ಚಿತ್ರದ ಮೂಲಕ ಚಿ.ಉದಯಶಂಕರ್ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದೇ ಅಲ್ಲದೆ, ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡಚಿತ್ರರಂಗ…

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ

ವಿರೂಪಾಕ್ಷ ಬೀದಿಯ ಮಂಟಪಗಳಲ್ಲಿ ಕೈಗೊಂಡ ಬಜಾರುಗಳ ಅಧ್ಯಯನ ಮುಂದುವರಿದ ಭಾಗ. . . . . ಅದೇ ತಾನೇ ಕೋಟಿಲಿಂಗವನ್ನು ನೋಡಲು ನದಿಗೆ ಇಳಿಯುವ ದುಸ್ಸಾಹಸಕ್ಕೆ ಕೈಹಾಕಿದ್ದೆವಲ್ಲಾ, ಅದೂ ಈಜುಬಾರದ ಗೆಳೆಯ ರೇಣುಕಾಪ್ರಸಾದ್ ಜೊತೆ. ಅಜ್ಜಿಯ ಮಾತು ಕೇಳದೆ ಕೋಟಿಲಿಂಗ ನೋಡಲು ನದಿಗೆ ಏನಾದರೂ ಇಳಿದಿದ್ದರೆ, ಉಕ್ಕಿ ಹರಿಯುವ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದರೆ, ನಮ್ಮಿಬ್ಬರ ಸ್ಥಿತಿ ಏನಾಗುತ್ತಿತ್ತು? ಅದನ್ನು ನೆನೆದು ಭಯಭೀತನಾದೆ. ಅಬ್ಬಾ ನಿಜಕ್ಕೂ ಬದುಕಿದೆವು ಎಂದು ಸಾವರಿಸಿಕೊಂಡೆನು. ಅದೂ ನಮ್ಮನ್ನು ಬದುಕಿಸಿದ್ದು ಬಾಳೆಹಣ್ಣು, ತೆಂಗಿನಕಾಯಿ ಮಾರುವ…

ಮೈಸೂರು ಜಿಲ್ಲಾ ಆಡಳಿತದಲ್ಲಿ ಅಯೋಮಯ-ಉಸ್ತುವಾರಿ ಸಚಿವರ ವೈಫಲ್ಯ

ಬೆಂಗಳೂರು,ಜೂ,೦೪: ಮೈಸೂರು ಜಿಲ್ಲಾ ಆಳಿತ ವ್ಯವಸ್ಥೆಯೇ ಹದಗೆಟ್ಟಿದೆ, ಅಸಮರ್ಥ ಉಸ್ತುವಾರಿ ಸಚಿವರಿಂದ ಇಡೀ ವ್ಯವಸ್ಥೆ ಹಾಳುಗೆಟ್ಟಂತಿದೆ. ಮೈಸೂರಿನಲ್ಲಿ ಕಳೆದ ಆರು ತಿಂಗಳಿನಿಂದಲೂ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ನಿರಂತರವಾಗಿ ಮಾತಿನ ಸಮರಗಳು. ಏಟಿಗೆ-ಎದುರೇಟು ನಡೆಯುತ್ತಲೇ ಇದೆ ಇದರ ಮುಂದುವರೆದ ಭಾಗವಾಗಿ ಈಗ ಪಾಲಿಕೆ ಆಯುಕ್ತರೇ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಇದರಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಅವರ ವೈಫಲ್ಯವಂತೂ ಎದ್ದು ಕಾಣುತ್ತದೆ. ಇದು ಕಳೆದ ಎರಡು ತಿಂಗಳಿನಿಂದಲೂ ಇಬ್ಬರಲ್ಲೂ ಆಂತರಿಕ ಕಚ್ಚಾಟ ನಡೆಯುತ್ತಿತ್ತು, ಜೊತೆಗೆ ಜನಪ್ರತಿನಿಧಿಗಳು ರೋಹಿಣಿ ವಿರುದ್ಧ…

ಪತ್ರಕರ್ತರು ದೇಶದ ಕನ್ನಡಿ- ಜಾಧವ್

ಶಿಕಾರಿಪುರ,ಜೂ,೦೪:ಪ್ರಜಾ ಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಹಾಗೂ ಕೂ ರೋ ನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸುದ್ದಿ ಮಾಡಿ ಸಮಾಜದಲ್ಲಿ ಗುರುತಿಸಿ ಕೊಂಡಿರುವ ಪತ್ರಕರ್ತರು ದೇಶವನ್ನು ಪ್ರತಿಬಿಂಬಿಸುವ ಕನ್ನಡಿ. ಎಂದು ಬೀಳಕಿ ಆಯುಷ್‌ಮಾ ಇಲಾಖೆಯ ಆಯುರ್ವೇದ ಆಸ್ಪತ್ರೆ ವೈದ್ಯ ಡಾ.ಖೇಮು ಜಾಧವ್ ಅಭಿಪ್ರಾಯಿಸಿದರು. ಅವರು ಶಿಕಾರಿಪುರದ ಸುದ್ದಿ ಮನೆಯಲ್ಲಿ ಪತ್ರಕರ್ತರಿಗೆ ಆಯುರ್ವೇದದ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದರು.ಆಯುಷ್ಮಾನ್ ಇಲಾಖೆಯ ಎಂಟುನೂರು ನಲವತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಲೇ ಪ್ರತಿಭಟಿತ್ತಿದ್ದಾರೆ ಆದರೆ ಸರ್ಕಾರ…

ಪ್ರೊ.ವಸಂತ ಕುಷ್ಠಗಿ ನಿಧನ

ಬೆಂಗಳೂರು, ಜೂ,04:ಕನ್ನಡದ ಹಿರಿಯ ಬರಹಗಾರ, ಕವಿ,ಪ್ರೊ. ವಸಂತ ಕುಷ್ಟಗಿ ಅವರು ಇಂದು ನಿಧನರಾಗಿದ್ದಾರೆ. ಕನ್ನಡ ಪುಸ್ತಕಲೋಕಕ್ಕೆ ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಮಹತ್ವದ ಕೊಡುಗೆ ಕೊಟ್ಟ ಲೇಖಕರಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ಅವರೂ ಒಬ್ಬರು. ಕಲ್ಬುರ್ಗಿ ಮೂಲದ ವಸಂತ ಕುಷ್ಟಗಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಎಂ. ಎ. ಪದವಿ ಪಡೆದ ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಆನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮನಂದ ತೀರ್ಥ ಸಂಶೋಧನಾ…

1 95 96 97 98 99 112
Girl in a jacket