ಚೇರಂಬಾಣೆ ಸಿದ್ಧಾಶ್ರಮದ ಬೇಬಿತಾಯಿ ಬ್ರಹ್ಮೈಕ್ಯ.
ಬೆಂಗಳೂರು,ಜೂ,19:ಕೊಡಗು ಜಿಲ್ಲೆಯ ಚೇರಂಬಾಣೆಯ ಶ್ರೀ ಸಿದ್ಧಾರೂಢಾಶ್ರಮದ ಶ್ರೀಮಾತೆ ಬೇಬಿತಾಯಿಯವರು (84) ಇಂದು ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ (5.15) ಬ್ರಹ್ಮೈಕ್ಯರಾದರು. ಮಧ್ಯಾಹ್ನಆಶ್ರಮದಲ್ಲಿ ಸಂಪ್ರದಾಯದಂತೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇತ್ತೀಚೆಗೆ ಅವರು ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಲು ನಿರಾಕರಿಸಿದ್ದರು. 20.11.1936 ರಲ್ಲಿ ಚೇರಂಬಾಣೆ ಬಳಿಯ ಕೊಟ್ಟೂರು ಗ್ರಾಮದ ಶ್ರೀ ಅಚ್ಚಯ್ಯ ಶ್ರೀಮತಿ ಬಿಳ್ಳವ್ವ ದಂಪತಿಗಳಿಗೆ ಜನಿಸಿದ ಇವರು ಬಾಲಬ್ರಹ್ಮಚಾರಿಣಿಯಾಗಿದ್ದರು. ಮೂರು ಜನ ಸಹೋದರ ಐದು ಜನ ಸಹೋದರಿಯರನ್ನು ಹೊಂದಿದ್ದ ಇವರು ತಮ್ಮ ನಲವತ್ತೆರಡನೇ ವಯಸ್ಸಿನಲ್ಲಿ ಚೇರಂಬಾಣೆಯ ಸಿದ್ಧಾರೂಢಾಶ್ರಮಕ್ಕೆ ಸೇರಿಕೊಂಡರು.…