Girl in a jacket

Author kendhooli_editor

ಪಿಜಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಬಿಬಿಎಂಪಿ ಸೂಚನೆ

ಬೆಂಗಳೂರು, ಜೂ, ೧೫:ನಗರದಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿರುವ ಸರ್ಕಾರ ಈ ವೇಳೆ ಪಿಜಿಯಲ್ಲಿರುವ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಬಿಬಿಎಂಪಿ ಸೂಚಿಸಿದೆ. ಯಾವುದೇ ಕಾರಣಕ್ಕೂ ಪಿಜಿಯಲ್ಲಿ ಇರುವ ಅವಕಾಶ ನೀಡಬಾರದು ಎಲ್ಲರನ್ನೂ ಅವರವರ ಊರುಗಳಿಗೆ ಕಳಿಸಿಕೊಡಿ ಎಂದು ಪಿಜಿ ಮಾಲೀಕರಿಗೆ ಬಿಬಿಎಂಪಿ ನೊಟೀಸ್ ಜಾರಿಮಾಡಿದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಗಿಂದಾಗಿ ವಿದ್ಯಾರ್ಥಿಗಳನ್ನು ಪಿಜಿಯಲ್ಲಿ ಉಳಿಸಿಕೊಂಡಲ್ಲಿ ಪಿಜಿಯಲ್ಲಿ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ೧೧೦ ಚದುರ ಅಡಿಯ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನರಿಗೆ…

ಶೀಘ್ರ ಕೇಂದ್ರ ಸಚಿವ ಸಂಪುಟ ವಿಸ್ತರಣೆ?

ನವದೆಹಲಿ,ಜೂ,೧೫: ಕೇಂದ್ರ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ .ಹೀಗಾಗಿಯೇ ಮೋದಿ ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ ಇದೇ ವೇಳೆ ರಾಜ್ಯ ಬಿಜೆಪಿ ಸಂಸದರು ಕೂಡ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಖಾಲಿ ಇರುವ ಮತ್ತು ಕೆಲವರ ಖಾತೆಗಳನ್ನು ಬದಲಾವನೆ ಮಾಡಲಾಗುತ್ತಿದೆ ಹೀಗಾಗಿ ಯಾರಿಗೆ ಯಾವ ಖಾತೆ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕೇಂದ್ರದ ಕೆಲವು ಸಚಿವರು ರಾಜೀನಾಮೆ, ನಿಧನದಿಂದ ಕೇಂದ್ರದ ಸಚಿವ ಸ್ಥಾನಗಳು ತೆರವಾಗಿವೆ. ರಾಮ್ ವಿಲಾಸ್ ಪಾಸ್ವಾನ್,…

ಜಗವಿದು ಪರಮಾತ್ಮನ ಸೃಷ್ಟಿ!

ಜಗವಿದು ಪರಮಾತ್ಮನ ಸೃಷ್ಟಿ! ಒಮ್ಮೆ ಸಿದ್ಧನು ಕೆಲವು ಹಡಗರೊಂದಿಗೆ ಒಂದು ತೋಟಕ್ಕೆ ಹೋದನು. ಅಲ್ಲಿ ನೇರಳೆ ಹಣ್ಣಿನ ಗಿಡದ ಕೆಳಗೆ ಬಿದ್ದಿರುವ ಹಣ್ಣಗಳನ್ನು ಕಾಣುತ್ತಲೇ ಹುಡುಗರು ಎಲ್ಲ ಮರೆತು ಹಣ್ಣು ಆಯ್ದು ತಿನ್ನಲಾರಂಭಿಸಿದರು. ಸಿದ್ಧ ನಿಂತು ನೋಡಿ ಆಲೋಚಿಸಿದ. ಈ ಹುಡುಗರಿಗೆ ಬುದ್ಧಿ ಕಲಿಸಬೇಕೆಂದು ಒಂದು ನೇರಳೆ ಹಣ್ಣನ್ನು ಚೆಲ್ಲಿದನು.ಅಲ್ಲಿ ನೇರಳೆ ಹಣ್ಣಿನ ರಾಶಿಯೇ ಉಂಟಾಯಿತು! ಹುಡುಗರು ಆ ರಾಶಿಯನ್ನು ಕಂಡು ಧಾವಿಸಿದರು, ಆಶ್ಚರ್ಯಪಟ್ಟರು. ಆಗ ಸಿದ್ಧನು ಹೀಗೆ ಹೇಳಿದನು: ಪರಮಾತ್ಮನ ಲೀಲೆ ಅತಿ ವಿಚಿತ್ರ. ಒಂದೇ…

ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’

ತುರುವನೂರು ಮಂಜುನಾಥ ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’ ಈ ಬದುಕಿನಲ್ಲಿ ಮನುಷ್ಯ ತನಿಗರಿವಿಲ್ಲದೆ ಮಾನವೀಯತೆಯನ್ನು ಕಳೆದುಕೊಂಡು ಸಂಬಂಧಗಳ ಬಂಧಿಯೂ ಆಗದೆ,ಬೆಂಕಿಯಂತೆ ಬೆಸೆಯುವ ‘ಮನಸುಮನಗಳ ಅನಿಷ್ಟತೆತೆಗೆ ಸಾಗುವ ಬುದ್ದಿಗಳಿಗೆ ಬಂಧಿಯಾದಾಗಲೇ ಮನುಷ್ಯತ್ವವನ್ನು ಸುಟ್ಟು ಅನಿಷ್ಟತೆತೆಯನ್ನು ಹೆಗಲಮೇಲೇರಿಕೊಂಡು ಸಾಗುತ್ತಿದ್ದಾನೆ. ಹೌದು ಇಂಥ ಬಿರುಸಿನಿಂದ ಸಾಗುವ ತಾಂತ್ರಿಕ ಯುಗದಲ್ಲಿ,ತಂತ್ರಗರಿಕೆಯಲ್ಲೇ ತನ್ನೆಲ್ಲ ಮಾನವ ಸಂಬಂಧಗಳನ್ನು ಬೆಸದು ಯಾಂತ್ರಿಕವಾಗಿ ಸಾಗುತ್ತಿದಾನೆ. ಹಾಗಾಗಿಯೇ ಆಚೀಚಿನ ಸಂಬಂಧ ಮನುಸಗಳ ಮಾನವೀಯತೆಗಳಿಗೆ ಬೆಲೆಯಿಲ್ಲದೆ ಸೊಗಲಾಡಿ ಜೀವಗಳು ಜಗಜ್ಜಾಹಿರವಾಗಿ ಬಿಂಬಿತವಾಗುತ್ತಿವೆ. ಇಂತದ್ದೊಂದು ‘ಅನಾಮಿಕ ಜೀವಗಳ ಮಧ್ಯೆ ಮನುಷ್ಯ…

ಹೊರಗಿನಿಂದ ಬರುವವರಿಗೆ ಕೋವಿಡ್ ಪರೀಕ್ಷೆಗೆ ಆದ್ಯತೆ: ಬಿಬಿಎಂಪಿ

ಬೆಂಗಳೂರು.ಜೂ,೧೪: ಹೊರಗಿನಿಂದ ನಗರಕ್ಕೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುಯತ್ತಿರುವ ಕಾರಣ ಕೋವಿಡ್ ಮತ್ತಷ್ಟು ಹರಡುವ ಸಾಧ್ಯತೆಗಳಿರುವ ಕಾರಣ ಹೊರಗಿನಿಂದ ಬರುವವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಆರೋಗ್ಯಾಧಿಕಾರಿಗಳಿವೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸೂಚಿಸಿದ್ದಾಋಎ ಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ವರ್ಚುವಲ್ ರೂಪದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಸಾರ್ವಜನಿಕರು ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ, ಮಾತ್ರ ಈ ಸೋಂಕಿನ ವಿರುದ್ಧದ ಹೋರಾಟ ಯಶಸ್ಸು ಕಾಣಲು ಸಾಧ್ಯ. ಕೋವಿಡ್ ಪರೀಕ್ಷೆ, ಕಂಟೈನ್ಮೆಂಟ್…

ಅಧಿಕಾರ ದಾಹ ಬಿಟ್ಟು ಕೆಲಸ ಮಾಡಿ-ಎಂ.ಬಿ.ಪಾಟೀಲ್

ಹಾವೇರಿ.ಜೂ,೧೪: ಕೊರೊನಾ ಸೋಂಕಿನಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಇಂತ ಸಮಯದಲ್ಲಿ ಅಧಿಕಾರ ದಾಹಕ್ಕೆ ಕುರ್ಚಿಗಾಗಿ ಕಿತ್ತಾಟ ನಡೆಸುವ ಕೆಲಸ ಬಿಡಿ ಕೆಲಸ ಮಾಡಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸೋ ಕೆಲಸ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕೋವಿಡ್‌ನಲ್ಲಿ ಸುರೇಶ್ ಅಂಗಡಿಯವರನ್ನ…

ಸುರೇಶ್ ರೈನಾ ‘ಬಿಲೀವ್’ ಪುಸ್ತಕ ಬಿಡುಗಡೆ

ಮುಂಬೈ,ಜೂ,೧೪: ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನ್ ಬರೆದಿರುವ ಅವರ ಆತ್ಮಚರಿತ್ರೆ ‘ಬಿಲೀವ್ ಎಂಬ ಪುಸ್ತಕ ಇಂದು ಬಿಡುಗಡೆಗೊಂಡಿದೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ರೈನಾ ಆತ್ಮೀಯ ಗೆಳೆಯ ಮಹೇಂದ್ರ ಸಿಂಗ್ ಧೋನಿಯೊಂದಿಗೆ ೨೦೨೦ರ ಆಗಸ್ಟ್‌ನಲ್ಲಿ ಅಂತರಾಷ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದೀಗ ನಿವೃತ್ತಿಯ ಬಳಿಕ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್ ವೃತ್ತಿ ಜೀವನದ ಕುರಿತಾಗಿ ಆತ್ಮಚರಿತ್ರೆಯೊಂದನ್ನು ಬರೆದಿದ್ದಾರೆ. ರೈನಾ ತಮ್ಮ ಆತ್ಮ ಚರಿತ್ರೆಗೆ ಸಚಿನ್ ತೆಂಡುಲ್ಕರ್ ಅವರು ನೀಡಿರುವ ಸ್ಪೂರ್ತಿಯ ಪದ ‘ಬಿಲೀವ್’…

ಕೊರೊನಾ ದಿಂದ ಸಾವನ್ನಪ್ಪಿದ ಕುಟುಂಬಕ್ಕೆ ೧ ಲಕ್ಷ ರೂ ಪರಿಹಾರ

ಬೆಂಗಳೂರು, ಜೂ, ೧೪; ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದ ದುಡಿಯುವ ಒಬ್ಬ ವ್ಯಕ್ತಿಗೆ ಒಂದು ಲಕ್ಷರೂಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ಕೊರೊನಾದಿಂದ ಸತ್ತವರ ಕುಟುಂಬಗಳಿಗೆ ೧ಲಕ್ಷ ರೂ ನೀಡುವ ಘೋಷಣೆ ಮಾಡಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ರಾಜ್ಯ ಸರ್ಕಾರ ಪಾತ್ರವಾಗಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ ಅವರು, “ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಕೋವಿಡ್‌ನಿಂದ ದುಡಿಯುವ ವ್ಯಕ್ತಿ ಮೃತಪಟ್ಟಿದ್ದರೆ ಒಬ್ಬರಿಗೆ ಪರಿಹಾರವನ್ನು ನೀಡಲಾಗುತ್ತದೆ. ಇದರಿಂದ ಒಟ್ಟು ೨೦…

ಅಗಲಿದ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ

ಬೆಂಗಳೂರು,ಜೂ,14:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ಕೇಂದ್ರ ಕಚೇರಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. kuwj ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ನಾಡಿನ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಹಿರಿಯ ಪತ್ರಕರ್ತರಾದ ಸುರೇಶ್ ಚಂದ್ರ, ದವಡಬೆಟ್ಟ ನಾಗರಾಜ್, ದಾವಣಗೆರೆಯ ಹೆಚ್.ಎನ್.ಮುನೇಶ್ ರವರಿಗೂ, ರಾಷ್ಟ ಪ್ರಶಸ್ತಿ ವಿಜೇತರಾದಂತ ಚಲನ ಚಿತ್ರನಟರಾದ ಸಂಚಾರಿ ವಿಜಯ್, ಕೆ.ಸಿ.ಎನ್.ಚಂದ್ರು ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ…

ವೃತ್ತ,ಮೇಲ್ಸೇತುವೆಗೆ ಡಾ. ಸಿದ್ದಲಿಂಗಯ್ಯ ನಾಮಕರಣ ಮಾಡಲು ಸಿಎಂಗೆ ರಾಮುಲು ಮನವಿ

ಬೆಂಗಳೂರು. ಜೂ.೧೪: ಸಾಮಾಜಿಕ ಸಮಾನತೆಗಾಗಿ ಕಾವ್ಯ, ಸಾಹಿತ್ಯಗಳನ್ನು ರಚಿಸಿ ಪ್ರೇರಣೆ ನೀಡಿ, ಜನಮಾನಸದಲ್ಲಿರುವ ಖ್ಯಾತ ಲೇಖಕ, ಕವಿ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಷ್ಠಿತ ವೃತ್ತ ಅಥವಾ ಮೆಲ್ಸೇತೆಗೆ ಡಾ. ಸಿದ್ದಲಿಂಗಯ್ಯ ಅವರ ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರ ನಿಧನದಿಂದ ಸಾಹಿತ್ಯಕ್ಷೇತ್ರಕ್ಕೆ ಹಾಗೂ ಇಡೀ ರಾಜ್ಯಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ.…

ಸಂಚಾರಿ ವಿಜಯ್ ಇನ್ನಿಲ್ಲ

ಬೈಕ್ ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನ ಹೊಂದಿದ್ದಾರೆ. ಶನಿವಾರ ರಾತ್ರಿ ತನ್ನ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳಿದ್ದ ವೇಳೆ ಅಫಘಾತ ಸಂಭವಿಸಿತ್ತು ಈ ವೇಳೆ ಅವರ ತೆಲೆಗೆ ಪೆಟ್ಟು ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯೆಗೊಂಡಿತ್ತು, ತೀವ್ರ ಗಾಯಗೊಂಡಿದ್ದ ಅವರನ್ನು ಬನ್ನೇರು ಘಟ್ಟ ರಸ್ತೆಯಲ್ಲಿರುವ ಅಪಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಹಲವಾರು ಕನ್ನಡ ಚಿತ್ರ ಮತ್ತು ಕಿರುಚಿತ್ರ ಹಾಗೂ ನಾಟಕ ಗೀಳು ಹತ್ತಿಸಿಕೊಂಡಿದ್ದ ಅವರಿಗೆ ಎರಡು ಬಾರಿ…

ಅರುಣ್ ಸಿಂಗ್ ಮಧ್ಯಪ್ರವೇಶಕ್ಕೆ ಬಿಎಸ್‌ವೈ ಭಿನ್ನರ ವಿರೋಧ

ಬೆಂಗಳೂರು,ಜೂ,೧೪: ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತಂತೆ ಬಿಜೆಪಿ ಪಾಳೆಯದಲ್ಲಿ ದಿನ ದಿನಕ್ಕೆ ಭಿನ್ನ ದ್ವನಿಗಳು ಏಳುತ್ತಿದ್ದು ಆಂತರ್ಯದ ಜ್ವಾಲೆ ಮತ್ತಷ್ಟು ಬಿಗಿಡಾಯಿಸುತ್ತಿದೆ. ಹೌದು ,ಬಿಎಸ್‌ವೈ ಬದಲಾವಣೆ ವಿಚಾರದಲ್ಲಿ ಈಗ ಒಂದು ಟೀಂ ಗಟ್ಟಿ ಧ್ವನಿಎತ್ತಿದ್ದು ಬುಧವಾರ ರಾಜ್ಯಕ್ಕೆ ಆಗಮಿಸಲಿರುವ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಮೊದಲು ಶಾಸಕಾಂಗ ಸಭೆ ಕರೆಯಬೇಕು ಎನ್ನುವ ಒತ್ತಾಯಮಾಡಲಿದ್ದಾರೆ. ಹೆಸರು ಹೇಳಲು ಇಚ್ಚಿಸದ ಬಿಜೆಪಿಯ ಹಿರಿಯ ನಾಯಕರು ಅರುಣ್ ಸಿಂಗ್ ಬರುತ್ತಿರುವುದು ಭಿನ್ನರನ್ನು ಧ್ವನಿಯನ್ನು ಅಡಗಿಸಲು ಅದಕ್ಕೂ ಮೊದಲು…

ಖ್ಯಾತ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್ ನಿಧನ

ಬೆಂಗಳೂರು,ಜೂ,14: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಪಕ ಕೆ.ಸಿ.ಎನ್.ಚಂದ್ರಶೇಖರ್ ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು ಕೆ.ಸಿ.ಎನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಭಾನುವಾರ ತಡ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಸಹಾಯಕ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಕೆಸಿಎನ್ ಚಂದ್ರಶೇಖರ್, ಬಳಿಕ ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಕೆಸಿಎನ್ ಮೊದಲು ಡಾ.ರಾಜ್ಕುಮಾರ್ ನಟನೆಯ ಶಂಕರ್ ಗುರು ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಪ್ರಾರಂಭ ಮಾಡಿದ್ದರು. ಈ ಸಿನಿಮಾ…

ಅಳಿಯ ಅಲ್ಲ ,ಮಗಳ ಗಂಡ

ಶ್ರೀ .ಡಾ. ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅಳಿಯ ಅಲ್ಲ, ಮಗಳ ಗಂಡ ಶಬ್ದ ಬೇರೆ, ವಸ್ತು ಒಂದು! ವಸ್ತು ಬೇರೆ, ಕ್ರಿಯೆ ಬೇರೆ, ಫಲ ಒಂದು! ಒಂದಾದರೂ, ಹಾಗಲ್ಲ ಹೀಗಲ್ಲ ಅದಲ್ಲ ಇದಲ್ಲ ಎಂದಾಗ ಮಾತಿದು. ನಾವವರಿಗೆ ಮೇಲು, ನಾವು ಕೋಳಿ ಮಾತ್ರ.., ಅವರು ಆಡು.. ತಿನ್ನುವುದು ಒಪ್ಪಿತ! ನಾವ್ ಬಾರ್ಗೆ ಹೋಗೆವು, ಮನೆಯಲ್ಲೇ ಪಾರ್ಟಿ, ಮಾಡುವುದೊಂದೇ! ಹೊಲಸು ತಿಂದರೆ ಹೋಗಲ್ಲ, ತಿಂದರೆ ಸ್ನಾನ ಮಾಡೇ ಹೋಗೋದು, ತಿಂದಿದ್ದೆಲ್ಲಿಗೋಡುವುದು? ಮೂಲ ಬೆಲೆಗೆ ಒಂದು ವಸ್ತು,…

ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕ ಸುಧಾರಣೆ ಅಗತ್ಯ-ಕಪಿಲ್ ಸಿಬಲ್

ನವದೆಹಲಿ,ಜೂ,೧೩:ಕಾಂಗ್ರೆಸ್ ಪಕ್ಷ ಜಡತ್ವವನ್ನು ಬಿಟ್ಟು ಸಕ್ರಿಯ ರಾಜಕಾರಣದತ್ತ ಮುಖಮಾಡಬೇಕು ಮತ್ತು ಸಂಘಟನಾ ವಲಯದಲ್ಲಿ ವ್ಯಾಪಕ ಸುಧಾರಣೆಗಳ ಅಗತ್ಯವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ಭಾರತಕ್ಕೆ ಪುನಃ ಚೇತರಿಸಿಕೊಂಡ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ಅದಕ್ಕಾಗಿ ಜಡತ್ವವನ್ನು ಬಿಟ್ಟು ಸಕ್ರಿಯವಾಗಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವ ಮನಸ್ಥಿತಿ ಇದೆ ಎಂದು ಇದು ಸಂಭವಿಸಬೇಕಾದರೆ ಕೇಂದ್ರ ಹಾಗೂ ರಾಜ್ಯ ಸಂಘಟನಾ ವಲಯದಲ್ಲಿ ವ್ಯಾಪಕ ಸುಧಾರಣೆಗಳನ್ನು ಮಾಡಬೇಕಿದೆ. ಈ ಮೂಲಕ ಪಕ್ಷವು ಸಂಘಟನಾ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡಬೇಕು ಎಂದಿದ್ದಾರೆ…

ನಟ ಸಂಚಾರಿ ವಿಜಯ್‌ಗೆ ಅಫಘಾತ-ಗಂಭೀರ ಗಾಯ

ಬೆಂಗಳೂರು,ಜೂ,೧೩: ನಟ ಸಂಚಾರಿ ವಿಜಯ ಬೈಕ್ ಅಫಘಾತದಲ್ಲಿ ಗಂಭಿರಗಾಯಗಳಾಗಿದ್ದು ಬನ್ನೇರುಘಟ್ಟ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವರ ರಾತ್ರಿ ಬೈಕ್‌ನಲ್ಲಿ ರೈಡ್ ಮಾಡುವಾಗ ಅಫಘಾತ ಸಂಭವಿಸಿದೆ ಮೆದುಳಿನ ಬಲ ಬಾಗ ರಕ್ತಸ್ರಾವವಾಗಿದ್ದು,ತೊಡೆಗೆ ಗಂಭೀರಗಾಯಗಳಾಗಿವೆ. ನಿನ್ನೆ ರಾತ್ರಿಯೇ ಅವರಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಪಿಸ್ತೂಲು ಮಾರಾಟದಡಿ ರೌಡಿ ಬಂಧನ

ಬೆಂಗಳೂರು,ಜೂ,೧೩:ಜಪ್ತಿ ಮಾಡಲಾದ ಪಿಸ್ತೂಲ್‌ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್‌ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್ ಸತೀಶ್‌ನನ್ನೂ ಸೆರೆ ಹಿಡಿದಿದ್ದಾರೆ. ‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ ೩ ನಾಡ…

ನಾಳೆಯಿಂದ ಅನ್ ಲಾಕ್ ;ಜನರಿಗೆ ರಲೀಫ್

ಬೆಂಗಳೂರು,ಜೂ,13: ಕಳೆದ ಒಂದೂವರೆ ತಿಂಗಳಿಂದ ಲಾಕ್ ಡೌನ್ ನಿಂದ ಮನೆಯೊಳಗಿದ್ದ ಜನರಿಗೆ ರಿಲ್ಯಾಕ್ಷ ಸಿಗಲಿದೆ. ಹೌದು ನಾಳೆಯಿಂದ ಅನ್ ಲಾಕ್ ಆಗಲಿರುವ ಕೆಂಗೆಟ್ಟ ಜನರಿಗೆ ಅರ್ಧ ರಿಲೀಫ್ ಸಿಗಲಿದೆ.ನಾಳೆಯಿಂದ ಕೆಲ ಜಿಲ್ಲೆಗಳಿಗೆ ಲಾಕ್ಡೌನ್ನಿಂದ ಮುಕ್ತಿ ಕೊರೊನಾ ಕಡಿಮೆ ಮಾಡಲು ಕಳೆದೆರಡು ತಿಂಗಳಿಂದ ಜಾರಿಮಾಡಲಾಗಿರೋ ಲಾಕ್ಡೌನ್ಗೆ ನಾಳೆಯಿಂದ ಮೊದಲ ಹಂತದ ರಿಲೀಫ್ ಸಿಗಲಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಹಾಫ್ ಅನ್ಲಾಕ್ಗೆ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು, ಇದರನ್ವಯ ನಾಳೆ ಬೆಳಗ್ಗೆ…

ಶುಲ್ಕವಿವಾದ: ಸಚಿವರ ದ್ವಂದ್ವ ಹೇಳಿಕೆಗೆ ಪೋಷಕರ ಅಳಲು

ಬೆಂಗಳೂರು,೧೩:ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಅಹಂಕಾರದ ಎಲ್ಲೆ ಮೀರಿದಂತೆ ಕಾಣುತ್ತಿದೆ ಅಥವಾ ಶಿಕ್ಷಣ ವ್ಯವಸ್ಥೆಯನ್ನೇ ಒಂದು ರೀತಿ ಕುಲಗೆಡುವ ವ್ಯವಸ್ಥಿತಿ ಸಂಚು ಎನ್ನುವಂತಿದೆ ಅವರ ನೀಡುವ ಪ್ರತಿ ಹೇಳಿಕೆಗಳು. ಹೌದು ಸುರೇಶ್ ಕುಮಾರ್ ಅವರ ಪ್ರತಿಬಾರಿಯ ಹೇಳಿಕೆಗಳು ಶಿಕ್ಷಣಕ್ಕೆ ಮಾದರಿಯಾಗುವ ಬದಲು ದ್ವಂದ್ವನಿಲುವುಗಳಾಗಿವೆ ಒಂದು ಬಾರಿ ಹೇಳಿದ ಹೇಳಿಕೆಗೂ ಇನ್ನೊಂದು ಬಾರಿ ನೀಡುವ ಹೇಳಿಕೆಗೂ ಗೊಂದಲಗಳು ಸೃಷ್ಟಿಯಾಗುತ್ತಿವೆ ಇದರಿಂದ ಸಾರ್ವಜನಿಕ ಶಿಕ್ಷಣಾಧಿಕಾರಿಗಳು ಕೂಡ ಒಂದು ರೀತಿ ಗರಬಡದವರಂತಾಗಿದ್ದಾರೆ. ರಾಜಧಾನಿಯ ಪ್ರತಿಷ್ಠಿತ ಶಾಲೆಗಳ ಶುಲ್ಕ ವಿಚಾರವಾಗಿ ಸಾರ್ವನಿಕರು…

ಸಿಡಿ ಪ್ರಕರಣ-ಸ್ಟ್ರಿಂಗ್‌ಗೂ ಮುನ್ನವೇ ರಾಸಲೀಲೆ ವೀಡಿಯೋ ಆಗಿತ್ತು

ಬೆಂಗಳೂರು,ಜೂ,೧೨: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ.ಈಗ ಮತ್ತೊಂದು ಸತ್ಯ ಬಯಲಾಗಿದೆ. ಸ್ಟ್ರಿಂಗ್ ಮಾಡುವ ಮೊದಲೇ ರಾಸಲೀಲೆ ವೀಡಿಯೋ ಆಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೌದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಮತ್ತು ಶ್ರವಣ್ ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯವನ್ನು ಬಾಯಿಬಿಟ್ಟಿದ್ದಾರೆ, ರಾಸಲೀಲೆ ವಿಡಿಯೋ ಮಾಡುವ ಸಂಬಂಧ ಯುವತಿಗೆ ಸ್ಟಿಂಗ್ ಕ್ಯಾಮರ ಕೊಡಿಸಿದ್ದು ನಾವು ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ. ಅವರು ಹೇಳಿರುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಸ್ಟಿಂಗ್ ಕ್ಯಾಮರದಲ್ಲಿ ವಿಡಿಯೋ…

1 90 91 92 93 94 112
Girl in a jacket