Girl in a jacket

Author kendhooli_editor

ಚೇರಂಬಾಣೆ ಸಿದ್ಧಾಶ್ರಮದ ಬೇಬಿತಾಯಿ ಬ್ರಹ್ಮೈಕ್ಯ.

ಬೆಂಗಳೂರು,ಜೂ,19:ಕೊಡಗು ಜಿಲ್ಲೆಯ ಚೇರಂಬಾಣೆಯ ಶ್ರೀ ಸಿದ್ಧಾರೂಢಾಶ್ರಮದ ಶ್ರೀಮಾತೆ ಬೇಬಿತಾಯಿಯವರು (84) ಇಂದು ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ (5.15) ಬ್ರಹ್ಮೈಕ್ಯರಾದರು. ಮಧ್ಯಾಹ್ನಆಶ್ರಮದಲ್ಲಿ ಸಂಪ್ರದಾಯದಂತೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇತ್ತೀಚೆಗೆ ಅವರು ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಲು ನಿರಾಕರಿಸಿದ್ದರು. 20.11.1936 ರಲ್ಲಿ ಚೇರಂಬಾಣೆ ಬಳಿಯ ಕೊಟ್ಟೂರು ಗ್ರಾಮದ ಶ್ರೀ ಅಚ್ಚಯ್ಯ ಶ್ರೀಮತಿ ಬಿಳ್ಳವ್ವ ದಂಪತಿಗಳಿಗೆ ಜನಿಸಿದ ಇವರು ಬಾಲಬ್ರಹ್ಮಚಾರಿಣಿಯಾಗಿದ್ದರು. ಮೂರು ಜನ ಸಹೋದರ ಐದು ಜನ ಸಹೋದರಿಯರನ್ನು ಹೊಂದಿದ್ದ ಇವರು ತಮ್ಮ ನಲವತ್ತೆರಡನೇ ವಯಸ್ಸಿನಲ್ಲಿ ಚೇರಂಬಾಣೆಯ ಸಿದ್ಧಾರೂಢಾಶ್ರಮಕ್ಕೆ ಸೇರಿಕೊಂಡರು.…

ನಾಯಕತ್ವ ಬದಲಾವಣೆ; ಸಿಎಂಗೆ ದೆಹಲಿಗೆ ಬುಲಾವ್

ಬೆಂಗಳೂರು,ಜೂ.19:ಬಿಎಸ್ ವೈ ನಾಯಕತ್ವ ಗೊಂದಲ ಕುರಿತಂತೆ ದಿನಕ್ಕೊಂದು ರೂಪ ಪಡೆಯುತಗತ್ತಿದ್ದು,ಈಗ ಅದು ದೆಹಲಿ ಹೈಕಮಾಂಡ್ ನ ಅಂಗಳಕ್ಕೆ ತಲುಪಿದೆ. ಹೌದು,ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿನ ಲ್ಲಿ  ಇಲ್ಲಿನ ನಾಯಕರ‌ಜೊತೆ ನಡೆಸಿದ ಸಭೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಹೈಕಮಾಂಡ್ ತಲುಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ದೆಹಲಿಗೆ ಬರುಂತೆ ದೂರವಾಣಿ ಕರೆ ಮಾಡಿ ತಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅರುಣ್ ಸಿಂಗ್ ವಿಶೇಷ ಗಮನಹರಿಸಿದ್ದು, ಆ ಪೈಕಿ ಮೊದಲನೆಯದು ಯಡಿಯೂರಪ್ಪ…

ಮೇಕೆದಾಟು ಯೋಜನೆ ಶೀಘ್ರ ಜಾರಿಗೊಳಿಸಿ-ಎಚ್‌ಡಿಕೆ

ಬೆಂಗಳೂರು, ಜೂ.೧೯:ಮೇಕೆ ದಾಟು ಯೋಜನೆಜಾರಿಗೊಳಿಸುವ ಕುರಿಂತೆ ಶೀಘ್ರ ಕೇಂದ್ರ ಸರ್ಕಾರದ ಗಮನಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರವೂ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮೇಕೆದಾಟು ಯೋಜನೆ ವಿಚಾರವಾಗಿ ಎನ್‌ಜಿಟಿ ದಕ್ಷಿಣ ಪೀಠ ಆರಂಭಿಸಿದ್ದ ಸ್ವಯಂ ಪ್ರೇರಿತ ವಿಚಾರಣೆಯನ್ನು ಪ್ರಧಾನ ಪೀಠ ಇತ್ಯರ್ಥಪಡಿಸಿದೆ. ಯೋಜನೆಗಿದ್ದ ಅಡ್ಡಿಯೊಂದು ನಿವಾರಣೆಯಾಗಿದೆ. ಈಗ ಕೇಂದ್ರದಿಂದ ಶೀಘ್ರವೇ ಅನುಮತಿ ಪಡೆದು ಯೋಜನೆ ಜಾರಿಗೊಳಿಸುವುದರತ್ತ ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಅವರು…

ನಾಗರಹೊಳೆಯಲ್ಲಿ ಹುಲಿಗಣತಿ ಕಾರ್ಯ ಆರಂಭ

ಮೈಸೂರು,ಜೂ,೧೯: ರಾಜ್ಯದ ಪ್ರತಿಷ್ಠಿತ ಅರಣ್ಯಪ್ರದೇಶವಾದ ನೊಗರಹೊಳೆಯಲ್ಲಿ ಎರಡನೇ ಹಂತದ ಹುಲಿ ಗಣತಿ ಆರಂಭವಾಗಿದೆ. ನಾಗರ ಹೊಳೆ ಅರಣ್ಯದಲ್ಲಿ ಕ್ಯಾಮರಾವನ್ನು ಹಳವಡಿಸಲಾಗಿದ್ದು ಹುಲಿಯ ವಯಸ್ಸು ಮತ್ತು ಲಿಂಗ ಪತ್ತೆಯನ್ನು ಮಾಡಲಾಗುತ್ತದೆ ಎಂದು ವಲಯಾಧಿಕಾರಿ ತಿಳಿಸಿದ್ದಾರೆ. ಕೊರೊನಾ ಹಾವಳಿ ಇರುವುದರಿಂದಾಗಿ ಸ್ವಯಂ ಸೇವಕರಿಗೆ ಅವಕಾಶ ಕಲ್ಪಿಸಲಾಗಿಲ್ಲ. ಒಟ್ಟು ೮೪೦ ಚದರ ಕಿ.ಮೀ ವ್ಯಾಪ್ತಿ ಇರುವ ನಾಗರ ಹೊಳೆ ಅರಣ್ಯ ಗಣತಿ ನಡೆಲಾಗುತ್ತಿದೆ. ಈಗಾಗಲೇ ಹುಲಿ ಗಣತಿ ಕಾರ್ಯಾರಂಭಗೊಂಡಿದೆ. ಪ್ರಥಮ ಹಂತದ ಗಣತಿ ಕಳೆದ ಮೇ ತಿಂಗಳಿನಲ್ಲಿ ಆರಂಭವಾಗಿ ಮುಕ್ತಾಯವಾಗಿತ್ತು. ಇದೀಗ…

ಡಿಸೆಂಬರ್‌ವರೆಗೂ ಜಿಪಂ,ತಾಪಂ ಚುನಾವಣೆ ಇಲ್ಲ-ಈಶ್ವರಪ್ಪ

ದಾವಣಗೆರೆ,ಜೂ,೧೯: ಕೊನಾನಾ ಆತಂಕದ ಹಿನ್ನೆಲಯಲ್ಲಿ ಡಿಸೆಂಬರ್ ವರೆಗೂ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ನಡೆಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಸೋಮವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು ಟೆಂಡರ್ ಆರೋಪ ಮುಗಿದು ಹೋಗಿರೋದು. ಇಲಾಖೆಯ ಕಾರ್ಯದರ್ಶಿಗಳು, ಮುಖ್ಯಮಂತ್ರಿ ಸ್ಪಷ್ಟನೆ ನೀಡಿಯಾಗಿದೆ. ಮತ್ತೆ ಕೇಳಬೇಡಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. .ಎಲ್ಲ ಬಡವರಿಗೆ ಉಚಿತ ಪಡಿತರ, ಎಲ್ಲರಿಗೂ ಉಚಿತ ಲಸಿಕೆ ನೀಡುವ ಪ್ರಧಾನಿ…

ವಿಶ್ವ್‌ಟೆಸ್ಟ್ ಚಾಂಪಿಯನ್‌ಶಿಪ್-ಮಳೆಯಿಂದ ರದ್ದು

ಸೌಥ್ಯಾಂಪ್ಟನ್,ಜೂ,೧೯:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲದಿನದಾಟ ಮಳೆಯಿಂದಾಗಿ ರದ್ದಾಗಿದೆ. ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟ ರದ್ದಾಗಿದ್ದು, ಬಿಟ್ಟು ಬಿಟ್ಟು ಆಗಮಿಸುತ್ತಿದ್ದ ಮಳೆಯಿಂದಾಗಿ ಪಂದ್ಯವನ್ನು ಆರಂಭಿಸುವ ಯಾವ ಅವಕಾಶಗಳು ಕೂಡ ಆಯೋಜಕರಿಗೆ ದೊರೆಯಲಿಲ್ಲ. ಟಾಸ್ ಅನ್ನು ಕೂಡ ಪದೇ ಪದೇ ಮುಂದೂಡಲಾಗಿತ್ತು. ನಂತರ ಭಾರತೀಯ ಕಾಲಮಾನ ೭:೨೦ರ ವೇಳೆಗೆ ವಾತಾವರಣವನ್ನು ಪರಿಶೀಲಿಸಿದ ಅಂಪೈರ್ ಗಳು ನಂತರ ಮೊದಲ ದಿನದಾಟವನ್ನು ಅಧಿಕೃತವಾಗಿ ಮುಂದೂಡಿದರು. ನಿಗದಿಯಂತೆ ಭಾರತೀಯ ಕಾಲಮಾನ ಮಧ್ಯಾಹ್ನ ೩ ಗಂಟೆಗೆ…

ನಾಯಕತ್ವ ಬದಲಾವಣೆ ಪ್ರಸ್ತಾಪ ; ಪರೋಕ್ಷ ಒಪ್ಪಿಕೊಂಡ ಈಶ್ವರಪ್ಪ

ದಾವಣಗೆರೆ, ಜೂ, 19:ಬಿಎಸ್ ವೈ ಬದಲಾವಣೆ ಕುರಿತಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ಮಾತನಾಡಿದ್ದಾರೆ,ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿರುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಪರೋಕ್ಷವಾಗಿ ಒಪ್ಪಿಕೊಂಡರು. ದಾವಣಗೆರೆಯಲ್ಲಿ ಮಾತನಾಡಿದ ಅವರು, “ನಾಯಕತ್ವ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ರಾಜಕೀಯ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಕೂತು ಚರ್ಚಿಸಿದ್ದಾರೆ. ಕುಟುಂಬದ ರೂಪದಲ್ಲಿ ಶಾಸಕರು, ಮಂತ್ರಿಗಳು ಮಾತನಾಡಿದ್ದಾರೆ. ಕೊರೊನಾ ನಿಯಂತ್ರಣ ಬಗ್ಗೆ…

ಹಕ್ಕು ಪತ್ರಕ್ಕಾಗಿ ನಿಲ್ಲದ ಹೋರಾಟ

ರಾಮನಗರ ಜೂ 19: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಈರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಅನ್ ಲಾಕ್ ನಂತರ  ಧರಣಿ ಮತ್ತೆ ಮುಂದುವರೆದಿದೆ. 2006 ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಸುಮಾರು ಎಂಟು ವರ್ಷಗಳಿಂದ ಅರಣ್ಯ ಭೂಮಿ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಈರುಳಿಗ ಸಮಾಜದ 24 ಕುಟುಂಬಗಳಿಗೆ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಒಕ್ಕಲೆಬ್ಬಿಸಿದ ಜಮೀನು ನೀಡದೆ ಅರಣ್ಯ ಇಲಾಖೆ ಕಾನೂನು ಗಾಳಿಗೆ ತೂರಿ…

ಸಿದ್ದಲಿಂಗಯ್ಯ ಸಮಾಜದ ಏಳಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿ: ಕೆ. ಶೇಷಾದ್ರಿ.

ರಾಮನಗರ ಜೂ 19: ಸಮಾಜದ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿದ ಹಾಗೂ ತಮ್ಮ ಕವಿತೆಗಳಿಂದ ಜನರಿಗೆ ಸರಿಯಾದ ಮಾರ್ಗ ತೋರಿಸುವ ಮೂಲಕ ಜನಮಾನಸದಲಿ ಶಾಶ್ವತವಾಗಿ ಉಳಿದ ಅದರ್ಶ ವ್ಯಕ್ತಿ ಡಾ.ಸಿದ್ದಲಿಂಗಯ್ಯ ಎಂದು ಮಾಜಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಹಾಲಿ ನಗರಸಭಾ ಅಧ್ಯಕ್ಷ ಕೆ ಶೇಷಾದ್ರಿ ಹೇಳಿದರು. ನಗರದ ಐಜೂರು ವೃತ್ತದಲ್ಲಿ ಸಿದ್ದಲಿಂಗಯ್ಯರವರಿಗೆ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸಿದ್ದಲಿಂಗಯ್ಯರವರು ಬಹಳ ಸರಳವಾಗಿ ತಮ್ಮ ಬದುಕನ್ನು ಕಟ್ಟಿಕೊಂಡ ಜೀವನ ನಡೆಸುತ್ತಿದ್ದರು…

ಕ್ಷಮಿಸು ಭುವನೇಶ್ವರಿ..

ಎನ್.ಸಿ. ಶಿವಪ್ರಕಾಶ್,ಮಸ್ಕತ್,ಒಮಾನ್ ಕ್ಷಮಿಸು ಭುವನೇಶ್ವರಿ.. ಊಳಿಡುತಿಹಳು ಭೂರಮೆ ಕಳಚಿ ಕೇಳು ನಿನ್ನ ಗರಿಮೆ ಹೆತ್ತ ತಾಯ ಕರುಳ ಸಂಕಟ ಅರಿಯದಾದೆ ನೀ ಮಾನವಮರ್ಕಟ ಜಗದದಾಹ ಹಿಂಗಿಸಲು ಭಗೀರಥಿಗೆ ಒಡಲಾದೆ ಹಸಿವಭರಿಸೆ ನೀ ಹೊತ್ತೆ ಬವಣೆಗಳ ಬೀಡೆ ಋತುಗಳ ರಂಗೋಲಿಗೆ ಜೀವರಂಗು ತುಂಬಿದೆ ಮೇಲೊಂದು ಮಳೆಯಬಿಲ್ಲನಿಡೆ ನಾಕವದು ಧರೆಯಲಿ ಅವತರಿಸಿದೆ ಸಾಗರ ಬ್ರಹ್ಮಾಂಡದಚ್ಚರಿ ಗೌರಿಶಂಕರ ಔನತ್ಯದ ಪರಧಿ ಕೆಳಗೆ ಹಸಿರು, ಮೇಲೆ ನೀಲಿ ಅನನ್ಯ ಸೊಬಗಿಗೆ ಕುಂದಣ ಹಕ್ಕಿಪಿಕ್ಕಿ ಚಿಲಿಪಿಲಿ ಉಸಿರನಿಟ್ಟೆ, ಜೀವವೈವಿಧ್ಯ ಸೃಜಿಸಿದೆ ಒಲವನಿಟ್ಟೆ, ಸರ್ವಸಾಂಗತ್ಯ ಬಯಸಿದೆ…

ಮೇಕೆದಾಟು ಯೋಜನೆಗೆ ರಾಜ್ಯಕ್ಕೆ ಮುನ್ನಡೆ

ಬೆಂಗಳೂರು, ಜೂ,19:ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಹಸಿರು ಪೀಠ ವಜಾಗೊಳಿಸಿದೆ. ಈ ಮೂಲಕ ಕರ್ನಾಟಕಕ್ಕೆ ಮುನ್ನಡೆಯಾಗಿದ್ದಯ ಶೀಘ್ರ ಕಾಮಗಾರಿ ಸಲ್ಲಿಸಲು ಸರ್ಕಾರ ಯೋಜನೆ ರೂಪಿಸಲು ತಯಾರಿ ನಡೆಸಿದೆ. ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆಯದೆ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಮುಂದಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದ ರಾಷ್ಟ್ರೀಯ ಹಸಿರು ಪ್ರಾಧಿಕಾರ ಈ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. “ಜಲಾಶಯ ನಿರ್ಮಾಣ ವಿವಾದ ಸುಪ್ರೀಂಕೋರ್ಟ್…

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್

ನ್ಯೂಯಾರ್ಕ್,ಜೂ,೧೮: ಆಂಟೋನಿಯೊ ಗುಟೆರೆಸ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ.ಇವರು ಮುಂದಿನ ಐದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಶುಕ್ರವಾರದಂದು ೧೯೩ ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುಟೆರೆಸ್ ಅವರನ್ನು ಆಯ್ಕೆ ಮಾಡಲಾಯಿತು’ಬಲಿಷ್ಠ ಹಾಗೂ ಸಣ್ಣ ರಾಷ್ಟ್ರಗಳ ನಡುವಣ ನಂಬಿಕೆಯನ್ನು ಖಾತ್ರಿಪಡಿಸಲು, ಸೇತುವೆ ನಿರ್ಮಿಸಲು ಮತ್ತು ನಂಬಿಕೆಯನ್ನು ಬೆಳೆಸಲು ನಿರಂತರವಾಗಿ ತೊಡಗಿಸಿಕೊಳ್ಳುವುದಾಗಿ’ ಪ್ರಮಾಣ ವಚನ ಸ್ವೀಕರಿಸದ ಬಳಿಕ ಗುಟೆರೆಸ್ ತಿಳಿಸಿದ್ದಾರೆಬಾನ್ ಕಿ ಮೂನ್ ಉತ್ತರಾಧಿಕಾರಿಯಾಗಿ ಹಾಗೂ ವಿಶ್ವಸಂಸ್ಥೆಯ ಒಂಬತ್ತನೇ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರೆಸ್ ಅವರು…

ಹೆಗಡೆ ಉಚ್ಚಾಟನೆ ಬಿಜೆಪಿ ಗೆ ಅಧಿಕಾರ ತಂದು ಕೊಟ್ಟಿತೇ?

ಕಳೆದ ೨೫ ವರ್ಷಗಳ ಹಿಂದೆ ದೇವೇಗೌಡರು ಪ್ರಧಾನಿ ಆದ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಿ ೨೫ ವರ್ಷಗಳು ಸಂದಿವೆ.ಅವರ ಉಚ್ಚಾಟನೆ ಪರಿಣಾಮವಾಗಿ ಹೆಗಡೆ ಎನ್‌ಡಿಎ ಸೇರಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಸ್ತತ್ವಕ್ಕೆ ಬರಲು ಹೇಗೆ ಕಾರಣರಾದರು ಎನ್ನುವುದನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಇಲ್ಲಿ ಆಗಿನ ರಾಜಕಾರಣದ ಬೆಳವಣಿಗೆ ಕುರಿತು ಚಿತ್ರಿಸಿದ್ದಾರೆ. ಹೆಗಡೆ ಉಚ್ಚಾಟನೆ ಬಿಜೆಪಿ ಗೆ ಅಧಿಕಾರ ತಂದು ಕೊಟ್ಟಿತೇ? ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರನ್ನು ಅವರೇ ಕಟ್ಟಿದ ಪಕ್ಷ ಜನತಾ ದಳದಿಂದ…

ಇಬ್ರಾಹಿಂ ಆದಿಲ್‌ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್

ಇಬ್ರಾಹಿಂ ಆದಿಲ್‌ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್ ಕರ್ನಾಟಕದ ಚರಿತ್ರೆಯಲ್ಲಿ ವಿಜಯಪುರದ ಆದಿಲ್‌ಶಾಹಿಗಳ ಪಾತ್ರ ಗಮನಾರ್ಹ. ಈ ಮನೆತನವು ಎರಡು ಶತಮಾನ(೧೬-೧೭)ಗಳ ಕಾಲ ತನ್ನ ಆಳ್ವಿಕೆಯನ್ನು ಸಮರ್ಥವಾಗಿ ನಡೆಸಿದೆ. ಈ ಮನೆತನದ ಅರಸರಲ್ಲಿ ೨ನೆಯ ಇಬ್ರಾಹಿಂ ಆದಿಲ್‌ಶಹನ(೧೫೮೦-೧೬೨೭) ಕಾಲ ವರ್ಣರಂಜಿತವಾದದ್ದು. ತನ್ನ ೪೭ ವರ್ಷಗಳ ಸುದೀರ್ಘ ಆಳ್ವಿಕೆಯಲ್ಲಿ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ಸುಭದ್ರಗೊಳಿಸಿದ್ದನು. ಆಡಳಿತವಲ್ಲದೆ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ದೃಷ್ಟಿಕೋನವುಳ್ಳ ವ್ಯಕ್ತಿತ್ವ ಅವನದಾಗಿತ್ತು. ಇವನ ಅವಧಿಯಲ್ಲಿ ರಾಯಚೂರು ಮತ್ತು ಮುದಗಲ್ಲು ಕೋಟೆಯ…

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಗೆ ಅಭಿನಂದನೆ ಸಲ್ಲಿಸಿದ ಕನ್ನಡ ಪರ ಸಂಘಟನೆಗಳು

ಬೆಂಗಳೂರು,ಜೂ,18:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ಅಧಿಕಾರ ಸ್ವೀಕರಿಸಿದ ಡಾ. ಸಂತೋಷ ಹಾನಗಲ್ ಅವರನ್ನು ಕನ್ನಡಪರ ಸಂಘಟನೆಗಳು ಅವರ ಕಛೇರಿಯಲ್ಲಿ ಅಭಿನಂದಿಸಿದವು. ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ್, ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾಖಾನ್, ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಸದ್ಭಾವನ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶಮೂರ್ತಿ, ಕರ್ನಾಟಕ ವಿದ್ಯಾರ್ಥಿಕೂಟದ ಪ್ರಧಾನ ಕಾರ್ಯದರ್ಶಿ ಹರ್ಷ, ವಿಷ್ಣುಸೇನೆಯ ಆನಂದ್ ಮತ್ತಿತರರು ನೂತನ‌…

ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಮೋದಿಗೆ ಮನವಿ

ಬೆಂಗಳೂರು,ಜೂ. 18: ವಿರೋಧ ವ್ಯಕ್ತಪಡಿಸುತ್ತಿರುವ ತಿಮಿಳುನಾಡು ಸರ್ಕಾರಕ್ಕೆ ಮೇಕೆ ದಾಟು ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮೇಕೆದಾಟು ವಿಚಾರದ ಕುರಿತು ಇನ್ನು ಸುಪ್ರೀಂ ಕೋರ್ಟಿನಲ್ಲಿ ಇನ್ನು ಕೇಸ್​ ನಡೆಯುತ್ತಿದೆ. ರಾಜ್ಯದ ಹಿತಾಸಕ್ತಿ ಬದ್ಧವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಈ ಕುರಿತು ಉತ್ತಮ ವಾದ ಕೂಡ ನಡೆದಿದೆ. ಈ ಬಗ್ಗೆ ನ್ಯಾಷನಲ್ ಎನ್.ಜಿ.ಟಿ ಸ್ಪಷ್ಟಪಡಿಸಿದ್ದು,…

ಬಡವರಿಗೆ ಅನ್ನ,ವಸತಿ,ಉದ್ಯೋಗ ಒದಗಿಸುವ ಸಂಕಲ್ಪ-ಸೋಮಣ್ಣ

ಬೆಂಗಳೂರು,ಜೂ,೧೮: ರಾಜ್ಯದಲ್ಲಿ ಕಷ್ಟದಲ್ಲಿರುವ ಬಡವರಿಗೆ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ಒದಗಿಸುವುದು ನಮ್ಮ ಸಂಕಲ್ಪ ಎಂದು ವಸತಿ ಸಚಿವರಾದ ವಿ ಸೋಮಣ್ಣನವರು ಅಭಿಪ್ರಾಯಪಟ್ಟಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜ ನಗರ ವಾರ್ಡ್‌ನಲ್ಲಿ ಬಡವರು, ಬೀದಿ ಬದಿಯ ವ್ಯಾಪಾರಿಗಳು, ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಿ ಬಳಿಕ ಮಾತನಾಡಿದ ಸೋಮಣ್ಣನವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ೯ವಾರ್ಡ್‌ಗಳಲ್ಲಿ ಆರ್ಥಿಕವಾಗಿ ಹಿಂದುಳಿದರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಸೋನ ಮಸೂರಿ ಅಕ್ಕಿ, ಎಣ್ಣೆ, ಬೇಳೆ ಮತ್ತು ಸಾಂಬಾರ್…

ಫೋನ್ ಕದ್ದಾಲಿಕೆ ಆರೋಪ: ಸಮಗ್ರ ತನಿಖೆಗೆ ಕೈ ಒತ್ತಾಯ

ಬೆಂಗಳೂರು,ಜೂ,೧೮:ಫೋನ್ ಕದ್ದಾಲಿಕೆಯನ್ನು ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೇ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷದ ಶಾಸಕರಿಂದಲೇ ಇಂತ ಆರೋಪ ಬಂದಿದೆ ಹೀಗಾಗಿ ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು,ಅಲ್ಲದೆ ,ರಮೇಶ್ ಜಾರಕಿಹೊಳಿ ಪ್ರಕರಣದಲ್ಲೂ ಫೋನ್ ಕದ್ದಾಲಿಕೆ ಆರೋಪ ಕೇಳಿಬಂದಿತ್ತು ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ ಈ ಸರ್ಕಾರ ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ್ದೆಲ್ಲವನ್ನೂ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆಫೋನ್ ಕದ್ದಾಲಿಕೆ…

ಸೋದರಿ; ಠಾಕೂರ್ ಹಾಗೂ ಸಾಹಿತ್ಯರಚನೆಕಾರ ಜಿ.ವಿ.ಅಯ್ಯರ್

ಸೋದರಿ; ಠಾಕೂರ್ ಹಾಗೂ ಸಾಹಿತ್ಯರಚನೆಕಾರ ಜಿ.ವಿ.ಅಯ್ಯರ್ ಟಿ.ವಿ. ಸಿಂಗ್ ಠಾಕೂರ್:ಕನ್ನಡದ ಮೊದಲ ಕಾದಂಬರಿ ಆಧರಿಸಿದ ಕೃಷ್ಣ್ಣಮೂರ್ತಿಪುರಾಣಿಕರ‘ಧರ್ಮದೇವತೆ’ ಆಧಾರಿತ‘ಕರುಣೆಯೇಕುಟುಂಬದಕಣ್ಣು’ ಚಿತ್ರದನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಹೊಂದಿರುವಟಿ.ವಿ.ಸಿಂಗ್ ಠಾಕೂರ್೧೯೧೧ರಲ್ಲಿ ಜನಿಸಿದರು. ಮೂಲ ಹೆಸರು ವಿಠಲ್ ಸಿಂಗ್,ಇವರು ಮಹಾತ್ಮ ಪಿಕ್ಚಸ್‌ನ ಡಿ.ಶಂಕರ್ ಸಿಂಗ್ ಅವರ ಬಂಧು.ಛಾಯಾಗ್ರಹಣದಲ್ಲಿ ಪಡೆದಿದ್ದಅನುಭವ ನಿರ್ದೆಶನದಲ್ಲಿ ಸಹಾಯವಾಯಿತು. ನಿರ್ದೇಶನದ ಪ್ರಥಮಚಿತ್ರ “ಸೋದರಿ’. ಹಲವಾರುಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿದರು. ಕನ್ನಡದಲ್ಲಿ ೨೭ ಚಲನಚಿತ್ರಗಳನ್ನು ನಿರ್ದೇಶನ ಮಾಡಿದರು.ಇವರಎಲ್ಲ ಚಿತ್ರಗಳಿಗೂ ಸಹನಿರ್ದೇಶನ, ಸಾಹಿತ್ಯ ನಿರ್ವಹಿಸಿದವರು ಜಿ.ವಿ.ಅಯ್ಯರ್. ಹರಿಭಕ್ತ’, ’ಓಹಿಲೇಶ್ವರ’, ಜಗಜ್ಯೋತಿ ಬಸವೇಶ್ವರ’, ರಾಷ್ಟ್ರಪತಿಗಳ ಬೆಳ್ಳಿಪದಕ ಪಡೆದ’ಚಂದವಳ್ಳಿಯ…

ಸಂಚಾರಿ ವಿಜಯ್ ಸಾವಿನ ಜೊತೆ ತಳಕು ಹಾಕಿಕೊಂಡ ಪ್ರಶ್ನೆಗಳು

writing-ಪರಶಿವ ಧನಗೂರು ಕನ್ನಡ ಚಿತ್ರರಂಗದ ಯುವನಟ, ರಂಗಕರ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಆಕಸ್ಮಿಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ. ನಾಡಿನಾದ್ಯಂತ ಎಲ್ಲರಲ್ಲೂ ನೋವು ತಂದಿದೆ. ಕರ್ನಾಟಕ ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿ ಕರ್ತವ್ಯ ನಿರ್ವಹಿಸಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಪೋಲೋ ಆಸ್ಪತ್ರೆಯಲ್ಲಾದ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಖುದ್ದು ಭರಿಸಲು ಮುಂದೆ ಬಂದಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ನಟ ಸಂಚಾರಿ ವಿಜಯ್ ಕುಟುಂಬಕ್ಕೆ ಇದರಿಂದ ಸ್ವಲ್ಪ ಮಟ್ಟಿಗೆ ಸಾಂತ್ವಾನ ಸಿಗಬಹುದೇನೋ.…

1 88 89 90 91 92 112
Girl in a jacket