Girl in a jacket

Author kendhooli_editor

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ. ಧರ್ಮ ಅಧ್ಯಾತ್ಮದ ವಿಶೇಷ ಉತ್ಸವ ಜಾತ್ರೆ. ಹಲವೆಡೆ ಹೆಸರಿಗೆ ಜಾತ್ರೆ, ನಡೆಯುವುದು ವಿಲಾಸ, ಕಿವಿ ಕಣ್ಣು ನಾಲಿಗೆಯ ಹಬ್ಬ! ಊರಹಬ್ಬ ಹುಟ್ಟು ಹಬ್ಬಗಳಲ್ಲಿ ಕೆಲರು ನೀಡುವರು ಸಾವಿರ – ಲಕ್ಷ ಜನರಿಗೆ ಮದ್ಯ ಮಾಂಸ! ಅದು ಹತ್ತು ರೂ ವಸ್ತುವನ್ನು ಸಾವಿರ ರೂ ಗೆ ಮಾರಿ ಹಿರಿದ, ಬೀದಿ ವ್ಯಾಪಾರಿಗಳಿಗೆ ದಿನಕ್ಕೆ ಪ್ರತಿಶತ ಹತ್ತು ರೂಗಳಂತೆ ಬಡ್ಡಿ ಕಿತ್ತಿದ,ಚಿನ್ನದ ಸ್ವತ್ತಿನ ಸಾಲ ನೀಡಿ ಸರ್ವಸ್ವ…

ರಾಜ್ಯದಲ್ಲಿ16387 ಹೊಸ ಕೇಸ್ ಪತ್ತೆ, 21199 ಜನರು ಗುಣಮುಖ

ಬೆಂಗಳೂರು,ಜೂ,02 : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಹೊಸ ಕೇಸ್ ಪತ್ತೆಯಾಗಿವೆ. ಇಂದು ಸಂಜೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಜನರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಹಾಗೂ 463 ಜನರು ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 21199 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ…

ಕೋವಿಡ್ ಶೀಲ್ಡ್,ಕೋವ್ಯಾಕ್ಸಿನ್ ಖರೀದಿ ಕುರಿತ ಅಂಕಿ- ಅಂಶ ಸಲ್ಲಿಸಲು ಕೇದ್ರಕ್ಕೆ ಸುಪ್ರೀಂ ಆದೇಶ

ನವದೆಹಲಿ,ಜೂ,02: ಕೊರೊನಾ ಸೋಂಕಿತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಖರೀದಿ ಮಾಡಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ V ಲಸಿಕೆಗಳ ಅಂಕಿ-ಸಂಖ್ಯೆಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಎರಡು ವಾರಗಳಲ್ಲಿ ಎಲ್ಲಾ ವಿವರಗಳನ್ನೂ ಪ್ರಮಾಣಪತ್ರದಲ್ಲಿ ಸಲ್ಲಿಸುವಂತೆ ಕೋರ್ಟ್ ಹೇಳಿದೆ. ಸಂಗ್ರಹ ಮಾಡಿರುವ ಲಸಿಕೆಗಳ ದಿನಾಂಕ, ಸಂಗ್ರಹಕ್ಕೆ ಆದೇಶ ನೀಡಿದ ದಿನಾಂಕ, ಲಸಿಕೆಗಳ ಪ್ರಮಾಣ ಸಹಿತ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಕೋರ್ಟ್ ಹೇಳಿದೆ. ಇನ್ನು ಶೇಕಡವಾರು ಜನಸಂಖ್ಯೆಗೆ ನೀಡಿರುವ ಲಸಿಕೆಯ ವಿವರಗಳನ್ನೂ ಕೋರ್ಟ್…

ಮೂಗಿಗಿಂತ ಮೂಗುತಿ ದೊಡ್ಡದು

ಶ್ರೀ. ಡಾ. ಆರೂಢಭಾರತೀ ಸ್ವಾಮೀಜಿ. ಬಸಿದ್ಧಸೂಕ್ತಿ : ಮೂಗಿಗಿಂತ ಮೂಗುತಿ ದೊಡ್ಡದು. ಮೂಗಿನ ಚಂದಕ್ಕೆ ಮೂಗುತಿ. ಮೂಗು ಉಸಿರಾಡುತ್ತೆ, ಮೂಗುತಿಯಲ್ಲ.ಮೂಗು ಮುಖ್ಯ, ಮೂಗುತಿಯಲ್ಲ. ಈ ಪರಿಜ್ಞಾನವಿಲ್ಲದೇ ಮೂಗು ಲೆಕ್ಕಕ್ಕಿಲ್ಲವೆಂಬಂತೆ ಕೆಲರು ಅದ್ದೂರಿ ದೊಡ್ಡ ಮೂಗುತಿಯೊಂದಿಗೆ ಸಂಭ್ರಮಿಸುವರು! ಹನುಮಂತನಿಗಿಂತ ಆತನ ಬಾಲ ಉದ್ದದಂತೆ! ಮೂಗು ಮಾಡಿದ ದೇವರ ನೆನೆಯರು,ಮೂಗುತಿ ಮಾಡಿದ ಅಕ್ಕಸಾಲಿಗನ ಹೊಗಳುವರು! ಕೆಲರಿಗೆ ತಾಯಿಗಿಂತ ಹೆಂಡತಿ, ಹೆತ್ತವರಿಗಿಂತ ಹೊರಗಿನವರೇ ಮುಖ್ಯವೆನಿಸುವರು! 50 ಕೆಜಿ ತೂಕದವರಿಗೆ ಸಾವಿರ ಕೆಜಿ ತೂಕದ ಹಾರ! ಕೆಲ ಹೋಟೆಲ್ಗಳಲ್ಲಿ ತಿಂಡಿ ತೀರ್ಥಕ್ಕಿಂತ ಥಳಕು…

ನಟ್ ಯಶ್‌ನಿಂದ ೩೦೦೦ ಕಾರ್ಮಿಕರಿಗೆ ತಲಾ ೫೦೦೦ ರೂ ಪರಿಹಾರ

ಬೆಂಗಳೂರು,ಜೂ,೦೧; ಕೊರೊನಾ ಅಟ್ಟಹಾಸದಿಂದ ರಾಜ್ಯ ಸರ್ಕಾರ ಲಾಕ್‌ಡೌನ್‌ಮಾಡಿದ ಪರಿಣಾಮ ಚಿತ್ರದ್ಯೋಮ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಕಲಾವಿದರು ತಂತ್ರಜ್ಞರು,ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಮೂರು ಸಾವಿರ ಕಾರ್ಮಿಕರಿಗೆ ನಟ ಯಶ್ ತಲಾ ೫೦೦೦ ರೂಗಳನ್ನು ಘೋಷಿಸಿದ್ದಾರೆ. ಹೌದು. ಇದು ಬರೀ ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಚಿತ್ರರಂಗದ ೨೧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೩,೦೦೦ಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ ೫ ಸಾವಿರವನ್ನು ನನ್ನ…

ಶ್ರೀ ಈಶ್ವರಾನಂದ ಸ್ವಾಮೀಜಿ ಬ್ರಹ್ಮೈಕ್ಯ

ಬೆಳಗಾವಿ, ಜೂ,01:ಬೆಳಗಾವಿ ಜಿಲ್ಲಾ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೋ. ಬ್ರ. ಸದ್ಗುರು ಶ್ರೀ ಈಶ್ವರಾನಂದ ಮಹಾಸ್ವಾಮೀಜಿ (65) ಇಂದು ಬೆಳಗಿನ ಜಾವ 2 ಘಂಟೆಗೆ ಬ್ರಹ್ಮಲೀನರಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕೋವಿಡ್ ಪೀಡಿತರಾಗಿದ್ದ ಶ್ರೀಗಳು ಕೊಲ್ಲಾಪುರ ಬಳಿಯ ಕಣೇರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅವರನ್ನು ಮಠಕ್ಕೆ ಕರೆತರಲಾಗಿತ್ತು. ಮಠದಲ್ಲಿಯ ಕೊನೆಯುಸಿರೆಳೆದರೆಂದು ಹೇಳಲಾಗಿದೆ. ಹುಕ್ಕೇರಿ ತಾಲ್ಲೂಕಿನ ಕೊಚ್ರಿ ಎಂಬಲ್ಲಿ ಶ್ರೀ ದುಂಡಪ್ಪ ಶ್ರೀಮತಿ ಶಿವಕ್ಕ ಲೋಳಸೂರೆ…

‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರಕಥೆಗೆ ಪ್ರಶಸ್ತಿ

ಕನ್ನಡದ ಚಿತ್ರ ‘ದಾರಿ ಯಾವುದಯ್ಯಾ ವೈಕುಂಠಕೆ ಚಿತ್ರಕಥೆಗೆ ಉತ್ತಮ ಚಿತ್ರಕತೆ ಪ್ರಶಸ್ತಿ ದೊರಕಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಛಪತ್ರಪತಿ ಶಿವಾಜಿ ಅಂತರಾಷ್ಟ್ರೀಯ ಚಲನಚಿತರೋತ್ಸವದಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ ಇದರ ಜೊತೆಗೆ “ಸ್ಪೇನ್” ನಲ್ಲಿ ನಡೆಯುವ ಬಾರ್ಸೆಲೋನಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿಗಾಗಿ ಬೇರೆ ಬೇರೆ ದೇಶದ ನಿರ್ದೇಶಕರ ಜೊತೆ ಸ್ಪರ್ಧೆಗಿಳಿದು ಕೊನೆಗೂ “ಅತ್ಯುತ್ತಮ ನಿರ್ದೇಶಕ” ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ. “ನಾವ್ಡಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ೧೬೦೦ ಸಿನಿಮಾಗಳ ಪೈಕಿ ನನಗೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿ ತಂದಿತು.…

ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿಅಂಡರ್‌ವರ್ಲ್ಡ್ ಡಾನ್ ಚಿತ್ರ !

ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಬೆಂಗಳೂರಿನ ಅಂಡರ್‌ವರ್ಲ್ಢಡಾನ್ ಚಿತ್ರ ತೆರೆಗೆ ಬರಲಿದೆ. ಹೌದು ಅಗ್ನಿ ಶ್ರೀಧರ್ ಕತೆ ಬರೆದಿರುವ ಈ ಡಾನ್ ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ೬೦ ಮತ್ತು ೭೦ರ ದಶಕದ ಕಥೆಗೆ ಬೆಂಗಳೂರಿನಲ್ಲಿ ಸೂಕ್ತ ಸ್ಥಳ ಹುಡುಕಾಡುವುದೇ ದೊಡ್ಡ ಸವಾಲಾಗಿದೆ ಹಾಗಾಗಿ ಸದ್ಯ ಲೊಕೇಶ್‌ನ ಹುಡುಕಾಟದಲ್ಲಿ ಚಿತ್ರನಿರ್ಮಾಣ ತಂಡ ಬೆಂಗಳೂರಿನಲ್ಲಿ ಆ ರೀತಿಯ ಸ್ಥಳಗಳು ಸಿಗುವುದು ಕಷ್ಟ ಹೀಗಾಗಿ ನಗರದಿಂದ ಹೊರಗೆ ಅಂದರೆ ಕೋಲಾರ ಮತ್ತು ಮೈಸೂರಿನಲ್ಲಿ ಆ ಕಾಲಕ್ಕೆ ತಕ್ಕನಾದ ವಾತಾವಾರಣ ಸೃಷ್ಟಿಸಲು ಯೋಜಿಸಲಾಗುತ್ತಿದೆ.…

ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ೧೨೨ ರೂ ಇಳಿಕೆ

ನವದೆಹಲಿ,ಜೂ,೦೧: ತೈಲ ಬೆಲೆ ಜೊತೆ ಜೊತೆಗೆ ಏರಿಕೆಯಾಗುತ್ತಿದ್ದ ವಾಣಿಜ್ಯ ಅನಿಲ ಸಿಲಿಂಡರ್ ದರ ಇಳಿಕೆಯಾಗಿದೆ.ಆದರೆ ಗೃಹ ಬಳಿಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊರೊನಾ ಮದ್ಯೆ ಅಗತ್ಯವಸ್ತುಗಳು ಏರಿಕೆ ಕಾಣುತ್ತಿದ್ದವು ಈಗ ಅನಿಲಿ ಸಿಲಿಂಡರ್ ದರ ೧೨೨ ರೂ ಕಡಿತಗೊಳಿಸಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರತೀ ಸಿಲಿಂಡರ್ ದರದಲ್ಲಿ ೧೨೨ರೂ ಕಡಿತ ಮಾಡಿದೆ. ಆದರೆ ೧೪.೨ ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಐಒಸಿ…

ಸಿದ್ದರಾಮಯ್ಯಗೆ ಜ್ವರ-ಮೂರು ದಿನ ವಿಶ್ರಾಂತಿ

ಬೆಂಗಳೂರು, ಜೂ, ೦೧: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಸೋಮವಾರ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ, ಈ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಕೂಡ ಮಾಡಿಸಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ವೈದ್ಯ ಡಾ. ರವಿ ಕುಮಾರ್ ಅವರು ಆರೋಗ್ಯ ತಪಾಸಣೆ ನಡೆಸಿದ್ದು, ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ, ಆದರೂ ಜ್ವರ ಇರುವ…

ಆಸ್ತಿಗಾಗಿ ಸಹೋದರರ ನಡುವೆ ಜಗಳ-ಅಣ್ಣನನ್ನೇ ಕೊಂದ ಪಾಪಿ

ಮಂಡ್ಯ,ಜೂ,೦೧: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ಜಗಳ ಅಣ್ಣನನ್ನು ಬಲಿತಗೆದುಕೊಂಡ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (೫೪) ಮೃತ ದುರ್ದೈವಿ ಅಣ್ಣನಾಗಿದ್ದು, ಸುರೇಶ್ ಕೊಲೆ ಮಾಡಿದ ತಮ್ಮನಾಗಿದ್ದಾನೆ. ಕೊಲೆಯಾದ ಬಾಲಕೃಷ್ಣ ಮೈಸೂರಿನಲ್ಲಿ ವಾಸ ಮಾಡುತ್ತಿದ್ದು, ಲಾಕ್‌ಡೌನ್ ಆಗಿರುವ ಕಾರಣ ಅರಳಕುಪ್ಪೆ ಗ್ರಾಮಕ್ಕೆ ಬಂದಿದ್ದರು. ಜಮೀನು ವಿಚಾರದಲ್ಲಿ ಬಾಲಕೃಷ್ಣ ಹಾಗೂ ಸುರೇಶ್ ನಡುವೆ ಈ ಹಿಂದೆ ಜಗಳವಾಗಿತ್ತು. ಹೀಗಾಗಿ ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಬೇರೆ ಬೇರೆ…

ಅಹಂಕಾರ-ದುರಹಂಕಾರಗಳ ನಡುವಿನ ತರ್ಕ

ಬಾಲ ಸಿದ್ಧನೊಮ್ಮೆ ತನ್ನ ಮನೆಯ ಎಮ್ಮೆಯ ಮೇಲೆ ಕುಳಿತನು. ಹುಡುಗರನ್ನು ಕೂಗಿ ಕರೆದು “ನಾನು ಆನೆಯ ಮೇಲೆ ಕುಳಿತಿರುವೆನು. ನೀವೆಲ್ಲಾ ಮೆರವಣಿಗೆ ಮಾಡಿರಿ” ಎಂದನು. ಎಮ್ಮೆ ಹೆಜ್ಜೆಯೇ ಇಡಲಿಲ್ಲ. ಸಿದ್ಧ  ಶಪಿಸಿದ. ಎಮ್ಮೆ ಸತ್ತಿತ್ತು! ಎಮ್ಮೆ ಸಾಕಿದ್ದ ತನ್ನ ತಾಯಿ ದೇವಮಲ್ಲಮ್ಮ ಅಳಲಾರಂಭಿಸಿದಳು. ಸಿದ್ಧ‘ಓಂ ನಮಃ ಶಿವಾಯ’ ಎನ್ನುತಾ ಎಮ್ಮೆ ಮುಟ್ಟಿದ. ಎಮ್ಮೆಬದುಕಿತು! ಈ ಘಟನೆಯನ್ನು ಸಿದ್ಧ ಹೀಗೆ ವಿವರಿಸಿದ:  ಅಹಂಕಾರವೇ ಎಮ್ಮೆ. ನಾನು ನಾನು ಎನ್ನುವುದೇ ಅಹಂಕಾರ. ಇದು ಎಲ್ಲರಲ್ಲೂ ಇರುತ್ತದೆ. ಹಡುಗರಿರಲಿ,ವೃದ್ಧರಿರಲಿ ,ಜ್ಞಾನಿಗಳಿರಲಿ, ಅಜ್ಞಾನಿಗಳಿರಲಿ,ಪ್ರತಿಯೊಬ್ಬರಲ್ಲೂ…

ವಿಜಯೇಂದ್ರ ದೆಹಲಿ ಪ್ರಯಾಣ ಸಿಎಂ ಬದಲಾವಣೆ ಸೂಚನೆಯೇ?

ಬೆಂಗಳೂರು,ಜೂ,೦೧:ರಾಜ್ಯ ಬಿಜೆಪಿಯ ಆಂತರ್ಯದಲ್ಲಿ ನಾಯಕತ್ವ ಬದಲಾವಣೆಯ ಧ್ವನಿ ಜೋರಾಗಿಯೇ ಕೇಳಬರುತ್ತಿದೆ. ಬಿಜೆಪಿ ಹಿರಿಯ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಲಾಕ್‌ಡೌನ್ ಮುಂದುವರೆಸುವ ಮೂಲಕ ನಿಮ್ಮ ಸ್ಥಾನ ಉಳಿಸಿಕೊಳ್ಳಲು ಯತ್ನಿಸಬೇಡಿ ಎಂದಿರುವುದು ಮತ್ತು ಲಿಂಗಾಯತ ಮಠಗಳ ಸ್ವಾಮೀಗಳ ಮೂಲಕ ತಮ್ಮನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದೀರಿ ಎನ್ನುವ ಹೇಳಿಕೆ ನಿಜಕ್ಕೂ ಆ ಪಕ್ಷದಲ್ಲಿನ ಆಂತರಿಕ ಭಿನ್ನಮತ ಈಗ ಮತ್ತಷ್ಟು ಬುಗಿಲೆದ್ದಿದೆ ಎಂದು ಹೇಳ ಬಹುದು . ಈ ಹೇಳಿಕೆಗಳನ್ನು ಗಮನಿಸಿದರೆ ಬಹುತೇಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಖಚಿತವೇ ಎನ್ನುವ…

ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ. ಮುಗ್ಗಲಗೇಡಿ=ಸೋಮಾರಿ. ಶಾಸ್ತ್ರ =ವೈರಾಗ್ಯ ಬೋಧಕ ವೇದಾಂತ. ಗುರುಗಳು ಪ್ರವಚನ ಮಾಡುತ್ತಿದ್ದರು:ಹುಟ್ಟು ಸಾವು, ಹಸಿವು ಬಾಯಾರಿಕೆ, ಸುಖ ದುಃಖ, ಇವೆಲ್ಲ ದೇಹಕ್ಕೆ. ಆತ್ಮನಿಗಲ್ಲ. ನಾನು ಆತ್ಮಾ, ದೇಹವಲ್ಲ. ಆತ್ಮಾ ನಿತ್ಯ, ಪರಿಪೂರ್ಣ, ನಿತ್ಯತೃಪ್ತ,ಸದಾ ಪರಿಶುದ್ಧ! ಹತ್ತಿರದ ಹುಟ್ಟು ಸೋಮಾರಿಯ ಕಿವಿಗೆ ಈ ಮಾತು ಬಿತ್ತು! ಪುಳಕಿತಗೊಂಡ, ಸಂತಸಪಟ್ಟ! ಶೌಚದ ನಂತರ ಒತ್ತಾಯಕ್ಕೆ… ತೊಳೆದುಕೊಳ್ಳುತ್ತಿದ್ದ ಆತ ಅಂದಿನಿಂದ ಅದನ್ನು ಬಿಟ್ಟ! “ನಾನು ಆತ್ಮಾ, ಪರಿಶುದ್ಧ” ಎಂದ…

ಯೂಟ್ಯೂಬ್‌ನಲ್ಲಿ ಹೈಕೋರ್ಟ್ ಕಲಾಪ

ಬೆಂಗಳೂರು,ಮೇ,೩೨: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು. ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪ ವೀಕ್ಷಿಸಲು ಅವಕಾಶ ಸಿಗಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಈ ಮಹತ್ವದ ಕ್ರಮ ತೆಗೆದುಕೊಂಡರು. ೩೧ರ ಮಧ್ಯಾಹ್ನ ೨.೪೦ರಿಂದ ಹೈಕೋರ್ಟ್ ಕಲಾಪದ ಯುಟ್ಯೂಬ್ ನೇರ ಪ್ರಸಾರ ಆರಂಭವಾಯಿತು. ಕೋರ್ಟ್ ಹಾಲ್೧ರಲ್ಲಿ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನ್ಯಾಯಪೀಠದಲ್ಲಿದ್ದರು. ಪ್ರಾಯೋಗಿಕವಾಗಿ ಕಲಾಪವನ್ನು ಯುಟ್ಯೂಬ್‌ನಲ್ಲಿ…

ಕೊರೊನಾ ವಾರಿಯರ್ಸ್ ದಾದಿಯರ ಜೊತೆ ಸಿಎಂ ಸಂವಾದ

ಬೆಂಗಳೂರು,ಮೇ,೩೧: ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ದಾದಿಯರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂವಾದ ನಡೆಸಿದರು. ಕೋವಿಡ್-೧೯ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಜಿಲ್ಲೆಗಳ ಸ್ಟಾಫ್ ನರ್ಸ್ ಗಳೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ,ಕೋವಿಡ್-೧೯ ಸಂಕಷ್ಟದ ಪರಿಸ್ಥಿತಿಯಲ್ಲಿ ಅಪಾಯ ಲೆಕ್ಕಿಸದೆ, ಸೋಂಕಿತರ ಶುಶ್ರೂಷೆಯಲ್ಲಿ ನಿರತರಾಗಿರುವ ಎಲ್ಲ ನರ್ಸ್ ಗಳ ಪರಿಶ್ರಮ, ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದರು. ವೈಯಕ್ತಿಕ ಕಷ್ಟ-ನಷ್ಟಗಳನ್ನು ಬದಿಗೊತ್ತಿ, ಕುಟುಂಬದವರಿಂದ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿರುವ ಶುಶ್ರೂಷರ ಕರ್ತವ್ಯ ಪ್ರಜ್ಞೆ ಅನುಕರಣೀಯ ಎಂದರು. ಪ್ರಸ್ತುತ ರಾಜ್ಯದಲ್ಲಿ ೨೧ ಸಾವಿರದ ೫೭೪ ಸ್ಟಾಫ್ ನರ್ಸ್…

ಮಜ್ಜಿಗೆ ಆರೋಗ್ಯಕ್ಕೆ ಸಂಜೀವಿನಿ…ಮಜ್ಜಿಗೆ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತೇ….?

ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ. ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು…

ಸಹಕಾರ ಸಂಘಗಳ ಸಾಲಕಂತುಗಳ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆ ವಾಪಾಸ್ ಪಡೆಯುವಂತೆ ಸಿಎಂಗೆ ಸಿದ್ದು ಪತ್ರ

ಬೆಂಗಳೂರು,ಮೇ,31 : ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ,ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಆಗ್ರಹಿಸಿದ್ದಾರೆ. ಸಾಲ,ಕಂತುಗಳ ಪಾವತಿ ಅವಧಿಯನ್ನು ಮುಂದೂಡಿ ಬಳಿಕ ಪೂರ್ತಿ ಕಟ್ಟಬೇಕು ಎಂಬ ಆದೇಶ ಜನರಿಗೆ ಹಾಕಿರುವ ಟೋಪಿ ಎಂದು ಅವರು ಕಿಡಿ ಕಾರಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೊನಾ…

ಸಿಎಸ್ ವಾಪಾಸ್ ಕಳೆಸಲಾಗದು-ಮೋದಿಗೆ ಪತ್ರ ಬರೆದ ಮಮತಾ

ಕೋಲ್ಕತಾ,ಮೇ,೩೧: ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರ ಸೇವೆಯನ್ನು ಹಿಂಪಡಡೆಯವಂತೆ ಕೇಂದ್ರ ಸರ್ಕಾರ ನೀಡಿದ ಅದೇಶದ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸಂಘರ್ಷ ಮುಂದುವರೆದಿದೆ. ಯಾವುದೇ ಕಾರಣಕ್ಕೂ ಮುಖ್ಯಕಾರ್ಯದರ್ಶಿ ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಮಮತಾ ಪ್ರಧಾನಿ ಮೋದಿಯವರಿಗೆ ಪತ್ರವನ್ನು ರವಾನಿಸಿದ್ದಾರೆ ಈ ಕುರಿತು ಇಂದು ೫ ಪುಟಗಳ ಪತ್ರವನ್ನು ಪ್ರಧಾನಿಗೆ ಬರೆದಿರುವ ಸಿಎಂ ಮಮತಾ, ಮೂರು ತಿಂಗಳ ವಿಸ್ತರಣೆ ನೀಡಿ ಮುಖ್ಯ ಕಾರ್ಯದರ್ಶಿಗಳ ಸೇವೆಯನ್ನು ವಿಸ್ತರಿಸಿ ಇದೀಗ…

ಸೆಟ್ರಲ್ ವಿಸ್ಟ್ರಾ ಯೋಜನೆ ಸ್ಥಗಿತಗೊಳಿಸಲು ಕೋರಿದ್ದ ಅರ್ಜಿ ವಜಾ

ನವದೆಹಲಿ,ಮೇ,೩೧: ಸೆಂಟ್ರಲ್ ವಸ್ಟಾ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಈ ಯೋಜನೆ ಒಂದು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಹೇಳಿದೆ. ಅಲ್ಲದೆ ಈ ಅರ್ಜಿ ನಿಜವಾದ ಅರ್ಜಿಯಲ್ಲಿ ಇದು ಅರ್ಜಿದಾರರ ಪ್ರೇರಿತವಾಗಿದೆ ಹಾಗಾಗಿ ಅರ್ಜಿಯನ್ನು ೧,೦೦,೦೦೦ ವೆಚ್ಚದೊಂದಿಗೆ ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿನ ಕೆಲಸವು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನಲ್ಲಿನ ಕೆಲಸದ…

1 82 83 84 85 86 97
Girl in a jacket