ರಾಜ್ಯ
ಭೋವಿಗಳ ಜಾತಿಗಣತಿ ಕೈಪಿಡಿಯಲ್ಲಿ ಅನ್ಯಾಯ – ಸರ್ಕಾರ ಸ್ಪಂದಿಸದಿದ್ದರೆ ಕೋರ್ಟ್ ಮೊರೆ : ಇಮ್ಮಡಿ ಶ್ರೀ
ಚಿತ್ರದುರ್ಗ,ಮೇ,01- ಭೋವಿ ಸಮುದಾಯ ಶ್ರಮ ಹಾಗೂ ಕುಲಕಸುಬುಗಳನ್ನು ಬದುಕನ್ನಾಗಿಸಿಕೊಂಡಿದೆ. ಆದರೆ, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗಾಗಿ ಜಾತಿಸಮೀಕ್ಷೆ ಕಾರ್ಯ ವೇಳೆ ಕುಲಕಸುಬು ನೋಂದಣಿಗೆ ಅವಕಾಶ ಇಲ್ಲದ ರೀತಿ ಕೈಪಿಡಿ ಸಿದ್ಧಪಡಿಸಿರುವುದು ಸರಿಯಲ್ಲ ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿಗಣತಿ ಕಾರ್ಯ ಸ್ವಾಗತರ್ಹ. ಒಳಮೀಸಲಾತಿ ಜಾರಿ ಪರ ನಾವಿದ್ದೇವೆ. ಆದರೆ, ನ್ಯಾಯಯುತ, ಪಾರದರ್ಶಕವಾಗಿ ಆಗಬೇಕು. ಆದರೆ, ಯಾವುದೋ ಒಂದು ಸಮುದಾಯದ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಕೈಪಿಡಿ ಸಿದ್ಧಪಡಿಸಿದಂತೆ…