Girl in a jacket

Author kendhooli_editor

ದಕ್ಷಿಣ ಆಫ್ರಿಕ ಮತ್ತು ಗಾಂಧೀಜಿಯ ಧಾರ್ಮಿಕತೆ

ಗಾಂಧಿ ಎನ್ನುವ ಮಹಾತ್ಮನನ್ನು ನಾವು ನೆನಸಿಕೊಳ್ಳುವುದು ಕೇವಲ ಅವರ ಜಯಂತಿ ಮತ್ತು ಹುತ್ಮಾತದಿನ ಬಿಟ್ಟರೆ ಮತ್ತೇ ಅವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ ಮಾಡಿದರೆ ಅದು ವಿಚಾರದಾರೆಗಳು ಅವರ ಸೈದ್ದಾಂತಿಕ ವಿಷಯಗಳ ಬಗ್ಗೆ ಪ್ರಸ್ತಾಪಗಳು ನಡೆಯುತ್ತಿರುತ್ತವೆ ಆದರೆ ದಕ್ಷಿಣ ಆಫ್ರಿಕಾದಲ್ಲಿ ಪ್ರತಿವರ್ಷ ಈ ಸಮಯದಲ್ಲಿ ನೆನಪು ಮಾಡಿಕೊಳ್ಳುತ್ತಾರೆ ಇನ್ನೊಂದು ವಿಶೇಷ ಎಂದರೆ ೧೮೯೩ ರಲ್ಲಿ ಅಲ್ಲಿನ ಪೀಟರ‍್ಮಾರ್ಟಿಸ್‌ಬರ್ಗನಲ್ಲಿ ರೈಲಿನಿಂದ ಹೊರತಳ್ಳಿದ ವಿಚಾರ ಇದೆಯಲ್ಲ ಇದರ ಬಗ್ಗೆ ಒಂದು ಗಂಭೀರ ಚರ್ಚೆಗಳು ನಡೆಯುತ್ತವೆ. ಯಾಕೆಂದರೆ ಆ ಘಟನೆಯಿಂದಲೇ ಗಾಂಧಿ…

ಕೆ.ಆರ್.ಎಸ್ ನಲ್ಲಿ ಬಿರುಕು..!! ಕಲ್ಲು ಗಣಿಗಾರಿಕೆಗಳು ತಂದಿಟ್ಟ ಆತಂಕ

writing-ಪರಶಿವ ಧನಗೂರು ಕೆಆರ್‌ಎಸ್ ಮೂರು ಪ್ರಮುಖ ನಾಲೆಗಳ ಮೂಲಕ ೧ಕೋಟಿ ಐವತ್ತು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿರುವ ರೈತರ ಜೀವನಾಡಿ. ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಕೋಟ್ಯಂತರ ಜನರ ದಾಹ ತಣಿಸುತ್ತಿರುವ ಜೀವಜಲನಿಧಿ.. ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರಿನ ಕೋಟ್ಯಂತರ ಜನರು ಬೆಚ್ಚಿ ಬೀಳುವಂತೆ ಮಾಡಿರುವ ಈ ಸುದ್ಧಿ ನಿಜಕ್ಕೂ ಆಘಾತಕಾರಿಯಾಗಿಯೇ ಇದೆ. ಹಲವು ವರ್ಷಗಳಿಂದಲೂ ಗಾಳಿಸುದ್ಧಿಯಂತೆಯೇ ಅಂತೆ-ಕಂತೆ, ಕತೆಗಳಲ್ಲಿಯೇ ಅನುಮಾನಾಸ್ಪದವಾಗಿ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿತ್ತು. ಈಗ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಯೊಂದಿಗೆ…

ಭಾರತ ಮಾತೆಗೆ ಕೇಳಿಸದು ಆದಿವಾಸಿಗಳ ಆಕ್ರಂದನ

ಭಾರತ ಮಾತೆಗೆ ಕೇಳಿಸದು ಆದಿವಾಸಿಗಳ ಆಕ್ರಂದನ ಭ್ರಮೆಯಲ್ಲಿ ಬದುಕುವ ಬಹುತೇಕ ಭಾರತವು ಬಸ್ತರ್ ಎಂಬ ಸೀಮೆಯ ಹೆಸರನ್ನು ಕೇಳಿರುವುದು ಅನುಮಾನ. ಮಧ್ಯಭಾರತದ ಕಾಡು ಕಣಿವೆ ಗುಡ್ಡಗಳಲ್ಲಿ ಹಲವು ಆದಿವಾಸಿ ನೆಲೆಗಳು ಹರಡಿ ಹಬ್ಬಿವೆ. ಈ ಸೀಮೆಗಳ ಹೆಸರಾಂತ ತವರು ಛತ್ತೀಸಗಢದ ಬಸ್ತರ್. ಅಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಸಿಲ್ಗೆರ್ ಎಂಬುದೊಂದು ಗ್ರಾಮ. ತಿಂಗಳೊಪ್ಪತ್ತಿನಿಂದ ಅಲ್ಲಿನ ಆದಿವಾಸಿಗಳ ಬದುಕು ಸರ್ಕಾರಿ ಪ್ರಾಯೋಜಿತ ಧಗೆಯಲ್ಲಿ ಕುದಿಯತೊಡಗಿದೆ. ರಾಜ್ಯ ಸರ್ಕಾರ ರಾತ್ರೋರಾತ್ರಿ ತಮ್ಮ ನೆಲದಲ್ಲಿ ಸುರಕ್ಷಾಬಲದ ಶಿಬಿರವೊಂದನ್ನು ಎಬ್ಬಿಸಿರುವ ಬೆಳವಣಿಗೆ ಈ ಬಡಪಾಯಿಗಳ…

ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಬಡವರ ಅನುಕೂಲಕ್ಕೆ ಪ್ಯಾಕೇಜ್ ಘೋಷಣೆ-ಸಿಎಂ

ಹಾಸನ,ಜೂ,೧೧:ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ ಆದರೂ ಬಡವರಿಗೆ ಅನಕೂಲವಾಗಬೇಕು ಎಂಬ ಕಾಣರಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶುಕ್ರವಾರ ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಅಪೇಕ್ಷೆಯಂತೆ ಸದ್ಯದಲ್ಲೇ ಹಾಸನ ಏರ್‌ಪೋರ್ಟ್ ಕೆಲಸ ಆರಂಭಿಸಲಾಗುವುದು.ಹಾಸನ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಿದೆ. ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಕೋವಿಡ್‌ನಿಂದ ಜನ ಸಾವಿಗೀಡಾಗುತ್ತಿರುವುದಕ್ಕೆ ಸರ್ಕಾರವೇ ಕಾರಣ ಎಂಬ…

ಕಾಂಗ್ರೆಸ್‌ಗೆ ಮೇಜರ್ ಸರ್ಜರಿ ಅಗತ್ಯವಿದೆ-ಮೊಯ್ಲಿ

ನವದೆಹಲಿ,ಜೂ,೧೧: ಜಿತನ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಈ ಕುರಿತು ಪ್ರಸ್ತಾಪಿಸಿದ್ದು ನಾಯಕರಿಗೆ ಜವಾಬ್ದಾರಿ ವಹಿಸುವಾಗ ಉನ್ನತ ನಾಯಕತ್ವ ಸೈದ್ದಾಂತಿಕ ಬದ್ದತೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ. ಜಿತಿನ್ ಪ್ರಸಾದ್ ಎಲ್ಲಕ್ಕಿಂತ ಹೆಚ್ಚಾಗಿ ವೈಯಕ್ತಿಕ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ ಮೊಯ್ಲಿ, ಉತ್ತರ ಪ್ರದೇಶದ ನಾಯಕನ ಸೈದ್ಧಾಂತಿಕ…

ಪೆಟ್ರೋಲ್ ಬೆಲೆಯಲ್ಲಿ ಮತ್ತೇ ಏರಿಕೆ

ನವದೆಹಲಿ,ಜೂ,೧೧: ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಈ ಸಂದರ್ಭದಲ್ಲೂ ಮತ್ತೇ ಇಮದು ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ ೨೯ ಪೈಸೆ ಮತ್ತು ಡೀಸೆಲ್ ದರ ೨೯ ಪೈಸೆ ಏರಿಕೆ ಮಾಡಿವೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಶುಕ್ರವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಗಳ ಪ್ರಕಾರ ಪ್ರತೀ…

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು,ಜೂ,೧೧:ದಿನೇ ದಿನೇ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ದೇಶಾದದ್ಯಂತ ಪ್ರತಿಭಟನೆ ನಡೆಸಿತು. ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇದು ಜನಸಾಮಾನ್ಯರು, ಬಡವರ ಪರ ಇರುವ ಸರ್ಕಾರ ಅಲ್ಲ, ಬಡವರ ರಕ್ತ ಹೀರುವ ಸರ್ಕಾರ, ಜನ ಕೊರೋನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಸಾಯುತ್ತಿದ್ದಾರೆ,…

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆ

ನವದೆಹಲಿ, ಜೂ, ೧೧: ಕೊರೊನಾ ವೈರಸ್ ಭಾರತದಲ್ಲಿ ದಿನೇ ದಿನೇ ಕಡಿಮೆಗೊಳ್ಳುತ್ತಿದೆ ಕಳೆದ ೨೪ ಗಂಟೆಯಲ್ಲಿ ಅದರ ಸಂಖ್ಯೆ ಮತ್ತಷ್ಟು ಇಳಿಮುಖವಾಗಿದ್ದು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ೨೪ ಗಂಟೆಯಲ್ಲಿ ೬,೧೦೦ಕ್ಕೂ ಹೆಚ್ಚಾಗಿದ್ದ ಸಾವಿನ ಸಂಖ್ಯೆ ೩,೪೦೩ಕ್ಕೆ ತಗ್ಗಿದೆ. ಒಂದೇ ದಿನ ೯೧,೭೦೨ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ ೧,೩೪,೫೮೦ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಒಟ್ಟು ೨,೯೨,೭೪,೮೨೩ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ…

ಡಿಸಿ,ಅಧಿಕಾರಿಗಳಿಂದ ಮಾಹಿತಿ ನೀಡಲು ಸರಕಾರಕ್ಕೆ ಸೂಚಿಸಿ;ಸಿದ್ದು ಪತ್ರ

ಬೆಂಗಳೂರು, ಜೂ. ೧೧:ಕೊರೊನಾ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಕುರಿತು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೋನಾ ಸಾಂಕ್ರಾಮಿಕವನ್ನು ನಿರ್ವಹಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಝೂಮ್ ತಂತ್ರಾಂಶದ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಿ…

ಶ್ರೀಲಂಕಾ ಟೂರ್ನಿಗೆ ಭಾರತ ತಂಡ ಪ್ರಕಟ,ಶಿಖರ್ ದವನ್ ಗೆ ನಾಯಕತ್ವ

ಮುಂಬೈ,ಜೂ,11:ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡಯಲಿರುವ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಎಡಗೈ ದಾಂಡಿಗ ಶಿಖರ್ ಧವನ್ ಗೆ ತಂಡದ ಸಾರಥ್ಯ ನೀಡಲಾಗಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡವನ್ನು ಪ್ರಕಟಿಸಿದ್ದು, ನಾಯಕ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಶಿಖರ್ ಧವನ್ ಗೆ ತಂಡದ ನಾಯಕತ್ವ ನೀಡಲಾಗಿದೆ. ಅಂತೆಯೇ ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಲಂಕಾ ಪ್ರವಾಸಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ…

ಅತ್ತೆಗೊಂದು ಕಾಲ ,ಸೊಸೆಗೊಂದು ಕಾಲ

       ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಅತ್ತೆಯಾದವಳು ನಾಳೆ ಹತ್ತೆಯಾಗುವಳು, ಮನೆಯ ಮೂಲೆ ಸೇರುವಳು. ಸೊಸೆ ನಾಳೆ ಅತ್ತೆಯಾಗುವಳು, ಮನೆಯ ಅಧಿಕಾರ ಹಿಡಿಯುವಳು. ಯಾವುದೂ ಯಾರಿಗೂ ಸ್ಥಿರವಲ್ಲ. ಇಂದು ನಮ್ಮದಾಗಿರಬಹುದು. ನಾಳೆ ಯಾರದೆಂದು ತಿಳಿದಿಲ್ಲ. ಪರಿವರ್ತನೆ ನಿರಂತರ ಪ್ರಕ್ರಿಯೆ. ಸ್ಥಾನದಲ್ಲಿದ್ದವರು ನಶ್ವರತೆ ಮರೆಯದೇ ಮಾಡುವ ಕರ್ತವ್ಯ ಮಾಡಲೇಬೇಕು. ವೈಯಕ್ತಿಕ ದ್ವೇಷ ಸೇಡು ಪ್ರತೀಕಾರ ನಿರ್ಲಕ್ಷ್ಯ ಅಸ್ತ್ರ ಬಳಸಿದರೆ ನಾಳೆ ಅವೇ ತದ್ವಿರುದ್ಧ ಕೈಸೇರಿ ಎರಗುವವು ನಮಗೇ.…

11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ

ಬೆಂಗಳೂರು, ಜೂ,10:ತಜ್ಞರ ನೀಡಿರುವ ಸಲಹೆ ಮೇರೆಗೆ ಕೊರೊನಾ ಸೋಂಕು ಹೆಚ್ಚಿರುವ 12 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದು ವರೆಲು ನಿರ್ಧರಿಸಾಗಿದೆ. ಈಗಿರುವ ನಿರ್ಭಂಧಗಳಲ್ಲಿ ಕೆಲವು ಮಾರ್ಪಾಡುಗಳನ್ನು ಸಡಿಲಿಕೆಗಳನ್ನು ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ . ಸಿಎಂ ಯಡಿಯೂರಪ್ಪ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು,ಕೊರೊನಾ ವೈರಸ್ ಪಾಸಿಟಿವಿಟಿ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಕಠಿಣ ಲಾಕ್‌ಡೌನ್ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೊಡಗು, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ…

ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು

ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು ಅಡ್ಡ ಹೆಸರುಗಳು ಕಾಲು ಮತ್ತು ಕವಲುದಾರಿಗಳಂತವು.ಮನೆಯ ಪರಿಸರಕ್ಕಿಂತಲೂ ಅವು ಸಮೂಹದಿಂದಲೇ ಹುಟ್ಟಿಕೊಂಡವು..ಜನರನ್ನ ವಿಶಿಷ್ಟವಾಗಿ ವಿಶೇಷವಾಗಿ ಕಾಣುವ ಹಂಬಲಹೊತ್ತ ಇವುಗಳು ಗುಣಾನುರೂಪಿಯಾದವು.ಭಿನ್ನ ದಾರಿ ಭಿನ್ನ ಗುರಿಗಳನ್ನ ಆರಿಸಿಕೊಳ್ಳುವ ಇವುಗಳನ್ನ ವಚನಕಾರರ ಕಾಲದಿಂದಲೇ ಗುರ್ತಿಸುವ ಡಾ.ಎಂ.ಎಂ. ಕಲ್ಬುರ್ಗಿಯವರು ಹೇಳುವಂತೆ ಇವು ಅಡ್ಡ ಹೆಸರು ಎಂಬುದಕ್ಕಿಂತಲೂ ಅರ್ಧ ಹೆಸರುಗಳು ಎಂದೇ ಕರೆಯಬಹುದು.ವೃತ್ತಿಸೂಚಿ ಮತ್ತು ಗ್ರಾಮ ಸೂಚಿ ನೆಲೆಯಿಂದ ನೋಡಿದಾಗ ಇವು ಸಾಮಾಜಿಕ ಕಿರು ಕಥನಗಳೂ ಹೌದೆಂಬಂತಿವೆ. ಕತ್ಲಪ್ಪ ಮೇಷ್ಟ್ರು: ಮಂಗಳವಾರದ ಕತ್ತಲು ಆವರಿಸುತ್ತಿದ್ದಂತೆಯೇ ಚೌಡಮ್ಮನ ಅಂಗಳ…

ಮೂರುದಳದ ಕಮಲದಲ್ಲಿ ನೂರು ಧ್ವನಿಗಳ ‘ಬೇಗುದಿ’

ತುರುವನೂರು ಮಂಜುನಾಥ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ‘ರಾಜೀನಾಮೆಯ ಹೇಳಿಕೆ ನಂತರ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ.ರಾಜಕೀಯ ತಂತ್ರಗಾರಿಕೆ ಬಲ್ಲ ಬಿಎಸ್‌ವೈ ಅವರು ಅದರ ಮೂರು ದಿನದ ಹಿಂದೆ ನಾಯಕತ್ವದ ವಿಚಾರವಾಗಿ ಯಾವುದೇ ವಿಚಾರಗಳು ಹೈಕಮಾಂಡ್ ಮುಂದಿಲ್ಲ ಎಂದಿದ್ದರು ಆದರೆ ತಮ್ಮ ಪುತ್ರ ವಿಜಯೇಂದ್ರ ದೇಹಲಿಗೆ ಹೋಗಿ ಬರುತ್ತಿದ್ದಂತೆ ‘ವರಿಷ್ಠರು ಬಯಸಿದರೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುತ್ತೇನೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಒಂದು ರೀತಿ ಬಿರುಗಾಳಿ ಬೀಸಿದಂತಾಗಿತ್ತು. ಆ ಹೇಳಿಕೆ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಹೈಕಮಾಂಡ್‌ಗೆ ಸಂದೇಶ…

ಮೈಸೂರು ಜಗಳ: ದೇವರೂ ಅಸಹಾಯಕ

ಮೈಸೂರು ಜಗಳ: ದೇವರೂ ಅಸಹಾಯಕ ದೇವರು ಇದ್ದಾನೋ ಇಲ್ಲವೋ ಎನ್ನುವುದು ನಾಗರಿಕ ಸಮಾಜ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದಲೂ ಇದೆ. ಒಂದು ಧರ್ಮ, ದೇವನೊಬ್ಬ ನಾಮ ಹಲವು ಎಂದರೆ ಇನ್ನೊಂದು ಧರ್ಮ, ಇರುವುದೊಂದೇ ದೇವರು ಎನ್ನುತ್ತದೆ. ಮತ್ತೊಂದು ಧರ್ಮ ಇನ್ನೇನನ್ನೋ ಹೇಳುತ್ತದೆ. ದೇವರು ಇದ್ದಾನೆ ಎನ್ನುವ ವರ್ಗದ ಜೊತೆಗೇ ದೇವರು ಇಲ್ಲ ಎನ್ನುವ ವರ್ಗ ಕೂಡಾ ಇದೆ. ಜಗತ್ತಿನ ಉದ್ದಗಲಕ್ಕೆ ಎಷ್ಟೆಲ್ಲ ಧರ್ಮ, ಎಷ್ಟೆಲ್ಲ ದೇವರು. ಕೊರೋನಾ ಮಾರಕ ದಾಳಿಯನ್ನು ನಾಶಮಾಡುವ ದೇವರು ಮಾತ್ರ ಯಾವ ಧರ್ಮದಲ್ಲೂ ಇಲ್ಲ;…

ಕಳೆದುಕೊಳ್ಳುವ ದುಃಖ

ಕಳೆದುಕೊಳ್ಳುವ ದುಃಖ ನನ್ನ ಹಿಂದಿನ ಅಂಕಣದಲ್ಲಿ ಕ್ರಮವಾಗಿ ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿಡುತ್ತಿದ್ದೆ. ಆದರೆ ಈ ಕೊರೋನ ಎಂಬ ಕಾಣದ ಜೀವವು ನಾವು ಬಯಸದ, ನೆನೆಸದ, ಊಹೆ ಮಾಡದ ಘಟನೆಗಳನ್ನು ನಮ್ಮ ಬದುಕಿನ ಹಾದಿಯಲ್ಲಿ ತಂದೊಡ್ಡಿದ ಪರಿಣಾಮ ಇಂದು ನಾನು ಅದರಿಂದಾದ ಕೆಲವು ಮಾನಸಿಕ ಗೊಂದಲಗಳು, ಯೋಚನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಮುಖ್ಯ ಶಿಕ್ಷಕರನ್ನು ಭೇಟಿಯಾಗಬೇಕೆಂದು ಒಬ್ಬ ಮಹಿಳೆ ಶಾಲೆಯ ಹತ್ತಿರ ಬಂದಿದ್ದರು. ನಾನು ಅವರನ್ನು ಮುಖ್ಯ ಕಛೇರಿಯಲ್ಲಿ ಕೂರಿಸಿದ್ದೆ. ನಂತರ…

ಕೋವಿಡ್ ಮೂರನೆ ಅಲೆ; ಮಾರ್ಗಸೂಚಿ ಬಿಡುಗಡೆ

ನವದೆಹಲಿ,ಜೂ,10:ದೇಶದಲ್ಲಿ ‌ನಿಧಾನಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.ಈಗ ಮೂರನೇ ಅಲೆಯ ಕುರಿತು ಸರ್ಕಾರ ಪೂರ್ವ ಸಿದ್ದತೆಗಳ ಬಗ್ಗೆ ತಯಾರಿ ನಡೆಸುತ್ತಿದೆ. ಮೂರನೇ ಅಲೆಯಲ್ಲಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. “ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ” ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಈಗಾಗಲೇ ಹೇಳಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೊನಾ ಬಂದರೆ ಏನು…

ಶನಿವಾರ ಶಿಕಾರಿಪುರಕ್ಕೆ ಸಿಎಂ ಯಡಿಯೂರಪ್ಪ ಭೇಟಿ

ಬೆಂಗಳೂರು,ಜೂ,೧೦: ವಾರಾಂತ್ಯದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ ಮತ್ತು ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ ಶುಕ್ರವಾರ ಹೆಚ್‌ಎಎಲ್’ಗೆ ತೆರಳಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಹಾಸನಕ್ಕೆ ಭೇಟಿ ನೀಡುವ ಅವರು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ ೧.೩೦ರ ಸುಮಾರಿಗೆ ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, ರಸ್ತೆ ಮೂಲಕ ಶಿವಮೊಗ್ಗ ಜಿಲ್ಲೆಗೆ ಶನಿವಾರ ಬೇಟಿ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಮುಂದಿನ…

ಕಟ್ಟಡ ಕುಸಿದು ಮುಂಬೈನಲ್ಲಿ ೧೧ ಸಾವು

ಮುಂಬೈ, ಜೂ, ೧೦; ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ೧೧ ಜನ ಮೃತಪಟ್ಟ ಘಟನೆ ಮುಂಬೈ ನಗರದ ಪಶ್ಚಿಮ ಭಾಗದ ಮಲಾಡ್ ಪ್ರದೇಶದಲ್ಲಿ ಸಂಭಿವಿಸಿದೆ ನಾಲ್ಕು ಅಂತಸ್ತಿನ ಕಟ್ಟಡ ಬುಧವಾರ ತಡರಾತ್ರಿ ಕುಸಿದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. ಇದುವರೆಗೂ ೧೮ ಜನರನ್ನು ರಕ್ಷಣೆ ಮಾಡಲಾಗಿದ್ದು, ೬ ಮಕ್ಕಳು ಸೇರಿದಂತೆ ೧೧ ಜನರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ೬ ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು…

1 92 93 94 95 96 112
Girl in a jacket