Girl in a jacket

Author kendhooli_editor

ಭದ್ರಾಮೇಲ್ದಂಡೆ ಯೋಜನೆಯಲ್ಲಿ 20 ಸಾವಿರ ಕೋಟಿ ಅವ್ಯವಹಾರ;ದಾಖಲೆ ಬಿಡಗಡೆ ಮಾಡಿದ ವಿಶ್ವನಾಥ್

ಬೆಂಗಳೂರು,ಜೂ,18: ಕಮಲ ಪಾಳೆಯದಲ್ಲಿ ಅಸಮಾಧಾನದ ರೋಷಾಗ್ನಿಯ ಕಿಡಿ ದಿನ ದಿನಕ್ಕೂ ಬೆಂಕಿಯಾಗಿ ಪರಿಣಮಿಸುತ್ತಿದೆ..ಈ ಹಿನ್ನೆಲೆಯಲ್ಲಿ ಎಚ್.ವಿಶ್ವನಾಥ್ ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹೊಸಬಾಂಬ್ ಸಿಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಹೆಚ್.ವಿಶ್ವನಾಥ್, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮವಾಗಿದೆ ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ. 20 ಸಾವಿರ ಕೋಟಿ ಟೆಂಬರ್ ನಲ್ಲಿ ಭಾರಿ ಅಕ್ರಮ ನಡೆದಿದೆ. ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆಯಲಾಗುತ್ತಿದೆ ಎಂದು ಕಿಡಿಕಾರಿದರು. ಕುಟುಂಬ ರಾಜಕಾರಣ…

ಮಕ್ಕಳಿಗೆ ಬಾಲ ಸೇವಾ ಯೋಜನೆ : ಜೊಲ್ಲೆ

ರಾಮನಗರ ಜೂ 18: ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ನೆರವು ನೀಡಲು ಬಾಲ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಅ ಜೊಲ್ಲೆ ಅವರು ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು ಮಕ್ಕಳಿಗೆ ಮೂರುವರೆಸಾವಿರ ರೂ. ಹಾಗೂ ಉಚಿತ ಶಿಕ್ಷಣ, ಎಸ್.ಎಸ್.ಎಲ್.ಸಿ.…

ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ?

ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ? ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ. ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ.…

ಚೊಚ್ಚಲ ಪಂದ್ಯದಲ್ಲೆ96 ರನ್ ಗಳಿಸಿ ದಾಖಲೆ ಮೆರೆದ‌ ಶಫಾಲಿ ವರ್ಮಾ

ಬ್ರಿಸ್ಟಲ್,ಜೂ,18:ಇಂಗ್ಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಮಹಿಳಾ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಶಫಾಲಿ ವರ್ಮಾ96 ರನ್ ಗಳಿಸಿ ದಾಖಲೆ ಮೆರದಿದ್ದಾರೆ. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಸತೀ ಹೆಚ್ಚು ಅಂಕ ಗಳಿಸಿದ ಮೊದಲ ಭಾರತೀಯ ‌ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸಿ. ಕೌಲ್ ಅವರ ಹೆಸರಲ್ಲಿತ್ತು. ಅವರು 1995ರ ಫೆಬ್ರುವರಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 75 ರನ್ ಗಳಿಸಿದ್ದರು. ಸ್ಮೃತಿ–ಶಫಾಲಿ ಭರ್ಜರಿ ಜೊತೆಯಾಟ: ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 167…

ಅಳಿಲು ಸೇವೆ

        ಶ್ರೀ.ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅಳಿಲು ಸೇವೆ. ಸೀತೆಯ ಕರೆತರಲು ರಾಮ ರಾವಣನ ಲಂಕೆಗೆ ತೆರಳಲು ಸಮುದ್ರಕ್ಕೆ ಸೇತುವೆ ನಿರ್ಮಿಸಿದನಂತೆ. ಸಾಧ್ಯವೇ? ಪ್ರಶ್ನೆ ಬದಿಗಿರಲಿ. ಪುಣ್ಯಮಹತ್ಕಾರ್ಯಕ್ಕೆ ನಮ್ಮದೂ ಇರಲಿ ಸೇವೆ ಎಂದು ಬಾಯಲಿ ಮರಳ ತಂದು ಸುರಿದವಂತೆ! ರಸ್ತೆಯ ಮರದ ಹೂ ಹಣ್ಣು ನೆರಳುಗಳು, ಬಳಿ ಬಂದ ಎಲ್ಲರವು. ಹನಿ ನೀರ ಗೊಬ್ಬರ ನೀಡಿ ರಕ್ಷಿಪುವ ಹೊಣೆಯೂ ಎಲ್ಲರದು! ಮಠಮಂದಿರ ಆಶ್ರಮ ಆಸ್ಪತ್ರೆ ಶಾಲೆ ರಸ್ತೆ ಸೇತುವೆಗಳು, ಜಾತಿ ಪಂಗಡ ಎಲ್ಲೆ…

ಧರ್ಮಸ್ಥಳ ವಿರುದ್ಧ ಅಪಪ್ರಾಚಾರ;ಕೆ.ಸೋಮನಾಥ್ ನಾಯಕ್ ಗೆ ಮೂರು ತಿಂಗಳು ಜೈಲು ಶಿಕ್ಷೆ

ಬೆಳ್ತಂಗಡಿ,ಜೂ,18: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರ ಮಾಡಿದ ಪ್ರಕರಣದಲ್ಲಿ ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಅಧ್ಯಕ್ಷ ಕೆ.ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ತನ್ನ ಈ ಹಿಂದಿನ ಆದೇಶವನ್ನು ಎತ್ತಿಹಿಡಿದಿದೆ, ಮೂರು ತಿಂಗಳ ಜೈಲು ಶಿಕ್ಷೆಯ ಹೊರತಾಗಿ, ಕ್ಷೇತ್ರಕ್ಕೆ 4.5 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಲು ನಾಯಕ್ ಒಡೆತನದ ಸ್ಥಿರಾಸ್ತಿಯನ್ನು ಲಗತ್ತಿಸಲು ನ್ಯಾಯಾಲಯ ಆದೇಶಿಸಿದೆ. ಅವರ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ತಿಳಿದಿದ್ದರೂ ಶ್ರೀ ಕ್ಷೇತ್ರದ…

ಸೀರೆ-ಸೆರಗು ಒಂದು ಜನಪದ ನೋಟ

ಸೀರೆ-ಸೆರಗು ಒಂದು ಜನಪದ ನೋಟ ’ ಸೀರೆ’ ಎಂಬ ಪದವು ವಿಭಿನ್ನ ಸಂಸ್ಕೃತಿಗಳನ್ನ ಸಾರುವ ಪದ. ಇದು ನಾಡನ್ನ ಉತ್ತರ ದಕ್ಷಿಣಗಳೆಂದೂ,ವಿಭಜಿಸುವುದು. ಕರ್ನಾಟಕ,ಮಹಾರಾಷ್ಟ್ರ,ಕೇರಳ,ಗುಜರಾತಿ,ಬೆಂಗಾಲಿ ಎಂದು ಉಡುವ ಕ್ರಮಗಳಲ್ಲಿನ ವೈವಿಧ್ಯತೆಗಳನ್ನ ತೋರುವವುದು. ಬ್ರಹ್ಮಣರು,ಮಾರವಾಡಿಗಳು,ಮುಸ್ಲಿಮರು, ಗೌಡತೀರು,ನೌಕರಸ್ಥರು,ಕೂಲಿಗಳು,ಗೃಹಿಣಿಯರು,ವಿಧವೆಯರು,ಕಲಾವಿದರು,ಸಾಮಾನ್ಯರು ಎಂಬ ಬಹುರೂಪಗಳನ್ನ,ಅಜ್ಜಿ,ಅವ್ವ,ಮಗಳು ಎಂಬ ತಲೆ ತಲಾಂತರಗಳನ್ನ ಸಾರುವುದು. ಸೀರೆ ಬಡತನವನ್ನ ತೋರುವ ರೀತಿಯಂತೆಯೇ ಸೀರೆಗೆ ಶ್ರೀಮಂತಿಕೆಯನ್ನೂ ಸಾರುವ ಸಾಮರ್ಥ್ಯವಿದೆ. ಋತುಮತಿ ಶಾಸ್ತ್ರ,ನಿಶ್ಚಿತ ಶಾಸ್ತ್ರ,ಧಾರೆ ಶಾಸ್ತ್ರ,ಪ್ರಸ್ತ,ಸೀಮಂತ,ತೊಟ್ಟಿಲ ಸೀರೆ,ವಿಧವಾ ಸೀರೆ ಎಂಬ ರೂಪಗಳನ್ನ ಪಡೆದಿರುವಂತೆಯೇ ಇದು ದೈನಂದಿನ ಸೀರೆ,ವೃತ್ತಿ ಸೀರೆ,ವಿಶೇಷ ಸಂದರ್ಭಗಳ ಸೀರೆ ಎಂದು ಆಯ್ಕೆಯನ್ನೂ…

ಎಲ್ಲಿ ಶೋಭಕ್ಕ..? ಕಾಣಿಸ್ತಿಲ್ಲ ಅಕ್ಕಪಕ್ಕ?

ಎಲ್ಲಿ ಶೋಭಕ್ಕ..? ಕಾಣಿಸ್ತಿಲ್ಲ ಅಕ್ಕಪಕ್ಕ? ಒಂದೆರಡು ವರ್ಷದ ಹಿಂದೆ ರಾಜ್ಯದ ಅತ್ಯಂತ ವರ್ಣರಂಜಿತ ರಾಜಕಾರಣಿಗಳ ಪಟ್ಟಿಯಲ್ಲಿದ್ದ, ನಿತ್ಯ ಸುದ್ದಿಯ ಸರಕಾಗಿದ್ದ ಶೋಭಾ ಕರಂದ್ಲಾಜೆ ಈಗ ಎಲ್ಲೂ ಕಾಣಿಸುತ್ತಿಲ್ಲ. ಹೋದಲ್ಲಿ ಬಂದಲ್ಲಿ, ಶಾಸನ ಸಭೆ ಅಧಿಕಾರಿಗಳ ಗ್ಯಾಲರಿಯಲ್ಲಿ, ವಿಧಾನ ಮಂಡಲದ ಮೊಗಸಾಲೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ, ಆಡಳಿತ ಶಕ್ತಿ ಕೇಂದ್ರ ವಿಧಾನ ಸೌಧ, ವಿಕಾಸ ಸೌಧದ ಕಾರಿಡಾರುಗಳಲ್ಲಿ ಮುಗುಳ್ನಗೆ ಚೆಲ್ಲುತ್ತ ನಿಧಾನ ಗತಿಯಲ್ಲಿ ಹೆಜ್ಜೆ ಹಾಕುತ್ತಿದ್ದ, ಎದುರಿಗೆ ಬಂದವರಿಂದ ನಮಸ್ಕಾರ ಸ್ವೀಕರಿಸುತ್ತ, ಪರಿಚಯದ ಮುಖ ಎದುರಾದರೆ ಹೆಲೋ ಹೇಳಿ…

ಮುಂದೆ ಏನಾಗುತ್ತದೆ ಎಂದು ಹೇಳಲು ನಾನು ಜೋತಿಷಿಯಲ್ಲ;ಅಶ್ವತ್ಥನಾರಾಯಣ

ಬೆಂಗಳೂರು,ಜೂ,17: ನಮ್ಮ ಪಕ್ಷದಲ್ಲಿ ಯಾರು ಲಕ್ಷ್ಮಣರೇಖೆ ದಾಟಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿ ಅಲ್ಲ. ಈಗ ಯಡಿಯೂರಪ್ಪ ಅವರು ನಮ್ಮ ನಾಯಕರು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ರಾಮನಗರದಲ್ಲಿ ರೋಟರಿ ಬಿಜಿಎಸ್ ಆಸ್ಪತ್ರೆ (ಕೋವಿಡ್‌ಯೇತರ) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ನಮ್ಮ ಪಕ್ಷದ ನಾಯಕತ್ವ ಬದಲಾವಣೆ ಸಂಬಂಧ ನಾನು ಏನನ್ನೂ ಹೇಳುವುದಿಲ್ಲ. ಯಾರಾದರು ಹೇಳಿಕೆಗಳನ್ನು ನೀಡಿದ್ದರೆ ಅವರನ್ನೇ ಕೇಳಿ. ಮುಂದಿನ ದಿನಗಳಲ್ಲಿ ನಾನು ರಾಮನಗರ ಜಿಲ್ಲಾ…

ಕಪ್ಪು ಜಗದ ಬೆಳಕಿನ ಕಿರಣ

ಕಪ್ಪು ಜಗದ ಬೆಳಕಿನ ಕಿರಣ ಅದು ೨೦೧೬ ರ ಡಿಸೆಂಬರ್ ತಿಂಗಳಲ್ಲಿ ೬ರಂದು ಪತ್ರಕರ್ತ ಮತ್ತು ಸಂಘಟಕ ಮಹೇಶ್ ಊಗಿನಹಳ್ಳಿಯವರು ಏರ್ಪಡಿಸಿದ್ದ ಚಂದಾಪುರದ ಛತ್ರಖಾನೆ ಶಾಲೆಯಲ್ಲಿ ಜೇನುಗೂಡು ವೇದಿಕೆಯ ಕನ್ನಡದ ಕಾರ್ಯಕ್ರಮವಿತ್ತು. ಅಂದು ನಮ್ಮ ತಾಲ್ಲೂಕಿನವರೇ ಆದ ಸೂಕ್ಷ್ಮ ಸಂವೇದನೆಯ ಲೇಖPರಾದ ಶೂದ್ರ ಶ್ರೀನಿವಾಸರು ಮತ್ತು ದಲಿತಕವಿ ಎಂದೇ ಕರೆಯಲ್ಪಡುವ ಬಂಡಾಯ ಕವಿ ಸಿದ್ದಲಿಂಗಯ್ಯನವರು ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯನವರು ಯಾವಾಗ ಮಾತನಾಡಿzರೂ ನವಿರಾದ ಹಾಸ್ಯ ಸುತ್ತಮುತ್ತಲಿನವರನ್ನು ಮಂದಸ್ಮಿತರನ್ನಾಗಿಸುತ್ತಿತ್ತು. ಅವರು ಮಾತನಾಡುವ ಸರದಿ ಬಂದಾಗ ಹೀಗೇ…

ಬಲವಾಯಿತು ಬಿಎಸ್‌ವೈ ಬದಲಾವಣೆಯ ಕೂಗು

ಬೆಂಗಳೂರು,ಜೂ,೧೭:ಬಿಜೆಪಿಯಲ್ಲಿ ಆಂತರಿಕ ಭಿನ್ನಮತಗಳು ಇವೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಎಸ್‌ವೈ ಬದಲಾವಣೆ ಮಾಡಬೇಕು ಎಂದು ಒಂದು ತಂಡ ನಿರಂತರ ಪ್ರಯತ್ನದಲ್ಲಿ ಇದೇ ಹೊತ್ತಿನಲ್ಲಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಶಾಸಕರು ಸಚಿವರ ಜೊತೆ ಸಭೆ ನಡೆಸಿದ್ದಾರೆ ಅಂದರೆ ಅಲ್ಲಿಗೆ ಬಿಎಸ್‌ವೈ ಬದಲಾವಣೆಯ ಕೂಗೂ ಮತ್ತಷ್ಟು ಪ್ರಭಲವಾಗಿದೆ ಎಂದು ಅರ್ಥ ಇದಕ್ಕೆ ಪೂರಕ ಎನ್ನುವಂತೆ ಅರುಣ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಸುದ್ದಾಗರರ ಜೊತೆ ಮಾತನಾಡಿರುವ ವಿಶ್ವನಾಥ್ ಬಿಎಸ್‌ವೈ ಅವರಿಗೆ ವಯಸ್ಸಾಗಿದೆ ಮೊದಲಿನಷ್ಟು ಸ್ಪಿರಿಟ್ ಅವರಿಗೆ…

ಯುವತಿ ಮೇಲೆ ಅತ್ಯಾಚಾರವೆಸಗಿ ಗ್ರಾ.ಪಂ.ಸದಸ್ಯ ನಾಪತ್ತೆ

ಆನೇಕಲ್,ಜೂ,೧೭: ಗ್ರಾಮಪಂಚಾಯಿತ ಸದಸ್ಯನೊಬ್ಬ ಯುವತಿಯನ್ನು ಮನೆಗೆ ಕರೆಸಿಕೊಂಡು ಆಕೆಗೆ ಗನ್ ತೋರಿಸಿ ಅತ್ಯಚರವೆಸಗಿದ ಘಟನೆ ಬನ್ನೇರುಘಟ್ಟ ಸಮೀಪದ ಶಾನಬೋಗನ ಹಳ್ಳಿಯಲ್ಲಿ ಜರುಗಿದೆ. ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷಾಅತ್ಯಾಚಾರ ಮಾಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಫೇಸ್‌ಬುಕ್‌ನಲ್ಲಿ ಯುವತಿಯ ಪರಿಚಯವಾಗಿದ್ದು ಆಕೆಗೆ ಮಾಡಲಿಂಗ್ ಕ್ಷೇತ್ರದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ಮೂಡಿಸಿದ್ದ. ಹೆಬ್ಬಾಳ ಮೂಲದ ಆ ಯುವತಿಗೆತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವ ಫೋಟೋಗಳನ್ನೂ ಆಕೆಗೆ ವಾಟ್ಸಪ್ ಮೂಲಕ…

ಗಜ಼ಲ್

ವಿಶಾಲಾ ಆರಾಧ್ಯ ಗಜ಼ಲ್ ಏನು ಮಾಯೆಯೇ ಗೆಳತಿ ಯಾವ ಛಾಯೆಯೇ … ಏನು ಮಾಯೆ ಯಾವ ಛಾಯೆ ಸೆಳೆಯಿತೆನ್ನ ಭವದ ಮಾಯೇ ಕರೆದಲ್ಲಿಗೆ ಕೊಳಲ ಕರೆಗೆ ಕೊರಳು ಸಾಗಿದೇ..!! ಮನದ ವೀಣೆ ನುಡಿದಿದೆ ಭಾವ ತಂತಿ ಮೀಟಿ ಎದೆಯ ಮರುಗ ಘಮಿಸಿದೆ ಜೀವ ಸೀಮೆ ದಾಟಿ ಸಾಗಿ ಬಂದು ಪ್ರೇಮ ತೀರದಿ ಮನವು ಅಲೆದಿದೆ ಒಲವ ಅರಸಿದೆ..!! ಭಾವಗಳಿಗೆ ಚಿಗುರು ಮೂಡಿ ಕಾವ್ಯದಲ್ಲಿ ಇಣುಕಿವೆ ಜೀವವಿಂದು ಹಗುರವಾಗಿ ಬಾನಿನಲ್ಲಿ ತೇಲಿದೆ ಮನದ ಬಸಿರು ಬಲಿತು ರಾಗ ಮೋಹನನ…

ಖಾಸಗಿ ಶಿಕ್ಷಣ ಶಾಲೆಗಳ ಆರ್ ಟಿ ಇ ಹಣ ಬಿಡುಗಡೆ

ಬೆಂಗಳೂರು, ಜೂ,17: ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಅಡಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾದ ವಿದ್ಯಸರ್ಥಿಗಳ ಶುಲ್ಕವನ್ನು ಮರುಪಾವತಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ ಅನ್ಬುಕುಮಾರ್ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12 (1) ಸಿ ಅಡಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2012-13ನೇ ಸಾಲಿನಿಂದ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟು ಹಂಚಿಕೆ ಮಾಡಿ,…

ಹರ ಮುನಿದರೂ ಗುರು ಕಾಯುವನು

        ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ ಹರ ಮುನಿದರೂ ಗುರು ಕಾಯುವನು. ಹರ ಶಿವ ಪರಮಾತ್ಮ ದೇವರು. ಅಂತ್ಯಗಾಣಿಸುವ, ಪಾಪ ಕಳೆಯುವ ವರನೀಡುವ ಕರುಣಾಮಯಿ ದೀನಾದಿ ರಕ್ಷಕ! ಆಯುಷ್ಯ ತೀರಿದ ಮಾರ್ಕಂಡೇಯನ ಹರ ಬದುಕಿಸಿದ! ಗುರು =ಅರಿವು, ಜ್ಞಾನದಾತ. ಸಿಟ್ಟಿನಲಿ ಧ್ವಂಸಕೆ ಕೈ ಹಾಕಿದವ, ಅರಿವಾಗುತ್ತಲೇ ರಕ್ಷಿಸುವ!ಉರಿಗಣ್ಣಿನಿಂದ ಮನ್ಮಥನ ಸುಟ್ಟ ಹರ, ರತಿದೇವಿ ಅಂಗಲಾಚಿ ಗೋಳಿಟ್ಟುದ ಕಂಡು ಕರಗಿ ಗುರುವಾಗಿ ಬದುಕಿಸಿದ! ಇಂದ್ರ ತ್ರಿಶಂಕುವಿಗೆ ಸ್ವರ್ಗ ಪ್ರವೇಶ ತಿರಸ್ಕರಿಸಿ ನೂಕಿದ! ಗುರು ವಿಶ್ವಾಮಿತ್ರ…

ರಾಜ್ಯ ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ; ಅರುಣ್ ಸಿಂಗ್

ಬೆಂಗಳೂರು,ಜೂ,16: ರಾಜ್ಯ ಬಿಜೆಪಿ ಘಟಕದಲ್ಲಿ ಯಾವ ಸಮಸ್ಯೆಗಳು ಇಲ್ಲ ಎಲ್ಲರೂ ಒಗ್ಗಾಟ್ಟಾಗಿದ್ದಾರೆ ಎಂದಿರುವ ಕರ್ನಾಟ ಉಸ್ತುವಾರಿ ಅರುಣ್ ಸಿಂಗ್ ಬಿ.ಎಸ್ ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದ್ದಾರೆ. ಮೂರು ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಿರುವ ಅವರು, ಯಡಿಯೂರಪ್ಪನವರನ್ನು ನಾಯಕತ್ವದಿಂದ ಬದಲಾವಣೆ ಮಾಡಲಾಗುತ್ತದೆ ಎಂಬ ಊಹಾಪೋಹಗಳ ಮಧ್ಯೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ವಿಷಯ ಬಗ್ಗೆ ಈಗಾಗಲೇ ಹೇಳಿದ್ದೇನೆ, ಹೀಗಾಗಿ ಯಾವುದೇ ನೇರ ಹೇಳಿಕೆ ನೀಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ಎಲ್ಲಾ ನಮ್ಮ…

ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ.

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌               ಸಿದ್ಧಸೂಕ್ತಿ : ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ. ಅಕ್ಷಿ=ಕಣ್ಣು. ಸಾಕ್ಷಿ=ಪ್ರತ್ಯಕ್ಷದರ್ಶಿ. ಘಟನೆಯಲ್ಲಿ ಭಾಗಿಯಾಗದ ಪ್ರತ್ಯಕ್ಷದರ್ಶಿ, ರಾಗ ದ್ವೇಷ ಪಕ್ಷಪಾತರಹಿತ, ಯಥಾವತ್ತಾಗಿ ನುಡಿಯುವಾತ ನಿಜ ಸಾಕ್ಷಿ. ಸತ್ಯ ಸುಳ್ಳೆಂಬ ವ್ಯಾಜ್ಯ ತೀರ್ಪಿಗೆ ಬೇಕು ಬಲಸಾಕ್ಷಿ! ಸಾಕ್ಷಿ ಹೆದರಿ, ಕೈಯೊಡ್ಡಿ ಶಾಮೀಲಾಗಿ ತಿರುಗಿಬಿದ್ದರೆ ನ್ಯಾಯ ಸತ್ತಿತು! ಅಷ್ಟು ಕೊಟ್ಟರೆ ಅವರಂತೆ, ಇಷ್ಟು ಕೊಟ್ಟರೆ ಇವರಂತೆ ಹೇಳುವ ಹಿರಿಯರು ಸಾಕ್ಷಿಗಳು ಜಗದಗಲ! ಕಳ್ಳನ ಬಿಡಿಸಲು,…

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಇಳಿಮುಖ

ಬೆಂಗಳೂರು,ಜೂ,೧೫:ಲಾಕ್‌ಡೌನ್ ಎಫೆಕ್ಟ್ ಮತ್ತು ಕೊರೊನಾ ನಿಯಂತ್ರಣಕ್ಕೆ ತಗೆದುಕೊಂಡಿರುವ ಕೆಲ ನಿರ್ಧಾರಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಮುಖ ಕಾಣುತ್ತಿದೆ. ಇದರ ಪರಿಣಾಮವಾಗಿ ಮಂಗಳವಾರ ೫,೦೪೧ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೭,೭೭,೦೧೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೧೫ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೩,೧೪೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೯೮೫ ಮಂದಿಗೆ ಸೋಂಕು ದೃಢಪಟ್ಟಿದ್ದು,…

ಖಾಸಗಿ ಶಾಲೆಗಳ ಶುಲ್ಕವನ್ನುಸರ್ಕಾರ ನಿರ್ಧರಿಸಬೇಕು-ಸಿಎಂಗೆ ಸಿದ್ದು ಪತ್ರ

ಬೆಂಗಳೂರು, ಜೂ.೧೫:ಶೈಕ್ಷಣಿಕ ವರ್ಷ ಆರಂಭವಾಗಿರುವ ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪೋಷಕರು ಪಾವತಿಸಬೇಕಾದ ರಿಯಾಯ್ತಿ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು ಮತ್ತು ಸರ್ಕಾರದ ನಿರ್ಧಾರ ಕಟ್ಟುನಿಟ್ಟಿನ ಜಾರಿ ಆಗುವಂತೆ ಕ್ರಮ ವಹಿಸಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತಡೆ ಹಿಡಿದಿರುವ ಸಂಬಳ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬ್ಯಾಂಕ್ಗಳಿಗೆ ಪಾವತಿಸಬೇಕಾದ…

ಭೂತಾಯಿ ಮಡಿಲು ಸೇರಿದ ಸಂಚಾರಿ ವಿಜಯ್

ಚಿಕ್ಕಮಗಳೂರು,ಜೂ,೧೫: ಬೈಕ್‌ನಲ್ಲಿ ಬಿದ್ದು ಅಫಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ನಟ ಸಂಚಾರಿ ವಿಜಯ್ ಅವರ ಅಂತ್ಯ ಕ್ರಿಯೇ ಇಂದು ಅವರ ಸ್ವಗ್ರಾಮದಲ್ಲಿ ನೆರವೇರಿತು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ ವಿಜಯ್ ಬಾಲ್ಯದ ಸ್ನೇಹಿತ ರಘು ಅವರ ತೋಟದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಕಪ್ಪೂರು ಶ್ರೀಗಳ ನೇತೃತ್ವದಲ್ಲಿ ವಿಜಯ್ ಸಹೋದರನಿಂದ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಯಿತು. ಅಂತ್ಯಕ್ರಿಯೆ ಮೊದಲು ಪೊಲೀಸರು ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಫಿಲಂ ಚೇಂಬರ್ ಬೆಂಗಳೂರಿನಲ್ಲೇ…

1 89 90 91 92 93 112
Girl in a jacket