Girl in a jacket

Author kendhooli_editor

ಭಾರತ-ಬಾಂಗ್ಲಾದೇಶ ದ್ವಿಪಕ್ಷೀಯ ಸಂಬಂಧಗಳಲ್ಲಿ  ಮೈಲಿಗಲ್ಲು

ಭಾರತ-ಬಾಂಗ್ಲಾದೇಶ ದ್ವಿಪಕ್ಷೀಯ ಸಂಬಂಧಗಳಲ್ಲಿ  ಮೈಲಿಗಲ್ಲು ಬರಹ;ಮಾನಸ,ಬೆಂಗಳೂರು ಬಾಂಗ್ಲಾದೇಶದ ಜನರಿಗೆ ಸ್ವಾತಂತ್ರ್ಯ ಮತ್ತು ಹೊಸ ದೇಶವನ್ನು ರಚಿಸುವ ಹೋರಾಟದ ಉದ್ದಕ್ಕೂ ಭಾರತೀಯ ಬೆಂಬಲವು ಅಚಲವಾಗಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸರ್ಕಾರದಿಂದ ಮಾತ್ರವಲ್ಲದೆ ದೇಶಾದ್ಯಂತದ ಜನರು ಮತ್ತು ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ. 6 ಡಿಸೆಂಬರ್ 1971 ರಂದು ಸಾರ್ವಭೌಮ ರಾಜ್ಯವಾಗಿ, ಬಾಂಗ್ಲಾದೇಶವು ಭಾರತದಿಂದ ತನ್ನ ಮೊದಲ ಮನ್ನಣೆಯನ್ನು ಪಡೆಯಿತು. ಈ ವರ್ಷ ಬಾಂಗ್ಲಾದೇಶದ ವಿಮೋಚನೆಯ 50 ನೇ ವಾರ್ಷಿಕೋತ್ಸವ ಮತ್ತು ಭಾರತದೊಂದಿಗೆ ಅದರ ರಾಜತಾಂತ್ರಿಕ ಸಂಬಂಧಗಳನ್ನು ಸ್ಮರಿಸುತ್ತದೆ. ಭಾರತ ಮತ್ತು…

ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ!

Writing- ಪರಶಿವ ಧನಗೂರು ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ! ದೇಶದಲ್ಲಿ ಕಡುಬಡವರು ಹೊಟ್ಟೆಹಸಿವಿನಿಂದ ನರಳಬಾರದೆಂದು, ಸರ್ಕಾರಗಳು ಉಚಿತವಾಗಿ ನೀಡುತ್ತಿರುವ ಪಡಿತರ ಯೋಜನೆಯ ಅನ್ನಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೊರ ರಾಜ್ಯಗಳ ರೈಸ್ ಮಿಲ್ ಗಳಿಗೆ, ರೈಸ್ ಮಾರ್ಕೆಟ್ ಗಳಿಗೆ ಸಾಗಿಸುವ ದಂಧೆ ಈಗ ಹೆಚ್ಚು ರಾಜ್ಯಾದ್ಯಂತ ಸಕ್ರಿಯವಾಗಿದೆ. ಫಲಾನುಭವಿ ಗಳಿಂದ ಕಡಿಮೆ ಬೆಲೆಗೆ ಪಡೆದುಕೊಳ್ಳುವ ಕಾಳಸಂತೆಕೋರರು, ಅನ್ನಭಾಗ್ಯದ ಹಸಿವು ನೀಗಿಸಬೇಕಾದ ಅಕ್ಕಿಯನ್ನು ತಮ್ಮ ಸೀಕ್ರೆಟ್ ಗೋಡೌನ್ ಗಳಿಗೆ ಸಾಗಿಸಿ ಬಿಚ್ಚಿಟ್ಟ, ಆನಂತರ…

ಕೊಳೆಯ ತೊಳೆವವರು ಇಲ್ಲ ಬಾ…

ಕೊಳೆಯ ತೊಳೆವವರು ಇಲ್ಲ ಬಾ… ನೀರು ಜೀವ ಪೋಷಕ.ನೀರಿದ್ದಲ್ಲಿ ಜೀವಿಗಳ ಚಲನೆ ಇರುತ್ತದೆ. ಆದಿ ಮಾನವ ಅಲೆಮಾರಿಯಾಗಿ ಹಸಿರು ಮತ್ತು ನೀರನ್ನ ಅರಸುತ್ತಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಲೆಮಾರಿಯಾಗಿ ಹೊರಟು ಅವುಗಳ ತೀರದಲ್ಲಿ ನೆಲೆಯೂರಿ ನಿಂತ. ಅಲೆಮಾರಿಯಾದ ಮಾನವರು ತಳ ಊರಿದ ಜಾಗಗಳೆಲ್ಲಾ ಆನಂತರ ಊರು ಎಂದು ಕರೆಸಿಕೊಳ್ಳುತ್ತಾ ಬಂದವು.ಹಾಗಾಗಿ ಊರಿಗೆ ನೀರೇ ಮೂಲವಾಯಿತು. ನಮ್ಮ ನಾಗರೀಕ ಚರಿತ್ರೆಯನ್ನ ಸಿಂದೂ ಬಯಲಿನ ಚರಿತ್ರೆಯೆಂದೂ,ನಮ್ಮ ನಾಡ ಕಥನ ವಿಸ್ತಾರವನ್ನ ಕಾವೇರಿಯಿಂದ ಗೋದಾವರಿಯವರೆಗೆ,ನರ್ಮದೆಯವರೆಗೆ ಎಂದು ವಿಸ್ತರಿಸಿರುವುದನ್ನೂ ಕಾಣಬಹುದಾಗಿದೆ.ಈ ನಾಡಿನ…

ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು?

ಮಲ ಬಳಿಸುವ ಕ್ರೌರ್ಯಕ್ಕೆ ಕೊನೆಯೆಂದು? ವಿಶ್ವಗುರು’ವಿನ ಸ್ಥಾನಕ್ಕೆ ಏರಿರುವ ಭರತ ಖಂಡದಲ್ಲಿ ಮನುಷ್ಯರ ಮಲವನ್ನು ಬಳಿದು ಹೊತ್ತು ಸಾಗಿಸುವ ಮನುಷ್ಯರ ಸಂಖ್ಯೆ 58,098 ಎಂದು ಕೇಂದ್ರ ಸರ್ಕಾರ ಮೊನ್ನೆ ರಾಜ್ಯಸಭೆಯಲ್ಲಿ ಸಾರಿದೆ.. ಮಲ ಬಳಿವ ಮಾನವರು ಕೇವಲ 58 ಸಾವಿರವೇನು ಎಂದು ಸರ್ಕಾರ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಿದೆ. ಆದರೆ ಮಾನವ ಮಲ ಬಳಿಯುವ ‘ದಲಿತ ದರಿದ್ರರ’ ಕಷ್ಟ ಕಣ್ಣೀರು ಸಂಕಟ ಅವಮಾನಗಳ ಅಂದಾಜು ಸರ್ಕಾರಗಳಿಗೂ ಇಲ್ಲ, ಸಮಾಜಕ್ಕೂ ಇಲ್ಲ. ಇವುಗಳ ಆತ್ಮಸಾಕ್ಷಿಯ ಅವಸಾನವಾಗಿ ಶತಮಾನಗಳೇ ಉರುಳಿ ಹೋಗಿವೆ! ಒಳಗೆ…

ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ

ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ ದೇವಾಲಯಗಳನ್ನು ಸಾಮಾನ್ಯವಾಗಿ ಪ್ರತ್ಯೇಕವಾದ ಕಟ್ಟಡವುಳ್ಳ ದೇವಾಲಯ, ಸ್ವಾಭಾವಿಕ ಗುಹೆಗಳನ್ನು ಬಳಸಿ ನಿರ್ಮಿಸಿದ ಗುಹಾ ದೇವಾಲಯ(ಗುಹಾಲಯ) ಮತ್ತು ಬೆಟ್ಟವನ್ನು ಕತ್ತರಿಸಿ ಕಡೆಯಲಾದ ಗುಹಾಂತರ ದೇವಾಲಯ (ಖoಛಿಞಛಿuಣ ಖಿemಠಿಟe) ಎಂದು ಕರೆಯುತ್ತೇವೆ. ಇದಕ್ಕೆ ಕಟ್ಟಡ ಮಾದರಿಗೆ ಹಂಪೆಯ ವಿರೂಪಾಕ್ಷ ದೇವಾಲಯ, ಗುಹಾಲಯಕ್ಕೆ ಚಿತ್ರದುರ್ಗ ಬೆಟ್ಟದಲ್ಲಿರುವ ಸಂಪಿಗೆ ಸಿದ್ಧೇಶ್ವರ, ಗುಹಾಂತರ ದೇಗುಲಕ್ಕೆ ಬಾದಾಮಿಯ ಮಹಾವಿಷ್ಣು ದೇಗುಲಗಳನ್ನು ಉದಾಹರಿಸಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯು ಕರ್ನಾಟಕದ ಇತಿಹಾಸಕ್ಕೆ ಹಲವು ಪ್ರಥಮಗಳನ್ನು ನೀಡಿದುದು ತಿಳಿದ ವಿಷಯ. ಅಂತೆಯೇ ಈ…

ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ

ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ “ನೋಡು ಲೋಕಪ್ಪ, ಮುಂದಿನ ತಿಂಗಳು ಸರಿಯಾದ ಸಮಯಕ್ಕೆ ಬಡ್ಡಿ ಕೊಡಬೇಕು. ಇಲ್ಲಾ ಅಂದ್ರೆ ಮುಂದಿನ ತಿಂಗಳು ಅಸಲು ಸೇರಿದಂತೆ ನನ್ನ ದುಡ್ಡು ವಾಪಾಸು ಮಾಡಿಬಿಡು” ಎನ್ನುವ ಅವ್ವನ ಏರಿದ ಧ್ವನಿಯ ಮಾತುಗಳು ಮನೆಯ ಪಡಸಾಲೆಯಿಂದ ಕೇಳಿ ಬಂದದ್ದು ನನಗೆ ಅಂತಹಾ ಹೊಸ ವಿಷಯವೇನಾಗಿರಲಿಲ್ಲ. ಸಾಕಷ್ಟು ವ್ಯಾಪಕವಾಗಿ ನಮ್ಮೂರಿನಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಕೂನಬೇವು, ಕಡಬನಕಟ್ಟೆ, ಹುಣಸೇಕಟ್ಟೆ, ಬಾಗೇನಾಳ್ , ಬೆಣ್ಣೆಹಳ್ಳಿ, ದೊಣ್ಣೆಹಳ್ಳಿ, ಕಟ್ಟಿಗೆಹಳ್ಳಿ, ದೊಡಘಟ್ಟ, ಬಂಗಾರಕ್ಕನಹಳ್ಳಿ, ನಾಯಕನಹಟ್ಟಿ,…

ಮೂಲ ಗುಣಗಳ ಪ್ರಕಾರ ಶಿಕ್ಷಣ ದೊರಕುವ ವ್ಯವಸ್ಥೆಯಾಗಬೇಕು

ಚಿದಂಬರ ಜೋಶಿ,ಚಿಕಾಗೂ. ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ. ಮೂಲ ಗುಣಗಳ ಪ್ರಕಾರ ಶಿಕ್ಷಣ ದೊರಕುವ ವ್ಯವಸ್ಥೆಯಾಗಬೇಕು ಹಿಂದಿನ ೪ ಕಂತುಗಳಿಗೆ ಈ…

ಸರ್ಕಾರ ಗಾಂಜಾಗೆ ಜೈ ಎಂದಿದ್ದೇಕೇ..?

Writing- ಪರಶಿವ ಧನಗೂರು ಸರ್ಕಾರ ಗಾಂಜಾಗೆ ಜೈ ಎಂದಿದ್ದೇಕೇ? ಮಾದಕ ವಸ್ತುಗಳ ಸಾಗಾಣಿಕೆ-ಮಾರಾಟ-ಸೇವನೆ ವಿರುದ್ಧ ಜಗತ್ತಿನ ಎಲ್ಲಾ ದೇಶಗಳ ಜೊತೆ ಸೇರಿಕೊಂಡು 1960ರಲ್ಲೇ ಸಮರ ಸಾರಿದ್ದ ನಮ್ಮ ಭಾರತ ದೇಶ, ಯುದ್ಧ ಘೋಷಿಸಿ ಗೆಲ್ಲುವ ಮೊದಲೇ ಸೋಲೊಪ್ಪಿಕೊಳ್ಳುತ್ತಿರುವ ಕಾರಣವೇನೆಂದು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ಈಗ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ “ಸಣ್ಣ ‌ಪ್ರಮಾಣದ ಮಾದಕ ವಸ್ತು ಸೇವಿಸುವ, ಇಟ್ಟುಕೊಳ್ಳುವ ವ್ಯಕ್ತಿಗಳಿಗೆ ಶಿಕ್ಷೆ ಬೇಡ!” ಎಂಬ ಆದೇಶ ಹೊರಡಿಸಿ ತಮ್ಮ ಕೆಳಹಂತದ…

ಶಿವಾಜಿ ಗಣೇಶನ್ ಅಭಿನಯದ ಪಂತುಲು ನಿರ್ಮಾಣದ ಮಕ್ಕಳ ರಾಜ್ಯ

ಶಿವಾಜಿ ಗಣೇಶನ್ ಅಭಿನಯದ  ಪಂತುಲು ನಿರ್ಮಾಣದ ಮಕ್ಕಳ ರಾಜ್ಯ ಬಿ.ಆರ್.ಪಂತುಲು ನಿರ್ಮಿಸಿ ನಿರ್ದೇಶಿಸಿದ ಕಪ್ಪು-ಬಿಳುಪು ಜಾನಪದ ಕಥಾ ಹಂದರದ ‘ಮಕ್ಕಳ ರಾಜ್ಯ‘ ಚಲನಚಿತ್ರ ೧೯೬೦ರಲ್ಲಿ ತೆರೆಗೆ ಬಂದಿತು. ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಜೊತೆಯಲ್ಲಿ ಎಂ.ವಿ.ರಾಜಮ್ಮನವರ ಎಂ.ವಿ.ಆರ್ ಪ್ರೊಡಕ್ಷನ್ಸ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದರು, ಮಕ್ಕಳ ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾದ ಮೊದಲ ಚಿತ್ರ ಇದು. ಈ ಚಿತ್ರದಲ್ಲಿ ಹಿರಿಯ ನಟರ ಅಭಿನಯಕ್ಕಿಂತಲೂ ಮಕ್ಕಳ ಅಭಿನಯವೇ ಪ್ರಮುಖವಾಗಿತ್ತು. ಆ ಕಾಲಕ್ಕೆ ಇದೊಂದು ಪ್ರಯೋಗಾತ್ಮಕ ಚಿತ್ರವೆಂದೇ ಹೇಳಬಹುದಿತ್ತು. ಎಸ್.ಆರ್.ಪುಟ್ಟಣ್ಣ ಕಣಗಾಲ್…

ಎದೆಯ ಕದಗಳು ಮುಚ್ಚಿದಾಗ…

ಎದೆಯ ಕದಗಳು ಮುಚ್ಚಿದಾಗ… ಕಾವ್ಯವು ಆನಂದದ ಅಭಿವ್ಯಕ್ತಿಯಾಗಿರುವಂತೆಯೇ ನೋವಿನ ನಿರೂಪಣೆಯೂ ಆಗಿದೆ.ಕಾವ್ಯದ ಅಭಿವ್ಯಕ್ತಿಯಲ್ಲಿ ?ತ್ಪ್ರೇಕ್ಷೆಯ ಗುಣವಿರುವಂತೆಯೇ ವರ್ತಮಾನದ ವಾಸ್ತವವೂ ಅಡಗಿದೆ.ಕನ್ನಡಿಗರನ್ನ ಕವಿರಾಜಮಾರ್ಗಕಾರ ರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂದ ಮಾತು ಅರ್ಥಪೂರ್ಣವಾದುದು.ವೈಭವೀಕರಣ ಮತ್ತು ಹೊಗಳಿಕೆಗಳಲ್ಲಿ ಹೆಚ್ಚು ಮುಳುಗದ ಜನಪದ ಕಾವ್ಯ ತನ್ನ ಸಾಮಾಜಿಕ ಅನುಭವಗಳನ್ನೇ ಹಾಡು ಮಾಡಿದೆ.ಹೆಣ್ಣು ಮತ್ತು ಹೆಣ್ಣಿನ ಶ್ರಮ ಇಲ್ಲಿ ಹಾಡಾಗಿ ಮೂಡಿದೆ.ಜನಪದರಂತೆ ಕಾವ್ಯಗಳಲ್ಲಿ ಈ ಬಗೆಯ ಶ್ರಮಿಕರ ನುಡಿಯನ್ನ ದಾಖಲಿಸಲು ಕನ್ನಡ ಕಾವ್ಯ ಬಂಡಾಯ ಮತ್ತು ದಲಿತ ಕಾವ್ಯದ ತನಕ ಕಾಯಬೇಕಾದ್ದು ವಿಪರ್ಯಾಸವೇ…

ಕರ್ನಾಟಕ ಇತಿಹಾಸದ ಕಿರೀಟ ಬೀದರ್

ಕರ್ನಾಟಕ ಇತಿಹಾಸದ ಕಿರೀಟ ಬೀದರ್ ಬೀದರ್ ಜಿಲ್ಲೆಯು ಭೌಗೋಳಿಕ ಮತ್ತು ಚಾರಿತ್ರಿಕವಾಗಿ ಕರ್ನಾಟಕಕ್ಕೆ ಶಿಖರಪ್ರಾಯವೇ ಆಗಿದೆ. ಈ ಜಿಲ್ಲೆಯು ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ಚಾಲುಕ್ಯರ ಕಾಲದಿಂದಲೂ ಪ್ರಸಿದ್ಧವಾಗಿದ್ದಿತು. ಬಸವಕಲ್ಯಾಣವು ಕಲ್ಯಾಣ ಚಾಲುಕ್ಯರು ಮತ್ತು ಕಲಚುರಿಗಳ ರಾಜಧಾನಿ ಪಟ್ಟಣ. ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಧಾರ್ಮಿಕ ಕ್ರಾಂತಿಯ ಭೂಮಿಕೆಯಾಗಿ, ಸಮಸಮಾಜದ ಕನಸನ್ನು ಹೊತ್ತ ಜನತಾ ಚಳವಳಿಯಿಂದ ಸಾಮಾಜಿಕ ಸಂಚಲನವನ್ನು ಮೂಡಿಸಿದ ಸುಧಾರಣೆಯ ನೆಲೆವೀಡು. ವಚನಗಳ ಮೂಲಕ ಕನ್ನಡಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದ ಶ್ರೇಯ ಈ ಜಿಲ್ಲೆಯದು. ಸಮಾಜದ ಎಲ್ಲ…

ಎಸ್ಸಾರ್.ಪಾಟೀಲರ ಮೂಗಿಗೆ ಮತ್ತಷ್ಟು ತುಪ್ಪ

ಸರಳ, ಸಜ್ಜನಿಕೆಯ ರಾಜಕಾರಣಿಗಳು ಅಪರೂಪ. ಅಂಥವರಲ್ಲಿ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲರು ಒಬ್ಬರು. ಅವರನ್ನು ವಿಧಾನ ಪರಿಷತ್‌ನಿಂದ ಹೊರಗಿಡುವ ತಂತ್ರದಲ್ಲಿ ಪಕ್ಷ ಯಶಸ್ಸು ಕಂಡಿದೆ. ಯಾವುದನ್ನೂ ಬಯಸದ ಕಾಡಿಬೇಡದ ರಾಜಕಾರಣ ಪಾಟೀಲರದು. ಯಾರ್ಯಾರದೋ ಮಹತ್ವಾಕಾಂಕ್ಷೆಯ, ಡಿಕೆಶಿ-ಸಿದ್ದರಾಮಯ್ಯ ಜಂಗೀ ಕುಸ್ತಿಯ ರಾಜಕಾರಣದಲ್ಲಿ ಪಾಟೀಲರು ಹರಕೆಯ ಕುರಿ ಆದರೇ…? ಎಸ್ಸಾರ್.ಪಾಟೀಲರ ಮೂಗಿಗೆ ಮತ್ತಷ್ಟು ತುಪ್ಪ ಹೀಗೊಂದು ಕಥೆ. ಕೋತಿಯ ಮನಃಸ್ಥಿತಿಯನ್ನು ಹೇಳುವ ಕಥೆ. ಆಳೆತ್ತರದ ಡಬ್ಬದಲ್ಲಿ ಕೋತಿಯನ್ನು ಅದರ ಮರಿಯೊಂದಿಗೆ ಹಾಕಿ. ಡಬ್ಬದೊಳಕ್ಕೆ ನೀರನ್ನು ಹಾಯಿಸುತ್ತ ಬನ್ನಿ. ಕಾಲಬುಡದಲ್ಲಿ ನೀರಿರುವಾಗ ಮರಿಯೊಂದಿಗೆ…

ಸಿದ್ದರಾಮಯ್ಯ ಅವರನ್ನು ಕೇಳಿ ಮೋದಿ ಅವರನ್ನು ಭೇಟಿಯಾಗಬೇಕಿತ್ತಾ ಸಿದ್ದು ವಿರುದ್ಧ ದೇವೇಗೌಡ ಕಿಡಿ

ಚಿಕ್ಕಬಳ್ಳಾಪುರ,ಡಿ,02: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಅವರ ಅನುಮತಿ ಬೇಕೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ಪ್ರಶ್ನಿಸಿದರು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶಿಡ್ಲಘಟ್ಟದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಏಳೆಂಟು ಬಾರಿ ಭೇಟಿಯಾಗಿದ್ದೇನೆ. ಈ ಹಿಂದೆ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 10 ಬಾರಿ ಭೇಟಿಯಾಗಿದ್ದೆ. ಮೋದಿ ಅವರನ್ನು ಭೇಟಿಯಾದ ತಕ್ಷಣ ಜೆಡಿಎಸ್​​ ಅವರಿಗೆ ಒಪ್ಪಿಸಿದಂತೆ ಆಗುತ್ತದೆಯೇ? ಎಂಥ…

ಕರ್ನಾಟಕದಲ್ಲಿ ಮೊದಲ ಒಮೈಕ್ರಾನ್ ಪತ್ತೆ

ಬೆಂಗಳೂರು,ಡಿ,02: ಬೆಂಗಳೂರಿನ ಇಬ್ಬರಿಗೆ ಒಮೈಕ್ರಾನ್ ವೈರಸ್​  ತಗುಲಿದೆ. ಭಾರತದಲ್ಲಿ ಮೊದಲ ಒಮೈಕ್ರಾನ್ ಕೇಸ್ ಕರ್ನಾಟಕದಲ್ಲೇ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್​ ತಿಳಿಸಿದ್ದಾರೆ. ಒಮೈಕ್ರಾನ್ ಬಂದಿರುವ ಇಬ್ಬರಿಗೂ 2 ಡೋಸ್ ಕೊರೊನಾ ಲಸಿಕೆ ಆಗಿದೆ. ಮೂರು ದಿನದಿಂದ ಅವರಿಬ್ಬರ ರಿಪೋರ್ಟ್ ಗೆ ಕಾಯುತ್ತಿದ್ದೆವು. ಕೇಂದ್ರ ಸರ್ಕಾರ ಎರಡೂ ಸ್ಯಾಂಪಲ್ ಗಳಲ್ಲಿ ಒಮಿಕ್ರಾನ್ ಪ್ರಬೇಧ ಇದೆ ಎಂದು ದೃಢಪಟ್ಟಿದೆ. ಕರ್ನಾಟಕದಲ್ಲಿ ವಿದೇಶದಿಂದ ಬಂದವರಿಗೆ ಬಹಳ ತುರ್ತಾಗಿ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಒಮಿಕ್ರಾನ್ ಸೋಂಕನ್ನು ನಾವು ಬೇಗ ಕಂಡು…

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಕುರಿತು ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ : ಸಿಎಂ

ನವದೆಹಲಿ, ಡಿ,೨ :ಇದೇ ೬ ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ , ಆರೋಗ್ಯ , ಕಾನೂನು ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ೨ ನೇ ನ್ಯಾಯಾಧಿಕರಣದ ಅಧಿಸೂಚನೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರ…

ಓಮೈಕ್ರಾನ್ ಆತಂಕ: ಸದ್ಯಕ್ಕೆ ಸಿನಿಮಾ, ಹೋಟೆಲ್, ಮಾಲ್ ಬಂದ್ ಇಲ್ಲ

ಬೆಂಗಳೂರು,ಡಿ,02: ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ತಳಿ ಓಮೈಕ್ರಾನ್ ಆತಂಕ ಸೃಷ್ಟಿಸಿರುವುದು ನಿಜವಾದರೂ ಸದ್ಯಕ್ಕೆ ರಾಜ್ಯದಲ್ಲಿ ಚಿತ್ರ ಮಂದಿರ, ಹೋಟೆಲ್ ಮತ್ತು ಮಾಲ್ ಗಳನ್ನು ಮುಚ್ಚುವುದಿಲ್ಲ. ಆದರೆ, ಇಂತಹ ಸ್ಥಳಗಳಿಗೆ ಹೋಗುವವರಿಗೆ ಸದ್ಯದಲ್ಲೇ ಲಸಿಕೆ ಕಡ್ಡಾಯ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಇತ್ತೀಚೆಗೆ ವೈದ್ಯರನ್ನು ಕುರಿತು ನಿರ್ಮಿಸಿ, ಬಿಡುಗಡೆ ಮಾಡಿರುವ `ಪ್ರೇಮಂ ಪೂಜ್ಯಂ’ ಚಿತ್ರದ ನಾಯಕ ನಟ ಪ್ರೇಮ್ ಅವರು ಗುರುವಾರ ತಮ್ಮನ್ನು ಇಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ…

ಸಿದ್ದು ವಿರುದ್ಧ ಎಚ್ ಡಿಕೆ ವಾಗ್ದಾಳಿ

ಬೆಂಗಳೂರು (ನೆಲಮಂಗಲ): ಮಾಜಿ ಪ್ರಧಾನಿ ದೇವೇಗೌಡರು ಅವಕಾಶವಾದಿ ರಾಜಕಾರಣಿ ಹಾಗೂ ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎಂದು ಹೇಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಹಾಗೆ ಹೇಳಿಕೊಳ್ಳುವ ಬದಲು ಒಂದು ಸ್ಲೇಟಿನಲ್ಲಿ ” ಜೆಡಿಎಸ್ ಪಕ್ಷ ಬಿಜೆಪಿ ಟೀಮ್ ” ಅಂತ ಬರೆದುಕೊಂಡು ಕಟ್ಟು ಹಾಕಿಸಿ ಕುತ್ತಿಗೆಗೆ ಹಾಕಿಕೊಂಡು ತಿರುಗಾಡಲಿ. ಹಾಗೆಯೇ ಪ್ರಚಾರ ಮಾಡಿಕೊಂಡು ದಿನವೂ ಓಡಾಡಲಿ ಎಂದು ಟೀಕಿಸಿದರು. ನೆಲಮಂಗಲದಲ್ಲಿ ಇಂದು ವಿಧಾನ…

ಎನ್ಇಪಿ ಭಾರತ ಕೇಂದ್ರಿತ; ಸಂಶೋಧನೆ, ನಾವೀನ್ಯತೆಗೆ ಒತ್ತು;ಅಶ್ವತ್ಥ್ ನಾರಾಯಣ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತ ಕೇಂದ್ರಿತವಾಗಿದ್ದು, ಶಿಕ್ಷಣ ಕ್ರಮದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಯನ್ನು ಗುರಿಯಾಗಿ ಹೊಂದಿದೆ. ಇದರ ಅನುಷ್ಠಾನದಲ್ಲಿ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಎಜುಕೇಷನ್ ಪ್ರೊಮೋಷನ್ ಸೊಸೈಟಿ ಆಫ್ ಇಂಡಿಯಾ (ಇಪಿಎಸ್ಐ), ಕುಪೇಕಾ ಮತ್ತು ಕಾಮೆಡ್-ಕೆ ಸಂಘಟನೆಗಳು ಜತೆಗೂಡಿ ಮಂಗಳವಾರ ಏರ್ಪಡಿಸಿದ್ದ `ಎನ್ಇಪಿ ಜಾರಿ: ಶಿಕ್ಷಣ ಸಂಸ್ಥೆಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು’ ವಿಚಾರ ಗೋಷ್ಠಿಯಲ್ಲಿ…

ರದಜ್ಯದಲ್ಲಿ ಲಾಕ್ ಡೌನ್ ಮಾಡುವ ಯಸವುದೇ ಪ್ರಸ್ತಾಪ ಇಲ್ಲ: ಸುಧಾಕರ್

ಬೆಂಗಳೂರು, ನ.29: ಓಮಿಕ್ರಾನ್ ರೂಪಾಂತರ ತಳಿ ಬಗ್ಗೆ ತೀವ್ರ ಆತಂಕ ಬೇಡ. ರಾಜ್ಯದಲ್ಲಿ ಲಾಕ್‌ಡೌನ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಕೆಲವರು ಲಾಕ್‌ಡೌನ್ ಆಗಲಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿದೆ. ಸಾರ್ವಜನಿಕರು ಇಂತಹ ಊಹಾಪೋಹಗಳಿಗೆ ಕಿವಿಗೊಡಬಾರದು. ಲಾಕ್‌ಡೌನ್ ಮಾಡುವ ಅಗತ್ಯವೇ ಇಲ್ಲ. ಸರ್ಕಾರದ ಮುಂದೆ ಅಂತಹ ಪ್ರಸ್ತಾಪವೂ ಇಲ್ಲ ಎಂದು ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನು ಮೂರನೇ ಅಲೆ…

1 37 38 39 40 41 101
Girl in a jacket