Girl in a jacket

Author kendhooli_editor

ಶ್ರೀಲಂಕಾ ಟೂರ್ನಿಗೆ ಭಾರತ ತಂಡ ಪ್ರಕಟ,ಶಿಖರ್ ದವನ್ ಗೆ ನಾಯಕತ್ವ

ಮುಂಬೈ,ಜೂ,11:ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡಯಲಿರುವ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಎಡಗೈ ದಾಂಡಿಗ ಶಿಖರ್ ಧವನ್ ಗೆ ತಂಡದ ಸಾರಥ್ಯ ನೀಡಲಾಗಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡವನ್ನು ಪ್ರಕಟಿಸಿದ್ದು, ನಾಯಕ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಶಿಖರ್ ಧವನ್ ಗೆ ತಂಡದ ನಾಯಕತ್ವ ನೀಡಲಾಗಿದೆ. ಅಂತೆಯೇ ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಲಂಕಾ ಪ್ರವಾಸಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ…

ಅತ್ತೆಗೊಂದು ಕಾಲ ,ಸೊಸೆಗೊಂದು ಕಾಲ

       ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಅತ್ತೆಯಾದವಳು ನಾಳೆ ಹತ್ತೆಯಾಗುವಳು, ಮನೆಯ ಮೂಲೆ ಸೇರುವಳು. ಸೊಸೆ ನಾಳೆ ಅತ್ತೆಯಾಗುವಳು, ಮನೆಯ ಅಧಿಕಾರ ಹಿಡಿಯುವಳು. ಯಾವುದೂ ಯಾರಿಗೂ ಸ್ಥಿರವಲ್ಲ. ಇಂದು ನಮ್ಮದಾಗಿರಬಹುದು. ನಾಳೆ ಯಾರದೆಂದು ತಿಳಿದಿಲ್ಲ. ಪರಿವರ್ತನೆ ನಿರಂತರ ಪ್ರಕ್ರಿಯೆ. ಸ್ಥಾನದಲ್ಲಿದ್ದವರು ನಶ್ವರತೆ ಮರೆಯದೇ ಮಾಡುವ ಕರ್ತವ್ಯ ಮಾಡಲೇಬೇಕು. ವೈಯಕ್ತಿಕ ದ್ವೇಷ ಸೇಡು ಪ್ರತೀಕಾರ ನಿರ್ಲಕ್ಷ್ಯ ಅಸ್ತ್ರ ಬಳಸಿದರೆ ನಾಳೆ ಅವೇ ತದ್ವಿರುದ್ಧ ಕೈಸೇರಿ ಎರಗುವವು ನಮಗೇ.…

11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ

ಬೆಂಗಳೂರು, ಜೂ,10:ತಜ್ಞರ ನೀಡಿರುವ ಸಲಹೆ ಮೇರೆಗೆ ಕೊರೊನಾ ಸೋಂಕು ಹೆಚ್ಚಿರುವ 12 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದು ವರೆಲು ನಿರ್ಧರಿಸಾಗಿದೆ. ಈಗಿರುವ ನಿರ್ಭಂಧಗಳಲ್ಲಿ ಕೆಲವು ಮಾರ್ಪಾಡುಗಳನ್ನು ಸಡಿಲಿಕೆಗಳನ್ನು ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ . ಸಿಎಂ ಯಡಿಯೂರಪ್ಪ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು,ಕೊರೊನಾ ವೈರಸ್ ಪಾಸಿಟಿವಿಟಿ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಕಠಿಣ ಲಾಕ್‌ಡೌನ್ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೊಡಗು, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ…

ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು

ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು ಅಡ್ಡ ಹೆಸರುಗಳು ಕಾಲು ಮತ್ತು ಕವಲುದಾರಿಗಳಂತವು.ಮನೆಯ ಪರಿಸರಕ್ಕಿಂತಲೂ ಅವು ಸಮೂಹದಿಂದಲೇ ಹುಟ್ಟಿಕೊಂಡವು..ಜನರನ್ನ ವಿಶಿಷ್ಟವಾಗಿ ವಿಶೇಷವಾಗಿ ಕಾಣುವ ಹಂಬಲಹೊತ್ತ ಇವುಗಳು ಗುಣಾನುರೂಪಿಯಾದವು.ಭಿನ್ನ ದಾರಿ ಭಿನ್ನ ಗುರಿಗಳನ್ನ ಆರಿಸಿಕೊಳ್ಳುವ ಇವುಗಳನ್ನ ವಚನಕಾರರ ಕಾಲದಿಂದಲೇ ಗುರ್ತಿಸುವ ಡಾ.ಎಂ.ಎಂ. ಕಲ್ಬುರ್ಗಿಯವರು ಹೇಳುವಂತೆ ಇವು ಅಡ್ಡ ಹೆಸರು ಎಂಬುದಕ್ಕಿಂತಲೂ ಅರ್ಧ ಹೆಸರುಗಳು ಎಂದೇ ಕರೆಯಬಹುದು.ವೃತ್ತಿಸೂಚಿ ಮತ್ತು ಗ್ರಾಮ ಸೂಚಿ ನೆಲೆಯಿಂದ ನೋಡಿದಾಗ ಇವು ಸಾಮಾಜಿಕ ಕಿರು ಕಥನಗಳೂ ಹೌದೆಂಬಂತಿವೆ. ಕತ್ಲಪ್ಪ ಮೇಷ್ಟ್ರು: ಮಂಗಳವಾರದ ಕತ್ತಲು ಆವರಿಸುತ್ತಿದ್ದಂತೆಯೇ ಚೌಡಮ್ಮನ ಅಂಗಳ…

ಮೂರುದಳದ ಕಮಲದಲ್ಲಿ ನೂರು ಧ್ವನಿಗಳ ‘ಬೇಗುದಿ’

ತುರುವನೂರು ಮಂಜುನಾಥ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ‘ರಾಜೀನಾಮೆಯ ಹೇಳಿಕೆ ನಂತರ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ.ರಾಜಕೀಯ ತಂತ್ರಗಾರಿಕೆ ಬಲ್ಲ ಬಿಎಸ್‌ವೈ ಅವರು ಅದರ ಮೂರು ದಿನದ ಹಿಂದೆ ನಾಯಕತ್ವದ ವಿಚಾರವಾಗಿ ಯಾವುದೇ ವಿಚಾರಗಳು ಹೈಕಮಾಂಡ್ ಮುಂದಿಲ್ಲ ಎಂದಿದ್ದರು ಆದರೆ ತಮ್ಮ ಪುತ್ರ ವಿಜಯೇಂದ್ರ ದೇಹಲಿಗೆ ಹೋಗಿ ಬರುತ್ತಿದ್ದಂತೆ ‘ವರಿಷ್ಠರು ಬಯಸಿದರೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುತ್ತೇನೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಒಂದು ರೀತಿ ಬಿರುಗಾಳಿ ಬೀಸಿದಂತಾಗಿತ್ತು. ಆ ಹೇಳಿಕೆ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಹೈಕಮಾಂಡ್‌ಗೆ ಸಂದೇಶ…

ಮೈಸೂರು ಜಗಳ: ದೇವರೂ ಅಸಹಾಯಕ

ಮೈಸೂರು ಜಗಳ: ದೇವರೂ ಅಸಹಾಯಕ ದೇವರು ಇದ್ದಾನೋ ಇಲ್ಲವೋ ಎನ್ನುವುದು ನಾಗರಿಕ ಸಮಾಜ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದಲೂ ಇದೆ. ಒಂದು ಧರ್ಮ, ದೇವನೊಬ್ಬ ನಾಮ ಹಲವು ಎಂದರೆ ಇನ್ನೊಂದು ಧರ್ಮ, ಇರುವುದೊಂದೇ ದೇವರು ಎನ್ನುತ್ತದೆ. ಮತ್ತೊಂದು ಧರ್ಮ ಇನ್ನೇನನ್ನೋ ಹೇಳುತ್ತದೆ. ದೇವರು ಇದ್ದಾನೆ ಎನ್ನುವ ವರ್ಗದ ಜೊತೆಗೇ ದೇವರು ಇಲ್ಲ ಎನ್ನುವ ವರ್ಗ ಕೂಡಾ ಇದೆ. ಜಗತ್ತಿನ ಉದ್ದಗಲಕ್ಕೆ ಎಷ್ಟೆಲ್ಲ ಧರ್ಮ, ಎಷ್ಟೆಲ್ಲ ದೇವರು. ಕೊರೋನಾ ಮಾರಕ ದಾಳಿಯನ್ನು ನಾಶಮಾಡುವ ದೇವರು ಮಾತ್ರ ಯಾವ ಧರ್ಮದಲ್ಲೂ ಇಲ್ಲ;…

ಕಳೆದುಕೊಳ್ಳುವ ದುಃಖ

ಕಳೆದುಕೊಳ್ಳುವ ದುಃಖ ನನ್ನ ಹಿಂದಿನ ಅಂಕಣದಲ್ಲಿ ಕ್ರಮವಾಗಿ ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿಡುತ್ತಿದ್ದೆ. ಆದರೆ ಈ ಕೊರೋನ ಎಂಬ ಕಾಣದ ಜೀವವು ನಾವು ಬಯಸದ, ನೆನೆಸದ, ಊಹೆ ಮಾಡದ ಘಟನೆಗಳನ್ನು ನಮ್ಮ ಬದುಕಿನ ಹಾದಿಯಲ್ಲಿ ತಂದೊಡ್ಡಿದ ಪರಿಣಾಮ ಇಂದು ನಾನು ಅದರಿಂದಾದ ಕೆಲವು ಮಾನಸಿಕ ಗೊಂದಲಗಳು, ಯೋಚನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಮುಖ್ಯ ಶಿಕ್ಷಕರನ್ನು ಭೇಟಿಯಾಗಬೇಕೆಂದು ಒಬ್ಬ ಮಹಿಳೆ ಶಾಲೆಯ ಹತ್ತಿರ ಬಂದಿದ್ದರು. ನಾನು ಅವರನ್ನು ಮುಖ್ಯ ಕಛೇರಿಯಲ್ಲಿ ಕೂರಿಸಿದ್ದೆ. ನಂತರ…

ಕೋವಿಡ್ ಮೂರನೆ ಅಲೆ; ಮಾರ್ಗಸೂಚಿ ಬಿಡುಗಡೆ

ನವದೆಹಲಿ,ಜೂ,10:ದೇಶದಲ್ಲಿ ‌ನಿಧಾನಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.ಈಗ ಮೂರನೇ ಅಲೆಯ ಕುರಿತು ಸರ್ಕಾರ ಪೂರ್ವ ಸಿದ್ದತೆಗಳ ಬಗ್ಗೆ ತಯಾರಿ ನಡೆಸುತ್ತಿದೆ. ಮೂರನೇ ಅಲೆಯಲ್ಲಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. “ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ” ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಈಗಾಗಲೇ ಹೇಳಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೊನಾ ಬಂದರೆ ಏನು…

ಶನಿವಾರ ಶಿಕಾರಿಪುರಕ್ಕೆ ಸಿಎಂ ಯಡಿಯೂರಪ್ಪ ಭೇಟಿ

ಬೆಂಗಳೂರು,ಜೂ,೧೦: ವಾರಾಂತ್ಯದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ ಮತ್ತು ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ ಶುಕ್ರವಾರ ಹೆಚ್‌ಎಎಲ್’ಗೆ ತೆರಳಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಹಾಸನಕ್ಕೆ ಭೇಟಿ ನೀಡುವ ಅವರು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ ೧.೩೦ರ ಸುಮಾರಿಗೆ ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, ರಸ್ತೆ ಮೂಲಕ ಶಿವಮೊಗ್ಗ ಜಿಲ್ಲೆಗೆ ಶನಿವಾರ ಬೇಟಿ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಮುಂದಿನ…

ಕಟ್ಟಡ ಕುಸಿದು ಮುಂಬೈನಲ್ಲಿ ೧೧ ಸಾವು

ಮುಂಬೈ, ಜೂ, ೧೦; ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ೧೧ ಜನ ಮೃತಪಟ್ಟ ಘಟನೆ ಮುಂಬೈ ನಗರದ ಪಶ್ಚಿಮ ಭಾಗದ ಮಲಾಡ್ ಪ್ರದೇಶದಲ್ಲಿ ಸಂಭಿವಿಸಿದೆ ನಾಲ್ಕು ಅಂತಸ್ತಿನ ಕಟ್ಟಡ ಬುಧವಾರ ತಡರಾತ್ರಿ ಕುಸಿದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. ಇದುವರೆಗೂ ೧೮ ಜನರನ್ನು ರಕ್ಷಣೆ ಮಾಡಲಾಗಿದ್ದು, ೬ ಮಕ್ಕಳು ಸೇರಿದಂತೆ ೧೧ ಜನರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ೬ ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು…

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು

 ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                             ಸಿದ್ಧಸೂಕ್ತಿ : ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ತಿನ್ನುವ ಅಡಿಕೆ ಸಣ್ಣದು, ಬೆಲೆ ಕಡಿಮೆ. ಅದಕ್ಕಾಗಿ ಕೈ ಒಡ್ಡುವುದು, ಕದಿಯುವುದೂ ಉಂಟು. ಇದು ವ್ಯಕ್ತಿಯ ಮನಸ್ಸ್ಥಿತಿ ಯೋಗ್ಯತೆಗಳನ್ನಳೆಯುವುದು. ಯೋಗ್ಯಾಯೋಗ್ಯತೆ, ಪಾಪ ಪುಣ್ಯ, ಒಳಿತು ಕೆಡಕು, ಅಪರಾಧ – ನಿರಪರಾಧಗಳು…

ರವಿಚೆನ್ನಣ್ಣನವರ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ,ಜೂ. 09: ಕೋವಿಡ್​ ನಿಯಂತ್ರಣದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ನಡೆಸಿದೆ. ರಾಜ್ಯದ 12 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಆದೇಶ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​ಪಿ ರವಿ ಚೆನ್ನಣ್ಣನವರ್​ ಸೇರಿದಂತೆ ಜಿಲ್ಲಾ ಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ. ಇದೇ ವೇಳೆ ಮೈಸೂರು ಜಿಲ್ಲಾ ನೂತನ ಎಸ್​ಪಿಯಾಗಿ ಆರ್​ ಚೇತನ್​ ಅವರನ್ನು ವರ್ಗಾಯಿಸಲಾಗಿದೆ. ಕೊರೋನಾ ನಿಯಂತ್ರಣದ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾಲ್ಲಿದ್ದು, ಜನರ ಓಡಾಟಕ್ಕೆ ನಿರ್ಭಂದ ಹೇರಿ ಕಾನೂನು…

ದೂರವಾಣಿ ವಿನಿಮಯ ಕರೆಗಳ ಕನ್ವರ್ಟ್; ಇಬ್ಬರ ಬಂಧನ

ಬೆಂಗಳೂರು, ಜೂ,09: ಅನಧಿಕೃತ ದೂರವಾಣಿ ವಿನಿಮಯ ಕರೆಗಳನ್ನು ಕನ್ವರ್ಟ್ ಮಾಡುತ್ತಿದ್ದ ತಂಡವನ್ನು ಬೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ರಾಹಿಂ ಪುಲ್ಲಟ್ಟಿ ಮೊಹಮ್ಮದ್ ಕುಟ್ಟಿ ಹಾಗೂ ಗೌತಮ್ ಎನ್ನುವರನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಅವರು, ಬಿಟಿಎಂ ಲೇಔಟ್‌ನ 6 ಕಡೆ ದಾಳಿ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದೇವೆ. ಬಂಧಿತ ಆರೋಪಿಗಳಿಂದ 960 ಸಿಮ್ ಕಾರ್ಡ್‌ಗಳು, 30 ಸಿಮ್ ಬಾಕ್ಸ್ ಡಿವೈಸ್ ವಶಕ್ಕೆ ಪಡೆಯಲಾಗಿದೆ. ಇದರಿಂದಲೇ ISD ಕರೆಗಳನ್ನು…

5 ಹಂತಗಳಲ್ಲಿ ಅನ್ ಲಾಕ್; ಅಶೋಕ್

ಬೆಂಗಳೂರು,ಜೂ,09: ಲಾಕ್ ಡೌನ್ ಏಕಾಏಕಿ ತೆರೆಯುತ್ತಿಲ್ಲ, 5 ಹಂತಗಳಲ್ಲಿ ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೂನ್ 14ಕ್ಕೆ ಲಾಕ್ ಡೌನ್ ಮುಕ್ತಾಯವಾಗಿ ಅನ್ ಲಾಕ್ ಏಕಾಏಕಿ ಒಂದೇ ಸಲಕ್ಕೆ ಅನ್ ಲಾಕ್ ಆಗುವುದಿಲ್ಲ, ಆ ರೀತಿ ಜನರು ಭಾವಿಸಬೇಡಿ, ಒಂದೇ ಸಲಕ್ಕೆ ತೆರೆದರೆ ಮತ್ತೆ ಕೊರೋನಾ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎಂದರು. ಯಾವ ರೀತಿ ತೆರೆಯುವುದು, ಮೊದಲ ಹಂತದಿಂದ…

ದುಪ್ಪಟ್ಟು ತೆರಿಗೆ ;ಸಾರ್ವಜನಿಕರ ಆಕ್ರೋಶ

G.k.hegade,shikarripura ಶಿಕಾರಿಪುರ,ಜೂ,೦೯:ಕೊ ರೋ ನಾ ಮಹಾಮಾರಿ ಎರಡು ವರ್ಷ ಗಳಿಂದ ಜನರ ಜೀವ .ಜೀವನವನ್ನು ಕಿತ್ತುತಿನ್ನುತಿದೆs ಈ ಸಂದರ್ಭದಲ್ಲೂ ಕಂದಾಯ ಹಾಗೂ ಕಾಲಿ ನಿವೇಶನದ ತೆರಿಗೆಗಳು ಎರಡು ಪಟ್ಟು ಆಗಿದ್ದು ಸಾರ್ವಜನಿಕರು ಪುರಸಭೆ ಶಾಪ ಹಾಕುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗಗಳು ನಡೆಯುತ್ತಿದೆ. ಸರ್ಕಾರ ತೆರಿಗೆ ಜಾಸ್ತಿ ಮಾಡುವುದು ಅನಿವಾರ್ಯ ಆದರೆ ಈ ಕೆಟ್ಟ ಪರಿಸ್ಥಿಯಲ್ಲಿ ಮಾಡುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ವಾದ .ಕೆಲವು ಜನರಿಗೆ ಕಂದಾಯ ಜಾಸ್ತಿ ಯಾಗಿರುವುದು ತಿಳಿದೇ ಇಲ್ಲ ಕಟ್ಟಲು ಹೋದವರಿಗೆ ಮಾತ್ರ…

ಕೊಳೆತ ತರಕಾರಿಗಳಿಂದ ಬ್ಲಾಕ್ ಫಂಗಸ್ ಸೋಂಕು;ಸುಧಾಕರ್

ಬೆಂಗಳೂರು, ಜೂ.9- ಬ್ಲಾಕ್ ಫಂಗಸ್ ಬಗ್ಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆತಂಕಕಾರಿ ವಿಷಯವೊಂದನ್ನು ತಿಳಿಸಿದ್ದಾರೆ. ಬ್ಲಾಕ್ ಫಂಗಸ್ ಅಪರೂಪದ ಸೋಂಕು. ಮಣ್ಣು, ಗಿಡಗಳು ಹಾಗೂ ಕೊಳೆಯುತ್ತಿರುವ ತರಕಾರಿಗಳಲ್ಲಿ ಕಂಡುಬರುವ ಶಿಲೀಂದ್ರ, ತೆರೆದ ಚರ್ಮ ಅಥವಾ ಉಸಿರಾಟದ ಮೂಲಕ ನಮ್ಮ ದೇಹ ಪ್ರವೇಶಿಸುತ್ತದೆ ಎಂದಿದ್ದಾರೆ. ಬ್ಲಾಕ್ ಫಂಗಸ್ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಅದರ ಭಾಗವಾಗಿ ಇಂದು ಟ್ವಿಟ್ ಮಾಡಿರುವ ಸಚಿವರು ಮಣ್ಣು, ಗಿಡ ಹಾಗೂ ಕೊಳೆಯುತ್ತಿರುವ…

ಜೀವನದ ನಿಜಸ್ವರೂಪ ತಿಳಿದವನು ಬದುಕಿಗೆ ಅಂಜಲಾರ!

ಒಮ್ಮೆ ಸಿದ್ಧಬಾಲಕ ಹುಡುಗರೊಂದಿಗೆ ಕೆರೆಗೆ ಸ್ನಾನಕ್ಕೆ ಹೋದನು. ಈಜು ಬಾರದ ಹುಡುಗನನ್ನು ಎಳೆದೊಯ್ದು ಕೆರೆಯಲ್ಲಿ ಮುಳುಗಿಸಿದನು.ತಾಯಿ ರೋಧಿಸಿದಾಗ ,’ಕೂಗಿ ಕರೆ’ ಎಂದನು.ದೇವದತ್ತಾ ಬಾ! ಎಂದೊಡನೆ ಹುಡುಗ ಮೇಲೆದ್ದು ಈಜಿ ಬಂದ! ಇದರ ತಾತ್ತ್ವಿಕತೆಯನ್ನು ಸಿದ್ಧ ಹೀಗೆ ವಿವರಿಸಿದನು; ಬದುಕೆಂಬುದು ಒಂದು ಕೆರೆ.ಬದುಕುವ ಜೀವಿಗಳೆಲ್ಲರೂ ಕೆರೆಯಲ್ಲಿ ಈಜುವ ಹುಡುಗರು! ಕೆರೆಯಲ್ಲಿಳಿಯಲು, ಕೆರೆಯಲ್ಲಾಡಲು, ಕೆರೆದಾಟಲು ಈಜು ತಿಳಿದಿರಬೇಕು. ನೀರು ಆಳವಾಗಿದ್ದರೆ, ಈಜು ಬರದಿದ್ದರೆ, ಕೆರೆಗೆ ಇಳಿಯಲಾಗದು.ಇಳಿದರೆ,ಬಿದ್ದರೆ ಮುಗಿಯುತ ಕಥೆ! ಆದ್ದರಿಂದ ಈಜು ಬಾರದವ ನೀರಿಗಿಳಿಯಲು ಭಯಪಡುವನು. ನೀರಿನಲ್ಲಿ ಈಜುವವರನ್ನು ಕಂಡು…

ಸಿನಿಮಾ ಕಲಾವಿದರಿಗೆ ೬.೬೦ ಕೋಟಿ ರೂ ಅನುದಾನ ಬಿಡುಗಡೆ

ಬೆಂಗಳೂರು,ಜೂ,೦೮ : ಸಿನಿಮಾ ಕ್ಷೇತ್ರವನ್ನೇ ನಂಬಿ ಜೀವಿಸುತ್ತಿದ್ದ ಸಾವಿರಾರು ಕಲಾವಿದರು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದರು ಹೀಗಾಗಿ ಸರ್ಕಾರ ಇಂತವರ ನೆರವಿಗೆ ದಾವಿಸಿದ್ದು ಸಿನಿಮಾ ಕಲಾವಿದರಿಗೆ ೬.೬೦ ಕೋಟಿ ರೂಅನುದಾನ ಬಿಡುಗಡೆ ಮಾಡಿದೆ ಸಿನಿಮಾ-ಕಿರುತೆರೆಯ ಕಲಾವಿದರು, ತಂತ್ರಜ್ಞರಿಗೆ ತಲಾ ೩ ಸಾವಿರ ರೂಪಾಯಿಯನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಸಿನಿಮಾ, ಕಿರುತೆರೆ ಕ್ಷೇತ್ರದ ೨೨ ಸಾವಿರ ಮಂದಿಗೆ ತಲಾ ಮೂರು ಸಾವಿರ ರೂ. ಸಿಗಲಿದೆ. ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಸೇರಿದಂತೆ ಕಲಾವಿದರ ತಂಡು ಸಿಎಂ ಯಡಿಯೂರಪ್ಪರನ್ನು…

ಮಾಜಿ ಸಚಿವ ಸಿ.ಎಂ.ಉದಾಸಿ ನಿಧನ

ಬೆಂಗಳೂರು,ಜೂ,೦೮: ಮಾಜಿ ಸಚಿವ ಹಾಗೂ ಹಾಲಿ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯಿಸಿರೆಳದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗೆ ಕಳೆದ ೧೫ ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಾರದ ಹಿಂದೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಮಂಗಳವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿ, ಮಧ್ಯಾಹ್ನದ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ…

1 106 107 108 109 110 126
Girl in a jacket