ವಾಣಿಜ್ಯ
ಬಂಡವಾಳ ಹೂಡಿಕೆಗೆ ಬಾಂಗ್ಲಾ ಉದ್ಯಮಿಗಳಿಗೆ ಅಗತ್ಯ ಸಹಕಾರ-ಶಿವಾನಂದ ಪಾಟೀಲ ಭರವಸೆ
ಬೆಂಗಳೂರು,ಜೂ,11-: ಬಾಂಗ್ಲಾ ದೇಶದ ಜವಳಿ ಉದ್ಯಮಿಗಳು ಕರ್ನಾಟದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವಹಿಸಿದ್ದು ಬುಧವಾರ ಪೆಂಟಗಾನ್ ನಿಟ್ ಕಾಂನ ಬಿಪಿನ್ ಮುಂದ್ರಾ ಅವರು ಜವಳಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು. ಪೆಂಟಗಾನ್ ನಿಟ್ ಕಾಂನ ಮಾಹಿತಿ ಪಡೆದ ಸಚಿವರು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಗ್ಗಾವಿಯಲ್ಲಿ ಯೂನಿಟ್ ಆರಂಭಿಸಬಹುದು ಎಂದು ಸಲಹೆ ನೀಡಿದರು. ಈ ಮೂರೂ ಕಡೆ ಅಗತ್ಯ ಮೂಲ ಸೌಕರ್ಯಗಳಿವೆ. ಶಿಗ್ಗಾವಿಗೆ ವಿಮಾನ ಸಂಪರ್ಕ…