Browsing: ಸಾಹಿತ್ಯ

ಸಾಹಿತ್ಯ

ಗಜ಼ಲ್

ವಿಶಾಲಾ ಆರಾಧ್ಯ ಗಜ಼ಲ್ ಏನು ಮಾಯೆಯೇ ಗೆಳತಿ ಯಾವ ಛಾಯೆಯೇ … ಏನು ಮಾಯೆ ಯಾವ ಛಾಯೆ ಸೆಳೆಯಿತೆನ್ನ ಭವದ ಮಾಯೇ ಕರೆದಲ್ಲಿಗೆ ಕೊಳಲ ಕರೆಗೆ ಕೊರಳು ಸಾಗಿದೇ..!! ಮನದ ವೀಣೆ ನುಡಿದಿದೆ ಭಾವ ತಂತಿ ಮೀಟಿ ಎದೆಯ ಮರುಗ ಘಮಿಸಿದೆ ಜೀವ ಸೀಮೆ ದಾಟಿ ಸಾಗಿ ಬಂದು ಪ್ರೇಮ ತೀರದಿ ಮನವು ಅಲೆದಿದೆ ಒಲವ ಅರಸಿದೆ..!! ಭಾವಗಳಿಗೆ ಚಿಗುರು ಮೂಡಿ ಕಾವ್ಯದಲ್ಲಿ ಇಣುಕಿವೆ ಜೀವವಿಂದು ಹಗುರವಾಗಿ ಬಾನಿನಲ್ಲಿ ತೇಲಿದೆ ಮನದ ಬಸಿರು ಬಲಿತು ರಾಗ ಮೋಹನನ…

ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’

ತುರುವನೂರು ಮಂಜುನಾಥ ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’ ಈ ಬದುಕಿನಲ್ಲಿ ಮನುಷ್ಯ ತನಿಗರಿವಿಲ್ಲದೆ ಮಾನವೀಯತೆಯನ್ನು ಕಳೆದುಕೊಂಡು ಸಂಬಂಧಗಳ ಬಂಧಿಯೂ ಆಗದೆ,ಬೆಂಕಿಯಂತೆ ಬೆಸೆಯುವ ‘ಮನಸುಮನಗಳ ಅನಿಷ್ಟತೆತೆಗೆ ಸಾಗುವ ಬುದ್ದಿಗಳಿಗೆ ಬಂಧಿಯಾದಾಗಲೇ ಮನುಷ್ಯತ್ವವನ್ನು ಸುಟ್ಟು ಅನಿಷ್ಟತೆತೆಯನ್ನು ಹೆಗಲಮೇಲೇರಿಕೊಂಡು ಸಾಗುತ್ತಿದ್ದಾನೆ. ಹೌದು ಇಂಥ ಬಿರುಸಿನಿಂದ ಸಾಗುವ ತಾಂತ್ರಿಕ ಯುಗದಲ್ಲಿ,ತಂತ್ರಗರಿಕೆಯಲ್ಲೇ ತನ್ನೆಲ್ಲ ಮಾನವ ಸಂಬಂಧಗಳನ್ನು ಬೆಸದು ಯಾಂತ್ರಿಕವಾಗಿ ಸಾಗುತ್ತಿದಾನೆ. ಹಾಗಾಗಿಯೇ ಆಚೀಚಿನ ಸಂಬಂಧ ಮನುಸಗಳ ಮಾನವೀಯತೆಗಳಿಗೆ ಬೆಲೆಯಿಲ್ಲದೆ ಸೊಗಲಾಡಿ ಜೀವಗಳು ಜಗಜ್ಜಾಹಿರವಾಗಿ ಬಿಂಬಿತವಾಗುತ್ತಿವೆ. ಇಂತದ್ದೊಂದು ‘ಅನಾಮಿಕ ಜೀವಗಳ ಮಧ್ಯೆ ಮನುಷ್ಯ…

ಸಿದ್ದಲಿಂಗಯ್ಯನವರ ‘ಊರುಕೇರಿ’

ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು, ದಾವಣಗೆರೆ ಪ್ರಥಮ ದರ್ಜೆ ಕಾಲೇಜು ಸಿದ್ದಲಿಂಗಯ್ಯನವರ ‘ಊರುಕೇರಿ’ ಅನ್ನ ಮತ್ತುಅರಿವಿನ ವಿಕಾಸದ ಭಿನ್ನದಾರಿಯ  ಆತ್ಮಕಥನ  ಮಾನವರಚರಿತ್ರೆಅನ್ನದಅನ್ವೇಷಣೆಯಿಂದಆರಂಭಗೊಂಡುಅರಿವಿನ   ವಿಕಾಸದೊಂದಿಗೆಪೂರ್ಣಗೊಳ್ಳುತ್ತದೆ.ಇಲ್ಲಿ ನಾವು ಅರಿವೆಂದರೆ ಲೋಕಜ್ಞಾನವೋ ಅಲೌಕಿಕ ಜ್ಞಾನವೋ ಎಂಬ ಪ್ರಶ್ನೆಗಳನ್ನ ಕೇಳಿಕೊಳ್ಳದೆ ಪ್ರಾಣಿಬದುಕಿಗಿಂತಲೂ ಭಿನ್ನವಾದುದುಮಾನವನಜೀವನಎಂಬ ಸರಳ      ಸಂಗತಿಯನ್ನಉದಾಹರಣೆಯಾನ್ನಾಗಿನೀಡಬಹುದೇನೋ.ಚರಿತ್ರೆಯ ಈ ಆವರಣದೊಳಗೆ ಎಷ್ಪೋ ಸಲ ‘ಮಾನವಜನ್ಮದೊಡ್ಡದು’ಎನ್ನುವಾಗಲೇಮಾನವರುಪ್ರಾಣಿಗಳಿಗಿಂತಲೂ ಕೀಳಾಗಿ ನಡೆದುಕೊಂಡ ವಿವರಗಳನ್ನ ಕಾಣಬಹುದು. ‘ನೀನಾರಿಗಾದೆಯೋ ಎಲೆಮಾನವ?’ಎಂದು ಪ್ರಶ್ನಿಸುವ ಗೋವಿನ ಪ್ರಶ್ನೆಯೇ ಈ ನೆಲೆಯದು.ಮನುಷ್ಯರೊಳಗೆ ಎಷ್ಟೋ ಸಲ ನಾಲಿಗೆ ಮೇಲೆಯೇನೆಲೆಗಾಣದ ಮಾತು,ಸತ್ಯವಂತಿಕೆ, ಕರುಣೆ ಮತ್ತು ಸಹಕಾರ…

ಹನಿಗಳೆಂಬ ಸಿಹಿ ಜೇನ ಬಟ್ಟಲು…

ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ಪ್ರಥಮದರ್ಜೆ ಕಾಲೇಜು. ಹನಿಗಳೆಂಬ ಸಿಹಿ ಜೇನ ಬಟ್ಟಲು… ಕಾಲದೊಂದಿಗೆ ಪಾದಗಳು ಹೊರಟಂತೆಲ್ಲಾ ಅದರ ಕಾಲಾನುಭವಗಳೂ ಭಿನ್ನವಾಗುತ್ತಲೇ ಬಂದಿವೆ. ಪದಗಳ ಬೆಚ್ಚಗಿನ ತೆಕ್ಕೆಯಲ್ಲಿ ದಾಖಲೆಗೊಂಡ ಚಿಗುರು ಹೆಜ್ಜೆಗಳಿಗೆ ಬುತ್ತಿಯಾಗಿ,ಪ್ರೀತಿಯ ಕೈ ತುತ್ತಾಗಿ, ಕಿರುಬೆರಳು ಹಿಡಿದು ಬೆಳಕಿನ ಹಾದಿಯಾಗುವಂತಿವೆ. ಬದಲಾಗಿದ್ದು ಕಾಲವೋ? ಕಾಲಾನುಕ್ರಮದ ಬದುಕೋ? ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಳುಕಿ ಮುಸಿ ಮುಸಿ ನಕ್ಕು ಬದಲಾದದ್ದು ಕಾಲವಲ್ಲ ನಮ್ಮಯ ಬದುಕು ಎಂಬ ಸಂಗತಿಯನ್ನ ನೀಡುತ್ತದೆ.ಹೌದು ನಿಸರ್ಗ ಸಹಜವಾಗಿದ್ದ ಬದುಕುಗಳು ಇಂದು…

ತಿಳಿದು ಬಾಳು ಮಾನವಾ..!

ಶ್ರೀಧರ್.ಡಿ ಬೆಂಗಳೂರು ದಕ್ಷಿಣ ತಿಳಿದು ಬಾಳು ಮಾನವಾ..! ಮಾನವ ನಿನ್ನ ಚಂಚಲವಾದ ನಾಲಿಗೆ ಸದಾಕಾಲವೂ ಒದ್ದೆಯಾದ ಸ್ಥಳದಲ್ಲೇ ಇರುವುದರಿಂದ ಸುಲಭವಾಗಿ ಮಾತುಗಳು ಜಾರುತ್ತದೆ ಎಚ್ಚರಿಕೆ ಯಿಂದ ನುಡಿ- ಮುತ್ತಿನಂತೆ ಮಾತನು ಮತ್ತೊಬ್ಬರನ್ನು ನೋಯಿಸದಂತೆ ಮಾನವಾ.. ಬೆಣ್ಣೆಯು ಮೃತುವೆಂದು ಹೇಳುವರು ಆದರೆ ಸಜ್ಜನನ ಹೃದಯವು ಅದಕ್ಕಿಂತಲೂ ಮೃದುವಾದದು ಅಗ್ನಿಯು ಮಾತಾಡದೆ ಅನ್ನಬೇಯಿಸುವಂತೆ ಸೂರ್ಯನು ಸದ್ದು ಮಾಡದೇ ಲೋಕವನೆ ಬೆಳಗುವಂತೆ ಸಜ್ಜನರ ಸಂಘ ನಿನ್ನ ದುರ್ಬುದ್ಧಿಯನು ಹೋಗಲಾಡಿಸುವುದು ಜ್ಞಾನ ಸಂಪತ್ತಿನ ಕಡೆ ನಡೆ ಮಾನವಾ.. ಸಕಲ ವೇದಗಳ…

ಜೀವನ ಸೋಪಾನ

ಶ್ರೇಯಸ್.ಎಸ್. ಗ್ರೇಡ್ 7 ,ಏಳನೇ ತರಗತಿ,ಲಿಬರ್ಟಿ ಪೈನಸ್ ಆಕಾಡೆಮಿ ಸ್ಕೂಲ್.ಜಾಕ್ಸೋನವಿಲೇ,ಪ್ಲೋರೈಡಾ.ಅಮೆರಿಕಾ ಮೂಲ ಇಂಗ್ಲಿಷ್ – ಶ್ರೇಯಸ್.ಎಸ್. ಅನುವಾದ- ತುರುವನೂರು ಮಂಜುನಾಥ ಬದುಕಿನ ಸೋಪಾನ ಬದುಕಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದೇನೆ ಆದರೆ,ಗಾಜಿನ ಮೆಟ್ಟಿಲುಗಳೋ.. ಮರದ ಮೆಟ್ಟಿಲುಗಳೋಗೊತ್ತಿಲ್ಲ. ಆದರೂ ಹೆಜ್ಜೆ ಇಡುತ್ತಿದ್ದೇನೆ ಅಲ್ಲಿ ತಿರುವುಗಳು, ಸರಳುಗಳು ಇದ್ದಾವು ಎನ್ನುವ ನೋಟವೂ ನನ್ನದಲ್ಲ ಎದೆಗುಂದದೆ ಸಾಗುತ್ತಿದ್ದೇನೆ..! ಜೀವನವೇ ಹಾಗೆ ಪ್ರತಿಕ್ಷಣವೂ ಮೆಟ್ಟಿಲೇರಲಾಗುವುದಿಲ್ಲಿ ಹಿಂದಿನ ಜಾಣ್ಮೆ ಹೆಜ್ಜೆಯಂತೆ ಮುಂದಿನ ಹೆಜ್ಜೆಯೂ ಸುಲಭವಲ್ಲ ಕಷ್ಟವಾದರೂ ನಾಳಿನ ಹಾದಿಯ ನೋಡಲು ಇಷ್ಟಪಟ್ಟರು ಅದು- ಸಾಧ್ಯವಾಗುವುದು ಆ ಶಕ್ತಿಯಿಂದ|…

ವಿಷಾದ ಗಾಥೆ

ವಿಷಾದ ಗಾಥೆ 1 ಬೇಯುತಿದೆ ಕಾಲ ಜೀವಾತ್ಮಗಳಲಿ ಹರಿದಿದೆ ಹಾಲಾಹಲ ಬೇಗುದಿಯಲಿ ಭವದ ಬವಣೆ ನರಳುತ್ತಿದೆ ದಾರಿ ಸವೆಯುತ್ತಿಲ್ಲ ಬಹುದೂರ ಇದೆ ಪಯಣ ಕೈದೀವಿಗೆಗೆ ಹಾದಿಯ ಅರಿವಿಲ್ಲ ವಿಷಾದ ಗಾಥೆ 2 ಕಡಲ ದೇವಿಯೆ ನೀನೇಕೆ ಹೀಗೆ ಮೊರೆಯುತ್ತೀಯ ಇಷ್ಟೇಕೆ ನೀನು ಉಪ್ಪಾಗಿದ್ದೀಯಾ ಕೇಳು ಮಗು ನಿನ್ನಪ್ಪ ಕಿನಾರೆಯಲಿ ಮುಳುಗಿಹೋದ ನಿನ್ನಮ್ಮನ ಕಣ್ಣೀರು ನನ್ನೊಡಲಸೇರುತಲೇಯಿದೆ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ 9448970731

ಹುಣ್ಣಿಮೆ ಒಲವು ನನ್ನದು

ನಂದಿನಿ ಚುಕ್ಕೆಮನೆ ಹುಣ್ಣಿಮೆ ಒಲವು ನನ್ನದು ಮಳೆ -ಮಂಜು ಸುರಿದು ಗಟ್ಟಿಯಾದ ಇಳೆ ಮೃದುವಾಗಿ ಹೊಂಬೆಳಕಚಿಗುರು ಕಂಡ ಹೊನಪ ಕುಡಿ ನನ್ನದು ಹಾಲು ಮುಗಿಲ ತುಂಬಿ ಬಣ್ಣದ ಕನಸುಗಳಲಿ ಹೃದಯದ ಬಾಗಿಲ ಎದುರಿಗೆ ಬಂದು ಮಾತಾಡದೆ ಮಿಂಚಂತೆಹೋದ ದಿವ್ಯಹುಣ್ಣಿಮೆ ಒಲವು ನನ್ನದು ಹನಿ ನಿಂದಾಗ ಚಿನ್ನಕಾಂತಿಮುಗಿಲು ಕಡೆದು ಕಂಗಳ ಕನ್ನಡಿ ಬಿಂಬದಲಿ ಮೂಡಿದ ಸಪ್ತ ಸ್ವರಗಳ ಮಳೆ ಬಿಲ್ಲ ಚೆಲುವೆಲ್ಲ ನನ್ನದು ಹಸಿರು ಶಿಖೆಯ ತಾಗಿ ಕೂತ ಆಕಾಶ ನೀಲಿ ಚಿತ್ತಾರ ಕಳಿಸಿದ್ದ ಜಿಂಕೆ…

ಮದ್ಯಸಾರವೇನು ಕಡಿಮೆ ಗಮನಕೊಡಿ ಅತ್ತಲೂ…

ಲೇಖಕರ ಪರಿಚಯ ಡಾ,ಶಿವಕುಮಾರ್ ಕಂಪ್ಲಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಅಧ್ಯಯನ ಮಾಡಿ ,ತೆಲುಗು ಕವಿ ಶ್ರೀ ಶ್ರೀ ಮತ್ತು ಕನ್ನಡದಲ್ಲಿ ಸಿದ್ದಲಿಂಗಯ್ಯ ಅವರ ಕುರಿತು ತೆಲುಗು ಮತ್ತು ಕನ್ನಡ ತೌಲನಿಕ ಅಧ್ಯಯನಕ್ಕೆ ಪಿಎಚ್‌ಡಿ ಪದವಿ ದೊರೆತಿದೆ,ಅಗ್ನಿ ಮತ್ತು ಕಿರೀಟ ಕವನ ಸಂಕಲ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ಅನುವಾದ ಕವನ ಸಂಕಲನ ಪುಸ್ತಕಗಳು ಹೊರಬಂದಿದ್ದು,ಹಲವಾರು ತೆಲುಗು ಕಥೆಗಳನ್ನು ಅನುವಾದ ಮಾಡಿದ್ದಾರೆ, ಅಲ್ಲದೆ ಅವರ ಹಲವಾರು ವಿಮರ್ಶೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಪ್ರಸ್ತುತ ಕೆಂಧೂಳಿ ವಾರಪತ್ರಿಕೆಯಲ್ಲಿ ಅಂಕಣಕಾರರಾಗಿರುವ ಇವರು…

ಮಾನವತೆಯ ಹುಡುಕುತಲಿರುವೆ ……

ನಿಶ್ಯಬ್ದ, ನಿರ್ಜನ ರಸ್ತೆಗಳ ನೀರವತೆಯಲಿ ಮೌನ ಜನನಿಬಿಡ ಗಲ್ಲಿಗಳ ಪಿಸುಮಾತಲಿ ಪೊಲೀಸರ ಬೂಟಿನ ಶಬ್ದದ ಕರತಾಡನದಲಿ ಬಣ್ಣದ ಲಾಠಿಯ ಹೊಡೆತದ ರೌದ್ರಾವತೆಯಲಿ ಮಾನವತೆಯ ಹುಡುಕುತಲಿರುವೆ …… ಹೊಟ್ಟೆಗೆ ಹಿಟ್ಟಿಲ್ಲದ ಸಂತ್ರಸ್ತರ ಕಣ್ಣ ಕಪ್ಪಿನ ಅಂಚಿನಲಿ ವೇತನವಿಲದೆ ಮನೆ ಮಾಲೀಕನ ಕಾಲ ಹಿಡಿವ ನಡುಗುವ ಕೈಗಳ ಅಭದ್ರತೆಯಲಿ ಧ್ವಂಸವಾದ ಭರವಸೆಗಳ ಬೂದಿ ಮಣ್ಣಿನ ತುತ್ತತುದಿಯಲಿ ನಾಳೆಗಳು ಬಾರದಿರಲಿ ಎಂದು ಆಶಿಸುವ ಹೃದಯಗಳಾವರಣದಲಿ ಮಾನವತೆಯ ಹುಡುಕುತಲಿರುವೆ …… ಆಸ್ಪತ್ರೆಯ ಶಿಥಿಲ ಗೋಡೆಗಳ ಬಿರುಕುಗಳಲಿ ಅರಳಿದ ಗಿಡಬಳ್ಳಿಗಳಲಿ ದಾದಿಯರ ಶ್ವೇತವರ್ಣದುಡಿಗೆಯ…

ನಾಲ್ಕೇ ಕ್ಲಾಸು ಓದಿದವನು ಉಳಿಸಿಹೋದ ಪಾಠಗಳು

ವೆಂಕಟರಮಣ ಗೌಡ್ರು ವೆಂಕಟರಮಣ ಗೌಡ್ರು ಪತ್ರಕರ್ತರು, ಸಾಹಿತಿಗಳು,ಹಲವು ಪುಸ್ತಕಗಳ ವಿಮರ್ಶೆ ಗಳನ್ನು ಕೂಡ ಮಾಡಿ ಎಲ್ಲರಲ್ಲೂ ಸೈ ಎನಿಸಿಕೊಂಡವರು ಈಗ ‘ ನಾಲ್ಕನೆ ಕ್ಲಾಸು ಓದಿದವನು’ ಕೃತಿಯ ಕುರಿತು ವಿಮರ್ಶೆ ಮಾಡಿದ್ದಾರೆ ಅಪ್ಪ ಮತ್ತು ಅಮ್ಮ ಗೆಳೆತನದ ಮೊದಲ ಭಾಸವನ್ನು ಕರುಣಿಸುವವರಾಗಿ ಮಾತ್ರವಲ್ಲ ಎದುರಾಳಿಗಳಂತೆ ಕಾಣಿಸುವುದೂ ಇದೆ ಬಹಳ ಸಲ. ಸಾಮರಸ್ಯ, ಸಂಘರ್ಷವೆರಡೂ ಜೊತೆಜೊತೆಗೇ ಬೆರೆತುಕೊಂಡಿದ್ದು ಕಾಯುವ ಈ ಆಪ್ತತೆ ಅತ್ಯಂತ ತೀವ್ರತೆಯೊಂದಿಗೆ ನಮ್ಮನ್ನು ಕಾಡುವುದು ಬಹುಶಃ ಅವರು ಇಲ್ಲವಾದ ಮೇಲೆಯೇ. ಇದರರ್ಥ, ಉಪಸ್ಥಿತಿಯಲ್ಲಿ…

error: Content is protected !!