ಸಾಹಿತ್ಯ
ಹನಿಗಳೆಂಬ ಸಿಹಿ ಜೇನ ಬಟ್ಟಲು…
ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ಪ್ರಥಮದರ್ಜೆ ಕಾಲೇಜು. ಹನಿಗಳೆಂಬ ಸಿಹಿ ಜೇನ ಬಟ್ಟಲು… ಕಾಲದೊಂದಿಗೆ ಪಾದಗಳು ಹೊರಟಂತೆಲ್ಲಾ ಅದರ ಕಾಲಾನುಭವಗಳೂ ಭಿನ್ನವಾಗುತ್ತಲೇ ಬಂದಿವೆ. ಪದಗಳ ಬೆಚ್ಚಗಿನ ತೆಕ್ಕೆಯಲ್ಲಿ ದಾಖಲೆಗೊಂಡ ಚಿಗುರು ಹೆಜ್ಜೆಗಳಿಗೆ ಬುತ್ತಿಯಾಗಿ,ಪ್ರೀತಿಯ ಕೈ ತುತ್ತಾಗಿ, ಕಿರುಬೆರಳು ಹಿಡಿದು ಬೆಳಕಿನ ಹಾದಿಯಾಗುವಂತಿವೆ. ಬದಲಾಗಿದ್ದು ಕಾಲವೋ? ಕಾಲಾನುಕ್ರಮದ ಬದುಕೋ? ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಳುಕಿ ಮುಸಿ ಮುಸಿ ನಕ್ಕು ಬದಲಾದದ್ದು ಕಾಲವಲ್ಲ ನಮ್ಮಯ ಬದುಕು ಎಂಬ ಸಂಗತಿಯನ್ನ ನೀಡುತ್ತದೆ.ಹೌದು ನಿಸರ್ಗ ಸಹಜವಾಗಿದ್ದ ಬದುಕುಗಳು ಇಂದು…