Girl in a jacket

Daily Archives: September 25, 2021

ತಮ್ಮ ಹಕ್ಕುಗಳುಗೆ ಜಾತಿ ಸಮಾವೇಶ ನಡೆಸುವುದು ತಪ್ಪಲ್ಲ;ಸಿದ್ದು

ಬೆಂಗಳೂರು,ಸೆ,25 : ತಮ್ಮ ಹಕ್ಕುಗಳಿಗಾಗಿ ಹಿಂದುಳಿದ ವರ್ಗದವರು ಜಾತಿ ಸಮಾವೇಶಗಳನ್ನು ನಡೆಸುವುದು ಅಪರಾಧವಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕರ್ನಾಟಕ ರಾಜ್ಯ ಮಡಿವಾಳರ ಸಂಘ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಕರೋನದಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ಹಾಗೂ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ನಾನು ಸಿಎಂ ಆಗಿದ್ದಾಗ ಈ ಸಮುದಾಯಕ್ಕೆ ಪ್ರತ್ಯೇಕ ಅನುದಾನ ನೀಡಿದ್ದೆ. ಹಿಂದುಳಿದವರು ಜಾತಿ ಹೆಸರಿನಲ್ಲಿ ಸಮ್ಮೇಳನ ಮಾಡಿದರೆ…

ಬತ್ತಬಾರದು ಭಾವಗಳ ಒರತೆ

ವಿ.ಮಂಜುಳ ಪಟೇಲ್ ಅವರು ಕವನ ಲೇಖನಗಳನ್ನು ಬರೆದಿದ್ದಾರೆ,ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಶೀಘ್ರ ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಗೊಳ್ಳಲಿದೆ.ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು ಟಿಕ್ ಟಾಕ್ ನಲ್ಲಿ ಹೆಚ್ಚು ಕಾಣಸಿಕೊಳ್ಲಕುತ್ತಿದ್ದಾರೆ…ಇವರು ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದಾರೆ. ವಿ. ಮಂಜುಳಾ ಪಟೇಲ್ ಬತ್ತಬಾರದು ಭಾವಗಳ ಒರತೆ ವಾಸ್ತವದ ಹಂಗನ್ನು ಮೀರಿ ಆ ನಿನ್ನ ನೆನಪುಗಳಲ್ಲಿ ಮೆದ್ದಾಗಲೆಲ್ಲ ಇಳಿದು ಬಿಡುವುದು ಮನಸ್ಸು ನಿನ್ನ ಪ್ರೀತಿಯ ಭಿಕ್ಷಾಟನೆಗೆ ಮಮಕಾರದಿ ಕರೆದು ಬಿಡು ನಿನ್ನ ಒಲವಿಗೆ ಒಮ್ಮೆಯಾದರೂ ಒಲವ ರಾಗ ಹೊಸತೇನಲ್ಲ…

ಹೆಣ್ಣಿನ ಒಡಲಾಳದ ಪ್ರತಿಬಿಂಬಗಳು

ಪ್ರಕಾಶ ಕಡಿಮೆ ಅವರು ಮೂಲ ಉತ್ತರ ಕನ್ನಡದ ಗೋಕರ್ಣ ಸಮೀಪದ ಕಡಮೆಯವರು, ಅವರು ಗಾಣದೆತ್ತು ಮತ್ತು ತೆಂಗಿನ ಮರ,ಆ ಹುಡುಗಿ,ಅಮ್ಮನಿಗೊಂದು ಕವಿತೆ ಎಂಬ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ .ಡಾ.ಡಿ.ಎಸ್.ಕರ್ಕಿ ಪ್ರಶಸ್ತಿಯೂ ಅವರಿಗೆ ಸಂದಿದೆ, ಅವರು ಸದ್ಯ ಕಳೆದ ಇಪ್ಪತೈದು ವರುಷಗಳಿಂದ ಹುಬ್ಬಳಿಯಲ್ಲಿ ವಾಸವಾಗಿದ್ದಾರೆ. ಶ್ರೀಯುತರು ವಿಶಾಲ ಆರಾಧ್ಯ ಅವರ ‘ಸೊರಹೊನ್ನೆ ಕವನ ಸಂಕಲನ ಕುರಿತು ವಿಮರ್ಶೆ ಬರೆದಿದ್ದಾರೆ ಹೆಣ್ಣಿನ ಒಡಲಾಳದ ಪ್ರತಿಬಿಂಬಗಳು ಮೂಲತಃ ಬೆಂಗಳೂರು ಜಿಲ್ಲೆಯ ರಾಜಾಪುರದವರಾದ ವಿಶಾಲಾ ಆರಾಧ್ಯರವರು ಶಿಕ್ಷಕಿಯಾಗಿ…

ಶಾಸಕರಲ್ಲಿ ಸಭ್ಯತೆ ಕಡಿಮಯಾಗುತ್ತಿದೆ-ಓ ಬಿರ್ಲಾ ಆತಂಕ

ಬೆಂಗಳೂರು,sಸೆ,೨೫: ಪ್ರಜಾಪ್ರಭುತ್ವ ಬಲ ಪಡಿಸಲು ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗಿದೆ ಆದರೆ ಇತ್ತೀಚೆಗೆ ಅವರಲ್ಲಿ ಶಿಸ್ತು ಸಭ್ಯತೆ ಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಲೋಕಸಭಾಧ್ಯಕ್ಷ ಓ ಬಿರ್ಲಾ ಅಭಿಪ್ರಾಯ ಪಟ್ಟರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕೋವಿಡ್ ಕಾರಣ ಅಧಿವೇಶನ ನಡೆಸುವುದು ಕಷ್ಟಕರವಾಗಿತ್ತು. ಆದರೂ, ನಾವು ಸಂಸತ್ ಕಲಾಪವನ್ನು ಸಮರ್ಪಕವಾಗಿ ನಡೆಸಿದ್ದೇವೆ. ಸದನದಲ್ಲಿ ಚರ್ಚೆ, ಜೋರು ಧ್ವನಿ ಎಲ್ಲವೂ ಇರಬೇಕು. ಅದು ಇದ್ದಾಗಲೇ ಉತ್ತಮ ನಿರ್ಣಯ ಸಾಧ್ಯ. ಆದರೆ, ಸದಸ್ಯರು ಶಿಸ್ತು ಮೀರಬಾರದು…

1.2 ಶತಕೋಟಿ ಲಸಿಕೆ ನೀಡಲು ಕ್ವಾಡ್ ರಾಷ್ಟ್ರಗಳು ಘೋಷಣೆ

ವಾಷಿಂಗ್ಟನ್ ,ಸೆ,25: ಜಾಗತಿಕ ಮಟ್ಟದಲ್ಲಿ ಸಮಸ್ಯೆಯಾಗಿ ಮುಂದುವರಿದಿದ್ದು ಈ ಸೋಂಕಿನಿಂದ ಸಾಕಷ್ಟು ಕಷ್ಟ-ನಷ್ಟ, ನೋವು ಸಂಭವಿಸಿದೆ. ಹವಾಮಾನ ಬಿಕ್ಕಟ್ಟು ಮುಂದುವರಿದಿದೆ. ಸ್ಥಳೀಯ ಭದ್ರತೆ ಮತ್ತಷ್ಟು ಸಂಕೀರ್ಣವಾಗುತ್ತಿದೆ. ಈ ಸಮಯ ಎಲ್ಲಾ ದೇಶಗಳಿಗೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪರೀಕ್ಷೆಯ ಸಮಯವಾಗಿದೆ, ಆದರೆ ನಮ್ಮ ಸಹಕಾರವು ನಿರಂತರವಾಗಿದೆ ಎಂದು ಕ್ವಾಡ್ ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ನಿನ್ನೆ ವಾಷಿಂಗ್ಟನ್ ನಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಕ್ವಾಡ್ ಶೃಂಗಸಭೆ ನಡೆದಿದ್ದು ಸಭೆಯ ಬಳಿಕ ನಾಲ್ಕೂ ದೇಶಗಳು…

ಸೋಮವಾರ ಬಂದ್ ಗೆ ಯಾವೆಲ್ಲಾ ಸಂಘಟನೆಗಳು ಬೆಂಬಲಿಸಿವೆ?

ಬೆಂಗಳೂರು,ಸೆ,25: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ಮತ್ತೆ ರೈತರು ಮತ್ತೇ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. 27 ನೇ ಸೋಮವಾರ ಭಾರತ್ ಬಂದ್ ಗೆ ಕರೆಕರೆನೀಡಿದ್ದು ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತೆಯಾಗಲಿದೆ.ಈ ಬಂದ್ ಗೆಕನ್ನಡ  ಸಂಘಟನೆ,ದಲಿತ ಸಂಘಟನೆ,ಎಪಿಎಂಸಿ ಬೆಂಬಲ ವ್ಯಕ್ತಪಡಿಸಿವೆ. ಬೆಂಗಳೂರಿನ ಪ್ರಮುಖ ಹೆದ್ದಾರಿ ಸೇರಿದಂತೆ ರಾಜ್ಯದ್ಯಾಂತ ಹೆದ್ದಾರಿ ತಡೆ. ಬೆಂಗಳೂರಿನಲ್ಲಿ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ರ‍್ಯಾಲಿ. ಒಟ್ಟು 700ಕ್ಕೂ ಹೆಚ್ಚು ಕ್ಯಾಂಟರ್ ವಾಹನದಲ್ಲಿ ನಗರದಲ್ಲಿ…

ಖಾದಿ ಉತ್ಪನ್ನ ಖರೀದಿಸಿ;ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಎಂ ಟಿ ಬಿ ನಾಗರಾಜು ಮನವಿ

ಬೆಂಗಳೂರು,ಸೆ,25: ಖಾದಿ ಸಂಘ-ಸಂಸ್ಥೆಗಳನ್ನು ಪುನಶ್ಚೇತನಗೊಳಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸನ್ನು ಸಾಕಾರ ಗೊಳಿಸಲು ಅಕ್ಟೋಬರ್ ‌ 2 ರಂದು ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಖಾದಿ ಸಂಘ-ಸಂಸ್ಥೆಗಳಿಗೆ ಉತ್ತೇಜನ ನೀಡುವಂತೆ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು ಎಂಟಿಬಿ ಮನವಿ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ…

ಗೌರವವೇ ಮುನುಷ್ಯನ ಮುಖಟ ಪ್ರಾಯ

ಸಿದ್ಧಸೂಕ್ತಿ                                ಗೌರವ ಗುರೋಃ ಭಾವಃ ಗೌರವಂ=ಗುರು ಹಿರಿಯ ಬಂಧು ಮಿತ್ರ ಹಿತೈಷಿ ವಸ್ತು ಶ್ರೇಷ್ಠ ಎಂದು ತೋರುವ ಸದ್ಭಾವ. ಇದು ಭಾವನಾತ್ಮಕ. ಹಣ ವಸ್ತುಗಳಿಂದ ಅಳೆಯಲಾಗದು. ಗಳಿಸುವುದು ನೀಡುವುದು ಕಷ್ಟ. ಕಳೆಯುವುದು ಕಳೆದುಕೊಳ್ಳುವುದು ಸುಲಭ! ಹೆಸರು ಸಣ್ಣಕ್ಷರ/ ದಪ್ಪಕ್ಷರದಲ್ಲಿರಬಹುದು, ಮೇಲಿರಬಹುದು ಕೆಳಗಿರಬಹುದು. ಹಾರ ಶಾಲು ದೊಡ್ಡ /ದುಬಾರಿಯದ್ದಿರಬಹುದು, ಸಣ್ಣ /ಅಗ್ಗದ್ದಿರಬಹುದು,ಇಲ್ಲದೆಯೂ ಇರಬಹುದು. ಅದು ಮುಖ್ಯವೆನಿಸದು!…

Girl in a jacket